Tollywood Industry: ಮಲಯಾಳಂ, ತಮಿಳು ಬಳಿಕ ತೆಲುಗು ಚಿತ್ರರಂಗದಲ್ಲೂ ಮೀಟೂ ಬಿರುಗಾಳಿ?

ಲೈಂಗಿಕ ಕಿರುಕುಳ ಕುರಿತ ವರದಿ ಬಿಡುಗಡೆಗೆ ನಟಿ ಸಮಂತಾ ಆಗ್ರಹ

Team Udayavani, Sep 1, 2024, 7:00 AM IST

Tollywood Industry: ಮಲಯಾಳಂ, ತಮಿಳು ಬಳಿಕ ತೆಲುಗು ಚಿತ್ರರಂಗದಲ್ಲೂ ಮೀಟೂ ಬಿರುಗಾಳಿ?

ಹೈದರಾಬಾದ್‌: ನ್ಯಾ| ಹೇಮಾ ಸಮಿತಿ ವರದಿ ಮಲಯಾಳ ಚಿತ್ರರಂಗದಲ್ಲಿ ಕೋಲಾಹಲ ಸೃಷ್ಟಿಸಿರುವಂತೆಯೇ ಈಗ ತೆಲುಗು ಸಿನಿರಂಗದಲ್ಲೂ ಮೀ ಟೂ ಬಿರುಗಾಳಿಯ ಅಬ್ಬರ ಆರಂಭವಾಗುವ ಲಕ್ಷಣ ಗೋಚರಿಸಿದೆ. ತೆಲುಗು ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯಗಳ ಕುರಿತು ಉಪ ಸಮಿತಿ ನೀಡಿದ್ದ ವರದಿಯನ್ನು ಬಹಿರಂಗಗೊಳಿಸಬೇಕೆಂದು ತೆಲಂಗಾಣ ಸರಕಾರವನ್ನು ನಟಿ ಸಮಂತಾ ರುತ್‌ ಪ್ರಭು ಆಗ್ರಹಿಸಿದ್ದಾರೆ.

ಈ ಬಗ್ಗೆ ಸಮಂತಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ. “ತೆಲುಗು ಚಿತ್ರರಂಗದ (ಟಿಎಫ್ಐ) ಲೈಂಗಿಕ ದೌರ್ಜನ್ಯಗಳ ಕುರಿತು ಉಪ ಸಮಿತಿ ನೀಡಿದ್ದ ವರದಿಯನ್ನು ತೆಲಂಗಾಣ ಸರಕಾರ ಬಹಿರಂಗಗೊಳಿಸಬೇಕೆಂದು ಈ ಚಿತ್ರರಂಗದ ಮಹಿಳೆಯರಾದ ನಾವು ಆಗ್ರಹಿಸುತ್ತೇವೆ. ವರದಿ ಬಹಿರಂಗಗೊಂಡರೆ ಸಿನಿರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಿಕೊಡಲು ಸೂಕ್ತ ಕಾನೂನು, ನೀತಿ ರೂಪಿಸಲು ಸರಕಾರಕ್ಕೆ ಹಾಗೂ ಚಿತ್ರರಂಗಕ್ಕೂ ನೆರವಾಗಲಿದೆ’ ಎಂದಿದ್ದಾರೆ.

ಅಲ್ಲದೆ ಹೇಮಾ ಸಮಿತಿಯ ವರದಿಯನ್ನು ನಾವು ಸ್ವಾಗತಿಸುತ್ತೇವೆ. ಈ ಚಳವಳಿಯನ್ನು ಸೃಷ್ಟಿಸುವಲ್ಲಿ ಮಲಯಾಳ ಸಿನಿಮಾ ಮಹಿಳಾ ಒಕ್ಕೂಟದ (ಡಬ್ಲ್ಯುಸಿಸಿ) ನಿರಂತರ ಪ್ರಯತ್ನವನ್ನೂ ಶ್ಲಾ ಸುತ್ತೇವೆ. ಡಬ್ಲ್ಯುಸಿಸಿಯ ಪ್ರೇರಣೆಯೊಂದಿಗೆ 2019ರಲ್ಲಿ ತೆಲುಗು ಸಿನಿರಂಗದ ಮಹಿಳೆಯರ ಧ್ವನಿಯಾಗಲೆಂದು “ದಿ ವಾಯ್ಸ ಆಫ್ ವುಮೆನ್‌’ ಎಂಬ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ಈ ಮೂಲಕ ಟಿಎಫ್ಐ ಸದಸ್ಯರ ಬೆನ್ನಿಗಿರಲಿದ್ದೇವೆ ಎಂದಿದ್ದಾರೆ.

ಜಾಲತಾಣಗಳಲ್ಲಿ ಪೋಸ್ಟ್‌:

ಸಮಂತಾ ಮಾತ್ರವಲ್ಲದೆ ನಟಿ ಲಕ್ಷ್ಮೀ ಮಂಚು, ನಿರೂಪಕಿ ಸುಮಾ, ಝಾನ್ಸಿ, ನಿರ್ದೇಶಕಿ ನಂದಿನಿ ರೆಡ್ಡಿ ಸಹಿತ ಟಿಎಫ್ಐನ ಹಲವು ಮಹಿಳೆಯರು ಜಾಲತಾಣಗಳಲ್ಲಿ ಇದೇ ಪೋಸ್ಟ್‌ಗಳ ಮೂಲಕ ವರದಿ ಬಿಡುಗಡೆಗೆ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಟಾಲಿವುಡ್‌ನ‌ಲ್ಲೂ ಮೀಟೂ ಬಿರುಗಾಳಿಯೆಬ್ಬಿಸುವ ಸುಳಿವನ್ನು ನೀಡಿದೆ.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

‌Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್

‌Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

OTT Release: ಚಿಯಾನ್‌ ವಿಕ್ರಮ್ ʼತಂಗಲಾನ್ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release: ಚಿಯಾನ್‌ ವಿಕ್ರಮ್ ʼತಂಗಲಾನ್ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.