![4-holiday](https://www.udayavani.com/wp-content/uploads/2024/06/4-holiday-415x249.jpg)
Video: ಮತ್ತೆ ವಿವಾದದಲ್ಲಿ ಬಾಲಯ್ಯ: ನಟಿ ಅಂಜಲಿ ಹಿಂಭಾಗ ಮುಟ್ಟಿದ ವಿಡಿಯೋ ವೈರಲ್
Team Udayavani, Jun 1, 2024, 12:04 PM IST
![8](https://www.udayavani.com/wp-content/uploads/2024/06/8-620x372.jpg)
ಹೈದರಾಬಾದ್: ಒಂದಲ್ಲ ಒಂದು ವಿವಾದದಿಂದ ಸುದ್ದಿಯಾಗುವ ತೆಲುಗು ನಟ ಬಾಲಕೃಷ್ಣ ಇತ್ತೀಚೆಗೆ ನಟಿಯೊಬ್ಬರನ್ನು ವೇದಿಕೆಯಲ್ಲಿ ದೂಡಿದ ಘಟನೆಗೆ ಚಿತ್ರರಂಗದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಇತ್ತೀಚೆಗೆ ವಿಶ್ವಕ್ ಸೇನ್ ಅಭಿನಯಿಸಿರುವ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ನಟ ಬಾಲಕೃಷ್ಣಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಚಿತ್ರದಲ್ಲಿ ಅಂಜಲಿ ಹಾಗೂ ನೇಹಾ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.
ವೇದಿಕೆ ಮೇಲೆ ಮುಖ್ಯ ಅತಿಥಿಯಾಗಿ ಆಗಮಿಸಿದ ವೇಳೆ ಬಾಲಕೃಷ್ಣ ನಟಿ ಅಂಜಲಿ ಅವರನ್ನು ಒಮ್ಮೆಗೆ ದೂಡಿದ್ದರು. ಇದರಿಂದ ಒಂದು ಕ್ಷಣಕ್ಕೆ ಒಳಗಾದ ನಟಿ ಅದನ್ನು ತೋರಿಸದೆ ನಕ್ಕು ಸುಮ್ಮನಾಗಿದ್ದರು.
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಾಲಕೃಷ್ಣ ಅವರು ದರ್ಪ ಮೆರೆದಿದ್ದಾರೆ ಅಂಥ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಇದಾದ ಬಳಿಕ ನಟಿ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದರು. “ನಾವು ಬಹಳ ಸಮಯದಿಂದ ಪರಸ್ಪರ ಉತ್ತಮ ಸ್ನೇಹದ ಜೊತೆ ಗೌರವವನ್ನು ಹೊಂದಿದ್ದೇವೆ” ಎಂದು ಹೈ-ಫೈವ್ ಮಾಡುವ ವಿಡಿಯೋವನ್ನು ಹಂಚಿಕೊಂಡು ವಿವಾದಕ್ಕೆ ತೆರೆ ಎಳೆದಿದ್ದಾರೆ.
ಈ ವಿವಾದ ತಣ್ಣಗೆ ಆಗುತ್ತಿದೆ ಎನ್ನುವಾಗಲೇ ಇದೀಗ ಅದೇ ಕಾರ್ಯಕ್ರಮದ ಮತ್ತೊಂದು ವಿಡಿಯೋ ವೈರಲ್ ಆಗಿದೆ. ನಟ ವಿಶ್ವಕ್ ಸೇನ್ ನಟಿ ಅಂಜಲಿ ಅವರನ್ನು ಮಾತನಾಡಲು ವೇದಿಕೆಗೆ ಕರೆದಿದ್ದಾರೆ. ಈ ವೇಳೆ ನಟಿ ಅಂಜಲಿ ಬಾಲಕೃಷ್ಣ ಅವರ ಪಕ್ಕದಲ್ಲಿ ಕೂತಿದ್ದರು. ಅಂಜಲಿ ಎದ್ದು ಹೊರಟಾಗ ಆಕೆಯ ಹಿಂಭಾಗಕ್ಕೆ ಬಾಲಕೃಷ್ಣ ಮೆಲ್ಲಗೆ ತಟ್ಟಿದ್ದಾರೆ. ಒಂದು ಕ್ಷಣ ಇದರಿಂದ ಮುಜುಗರಕ್ಕೆ ಒಳಗಾದ ಅಂಜಲಿ ಅದನ್ನು ತೋರ್ಪಡಿಸದೆ ವೇದಿಕೆಯತ್ತ ನಡೆದಿದ್ದಾರೆ.
ಸದ್ಯ ವಿಡಿಯೋ ಕೂಡ ವೈರಲ್ ಆಗಿದ್ದು, ಹಿರಿಯ ಬಾಲಯ್ಯ ಅವರ ವರ್ತನೆಗೆ ಅನೇಕರು ಕಿಡಿಕಾಡಿದ್ದಾರೆ.
Serious ga Balayya istham ela untadu anedi
But matter ni cover chesi inka peddadi chesthunaru
Ss rajamouli vochi cg chesada @vamsi84
?#Anjali#GangsOfGodavari
pic.twitter.com/Lp99HWnziN— 𝗞𝗜𝗥𝗔𝗡 ɴᴛʀ (@cultNTRfan9999) May 31, 2024
ಟಾಪ್ ನ್ಯೂಸ್
![4-holiday](https://www.udayavani.com/wp-content/uploads/2024/06/4-holiday-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kochi: ಉಸಿರಾಟ ಸಮಸ್ಯೆ; 37ನೇ ವಯಸ್ಸಿನಲ್ಲಿ ಖ್ಯಾತ ನಟನ ಮಗ ನಿಧನ](https://www.udayavani.com/wp-content/uploads/2024/06/2-18-150x90.jpg)
Kochi: ಉಸಿರಾಟ ಸಮಸ್ಯೆ; 37ನೇ ವಯಸ್ಸಿನಲ್ಲಿ ಖ್ಯಾತ ನಟನ ಮಗ ನಿಧನ
![500 ಕೋಟಿಯ ಸಿನಿಮಾ ಮಾಡುವಾಗಲೂ ಕಿತ್ತೋದ ಚಪ್ಪಲಿ ಹಾಕಿಕೊಂಡಿದ್ದ ʼಕಲ್ಕಿ 2898 ADʼ ನಿರ್ದೇಶಕ](https://www.udayavani.com/wp-content/uploads/2024/06/1-17-150x90.jpg)
500 ಕೋಟಿಯ ಸಿನಿಮಾ ಮಾಡುವಾಗಲೂ ಕಿತ್ತೋದ ಚಪ್ಪಲಿ ಹಾಕಿಕೊಂಡಿದ್ದ ʼಕಲ್ಕಿ 2898 ADʼ ನಿರ್ದೇಶಕ
![Untitled-1](https://www.udayavani.com/wp-content/uploads/2024/06/Untitled-1-28-150x90.jpg)
Kollywood: ನಿಂತು ಹೋಯಿತಾ ರಜಿನಿ – ಲೋಕೇಶ್ ಪ್ಯಾನ್ ಇಂಡಿಯಾ ʼಕೂಲಿʼ? ಇಲ್ಲಿದೆ ವಿವರ
![Kollywood: ಫ್ಯಾಮಿಲಿ ಫೋಟೋಸ್ ಡಿಲೀಟ್.. ವಿಚ್ಛೇದನ ಹಂತಕ್ಕೆ ಬಂತಾ ನಟ ಜಯಂ ರವಿ ದಾಂಪತ್ಯ?](https://www.udayavani.com/wp-content/uploads/2024/06/Untitled-1-25-150x90.jpg)
Kollywood: ಫ್ಯಾಮಿಲಿ ಫೋಟೋಸ್ ಡಿಲೀಟ್.. ವಿಚ್ಛೇದನ ಹಂತಕ್ಕೆ ಬಂತಾ ನಟ ಜಯಂ ರವಿ ದಾಂಪತ್ಯ?
![Untitled-1](https://www.udayavani.com/wp-content/uploads/2024/06/Untitled-1-17-150x90.jpg)
Tollywood: ಪ್ರಭಾಸ್ ಕಲ್ಕಿ ಹವಾ ಜೋರು
MUST WATCH
ಹೊಸ ಸೇರ್ಪಡೆ
![4-holiday](https://www.udayavani.com/wp-content/uploads/2024/06/4-holiday-150x90.jpg)
Holiday: ಮೂಡಿಗೆರೆ ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ
![3-Haveri](https://www.udayavani.com/wp-content/uploads/2024/06/3-Haveri-150x90.jpg)
Haveri: ಭೀಕರ ರಸ್ತೆ ಅಪಘಾತ; 13 ಜನರು ಸಾವು
![2-manipal](https://www.udayavani.com/wp-content/uploads/2024/06/2-manipal-150x90.jpg)
Manipal: ಹೊತ್ತಿ ಉರಿದು ಹಿಮ್ಮುಖವಾಗಿ ಚಲಿಸಿದ ಕಾರು… ತಪ್ಪಿದ ಅನಾಹುತ
![1-24-friday](https://www.udayavani.com/wp-content/uploads/2024/06/1-24-friday-3-150x90.jpg)
Daily Horosocpe: ಯಶಸ್ಸಿನ ಅನುಭವ, ಷೇರು ವ್ಯವಹಾರದಲ್ಲಿ ಉತ್ತಮ ಲಾಭ
![Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತರಾಟೆ](https://www.udayavani.com/wp-content/uploads/2024/06/28-3-150x90.jpg)
Congress High Command: ಸಾಕು, ನಿಲ್ಲಿಸಿ; ಸಿದ್ದು ಬಣಕ್ಕೆ ಕಾಂಗ್ರೆಸ್ ಹೈಕಮಾಂಡ್ ತರಾಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.