BB18: ಬಿಗ್‌ಬಾಸ್‌ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ನಟ ಮಹೇಶ್‌ ಬಾಬು ಸಂಬಂಧಿ; ಯಾರೀಕೆ?


Team Udayavani, Sep 24, 2024, 2:00 PM IST

7

ಮುಂಬಯಿ: ಸಲ್ಮಾನ್‌ ಖಾನ್‌ (Salman Khan) ನಡೆಸಿಕೊಡುವ ಬಿಗ್‌ ಬಾಸ್‌ -18 (Bigg Boss) ಆರಂಭದ ದಿನಾಂಕವನ್ನು ಅಧಿಕೃತವಾಗಿ ಅನೌನ್ಸ್‌ ಮಾಡಲಾಗಿದೆ.

ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಹಲವು ಟ್ವಿಸ್ಟ್‌ ಗಳಿರಲಿವೆ. “ಭೂತ, ವರ್ತಮಾನ ಮತ್ತು ಭವಿಷ್ಯ”ದ ಸುತ್ತ ಬಿಗ್‌ ಬಾಸ್‌ ನಡೆಯಲಿದೆ. “ಬಿಗ್‌ ಬಾಸ್‌ ನೋಡಲಿದ್ದಾರೆ ಮನೆಯವರ ಭವಿಷ್ಯ, ಈಗ ಆಗಲಿದೆ ಸಮಯದ ತಾಂಡವ್”‌ ಎಂದು ಪ್ರೋಮೊದಲ್ಲಿ ತೋರಿಸಲಾಗಿದೆ.

ಶೋ ಆರಂಭದ ದಿನ ರಿವೀಲ್‌ ಆದ ಬಳಿಕ ಸ್ಪರ್ಧಿಗಳ ವಿಚಾರವೂ ಇಂಟರ್‌ ನೆಟ್‌ ಸದ್ದು ಮಾಡುತ್ತಿದೆ. ಕಿರುತೆರೆ ನಟ – ನಟಿಯರು, ಸೋಶಿಯಲ್‌ ಮೀಡಿಯಾ ಪ್ರಭಾವಿಗಳ ಹೆಸರು ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕೇಳಿ ಬರುತ್ತಿದೆ.

ಈ ಸಾಲಿನಲ್ಲಿ ದಕ್ಷಿಣ ಭಾರತದ ಖ್ಯಾತ ಮಹೇಶ್‌ ಬಾಬು (Mahesh Babu) ಅವರ ಕುಟುಂಬದ ಸದಸ್ಯೆಯೊಬ್ಬರು ಬಿಗ್‌ ಬಾಸ್‌ ಮನೆಗೆ ಹೋಗುತ್ತಾರೆ ಎನ್ನಲಾಗುತ್ತಿದೆ.

ದೊಡ್ಮನೆಗೆ ಶಿಲ್ಪಾ ಶಿರೋಡ್ಕರ್; ಯಾರೀಕೆ?: ಬಿಗ್‌ ಬಾಸ್‌ -18 ಮನೆಗೆ ಸ್ಪರ್ಧಿಯಾಗಿ ಹೋಗುವವರ ಸಾಲಿನಲ್ಲಿ ಕೇಳಿ ಬರುತ್ತಿರುವ ಆಸಕ್ತಿದಾಯಕ ಹೆಸರುಗಳಲ್ಲಿ ಶಿಲ್ಪಾ ಶಿರೋಡ್ಕರ್ ಅವರ ಹೆಸರು ಕೂಡ ಒಂದು. ಇವರು ನಟಿ ನಮ್ರತಾ ಶಿರೋಡ್ಕರ್ ಅವರ ಸಹೋದರಿ ಮತ್ತು ಸೂಪರ್‌ ಸ್ಟಾರ್ ಮಹೇಶ್ ಬಾಬು ಅವರ ಅತ್ತಿಗೆ ಆಗಿದ್ದಾರೆ.

80-90ರ ದಶಕದಲ್ಲಿ ಶಿಲ್ಪಾ ಅವರು ನಟಿಯಾಗಿ ಗುರುತಿಸಿಕೊಂಡಿದ್ದರು. ರಮೇಶ್ ಸಿಪ್ಪಿ ಅವರ ಭ್ರಷ್ಟಾಚಾರ್ (1989) ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಮತ್ತು ರೇಖಾ ಅವರೊಂದಿಗೆ ಅವರು ನಟಿಸಿದ್ದರು. ಈ ಸಿನಿಮಾದಲ್ಲಿ ಅವರು ಅಂಧ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದರು.

ಒಂದಷ್ಟು ವರ್ಷಗಳ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಂಡರು. 2013 ರಲ್ಲಿ ಜೀ ಟಿವಿಯ ʼಏಕ್ ಮುಟ್ಟಿ ಆಸ್ಮಾನ್ʼ ಸ್ಟಾರ್‌ ಪ್ಲಸ್‌ನ ʼಸಿಲ್ಸಿಲಾ ಪ್ಯಾರ್ ಕಾʼ, ಕಲರ್ಸ್ ಟಿವಿಯ ʼಸಾವಿತ್ರಿ ದೇವಿ ಕಾಲೇಜು & ಹಾಸ್ಪೆಟಲ್‌ʼ  ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

2020ರಲ್ಲಿ, ಶಿಲ್ಪಾ ʼಗನ್ಸ್ ಆಫ್ ಬನಾರಸ್ʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಮತ್ತೆ ಕಂಬ್ಯಾಕ್‌ ಮಾಡಿದರು.

ಶಿಲ್ಪಾ ಬಿಗ್‌ ಬಾಸ್‌ಗೆ ಹೋಗಲು ಓಕೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇವರೊಂದಿಗೆ ಇಶಾ ಕೋಪಿಕರ್, ಶೈನಿ ಅಹುಜಾ, ಗುರುಚರಣ್ ಸಿಂಗ್, ಅರ್ಜುನ್ ಬಿಜ್ಲಾನಿ, ಕರಣ್ ಪಟೇಲ್, ಸಮೀರಾ ರೆಡ್ಡಿ, ಸುರಭಿ ಜ್ಯೋತಿ, ಪೂಜಾ ಶರ್ಮಾ ಶೋಯೆಬ್ ಇಬ್ರಾಹಿಂ ಮತ್ತು ದಲ್‌ಜೀತ್ ಕೌರ್ , ಅಭಿಷೇಕ್ ಮಲ್ಹಾನ್, ಫೈಜ್, ದೀಪಿಕಾ ಆರ್ಯ, ಡಾಲಿ ಚಾಯ್ ವಾಲ, ಮ್ಯಾಕ್ಸ್‌ಟರ್ನ್(ಗೇಮರ್) ಮತ್ತು ತುಗೇಶ್ ಅವರ ಹೆಸರು ಕೂಡಾ ಸ್ಪರ್ಧಿಗಳ ಲಿಸ್ಟ್‌ ನಲ್ಲಿ ಕೇಳಿ ಬರುತ್ತಿದೆ.

ಇದೇ ಅಕ್ಟೋಬರ್‌ 6 ರಿಂದ ಬಿಗ್‌ ಬಾಸ್‌ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಟಾಪ್ ನ್ಯೂಸ್

10

MeToo Case: ಅತ್ಯಾಚಾರ ಆರೋಪದಲ್ಲಿ ನಟ, ಶಾಸಕ ಮುಕೇಶ್‌ ಬಂಧಿಸಿದ ಪೊಲೀಸರು

4-bantwala-1

Bantwala: ಲಾರಿ- ಬೈಕ್‌ ಭೀಕರ ಅಪಘಾತ; ಗಂಭೀರ ಗಾಯಗೊಂಡಿದ್ದ ಮೂವರ ಪೈಕಿ ಓರ್ವ ಮೃತ್ಯು

MUDA Case: ಸಿಎಂ ವಿರುದ್ಧ ತೀರ್ಪು…: ಕಾನೂನು ಎಲ್ಲರಿಗೂ ಒಂದೇ ಎಂದ ಬಿ.ವೈ.ರಾಘವೇಂದ್ರ

MUDA Case: ಸಿಎಂ ವಿರುದ್ಧ ತೀರ್ಪು…: ಕಾನೂನು ಎಲ್ಲರಿಗೂ ಒಂದೇ ಎಂದ ಬಿ.ವೈ.ರಾಘವೇಂದ್ರ

088

Devara: ಅಡ್ವಾನ್ಸ್‌ ಬುಕಿಂಗ್‌ನಲ್ಲೇ ಕೋಟಿ- ಕೋಟಿ ಗಳಿಸಿದ ʼದೇವರʼ; ಎಲ್ಲಿ ಎಷ್ಟು ಗಳಿಕೆ?

7

BB18: ಬಿಗ್‌ಬಾಸ್‌ ಮನೆಗೆ ಸ್ಪರ್ಧಿಯಾಗಿ ಹೋಗಲಿದ್ದಾರೆ ನಟ ಮಹೇಶ್‌ ಬಾಬು ಸಂಬಂಧಿ; ಯಾರೀಕೆ?

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

Bantwal: ತಾಯಿ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ಮುರಿದು ನಗನಗದು ದೋಚಿದ ಕಳ್ಳರು

1-sulya

ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ದಾಖಲಿಸಿದ ಆರೋಪ;ಸುಳ್ಯ ಪೊಲೀಸ್ ಠಾಣೆ ಬಳಿ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

BBK11: ಸ್ಪರ್ಧಿಗಳ ಆಯ್ಕೆಗೆ ವೋಟಿಂಗ್‌ To ಫೇಸ್‌ ರಿವೀಲ್; ಹೇಗಿರಲಿದೆ ಈ ಬಾರಿ ಬಿಗ್‌ಬಾಸ್?

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

Bigg Boss 18: ಬಿಗ್‌ ಬಾಸ್‌ ಆರಂಭಕ್ಕೆ ಡೇಟ್‌ ಫಿಕ್ಸ್; ನಿರೂಪಣೆಗೆ ರೆಡಿಯಾದ ಸಲ್ಮಾನ್

Bigg Boss 18: ಬಿಗ್‌ ಬಾಸ್‌ ಆರಂಭಕ್ಕೆ ಡೇಟ್‌ ಫಿಕ್ಸ್; ನಿರೂಪಣೆಗೆ ರೆಡಿಯಾದ ಸಲ್ಮಾನ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಚೈತ್ರಾ ಕುಂದಾಪುರ To ಕೆಜಿಎಫ್‌ ಬಾಬು.. ಬಿಗ್‌ ಬಾಸ್‌ ಸ್ಪರ್ಧಿಗಳ ಹೊಸ ಪಟ್ಟಿ ವೈರಲ್

BBK11: ಚೈತ್ರಾ ಕುಂದಾಪುರ To ಕೆಜಿಎಫ್‌ ಬಾಬು.. ಬಿಗ್‌ ಬಾಸ್‌ ಸ್ಪರ್ಧಿಗಳ ಹೊಸ ಪಟ್ಟಿ ವೈರಲ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

10

MeToo Case: ಅತ್ಯಾಚಾರ ಆರೋಪದಲ್ಲಿ ನಟ, ಶಾಸಕ ಮುಕೇಶ್‌ ಬಂಧಿಸಿದ ಪೊಲೀಸರು

7(1)

Kota: ಕಾಲುಗಳಲ್ಲಿ ಬಲವಿಲ್ಲದಿದ್ದರೇನಂತೆ, ಬಾಹುಬಲ ಮಾತ್ರ ಅಮೋಘ!

Siddapura: ಬೀಡಾಡಿ ದನಗಳಿಂದ ವಾಹನ ಸವಾರರಿಗೆ ಆತಂಕ

Siddapura: ಬೀಡಾಡಿ ದನಗಳಿಂದ ವಾಹನ ಸವಾರರಿಗೆ ಆತಂಕ

5-thirthahalli

ಈಗಾಗಲೇ ಸಿದ್ದರಾಮಯ್ಯ ರಾಜೀನಾಮೆ ನೀಡಿ ಹೊರ ಬಂದಿದ್ದರೆ ಅವರ ಗೌರವ ಸಹ ಹೆಚ್ಚಾಗುತ್ತಿತ್ತು:ಆರಗ

5

Karkala: ಒಳಚರಂಡಿ ಅಲ್ಲ ಹೊರ ಚರಂಡಿಯಾಗಿಬಿಟ್ಟಿದೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.