![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Aug 24, 2024, 10:57 PM IST
ತಿರುವನಂತಪುರ: ಕೇರಳದ “ಕೇರಳ ಚಲಚಿತ್ರ ಅಕಾಡೆಮಿ’ಯ ಅಧ್ಯಕ್ಷ, ನಿರ್ದೇಶಕ ರಂಜಿತ್ ಅನುಚಿತ ವರ್ತನೆ ತೋರಿದ್ದಾರೆ ಎಂದು ಬಂಗಾಳಿ ನಟಿ ಶ್ರೀಲೇಖಾ ಅವರು ಆರೋಪಿ ಸಿದ್ದಾರೆ.
ಮಲಯಾಳಂ ಸಿನಿಮಾ ಉದ್ಯಮದಲ್ಲಿ ಮಹಿ ಳೆಯರ ವಿರುದ್ಧ ಅಪರಾಧ ಗಳನ್ನು ತಡೆಯುವ ಹೇಮಾ ಸಮಿತಿ ವರದಿ ಬಿಡುಗಡೆ ಬೆನ್ನಲ್ಲೇ ಈ ಆರೋಪ ಕೇಳಿಬಂದಿದ್ದು, ರಾಜ್ಯ ಸರ್ಕಾ ರವನ್ನು ಮುಜಗರಕ್ಕೀಡು ಮಾಡಿದೆ. ಮಾಧ್ಯಮವೊಂದರ ಜತೆ ಮಾತನಾಡಿದ ಶ್ರೀಲೇಖಾ, 2009ರಲ್ಲಿ ಸಿನಿಮಾ ಆಡಿಷನ್ಗೆ ಹೋದ ಸಮಯದಲ್ಲಿ ರಂಜಿತ್ ಅನುಚಿತವಾಗಿ ವರ್ತಿಸಿದ್ದಾರೆ. ಮೊದಲಿಗೆ ಅವರು ನನ್ನ ಕೈ ಬಳೆಗಳನ್ನು ಮುಟ್ಟಿದರು ಎಂದಿದ್ದಾರೆ.
ಆದರೆ ನಟಿಯ ಆರೋಪಕ್ಕೆ ಸುದ್ದಿಗೋಷ್ಟಿ ನಡೆಸಿ ಪ್ರತಿಕ್ರಿಯೆ ನೀಡಿರುವ ರಂಜಿತ್ ಆರೋಪವನ್ನು ತಳ್ಳಿಹಾಕಿದ್ದಾರೆ. ಅವರು ಪಾತ್ರಕ್ಕೆ ಸರಿ ಹೊಂದುತ್ತಿರಲಿಲ್ಲ. ಈ ಕಾರಣಕ್ಕೆ ಅವರನ್ನು ಸಿನಿಮಾದಿಂದ ಕೈ ಬಿಡಲಾಗಿತ್ತು. ಅವರು ಕಾನೂನು ಹೋರಾಟಕ್ಕೆ ಮುಂದಾದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ನಿರ್ದೇಶಕ ರಂಜಿತ್ ಪ್ರತಿಕ್ರಿಯೆ ನೀಡಿದ್ದಾರೆ.
ನಟಿಯ ಆರೋಪ ಮಾಲಿವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ.
You seem to have an Ad Blocker on.
To continue reading, please turn it off or whitelist Udayavani.