ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದು ‘Jhalak Dikhhla Jaa 11ʼ ಟ್ರೋಫಿ ಗೆದ್ದ ಮನಿಶಾ
Team Udayavani, Mar 3, 2024, 9:10 AM IST
ಮುಂಬಯಿ: ಹಿಂದಿಯ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ʼಝಲಕ್ ದಿಖ್ಲಾ ಜಾ’ ಸೀಸನ್ 11 ರ ಫಿನಾಲೆ ಅದ್ಧೂರಿಯಾಗಿ ಮುಕ್ತಾಯ ಕಂಡಿದೆ. ಟಾಪ್ 5 ಫೈನಾಲಿಸ್ಟ್ ಗಳ ಪೈಕಿ ಒಬ್ಬರು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಹಿಂದಿಯ ʼಬಿಗ್ ಬಾಸ್ ಓಟಿಟಿ -2ʼ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಮನಿಶಾ ರಾಣಿ ‘ಝಲಕ್ ದಿಖ್ಲಾ ಜಾ’ ಸೀಸನ್ 11 ರ ವಿಜೇತರಾಗಿ ಹೊರಹೊಮ್ಮಿದ್ದಾರೆ.
ವಿನ್ನರ್ಗೆ 30 ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಿದ್ದು. ಆಕೆಯ ನೃತ್ಯ ಸಂಯೋಜಕ ಅಶುತೋಷ್ ಪವಾರ್ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಲಾಗಿದೆ. ಇದಲ್ಲದೆ ಇಬ್ಬರಿಗೆ ಅಬುಧಾಬಿಯ ಯಾಸ್ ದ್ವೀಪಕ್ಕೆ ಪ್ರವಾಸ ಮಾಡುವ ಅವಕಾಶವನ್ನು ನೀಡಲಾಗಿದೆ.
ಸೋಶಿಯಲ್ ಮೀಡಿಯಾ ತಾರೆಯರು ಹಾಗೂ ಜನಪ್ರಿಯ ಕಿರುತರೆ ಕಲಾವಿದರು ಕಾಣಿಸಿಕೊಳ್ಳುವ ʼಝಲಕ್ ದಿಖ್ಲಾ ಜಾʼ ಫೈನಾಲಿಸ್ಟ್ ಆಗಿ ಐವರು ಸ್ಪರ್ಧಿಗಳಿದ್ದರು. ಜನಪ್ರಿಯ ಟಿವಿ ನಟ ಶೋಯೆಬ್ ಇಬ್ರಾಹಿಂ, ಹಿನ್ನೆಲೆ ಗಾಯಕ ಮತ್ತು ‘ಇಂಡಿಯನ್ ಐಡಲ್ 5’ ವಿಜೇತ ಶ್ರೀರಾಮ ಚಂದ್ರ, ನಟ ಅದ್ರಿಜಾ ಸಿನ್ಹಾ ಮತ್ತು ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿ ಧನಶ್ರೀ ವರ್ಮಾ ಫೈನಾಲಿಸ್ಟ್ ಆಗಿದ್ದರು.
ವೀಕ್ಷಕರ ವೋಟಿಂಗ್ ಆಧಾರದ ಮೇಲೆ ಐವರ ಪೈಕಿ ಮನಿಶಾ ರಾಣಿ ಹೆಚ್ಚು ಮತವನ್ನು ಪಡೆದಿದ್ದಾರೆ.
“ಈ ಪ್ರಯಾಣವು ಕನಸು ನನಸಾಗುವುದಕ್ಕಿಂತ ಕಡಿಮೆಯಿಲ್ಲ, ಮತ್ತು ತೀರ್ಪುಗಾರರು ಮತ್ತು ಪ್ರೇಕ್ಷಕರ ಪ್ರೀತಿ, ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಾನು ಋಣಿಯಾಗಿದ್ದೇನೆ. ಈ ಅನುಭವವು ನನ್ನ ಜೀವನವನ್ನು ಬದಲಾಯಿಸುತ್ತದೆ ಎಂದು ನನಗೆ ತಿಳಿದಿತ್ತು. ಅದು ನಿಜವಾಗಿಯೂ ಆಗಿದೆ. ವೈಲ್ಡ್ಕಾರ್ಡ್ ಪ್ರವೇಶವಾಗಿ ನನ್ನನ್ನು ಸಾಬೀತುಪಡಿಸಲು ನಾನು ಎರಡು ಪಟ್ಟು ಹೆಚ್ಚು ಶ್ರಮಿಸಬೇಕಾಗಿತ್ತು” ಎಂದು ಮನಿಶಾ ಹೇಳಿದ್ದಾರೆ.
ಫಿನಾಲೆಗೆ ‘ಮರ್ಡರ್ ಮುಬಾರಕ್’ ತಂಡದ ಸಾರಾ ಅಲಿ ಖಾನ್, ವಿಜಯ್ ವರ್ಮಾ ಮತ್ತು ಸಂಜಯ್ ಕಪೂರ್ ಅತಿಥಿಯಾಗಿ ಆಗಮಿಸಿದ್ದರು.
ಮನಿಶಾ ರಾಣಿ ಮತ್ತು ಧನಶ್ರೀ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಕಾರ್ಯಕ್ರಮಕ್ಕೆ ಬಂದಿದ್ದರು. ‘ಝಲಕ್ ದಿಖ್ಲಾ ಜಾ 11’ ಗೆ ಅರ್ಷದ್ ವಾರ್ಸಿ, ಫರಾ ಖಾನ್ ಮತ್ತು ಮಲೈಕಾ ಅರೋರಾ ತೀರ್ಪುಗಾರರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಇದು ಬಿಗ್ಬಾಸ್ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್ಗೆ ಕಿಚ್ಚನಿಂದ ಪಾಠ
BBK11: ವಂಚನೆ ಪ್ರಕರಣ ನೆನೆದು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ!
BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್
BBK11:ಬಿಗ್ಬಾಸ್ ಸ್ಪರ್ಧಿ ಜಗದೀಶ್ ಬಗ್ಗೆ ಸ್ಫೋಟಕ ವಿಚಾರ ಬಯಲು ಮಾಡಿದ ಪ್ರಶಾಂತ್ ಸಂಬರಗಿ
BBK11: ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ.. ನಾನು ಬಿಗ್ಬಾಸ್ನಿಂದ ಹೊರ ಹೋಗ್ತೇನೆ – ಜಗದೀಶ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.