Amaran trailer: ಮೇಜರ್‌ ಮುಕುಂದ್‌ ಸಾಹಸಗಾಥೆಗೆ ಜೀವ ತುಂಬಿದ ಶಿವಕಾರ್ತಿಕೇಯನ್


Team Udayavani, Oct 23, 2024, 7:23 PM IST

15

ಚೆನ್ನೈ: ಕಾಲಿವುಡ್‌ನಲ್ಲಿ ರಿಲೀಸ್‌ ಆಗಲಿರುವ ವರ್ಷದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ʼಅಮರನ್‌ʼ (Amaran) ಸಿನಿಮಾದ ಟ್ರೇಲರ್‌ (Amaran trailer) ಬುಧವಾರ (ಅ.23ರಂದು) ರಿಲೀಸ್‌ ಆಗಿದೆ.

ಶಿವಕಾರ್ತಿಕೇಯನ್ (Sivakarthikeyan) ಮತ್ತು ಸಾಯಿ ಪಲ್ಲವಿ (Sai Pallavi) ಮುಖ್ಯ ಭೂಮಿಕೆಯ ʼಅಮರನ್‌ʼ ಟ್ರೇಲರ್‌ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದು, ಕಣ್ಣಂಚಿನಲ್ಲಿ ನೀರು ಬರುವಂತೆ ಟ್ರೇಲರ್‌ ಮೂಡಿಬಂದಿದೆ.

ಮೇಜರ್ ಮುಕುಂದ್ ವರದರಾಜನ್ ಅವರ ಸಾಹಸಗಾಥೆಯನ್ನು ಒಳಗೊಂಡಿರುವ ಸಿನಿಮಾದಲ್ಲಿ ಶಿವಕಾರ್ತಿಕೇಯನ್ ಯೋಧನಾಗಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್‌ನಲ್ಲಿ ಏನಿದೆ?:

ಸೇನಾ ರಜೆಯಲ್ಲಿ ಮನೆಗೆ ಬಂದಿರುವ ಯೋಧ ತನ್ನ ಮಗಳೊಂದಿಗೆ ಇರುವ ಕ್ಷಣವನ್ನು ಮೊದಲಿಗೆ ತೋರಿಸಲಾಗಿದೆ. ಮಗಳಿಗೆ ಒಂದು ಪ್ರೀತಿಯ ಅಪ್ಪುಗೆ ಕೊಟ್ಟು ಮತ್ತೆ ದೇಶ ಸೇವೆಗೆ ಹೋಗುವ ದೃಶ್ಯವನ್ನು ತೋರಿಸಲಾಗಿದೆ.

ಗಡಿ ಕಾಯುವ ತನ್ನ ಪತಿಯನ್ನು ನೆನೆಯುವ ಪತ್ನಿ, ಇರುವ ಒಬ್ಬನೇ ಮಗನನ್ನು ಸೇನೆಗೆ ಕಳುಹಿಸಲು ಹಿಂಜರಿಯುವ ತಾಯಿಯ ಮನಸ್ಸು, ಆರ್ಮಿ ನನಗೆ ಬರೀ ಜಾಬ್‌ ಅಲ್ಲ, ಆರ್ಮಿ ನನ್ನ ಲೈಫ್‌ ಎಂದು ದೇಶದ ಗಡಿ ಕಾಯುವ ವೀರ ಯೋಧನ ಕೆಚ್ಚೆದೆಯ ಹೋರಾಟವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ.

ಆಜಾದಿಗಾಗಿ ದಂಗೆ ಎಬ್ಬಿಸುವ ಉಗ್ರರನ್ನು ಸದೆಬಡಿಯುವ ಇಂಡಿಯನ್‌ ಆರ್ಮಿಯ ಹೋರಾಟದಲ್ಲಿ ಮೇಜರ್‌ ಆಗಿ ಹೋರಾಡುವ ಮುಕುಂದ್‌ ಬದುಕಿನ ಕಥೆಯಲ್ಲಿ ದೃಶ್ಯರೂಪದಲ್ಲಿ ಶಿವಕಾರ್ತಿಕೇಯನ್ ಜೀವಿಸಿದ್ದಾರೆ.

ನಮ್ಮನ್ನು ಬಿಟ್ಟು ನೀನು ದೂರ ಆಗಿದ್ರೂ ಪರವಾಗಿಲ್ಲ, ಸೇಫ್‌ ಆಗಿರು ಎನ್ನುವ ಡೈಲಾಗ್ಸ್‌ ಗಳು ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುತ್ತವೆ.

ಈ ಸಿನಿಮಾವನ್ನು ಕಮಲ್‌ ಹಾಸನ್‌ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್,  ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.

ರಾಜಕುಮಾರ್ ಪೆರಿಯಸಾಮಿ ನಿರ್ದೇಶನದ ಸಿನಿಮಾದಲ್ಲಿ ಸಾಯಿ ಪಲ್ಲವಿ, ಭುವನ್ ಅರೋರಾ, ರಾಹುಲ್ ಬೋಸ್ ಮುಂತಾದವರು ನಟಿಸಿದ್ದಾರೆ. ಇದೇ ಅಕ್ಟೋಬರ್‌ 31ರಂದು ಸಿನಿಮಾ ತೆರೆಗೆ ಬರಲಿದೆ.

ʼಅಮರನ್‌ʼ ಶಿವ ಆರೂರ್ ಮತ್ತು ರಾಹುಲ್ ಸಿಂಗ್ ಅವರ ʼಇಂಡಿಯಾಸ್ ಮೋಸ್ಟ್ ಫಿಯರ್ ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿʼ ಕೃತಿಯ ರೂಪಾಂತರವಾಗಿದೆ. ಇದು ಮೇಜರ್ ವರದರಾಜನ್ ಅವರ ಶೌರ್ಯದ ಕಥೆಯನ್ನೊಳಗೊಂಡಿದೆ.

ಟಾಪ್ ನ್ಯೂಸ್

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

Terror Attack: ಟರ್ಕಿಯಲ್ಲಿ ಭಯೋತ್ಪಾದಕ ದಾಳಿ… ಮೂವರು ಮೃತ್ಯು, ಹಲವರು ಗಂಭೀರ

Terror Attack: ಟರ್ಕಿಯಲ್ಲಿ ಭಯೋತ್ಪಾದಕ ದಾಳಿ… ಮೂವರು ಮೃತ್ಯು, ಹಲವರು ಗಂಭೀರ

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Mandya1

Mandya: ಸಾಹಿತ್ಯ ಸಮ್ಮೇಳನ ಸಂಭ್ರಮಕ್ಕೆ ಕೊರತೆಯಾಗದಂತೆ ಮಿತಿಯಲ್ಲಿ ಖರ್ಚು ಮಾಡಿ: ಸಚಿವ

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Wedding Day: ಶಬಾನಾ ಆಜ್ಮಿ ವರಿಸುವಾಗ ಜಾವೇದ್‌ ನಶೆಯಲ್ಲಿದ್ದರು… ಅನ್ನು ಕಪೂರ್‌

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

Bidar: ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ

Bidar: ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ: ಆಡಳಿತದಿಂದ ಜಾಗೃತಿ ಜಾಥಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor: ಮಾಜಿ ಪತ್ನಿ ದೂರಿನಿಂದ ಅರೆಸ್ಟ್‌ ಆದ ಕೆಲ ದಿನಗಳಲ್ಲೇ 3ನೇ ಮದುವೆಯಾದ ಖ್ಯಾತ ನಟ

Actor: ಮಾಜಿ ಪತ್ನಿ ದೂರಿನಿಂದ ಅರೆಸ್ಟ್‌ ಆದ ಕೆಲ ದಿನಗಳಲ್ಲೇ 3ನೇ ಮದುವೆಯಾದ ಖ್ಯಾತ ನಟ

10

The Raja Saab: ಹುಟ್ಟುಹಬ್ಬಕ್ಕೆ ʼರಾಜಾಸಾಬ್‌ʼ ಆಗಿ ಸಿಂಹಾಸನದಲ್ಲಿ ಕೂತ ರೆಬೆಲ್‌ ಸ್ಟಾರ್

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

Toxic Movie: ‘ಟಾಕ್ಸಿಕ್ʼ ರಿಲೀಸ್‌ ಡೇಟ್‌ ಮುಂದೂಡಿಕೆ ಅಧಿಕೃತ; ಯಶ್‌ ಹೇಳಿದ್ದೇನು?

6

Actor Yash: ‘ಕೆಜಿಎಫ್‌-3ʼ ಬಗ್ಗೆ ಯಶ್‌ ಕೊಟ್ರು ಬಿಗ್‌ ಅಪ್ಡೇಟ್; ಯಾವಾಗ ಬರಲಿದೆ ಸಿನಿಮಾ?

3

Kollywood: ಮಾಜಿ ಆಳಿಯನ ಜತೆ ರಜಿನಿ ನಟನೆ? ಒಂದೇ ಚಿತ್ರದಲ್ಲಿ ಧನುಷ್ – ರಜಿನಿಕಾಂತ್?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

5

Mukka: ಈಜಾಡುತ್ತಿದ್ದ ಯುವಕ ಸಮುದ್ರಪಾಲು

Terror Attack: ಟರ್ಕಿಯಲ್ಲಿ ಭಯೋತ್ಪಾದಕ ದಾಳಿ… ಮೂವರು ಮೃತ್ಯು, ಹಲವರು ಗಂಭೀರ

Terror Attack: ಟರ್ಕಿಯಲ್ಲಿ ಭಯೋತ್ಪಾದಕ ದಾಳಿ… ಮೂವರು ಮೃತ್ಯು, ಹಲವರು ಗಂಭೀರ

accident

Udupi: ದ್ವಿಚಕ್ರ ವಾಹನ ಢಿಕ್ಕಿ; ಮಹಿಳೆಗೆ ಗಾಯ

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Udupi: ಪ್ರಾಚ್ಯ ವಿದ್ಯಾ ಸಮ್ಮೇಳನ: ಮಂಗಳೂರಿಗೆ ಆಗಮಿಸಿದ ಬಾಬಾ ರಾಮದೇವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.