ಬಿಗ್‌ ಬಾಸ್‌ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..

ಯಾರು ಈ ವೇಣುಸ್ವಾಮಿ..?

Team Udayavani, Jul 4, 2024, 5:29 PM IST

ಬಿಗ್‌ ಬಾಸ್‌ ಮನೆಗೆ ವಿವಾದಿತ ಜ್ಯೋತಿಷಿ ವೇಣುಸ್ವಾಮಿ? ಈತ ಹೇಳಿದೆಲ್ಲವೂ ಆಗಿದೆ ಆದರೆ..

ಹೈದರಾಬಾದ್:‌ ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟ ಶೋ ಬಿಗ್‌ ಬಾಸ್‌ಗೆ ಆಯಾ ಭಾಷೆಯಲ್ಲಿ ಅನೇಕ ವೀಕ್ಷಕರಿದ್ದಾರೆ.

ಬಿಗ್‌ ಬಾಸ್‌ ತೆಲುಗು -7 ಕಳೆದ ಬಾರಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಟಿಆರ್‌ ಪಿ ವಿಚಾರದಲ್ಲೂ ಕಾರ್ಯಕ್ರಮ ಭರ್ಜರಿ ಸೌಂಡ್‌ ಮಾಡಿತ್ತು. ಸೀಸನ್‌ 7ನಲ್ಲಿ ವಿನ್ನರ್‌ ಆಗಿದ್ದ ಪಲ್ಲವಿ ಪ್ರಶಾಂತ್‌ ರನ್ನು ಪೊಲೀಸರು ಬಂಧಿಸಿದ್ದರು. ಈ ಎಲ್ಲಾ ವಿಚಾರದಿಂದ ಸುದ್ದಿಯಲ್ಲಿ ತೆಲುಗು ಬಿಗ್‌ ಬಾಸ್‌ ತೆಲುಗು ಇದೀಗ 8ನೇ ಸೀಸನ್‌ ಆರಂಭಕ್ಕೆ ತಯಾರಿಯನ್ನು ನಡೆಸುತ್ತಿದೆ.

ಅಕ್ಕಿನೇನಿ ನಾಗಾರ್ಜುನ ನಡೆಸಿಕೊಡುವ ಬಿಗ್‌ ಬಾಸ್‌ ಇದೀಗ ಸೀಸನ್‌ -8 ಆರಂಭಗೊಳ್ಳಲಿದೆ ಎನ್ನುವ ಮಾತು ಶುರುವಾದ ಬೆನ್ನಲ್ಲೇ ಸ್ಪರ್ಧಿಗಳು ಯಾರೆಲ್ಲಾ ಇರುತ್ತಾರೆ ಎನ್ನುವುದರ ಬಗ್ಗೆಯೂ ಚರ್ಚೆ ಶುರುವಾಗಿದೆ.

ಖ್ಯಾತ ಯೂಟ್ಯೂಬರ್ ಬಾಂಚಿಕ್ ಬಬ್ಲು,ನಟ ರಾಜ್‌ ತರುಣ್‌, ಇತ್ತೀಚೆಗೆ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರಾದ ನಟಿ ಹೇಮಾ ,ರಸ್ತೆಬದಿ ಹೊಟೇಲ್‌ ಹೊಂದಿರುವ ಜನಪ್ರಿಯ ಕುಮಾರಿ ಆಂಟಿ ಸೇರಿದಂತೆ ಹಲವರು ಹೆಸರು ಸ್ಪರ್ಧಿಗಳ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿದೆ.

ಈ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿರುವ ಮತ್ತೊಂದು ಖ್ಯಾತ ಹೆಸರೆಂದರೆ ಅದು ಜನಪ್ರಿಯ ಜ್ಯೋತಿಷಿ ವೇಣುಸ್ವಾಮಿ ಅವರದು.

ತೆಲುಗು ಪ್ರೇಕ್ಷಕರಿಗೆ ವೇಣುಸ್ವಾಮಿ ಅವರ ಪರಿಚಯ ಹೊಸತೇನಲ್ಲ. ಸಾಮಾನ್ಯ ಜನರಿಂದಿಡಿದು ಟಾಲಿವುಡ್‌ ನ ಟಾಪ್‌ ಸೆಲೆಬ್ರಿಟಿಗಳಿಗೂ ವೇಣು ಸ್ವಾಮಿಯವರ ಹೆಸರು ಗೊತ್ತಿದೆ.

ಯಾರು ಈ ವೇಣು ಸ್ವಾಮಿ:  ವೇಣುಸ್ವಾಮಿ ಟಾಲಿವುಡ್‌ ಸೆಲೆಬ್ರಿಟಿಗಳ ಹಾಗೂ ರಾಜಕೀಯ ಆಗುಹೋಗುಗಳ ಕುರಿತಾಗಿ ಭವಿಷ್ಯ ನುಡಿಯುವ ಜ್ಯೋತಿಷಿ. ಟಾಲಿವುಡ್‌ ಸೆಲೆಬ್ರಿಟಿಗಳ ದಾಂಪತ್ಯ, ವಿಚ್ಚೇದನ, ಪ್ರೇಮ್‌ ಕಹಾನಿ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ.

ಬಹುತೇಕ ಎಲ್ಲಾ ಭವಿಷ್ಯವೂ ನಿಜವಾಗಿದೆ..

ʼಬಾಹುಬಲಿ-2ʼ ಬಳಿಕ ಪ್ರಭಾಸ್‌ ಅವರ ಕೆರಿಯರ್‌ ಕಷ್ಟವಿದೆ ಎಂದು ವೇಣುಸ್ವಾಮಿ ಹೇಳಿದ್ದರು. ಇದಾದ ಬಳಿಕ ಪ್ರಭಾಸ್‌ ಅವರ ಮೂರು ಸಿನಿಮಾಗಳು ಸೋತಿದ್ದವು. ʼಸಲಾರ್‌ʼ ಸಿನಿಮಾ ಸೋಲುತ್ತದೆ ಎಂದಿದ್ದರು. ಆದರೆ ಸಲಾರ್‌ 700 ಕೋಟಿ ಗಳಿಸಿ ಹಿಟ್‌ ಆಗಿತ್ತು.

ಇನ್ನು ಪ್ರಭಾಸ್‌ ಅವರಿಗೆ ಮದುವೆ ಆಗುವುದಿಲ್ಲ ಅವರ ಜಾತಕದಲ್ಲಿ ದೋಷವಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.

ನಯನತಾರಾ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುತ್ತದೆ. ವಿಚ್ಚೇದನ ಪಡೆಯುತ್ತಾರೆ ಎಂದೂ ವೇಣುಸ್ವಾಮಿ ಹೇಳಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ ಅವರು ಪರಸ್ಪರ ದೂರವಾಗುತ್ತಾರೆ ಅವರಿಬ್ಬರೂ ಬೇರೆ ಮದುವೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಸಮಂತಾ – ನಾಗಚೈತನ್ಯ ವಿಚ್ಚೇದನ ಪಡೆದಿದ್ದಾರೆ.

ಮದುವೆಯ ಬಳಿಕ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಅವರು ಮದುವೆ ಆಗಿ ಸುಖವಾಗಿರಲ್ಲ. ಇಬ್ಬರು ವಿಚ್ಚೇದನ ಪಡೆಯುತ್ತಾರೆ ಎನ್ನುವ ಭವಿಷ್ಯವನ್ನು ಅವರು ನುಡಿದಿದ್ದಾರೆ.

ಪವನ್‌ ಕಲ್ಯಾಣ್‌ ಮೂರನೇ ಪತ್ನಿಯಿಂದಲೂ ವಿಚ್ಚೇದನ ಪಡೆಯುತ್ತಾರೆ. ರಾಜಕೀಯ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದಿದ್ದಾರೆ. ಇದರಲ್ಲಿ ಪವನ್‌ ಕಲ್ಯಾಣ್‌ ರಾಜಕೀಯ ಬದುಕು ಯಶಸ್ಸು ಕಂಡಿದೆ.

ಜೂ.ಎನ್‌ ಟಿಆರ್‌ ಸಿಎಂ ಆಗುತ್ತಾರೆ. ಅಲ್ಲು ಅರ್ಜುನ್‌ ಸಕ್ಸಸ್‌ ಪಡೆಯುತ್ತಾರೆ ಹೀಗೆ ಹತ್ತಾರು ಭವಿಷ್ಯವನ್ನು ಅವರು ನುಡಿದಿದ್ದು. ಇದರಲ್ಲಿ ಬಹುತೇಕ  ನಿಜವಾಗಿದೆ.

ಜಗನ್‌ ರೆಡ್ಡಿಗೆ ಹೀನಾಯ ಸೋಲು.. ಸುಳ್ಳಾದ ವೇಣು ಭವಿಷ್ಯ.. : ಚುನಾವಣೆಯಲ್ಲಿ ಜಗನ್ ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಪಕ್ಷ ಚುನಾವಣೆಯಲ್ಲಿ ಮೇಲುಗೈ ಸಾಧಿಸುತ್ತದೆ ಎನ್ನುವ ಭವಿಷ್ಯ ವೇಣು ಸ್ವಾಮಿ ನುಡಿದಿದ್ದರು. ಫಲಿತಾಂಶದ ಬಳಿಕ ಭವಿಷ್ಯ ಸುಳ್ಳಾಗಿದ್ದು. ಇದರಿಂದ ವೇಣು ಸ್ವಾಮಿ ಟ್ರೋಲ್‌ ಗೆ ಒಳಗಾಗಿದ್ದರು.

ಇದರಿಂದ ಅವರು ಕ್ಷಮೆಯಾಚಿಸಿದ್ದರು. ಇನ್ಮುಂದೆ ಅವರು ಭವಿಷ್ಯ ನುಡಿಯಲ್ಲ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

ಬಿಗ್‌ ಬಾಸ್‌ ಸ್ಪರ್ಧಿಯಾಗಲು ಭಾರೀ ಸಂಭಾವನೆ ಬೇಡಿಕೆ.!: ಬಿಗ್‌ ಬಾಸ್‌ ತೆಲುಗು -8 ನಲ್ಲಿ ಸ್ಪರ್ಧಿಯನ್ನಾಗಿ ಭಾಗಿಯಾಗಲು ವೇಣುಸ್ವಾಮಿ ಅವರಿಗೆ ಆಫರ್‌ ನೀಡಲಾಗಿದ್ದು, ಇದಕ್ಕೆ ವೇಣುಸ್ವಾಮಿ ಆಯೋಜಕರಿಂದ ಭಾರೀ ಸಂಭಾವನೆಯನ್ನು ಕೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಆಯೋಜಕರು ಇದಕ್ಕೆ ಒಪ್ಪಿದರೆ ಇದುವರೆಗೆ ಯಾರೂ ಪಡೆಯದೆ ಇರುವಷ್ಟು ದೊಡ್ಡ ಸಂಭಾವನೆಯನ್ನು ವೇಣುಸ್ವಾಮಿ ಪಡೆಯಲಿದ್ದಾರೆ ಎಂದು ʼಹಿಂದೂಸ್ತಾನ್‌ ಟೈಮ್ಸ್‌ ತೆಲುಗುʼ ವರದಿ ತಿಳಿಸಿದೆ.

ಯಾವಾಗ ಶುರು ಬಿಗ್‌ ಬಾಸ್‌ ?: ಬಿಗ್‌ ಬಾಸ್‌ ತೆಲುಗು -8 ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದ್ದು, ಈ ವರ್ಷದ ಸೆಪ್ಟೆಂಬರ್ ಆರಂಭಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಅನ್ನಪೂರ್ಣ ಸ್ಟುಡಿಯೋದಲ್ಲಿ ಬೃಹತ್ ಸೆಟ್‌ನಲ್ಲಿ ಕೆಲಸವನ್ನು ಪ್ರಾರಂಭಿಸಲಾಗಿದೆ. ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ ಎಂದು ವರದಿ ತಿಳಿಸಿದೆ.

 

ಟಾಪ್ ನ್ಯೂಸ್

rahul gandhi

LK Advani ಆರಂಭಿಸಿದ ಚಳುವಳಿಯನ್ನು ಅಯೋಧ್ಯೆಯಲ್ಲಿಯೇ ಸೋಲಿಸಿದ್ದೇವೆ..: ರಾಹುಲ್ ಗಾಂಧಿ

Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ

Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ

terror attack on Army camp in Jammu and Kashmir’s Rajouri

Rajouri; ಸೇನಾ ಶಿಬಿರದ ಮೇಲೆ ಉಗ್ರರ ದಾಳಿ; ಗಾಯಗೊಂಡ ಓರ್ವ ಸೈನಿಕ

1

ವರ್ಷದ ಮೊದಲಾರ್ಧದಲ್ಲಿ 1081ಕೋಟಿ ರೂ.ಗಳಿಕೆ ಕಂಡ ಬಾಲಿವುಡ್: ಸೋತವರೆಷ್ಟು,ಗೆದ್ದವರೆಷ್ಟು?

Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್‌!

Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್‌!

ಕಾರ್ಮಿಕರು ಚಹಾ ಕುಡಿಯಲು ಹೋಗಿದ್ದರಿಂದ ತಪ್ಪಿತು ದುರಂತ

Vijayapura; ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ತಪ್ಪಿದ ಭಾರಿ ಅನಾಹುತ

NEET-UG Counselling: ನೀಟ್‌-ಯುಜಿ ಕೌನ್ಸೆಲಿಂಗ್‌ ಈ ಮಾಸಾಂತ್ಯಕ್ಕೆ ಆರಂಭ?

NEET-UG Counselling: ನೀಟ್‌-ಯುಜಿ ಕೌನ್ಸೆಲಿಂಗ್‌ ಈ ಮಾಸಾಂತ್ಯಕ್ಕೆ ಆರಂಭ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nanna Devru; ದೇವ್ರ ನಂಬಿ ಬಂದ ಮಯೂರಿ

Nanna Devru; ದೇವ್ರ ನಂಬಿ ಬಂದ ಮಯೂರಿ

Queen’s Premier League: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಜೆರ್ಸಿ ಬಿಡುಗಡೆ

Queen’s Premier League: ಕ್ವೀನ್ಸ್‌ ಪ್ರೀಮಿಯರ್‌ ಲೀಗ್‌ ಜೆರ್ಸಿ ಬಿಡುಗಡೆ

1

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

4

ಇಬ್ಬರು ಪತ್ನಿಯರೊಂದಿಗೆ ಬಿಗ್‌ ಬಾಸ್‌ ಮನೆಗೆ ಬಂದ ಯೂಟ್ಯೂಬರ್:‌ ಯಾರು ಈ ಅರ್ಮಾನ್ ಮಲಿಕ್?

Bigg Boss OTT: ಓಟಿಟಿಯಲ್ಲಿ ಶುರುವಾಯಿತು ಮಿನಿ ಬಿಗ್‌ ಬಾಸ್; ಇಲ್ಲಿದೆ ಸ್ಪರ್ಧಿಗಳ ವಿವರ

Bigg Boss OTT: ಓಟಿಟಿಯಲ್ಲಿ ಶುರುವಾಯಿತು ಮಿನಿ ಬಿಗ್‌ ಬಾಸ್; ಇಲ್ಲಿದೆ ಸ್ಪರ್ಧಿಗಳ ವಿವರ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

rahul gandhi

LK Advani ಆರಂಭಿಸಿದ ಚಳುವಳಿಯನ್ನು ಅಯೋಧ್ಯೆಯಲ್ಲಿಯೇ ಸೋಲಿಸಿದ್ದೇವೆ..: ರಾಹುಲ್ ಗಾಂಧಿ

Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ

Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ

terror attack on Army camp in Jammu and Kashmir’s Rajouri

Rajouri; ಸೇನಾ ಶಿಬಿರದ ಮೇಲೆ ಉಗ್ರರ ದಾಳಿ; ಗಾಯಗೊಂಡ ಓರ್ವ ಸೈನಿಕ

1

ವರ್ಷದ ಮೊದಲಾರ್ಧದಲ್ಲಿ 1081ಕೋಟಿ ರೂ.ಗಳಿಕೆ ಕಂಡ ಬಾಲಿವುಡ್: ಸೋತವರೆಷ್ಟು,ಗೆದ್ದವರೆಷ್ಟು?

Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್‌!

Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.