BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ


Team Udayavani, Oct 9, 2024, 3:00 PM IST

BB18: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಯಾಗಿರುವ ʼಕತ್ತೆʼಯನ್ನು ಹೊರ ಕಳುಹಿಸಿ..ʼಪೆಟಾʼ ಆಗ್ರಹ

ಮುಂಬಯಿ: ಬಿಗ್‌ ಬಾಸ್‌ ಹಿಂದಿ-18 (Bigg Boss 18) ಆರಂಭವಾಗಿ ಕೆಲ ದಿನಗಳಷ್ಟೇ ಕಳೆದಿದೆ. ಅಷ್ಟರಲ್ಲೇ ಸಲ್ಮಾನ್‌ ಖಾನ್‌ (Salman Khan) ಅವರು ಶೋಗೆ ‘ಪೆಟಾʼ (PETA) ಸಂಸ್ಥೆಯಿಂದ ಪತ್ರವೊಂದು ಬಂದಿದೆ.

ಈ ಬಾರಿ ಹಿಂದಿ ಬಿಗ್‌ ಬಾಸ್‌ನಲ್ಲಿ ಮನರಂಜನಾ, ಕಿರುತೆರೆ, ಸಾಮಾಜಿಕ ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ಕೆಲ ವಿವಾದದಿಂದ ಸುದ್ದಿಯಾಗಿರುವ ಒಟ್ಟು 18 ಮಂದಿ ದೊಡ್ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಎರಡು ದಿನಗಳಲ್ಲೇ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಆದರೆ ಈ ಬಾರಿ ಬಿಗ್‌ ಬಾಸ್‌ನಲ್ಲಿ ಎಲ್ಲರ ಗಮನ ಸೆಳದಿರುವುದು ʼಮ್ಯಾಕ್ಸ್‌ʼ.

ಇದನ್ನೂ ಓದಿ: Nayanthara: ನಯನತಾರ ಮಕ್ಕಳ ದಾದಿಯರಿಗೂ ನಾವೇ ಸಂಬಳ ಕೊಡಬೇಕಾ..? ಖ್ಯಾತ ನಿರ್ಮಾಪಕ ಗರಂ

ಮ್ಯಾಕ್ಸ್‌ ಎಂದರೆ ಸೆಲೆಬ್ರಿಟಿ ಅಲ್ಲ. ಬದಲಾಗಿ ಮ್ಯಾಕ್ಸ್‌ ಎನ್ನುವುದು ಒಂದು ಕತ್ತೆಯ (Donkey) ಹೆಸರು. ಹೌದು ಈ ಬಾರಿ ಬಿಗ್‌ ಬಾಸ್‌ ಮನೆಗೆ 19ನೇ ಸ್ಪರ್ಧಿಯಾಗಿ ಕತ್ತೆ ಎಂಟ್ರಿ ಪಡೆದುಕೊಂಡಿದೆ. ವಕೀಲ ಗುಣರತ್ನ ಅವರೊಂದಿಗೆ ʼಮ್ಯಾಕ್ಸ್‌ʼ ಬಿಗ್‌ ಬಾಸ್‌ ಮನೆಗೆ ಹೋಗಿದೆ.

18 ಮಂದಿ ಬಿಗ್‌ ಬಾಸ್‌ ಸ್ಪರ್ಧಿಗಳು ಒಂದು ಕಡೆಯಿದ್ದರೆ, ʼಮ್ಯಾಕ್ಸ್‌ʼ ತನ್ನ ಪಾಡಿಗೆ ತಾನು ಆಹಾರವನ್ನು ಸೇವಿಸುತ್ತಾ ಒಂದು ಕಡೆ ನಿಂತುಕೊಂಡಿದೆ. ಬಿಗ್‌ ಬಾಸ್‌ ಮನೆಗೆ ಪ್ರಾಣಿಯೊಂದು ಪ್ರವೇಶ ಪಡೆದಿರುವುದಕ್ಕೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಾಣಿಗಳ ಹಕ್ಕುಗಳ ರಕ್ಷಣಾ ವೇದಿಕೆ ‘ಪೆಟಾʼ ಆಯೋಜಕರಿಗೆ ಪತ್ರ ಬರೆದಿದೆ.

ʼಗಧರಾಜ್ʼ (ಮ್ಯಾಕ್ಸ್) ಎಂಬ ಹೆಸರಿನ ಕತ್ತೆ ಕೂಡ ಬಿಗ್ ಬಾಸ್ 18ರ ಭಾಗವಾಗಿದೆ. ಅವರಿಗೆ ಗಾರ್ಡನ್ ಏರಿಯಾದಲ್ಲಿ ಜಾಗವನ್ನು ನೀಡಲಾಗಿದೆ ಮತ್ತು ಅದನ್ನು ನೋಡಿಕೊಳ್ಳಲು ಹೌಸ್‌ಮೇಟ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಬಿಗ್‌ ಬಾಸ್‌ ನಲ್ಲಿ ಹೇಳಲಾಗಿದೆ.

ಬಿಗ್‌ ಭಾಸ್‌ ಮನೆಯಲ್ಲಿ ಕತ್ತೆ ಇಟ್ಟುಕೊಂಡಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆ ʼಪೆಟಾʼ ವಾಹಿನಿಗೆ ಪತ್ರ ಬರೆದಿದೆ.

ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವುದನ್ನು ನಿಲ್ಲಿಸಿ. ಪ್ರಾಣಿಯನ್ನು ಈ ರೀತಿ ಒಂದೇ ಜಾಗದಲ್ಲಿ ಕಟ್ಟಿ ಇಡುವುದರಿಂದ ಅವು ಒತ್ತಡಕ್ಕೆ ಒಳಗಾಗುತ್ತವೆ. ಬಿಗ್ ಬಾಸ್ ಒಂದು ಲಘುವಾದ ಮನರಂಜನೆಯಾಗಿದೆ. ಆದರೆ ಶೋ ಸೆಟ್‌ನಲ್ಲಿ ಪ್ರಾಣಿಗಳನ್ನು ಬಳಸುವುದು ನಗುವ ವಿಷಯವಲ್ಲ. ಕತ್ತೆಗಳು ಬೆಳಕು ಹಾಗೂ ಶಬ್ದ, ಗಲಾಟೆಯಿಂದ ಹೆದರುತ್ತವೆ. ಪ್ರಾಣಿಗಳು ಸೆಟ್‌ ನಲ್ಲಿ ಇಡುವ ಪ್ರದರ್ಶಕಗಳಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ಕತ್ತೆಯನ್ನು ಹೊಂದಿರುವ ವಕೀಲ ಗುಣರತ್ನ ಹಾಗೂ ವಯಾಕಾಮ್ 18 (ಚಾನೆಲ್ ಕಲರ್ಸ್ ಮಾಲೀಕತ್ವದ ನೆಟ್ವರ್ಕ್) ಮತ್ತು ಬನಿಜಯ್ ಏಷ್ಯಾ (ಪ್ರೊಡಕ್ಷನ್ ಹೌಸ್) ಗೆ ಪತ್ರವನ್ನು ಕಳುಹಿಸಲಾಗಿದೆ.

ಅಂದಹಾಗೆ ಬಿಗ್‌ ಬಾಸ್‌ ಮನೆಯಲ್ಲಿ ಪ್ರಾಣಿಗಳಿರುವುದು ಇದೇ ಮೊದಲಲ್ಲ. ಹಿಂದಿನ ಋತುಗಳಲ್ಲಿ ಮನೆಯವರು ತಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿ ನೋಡಿಕೊಳ್ಳಲು ನಾಯಿ, ಗಿಳಿ ಮತ್ತು ಮೀನುಗಳನ್ನು ಸಹ ಕಳುಹಿಸಲಾಗಿತ್ತು.

ಟಾಪ್ ನ್ಯೂಸ್

UK-Khandre

Forest: ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ: ಸಚಿವ ಖಂಡ್ರೆ

1-OP-BIG

Udupi: ದಿ ಓಷಿಯನ್‌ ಪರ್ಲ್ ಟೈಮ್ಸ್‌ ಸ್ಕ್ವೇರ್‌ ಹೊಟೇಲ್‌ ಉದ್ಘಾಟನೆ

1-mum

Mumtaz Ali Case: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು

4

Renukaswamy Case:ದರ್ಶನ್‌ ಜಾಮೀನಿಗೆ ಆಕ್ಷೇಪ-SPPಯಿಂದ ಪ್ರಬಲ ವಾದ; ವಿಚಾರಣೆ ಮುಂದೂಡಿಕೆ

Mysuru: ದಸರಾ ನಂತರ ಸಿಎಂ ಬದಲಾವಣೆ ನಿಶ್ಚಿತ: ಬಿ.ವೈ. ವಿಜಯೇಂದ್ರ

Mysuru: ದಸರಾ ನಂತರ ಸಿಎಂ ಬದಲಾವಣೆ ನಿಶ್ಚಿತ: ಬಿ.ವೈ. ವಿಜಯೇಂದ್ರ

1-wwewqewq

Delhi;ಕಾಂಗ್ರೆಸ್ ನೊಂದಿಗೆ ಮೈತ್ರಿ?: 2 ರಾಜ್ಯಗಳ ಫಲಿತಾಂಶದ ಬಳಿಕ ಆಪ್ ಹೇಳಿದ್ದೇನು?

Haryana: ಇಬ್ಬರು ಪಕ್ಷೇತರ ಶಾಸಕರು ಸೇರ್ಪಡೆ… ಬಿಜೆಪಿ ಸಂಖ್ಯಾ ಬಲ 50ಕ್ಕೆ ಏರಿಕೆ

Haryana: ಇಬ್ಬರು ಪಕ್ಷೇತರ ಶಾಸಕರು ಬಿಜೆಪಿ ಸೇರ್ಪಡೆ… ಸಂಖ್ಯಾ ಬಲ 50ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?

Huli Karthik: ಜಾತಿ ನಿಂದನೆ ಆರೋಪ; ಹಾಸ್ಯ ನಟ ಹುಲಿ ಕಾರ್ತಿಕ್‌ ಸೇರಿ ನಾಲ್ವರ ವಿರುದ್ಧ FIR

Huli Karthik: ಜಾತಿ ನಿಂದನೆ ಆರೋಪ; ಹಾಸ್ಯ ನಟ ಹುಲಿ ಕಾರ್ತಿಕ್‌ ಸೇರಿ ನಾಲ್ವರ ವಿರುದ್ಧ FIR

Bigg Boss Tamil 8: ಬಿಗ್‌ ಬಾಸ್‌ ಮನೆಗೆ ಬಂದು 24 ಗಂಟೆಯೊಳಗೆ ಎಲಿಮಿನೇಟ್ ಆದ ನಟಿ

Bigg Boss Tamil 8: ಬಿಗ್‌ ಬಾಸ್‌ ಮನೆಗೆ ಬಂದು 24 ಗಂಟೆಯೊಳಗೆ ಎಲಿಮಿನೇಟ್ ಆದ ನಟಿ

1-wqewqewq

BBK11; ನೀನೇನು ದೊಡ್ಡ ಡಾನ್ ಆ..!!;ಕ್ಯಾಪ್ಟನ್ ಹಂಸಾಗೆ ತಲೆನೋವಾದ ಜಗದೀಶ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

UK-Khandre

Forest: ಅರಣ್ಯ ಅತಿಕ್ರಮಣಕಾರರಿಗೆ ಹಕ್ಕುಪತ್ರಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ: ಸಚಿವ ಖಂಡ್ರೆ

1-OP-BIG

Udupi: ದಿ ಓಷಿಯನ್‌ ಪರ್ಲ್ ಟೈಮ್ಸ್‌ ಸ್ಕ್ವೇರ್‌ ಹೊಟೇಲ್‌ ಉದ್ಘಾಟನೆ

1-ddd

Udupi: ಕಾರಿನ ಬ್ರೇಕ್ ಫೇಲ್ ಆಗಿ ಅವಘಡ: ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತ್ಯು

11-sagara

Sagara: ನಗರಸಭೆ ಸಾಮಾನ್ಯ ಸಭೆ; ಲಲಿತಮ್ಮರ ತಡೆಯಾಜ್ಞೆ ವಿರುದ್ಧ ಸದಸ್ಯರ ತೀವ್ರ ಆಕ್ರೋಶ

1-mum

Mumtaz Ali Case: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.