Actor Yash: “ಯಶ್‌ಗಾಗಿ ನನ್ನ ಬಳಿ ಸೂಕ್ತ ಕಥೆಯಿದೆ..” ಖ್ಯಾತ ಕಾಲಿವುಡ್ ನಿರ್ದೇಶಕ


Team Udayavani, May 30, 2024, 4:39 PM IST

Actor Yash: “ಯಶ್‌ಗಾಗಿ ನನ್ನ ಬಳಿ ಸೂಕ್ತ ಕಥೆಯಿದೆ..” ಖ್ಯಾತ ಕಾಲಿವುಡ್ ನಿರ್ದೇಶಕ

ಬೆಂಗಳೂರು: ʼಕೆಜಿಎಫ್‌ʼ ಸರಣಿ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿರುವ ಕನ್ನಡದ ಯಶ್‌ ಸದ್ಯ ಮತ್ತೊಂದು ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ʼಟಾಕ್ಸಿಕ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಯಶ್‌ ʼಕೆಜಿಎಫ್ʼನಲ್ಲಿ ಮಾಡಿದ ಅಭಿನಯ ಕನ್ನಡ ಮಾತ್ರವಲ್ಲದೆ ಇತರೆ ಸಿನಿರಂಗದಲ್ಲೂ ಹವಾ ಎಬ್ಬಿಸಿತ್ತು. ಸಿನಿಮಾ ಬಹುದೊಡ್ಡಮಟ್ಟದಲ್ಲಿ ಸದ್ದು ಮಾಡಿದ ನಂತರ ಯಶ್‌ ಆದಾಗಲೇ ಪ್ಯಾನ್‌ ಇಂಡಿಯಾದಲ್ಲಿ ಸ್ಟಾರ್‌ ಆಗಿ ಎಲ್ಲರ ಗಮನ ಸೆಳೆದಿದ್ದರು. ಖ್ಯಾತ ನಿರ್ದೇಶಕರೆಲ್ಲರೂ ಯಶ್‌ ಜೊತೆ ಸಿನಿಮಾ ಮಾಡಬೇಕೆನ್ನುವಷ್ಟರ ಮಟ್ಟಿಗೆ ʼರಾಕಿಭಾಯ್‌ʼ ಮಾರ್ಕೆಟ್‌ ಡಿಮ್ಯಾಂಡ್‌ ಡೈಮಂಡ್‌ ನಂತೆ ಹೆಚ್ಚಾಯಿತು.

ಖ್ಯಾತ ನಿರ್ದೇಶಕರು ಕೂಡ ಯಶ್‌ ಜೊತೆ ಕೆಲಸ ಮಾಡಯವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಯಶ್‌ ಮುಂದಿನ ಸಿನಿಮಾ ಯಾವುದೆನ್ನುವುದು ಎಲ್ಲರೂ ಕುತೂಹಲದಿಂದ ಕಾಯುವಂತೆ ಮಾಡಿತ್ತು.

ಇದನ್ನೂ ಓದಿ: Kantara -1: ರಿಷಬ್‌ ಶೆಟ್ಟಿ ʼಕಾಂತಾರ-1ʼ ಗೆ ಖ್ಯಾತ ಮಾಲಿವುಡ್‌ ನಟ ಜಯರಾಂ ಎಂಟ್ರಿ?

ಇದೀಗ ಮತ್ತೊಬ್ಬ ಖ್ಯಾತ ನಿರ್ದೇಶಕರೊಬ್ಬರು ಯಶ್‌ ಜೊತೆ ಕೆಲಸ ಮಾಡುವ ಇರಾದೆಯನ್ನು ವ್ಯಕ್ತಪಡಿಸಿದ್ದಾರೆ.

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ  ‘ಮುತ್ತು’, ‘ನಾಟಾಮ್ಮೈ’, ‘ಪಡೆಯಪ್ಪ’ ಸೇರಿದಂತೆ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿ ಸೈ ಎನ್ನಿಸಿಕೊಂಡಿರುವ ನಿರ್ದೇಶಕ ಕೆಎಸ್‌ ರವಿಕುಮಾರ್‌ ಯಶ್‌ ಜೊತೆ ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಕಾಲಿವುಡ್‌ ಮಾತ್ರವಲ್ಲದೆ ಕನ್ನಡದಲ್ಲಿ ʼಕೋಟಿಗೊಬ್ಬ-2ʼ ಸಿನಿಮಾವನ್ನು ಮಾಡಿರುವ  ರವಿಕುಮಾರ್ ಅವರಿಗೆ ತೆಲುಗಿನ ಸಂದರ್ಶನವೊಂದರಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಯಶ್‌ ಬಗ್ಗೆ ಅವರು ಹೇಳಿದ್ದಾರೆ.

“ನನಗೆ ಯಶ್‌ ಜೊತೆ ಕೆಲಸ ಮಾಡುವ ಆಸಕ್ತಿಯಿದೆ. ನನ್ನ ಬಳಿ ಅವರಿಗೆ ಸೂಕ್ತವಾಗುವ ಪಾತ್ರದ ಕಥೆಯೊಂದಿದೆ. ಅವರು ಇಂದು ಬಹಳ ದೊಡ್ಡ ನಟ. ಈ ಕಥೆ ಕೂಡ ಭಿನ್ನವಾಗಿದೆ. ನಾನು ರಜಿನಿಕಾಂತ್‌ ಜೊತೆ ಮಾಡಬೇಕಿದ್ದ ʼರಾಣಾʼ ಸಿನಿಮಾ ನಿಂತು ಹೋಯಿತು. ಆ ಚಿತ್ರವನ್ನು ಮಾಡುವುದು ನನ್ನ ಕನಸು. ತೆಲುಗಿನಲ್ಲಿ ನನಗೆ ರಾಮ್‌ ಚರಣ್‌ ಇಷ್ಟ” ಎಂದು ಅವರು ಹೇಳಿದ್ದಾರೆ.

ಸದ್ಯ ಯಶ್‌ ʼಟಾಕ್ಸಿಕ್‌ʼ ಸಿನಿಮಾದಲ್ಲಿ ನಿರತರಾಗಿದ್ದು, ಈ ಸಿನಿಮಾದಲ್ಲಿ ನಾಯಕಿ ಹಾಗೂ ಯಶ್‌ ಸಹೋದರಿಯ  ಪಾತ್ರದಲ್ಲಿ ನಟಿಸುವವರ ಹೆಸರು ದಿನಕ್ಕೊಂದರಂತೆ ಬರುತ್ತಿದೆ.

ʼಟಾಕ್ಸಿಕ್‌ʼ 2025 ರ ಏ.10 ರಂದು ರಿಲೀಸ್‌ ಆಗಲಿದೆ.

ಟಾಪ್ ನ್ಯೂಸ್

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

jio

Jio ಪ್ರಿಪೇಡ್ /ಪೋಸ್ಟ್ ಪೇಡ್ ಪ್ಲಾನ್ ಗಳ ದರ ಏರಿಕೆ

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

Mangalore: ಗಾಂಜಾ ಸೇವನೆ; ಮೂವರು ವಶಕ್ಕೆ

1-crick

India vs England ಸೆಮಿ ಪಂದ್ಯ; ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆಂಗ್ಲರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kochi: ಉಸಿರಾಟ ಸಮಸ್ಯೆ; 37ನೇ ವಯಸ್ಸಿನಲ್ಲಿ ಖ್ಯಾತ ನಟನ ಮಗ ನಿಧನ

Kochi: ಉಸಿರಾಟ ಸಮಸ್ಯೆ; 37ನೇ ವಯಸ್ಸಿನಲ್ಲಿ ಖ್ಯಾತ ನಟನ ಮಗ ನಿಧನ

500 ಕೋಟಿಯ ಸಿನಿಮಾ ಮಾಡುವಾಗಲೂ ಕಿತ್ತೋದ ಚಪ್ಪಲಿ ಹಾಕಿಕೊಂಡಿದ್ದ ʼಕಲ್ಕಿ 2898 ADʼ ನಿರ್ದೇಶಕ

500 ಕೋಟಿಯ ಸಿನಿಮಾ ಮಾಡುವಾಗಲೂ ಕಿತ್ತೋದ ಚಪ್ಪಲಿ ಹಾಕಿಕೊಂಡಿದ್ದ ʼಕಲ್ಕಿ 2898 ADʼ ನಿರ್ದೇಶಕ

Untitled-1

Kollywood: ನಿಂತು ಹೋಯಿತಾ ರಜಿನಿ – ಲೋಕೇಶ್‌ ಪ್ಯಾನ್‌ ಇಂಡಿಯಾ ʼಕೂಲಿʼ? ಇಲ್ಲಿದೆ ವಿವರ

Kollywood: ಫ್ಯಾಮಿಲಿ ಫೋಟೋಸ್‌ ಡಿಲೀಟ್.. ವಿಚ್ಛೇದನ ಹಂತಕ್ಕೆ ಬಂತಾ ನಟ ಜಯಂ ರವಿ ದಾಂಪತ್ಯ?

Kollywood: ಫ್ಯಾಮಿಲಿ ಫೋಟೋಸ್‌ ಡಿಲೀಟ್.. ವಿಚ್ಛೇದನ ಹಂತಕ್ಕೆ ಬಂತಾ ನಟ ಜಯಂ ರವಿ ದಾಂಪತ್ಯ?

Untitled-1

Tollywood: ಪ್ರಭಾಸ್‌ ಕಲ್ಕಿ ಹವಾ ಜೋರು

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

1-asss

R. Ashok ವಾಗ್ಧಾಳಿ; ದೋಚುವ ಸರಕಾರಕ್ಕೆ ಜನ ಕಪಾಳಮೋಕ್ಷ ಮಾಡಬೇಕು

DKShi

Congress;ಚುನಾವಣ ರಾಜಕೀಯಕ್ಕೆ ನಮ್ಮ ಕುಟುಂಬದವರು ಬರುವ ಪ್ರಶ್ನೆಯೇ ಇಲ್ಲ:ಡಿ.ಕೆ.ಶಿವಕುಮಾರ್

1-wedsadsad

Govt ನಿರ್ಲಕ್ಷ್ಯ; 2000 ಕೋಟಿ ರೂ.ಬಂಡವಾಳದ ಕಂಪನಿ ಮಹಾರಾಷ್ಟ್ರಕ್ಕೆ: ಬೆಲ್ಲದ ಆರೋಪ

31

Kiran Pahal: ವನಿತೆಯರ 400 ಮೀ.; ಕಿರಣ್‌ ಪಹಲ್‌ ಒಲಿಂಪಿಕ್ಸ್‌ ಗೆ ಅರ್ಹತೆ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

MLA Harish Gowda: ನನಗೆ ಯಾರೂ ಹನಿಟ್ರ್ಯಾಪ್‌ ಮಾಡಲು ಸಾಧ್ಯವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.