Puneeth Rajkumar: ಟಿವಿಯಲ್ಲಿ ʼಅಪ್ಪುʼವನ್ನೇ ಹೋಲುವ ಈ ಕಲಾವಿದನನ್ನು ನೋಡಿ ಭಾವುಕರಾದ ಜನ 

ಹಾವಭಾವ, ಕುಣಿತ, ಅಭಿನಯ.. ಅಪ್ಪುವನ್ನೇ ಹೋಲುವ ಈ ಕಲಾವಿದ ಯಾರು?

Team Udayavani, Jul 29, 2024, 4:14 PM IST

Puneeth Rajkumar: ಟಿವಿಯಲ್ಲಿ ʼಅಪ್ಪುʼವನ್ನೇ ಹೋಲುವ ಈ ಕಲಾವಿದನನ್ನು ನೋಡಿ ಭಾವುಕರಾದ ಜನ 

ಬೆಂಗಳೂರು: ಕನ್ನಡಿಗರ ʼರಾಜಕುಮಾರʼ ಡಾ.ಪುನೀತ್‌ ರಾಜ್‌ ಕುಮಾರ್‌ (Dr. Puneeth Rajkumar) ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರನ್ನು ಪ್ರತಿದಿನವೂ ಅವರ ಅಭಿಮಾನಿಗಳು ನೆನೆಯುತ್ತಲೇ ಇದ್ದಾರೆ. ʼಅಪ್ಪುʼ ಅಮರವೆಂದು ಹೇಳುತ್ತಿದ್ದಾರೆ.

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ನಮ್ಮ ಜೊತೆ ಈ ಲೋಕದಲ್ಲಿ ಇಲ್ಲದಿದ್ರೂ ಅವರು ಕಲಿಸಿಕೊಟ್ಟ ಜೀವನ ಪಾಠ, ನೀತಿ ನಿಯಮಗಳು ಇಂದಿಗೂ ಅನೇಕರಿಗೆ ಸ್ಪೂರ್ತಿಯಾಗಿದೆ. ʼಅಪ್ಪುʼ ಇಲ್ಲದಿದ್ರೂ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿರುವುದನ್ನು ಮಾತ್ರ ಕಡಿಮೆ ಮಾಡಿಲ್ಲ.

ಪುನೀತ್‌ ರಾಜ್‌ ಕುಮಾರ್‌ ಅವರ ಸಿನಿಮಾಗಳ ರೀ – ರಿಲೀಸ್‌ ಆದರೆ ಇಂದಿಗೂ ಸಾಲುಗಟ್ಟಿ ಥಿಯೇಟರ್‌ ನಲ್ಲಿ ನಿಂತು ಟಿಕೆಟ್‌ ಖರೀದಿಸುವ ಬೃಹತ್‌ ಅಭಿಮಾನಿಗಳು ಅವರಿಗಿದ್ದಾರೆ.

ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯನ್ನು ಹೋಲುವ 7 ಮಂದಿ ಇರುತ್ತಾರಂತೆ. ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದಲ್ಲಿ ಡಾ.ಪುನೀತ್‌ ರಾಜ್‌ ಕುಮಾರ್‌ ಅವರನ್ನು ಹೋಲುವಂತೆ ಕಲಾವಿದನೊಬ್ಬನ ಅಭಿನಯ ಮೂಡಿಬಂದಿದ್ದು, ʼಅಪ್ಪುʼ ಅವರನ್ನು ಮತ್ತೆ ಭೂಲೋಕಕ್ಕೆ ಕರೆತಂದಂತೆ ಕಂಡಿದೆ.

ʼಜೀ ಕನ್ನಡʼ ವಾಹಿನಿಯಲ್ಲಿ ಪ್ರಸಾರ ಕಾಣುವ ʼಕಾಮಿಡಿ ಕಿಲಾಡಿಗಳು ಪ್ರಿಮಿಯರ್‌ ಲೀಗ್‌ʼ ಕಾರ್ಯಕ್ರಮದಲ್ಲಿ ಡಾ.ಪುನೀತ್‌ ರಾಜ್‌ ಕುಮಾರ್‌ ಅವರನ್ನು ಹೋಲುವ ಕಲಾವಿದ ಪ್ರೇಕ್ಷಕರನ್ನು ʼಅಪ್ಪುʼ ಅವರಂತೆ ರಂಜಿಸಿ ತೀರ್ಪುಗಾರರ ಕಣ್ಣಂಚಲಿ ನೀರು ತರಿಸಿದ್ದಾನೆ.

ʼಅಪ್ಪುʼ ಅವರನ್ನೇ ಹೋಲುವ ಧ್ವನಿ, ಡ್ಯಾನ್ಸ್‌, ಮುಖ, ಅಭಿನಯ; ಯಾರೀತ?: ಕಾಮಿಡಿ ಕಿಲಾಡಿಗಳು ಪ್ರಿಮಿಯರ್‌ ಲೀಗ್‌ ಕಾರ್ಯಕ್ರಮದ ಸ್ಕಿಟ್ ವೊಂದರಲ್ಲಿ ಡಾ.ಪುನೀತ್‌ ರಾಜ್‌ ಕುಮಾರ್‌ ಟೈಮ್‌ ಟ್ರಾವೆಲ್‌ ಮಾಡಿ ಬಂದರೆ ಹೇಗಿರುತ್ತೆ ಎನ್ನುವ ಕಾನ್ಸೆಪ್ಟ್‌ ನ್ನು ತೋರಿಸಲಾಗಿದೆ. ಟೈಮ್‌ ಟ್ರಾವೆಲ್‌ ನಿಂದ ಡಾ. ಪುನೀತ್‌ ರಾಜ್‌ ಕುಮಾರ್‌ ಮತ್ತೆ ಭೂಲೋಕಕ್ಕೆ ಬರುವುದನ್ನು ತೋರಿಸಲಾಗಿದೆ. ಜೂ. ಅಪ್ಪು ಅವರನ್ನು ನೋಡಿ ಥೇಟ್‌ ನಿಜವಾದ ಅಪ್ಪು ಮತ್ತೆ ಹುಟ್ಟಿ ಬಂದವರಂತೆ ಕಂಡಿದ್ದು, ಇದನ್ನು ನೋಡಿದ ತೀರ್ಪುಗಾರರು ಹಾಗೂ ವೇದಿಕೆಯಲ್ಲಿದ್ದ ಸ್ಪರ್ಧಿಗಳು ಭಾವುಕರಾಗಿದ್ದಾರೆ.

ಪುನೀತ್‌ ರಾಜ್‌ ಕುಮಾರ್‌ ಅವರಂತೆ ಮೂನ್‌ ವಾಕ್‌ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇದಾದ ಬಳಿಕ ಅಪ್ಪು ಅವರ ಸಿನಿಮಾದ ಡೈಲಾಗ್ಸ್‌ ನ್ನು ಹೇಳಿದ್ದಾರೆ.

ಅಪ್ಪುವನ್ನು ಹೋಲುವ ಹಾವಭಾವದಿಂದ ಪ್ರೇಕ್ಷಕರ ಮನಗೆದ್ದಿರುವ ಈ ಕಲಾವಿದನ ಹೆಸರು ರಾಘವೇಂದ್ರ ಬಸ್ತಿ. ಹಾವೇರಿಯವರಾದ ಇವರು ಡಾ.ರಾಜ್‌ ಕುಮಾರ್‌ ಅವರನ್ನೇ ಹೋಲುವ, ಅವರ ಅನುಕರಣೆ ಮಾಡಿ, “ನಮ್ಮೂರ ರಾಜಕುಮಾರ”ಎನ್ನುವ ಖ್ಯಾತಿಯನ್ನು ಗಳಿಸಿರುವ ಕಲಾವಿದ ಅಶೋಕ ಬಸ್ತಿ ಅವರ ಪುತ್ರವೆನ್ನುವುದು ವಿಶೇಷ. ಇವರ ತಂದೆ ಡಾ.ರಾಜ್‌ ಕುಮಾರ್‌ ಅವರನ್ನು ಅನುಕರಣೆ ಮಾಡುತ್ತಾರೆ.

 

View this post on Instagram

 

A post shared by Zee Kannada (@zeekannada)

ಅಶೋಕ ಬಸ್ತಿ ಅಣ್ಣಾವ್ರ ತದ್ರೂಪ ಆಗಿದ್ದು, ಮಗ ರಾಘವೇಂದ್ರ ಬಸ್ತಿ ಪುನೀತ್ ತದ್ರೂಪವಾಗಿದ್ದಾರೆ.

ವೇದಿಕೆಯಲ್ಲಿ ಅಪ್ಪು ಅವರ ಪಾತ್ರವನ್ನು ಮಾಡಿದ ರಾಘವೇಂದ್ರ ಅವರನ್ನು ಊರಿನಲ್ಲಿ ಜೂ. ಅಪ್ಪುವೆಂದೇ ಕರೆಯುತ್ತಾರೆ. ನಾನಾ ಕಾರ್ಯಕ್ರಮಗಳಲ್ಲಿ ಅವರು ಅಪ್ಪು ಅವರನ್ನು ಅನುಕರಣೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡುವ ಅವರು, “ನಾನು ಅಶೋಕ್ ಬಸ್ತಿ ಅವರ ಮಗ ಅಂತ ಹೇಳಿದ್ರು. ಕನ್ನಡಕ್ಕೆ ಒಬ್ಬರೇ ಪುನೀತ್ ರಾಜಕುಮಾರ್ ಇದ್ದಾರೆ. ಇವರಿಂದಲೇ ನಾವು ಎರಡು ಹೊತ್ತು ಊಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.

 

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಚೈತ್ರಾ ಕುಂದಾಪುರ To ಕೆಜಿಎಫ್‌ ಬಾಬು.. ಬಿಗ್‌ ಬಾಸ್‌ ಸ್ಪರ್ಧಿಗಳ ಹೊಸ ಪಟ್ಟಿ ವೈರಲ್

BBK11: ಚೈತ್ರಾ ಕುಂದಾಪುರ To ಕೆಜಿಎಫ್‌ ಬಾಬು.. ಬಿಗ್‌ ಬಾಸ್‌ ಸ್ಪರ್ಧಿಗಳ ಹೊಸ ಪಟ್ಟಿ ವೈರಲ್

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

Bigg Boss18: ಸ್ಪರ್ಧಿಗಳ ಭವಿಷ್ಯ ನೋಡಲಿದ್ದಾರೆ ʼಬಿಗ್‌ಬಾಸ್‌ʼ; ಕುತೂಹಲ ಹುಟ್ಟಿಸಿದ ಪ್ರೋಮೊ

Bigg Boss18: ಸ್ಪರ್ಧಿಗಳ ಭವಿಷ್ಯ ನೋಡಲಿದ್ದಾರೆ ʼಬಿಗ್‌ಬಾಸ್‌ʼ; ಕುತೂಹಲ ಹುಟ್ಟಿಸಿದ ಪ್ರೋಮೊ

9

BBK11: ಈ ಬಾರಿ ಬಿಗ್‌ ಬಾಸ್‌ ಮನೆಯೊಳಗೆ ಹೋಗೋರು ಇವರೇ? ಇಲ್ಲಿದೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ

BBK-11: ಕೊನೆಗೂ ಬಿಗ್‌ ಬಾಸ್‌ ಆ್ಯಂಕರ್ ಮುಖ ರಿವೀಲ್…‌ ಶೋ ಆರಂಭಕ್ಕೆ ಡೇಟ್‌ ಪಿಕ್ಸ್

BBK-11: ಕೊನೆಗೂ ಬಿಗ್‌ ಬಾಸ್‌ ಆ್ಯಂಕರ್ ಮುಖ ರಿವೀಲ್…‌ ಶೋ ಆರಂಭಕ್ಕೆ ಡೇಟ್‌ ಫಿಕ್ಸ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.