Tv Actor Varun: ಪ್ರೀತಿಸಿ ದ್ರೋಹ, ಧಮ್ಕಿ; ನಟ ವರುಣ್ ಮೇಲೆ ಕೇಸ್
ಖಾಸಗಿ ಫೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ
Team Udayavani, Sep 12, 2024, 10:27 AM IST
ಬೆಂಗಳೂರು: ಪ್ರೀತಿಸಿ ವಂಚಿಸಿದಲ್ಲದೆ, ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪದ ಮೇರೆಗೆ ಕಿರುತೆರೆ ನಟ, ಯುಟ್ಯೂಬರ್ ವರುಣ್ ಆರಾಧ್ಯನ ವಿರುದ್ಧ ಯುವತಿಯೊಬ್ಬಳು ಪಶ್ಚಿಮ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
24 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ ವಿರುದ್ಧ ಪಶ್ಚಿಮ ವಿಭಾಗ ಸೈಬರ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಆರೋಪ ಏನು?: ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ಮೂಲಕ 2019ರಲ್ಲಿ ಆರೋಪಿ ವರುಣ್ ಆರಾಧ್ಯ ಪರಿಚಯವಾಗಿದ್ದು, ಸ್ನೇಹಿತರಾಗಿ ನಂತರ ಪ್ರೀತಿಯಾಗಿ ಬದಲಾಗಿ 4 ವರ್ಷಗಳಿಂದ ಪ್ರೀತಿಯಲ್ಲಿದ್ದೆವು. 4-5 ತಿಂಗಳ ನಂತರ ನಾನು, ವರುಣ್ ನನ್ನು ಭೇಟಿಯಾದಾಗ ನನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ತೆಗೆದುಕೊಂಡಿದ್ದ. ನಂತರ 2023ರ ಜುಲೈನಲ್ಲಿ ನಾನು ವರುಣ್ ಆರಾಧ್ಯ ಫೋನ್ ನೋಡಿದಾಗ, ಆತ ಮತ್ತೊಂದು ಹುಡುಗಿ ಜತೆಗಿದ್ದ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಗಮನಿಸಿದ್ದೆ. ಅದನ್ನು ಪ್ರಶ್ನಿಸಿದಾಗ ಇದನ್ನು ಹೊರಗಡೆ ಎಲ್ಲೂ ಹೇಳಬಾರದು. ಒಂದು ವೇಳೆ ಹೇಳಿದರೆ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಬೆದರಿಕೆ ಹಾಕಿದ್ದಾನೆ.
2023ರ ಸೆ. 10 ರಂದು ವರುಣ್ ವಾಟ್ಸ್ಆ್ಯಪ್ ನಿಂದ ನನಗೆ ನನ್ನ ಖಾಸಗಿ, ಆಶ್ಲೀಲ ಫೋಟೋ ಕಳಿಸಿದ್ದ. ಅದನ್ನು ನೋಡಿ ಶಾಕ್ ಆಗಿ, ಈ ರೀತಿ ಯಾಕೆ ಕಳಿಸ್ತಿದ್ದೀಯಾ ಅಂತ ಕೇಳಿದ್ದೆ. ನನ್ನ ಹತ್ತಿರ ಇನ್ನೂ ಹೆಚ್ಚಿನ ಖಾಸಗಿ ಫೋಟೋ ಮತ್ತು ವಿಡಿಯೋಗಳಿವೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತೇನೆಂದು ನನಗೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bigg Boss18: ಸ್ಪರ್ಧಿಗಳ ಭವಿಷ್ಯ ನೋಡಲಿದ್ದಾರೆ ʼಬಿಗ್ಬಾಸ್ʼ; ಕುತೂಹಲ ಹುಟ್ಟಿಸಿದ ಪ್ರೋಮೊ
BBK11: ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗೋರು ಇವರೇ? ಇಲ್ಲಿದೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ
BBK-11: ಕೊನೆಗೂ ಬಿಗ್ ಬಾಸ್ ಆ್ಯಂಕರ್ ಮುಖ ರಿವೀಲ್… ಶೋ ಆರಂಭಕ್ಕೆ ಡೇಟ್ ಫಿಕ್ಸ್
Bigg Boss 18: ಬಿಗ್ಬಾಸ್ನಲ್ಲಿ ಭಾಗಿಯಾಗಲು ನಟನಿಗೆ 5 ಕೋಟಿ ಆಫರ್; ಯಾರೀತ?
Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.