

Team Udayavani, Dec 25, 2023, 12:32 PM IST
ಮುಂಬಯಿ: ವರ್ಷಾಂತ್ಯದಲ್ಲಿ ಸೌತ್ ಹಾಗೂ ಬಿಟೌನ್ ನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್ ಆಗಿದೆ. ಶಾರುಖ್ – ಪ್ರಭಾಸ್ ಅವರ ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಎರಡೂ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಹೇಗಿದೆ ಎನ್ನುವುದು ನೋಡಿಕೊಂಡು ಬರೋಣ ಬನ್ನಿ.
ಪ್ರಭಾಸ್ – ಪ್ರಶಾಂತ್ ನೀಲ್ ʼಸಲಾರ್ʼ ಸಟ್ಟೇರಿದ ದಿನದಿಂದಲೇ ಸುದ್ದಿಯಲ್ಲಿದ್ದ ಸಿನಿಮಾ. ರಿಲೀಸ್ ಆದ ಬಳಿಕವೂ ಸಿನಿಮಾದ ಬಗ್ಗೆ ದೊಡ್ಡಮಟ್ಟದಲ್ಲಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.
ಪ್ಯಾನ್ ಇಂಡಿಯಾ ಭಾಷೆಯಲ್ಲಿ ʼಸಲಾರ್ʼ ರಿಲೀಸ್ ಆಗಿದೆ. ಇನ್ನೊಂದೆಡೆ ʼಡಂಕಿʼ ಹಿಂದಿಯಲ್ಲಿ ರಿಲೀಸ್ ಆಗಿದೆ. ಮೊದಲ ದಿನ ಭಾರತದಲ್ಲಿ ʼಸಲಾರ್ʼ ಬಿಗ್ ಔಪನಿಂಗ್ ಪಡೆಯಿತು. 90 ಕೋಟಿ ಗಳಿಸಿತು. ಆದರೆ ಎರಡನೇ ದಿನ ʼಸಲಾರ್ʼ ಅಂದುಕೊಂಡ ಕಲೆಕ್ಷನ್ ಆಗಿಲ್ಲ. 56.35 ಕೋಟಿ ಗಳಿಸಿತು. ಮೂರನೇ ದಿನದಲ್ಲಿ ಮತ್ತೆ ʼಸಲಾರ್ʼ ಬಾಕ್ಸ್ ಆಫೀಸ್ನ ಲ್ಲಿ ಕಮಾಲ್ ಮಾಡಿತು. ಮೂರನೇ ದಿನ 61 ಕೋಟಿ ಗಳಿಸುವ ಮೂಲಕ ಭಾರತದಲ್ಲಿ 208.05 ಕೋಟಿ ಗಳಿಸಿದೆ. ವರ್ಲ್ಡ್ ವೈಡ್ ಮೂರೇ ದಿನದಲ್ಲಿ 300 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಇನ್ನೊಂದೆಡೆ ʼಡಂಕಿʼ ಸಿನಿಮಾಕ್ಕೆ ನಿರೀಕ್ಷಿತ ಮಟ್ಟದಲ್ಲಿ ಓಪನಿಂಗ್ ಸಿಗದಿದ್ರು, ಶಾರುಖ್ – ರಾಜಕುಮಾರ್ ಹಿರಾನಿ ಅವರ ಸಿನಿಮಾವನ್ನು ನೋಡಲು ವೀಕೆಂಡ್ ನಲ್ಲಿ ಪ್ರೇಕ್ಷಕರು ಥಿಯೇಟರ್ ನತ್ತ ಧಾವಿಸಿದ್ದಾರೆ. ʼಡಂಕಿʼ ನಾಲ್ಕನೇ ದಿನ 31.50 ಕೋಟಿ ರೂ.ಗಳಿಸಿದೆ. ಆ ಮೂಲಕ ಶಾರುಖ್ ಅವರ ʼಡಂಕಿʼಯೂ 100 ಕೋಟಿ ಕ್ಲಬ್ ಸೇರಿದೆ. ಭಾರತದಲ್ಲಿ ʼಡಂಕಿʼ 106.43 ಕೋಟಿ ರೂ ಗಳಿಸಿದೆ.
ʼಡಂಕಿʼ ಡಿ.21 ರಂದು ರಿಲೀಸ್ ಆಗಿದೆ. ʼಸಲಾರ್ʼ ಡಿ.22 ರಂದು ತೆರೆ ಕಂಡಿದೆ.
ತೆಲುಗು ಗೊತ್ತಿಲ್ಲದ ನಾಯಕಿಯರನ್ನು ಬೆಂಬಲಿಸುತ್ತೇವೆ – ವಿವಾದ ಎಬ್ಬಿಸಿದ ನಿರ್ಮಾಪಕನ ಹೇಳಿಕೆ
Tollywood: ಅಲ್ಲು ಅರ್ಜುನ್ಗೆ ಅಟ್ಲಿ ಆ್ಯಕ್ಷನ್ ಕಟ್: ಶ್ರೀದೇವಿ ಪುತ್ರಿ ನಾಯಕಿ?
Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್ ನಟ ಪೊಲೀಸ್ ವಶಕ್ಕೆ
Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್ ಹಿಟ್ ಕಂಡ ಶ್ರೀವಲ್ಲಿ
Kollywood: ಬರ್ತ್ ಡೇಗೆ ʼಮದರಾಸಿʼಯಾಗಿ ಮಾಸ್ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.