Kamal Hasan: ರೀ- ರಿಲೀಸ್ ಆದ ಮೊದಲ ದಿನವೇ 1 ಕೋಟಿ ರೂ. ಗಳಿಕೆ ಕಂಡ ʼಇಂಡಿಯನ್ʼ
Team Udayavani, Jun 8, 2024, 5:44 PM IST
ಚೆನ್ನೈ: ಕಮಲ್ ಹಾಸನ್ ಅವರ ವೃತ್ತಿ ಬದುಕಿನಲ್ಲಿ ದೊಡ್ಡ ಹಿಟ್ ಆದ ʼಇಂಡಿಯನ್ʼ ಸಿನಿಮಾದ ಸೀಕ್ವೆಲ್ ರಿಲೀಸ್ ಗೆ ದಿನ ನಿಗದಿಯಾಗಿದೆ.
ಶಂಕರ್ ನಿರ್ದೇಶನದಲ್ಲಿ 1996 ರಲ್ಲಿ ಬಂದ ʼಇಂಡಿಯನ್ʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ದೇಶ ಪ್ರೇಮವನ್ನು ಸಾರಿದ ಕಥೆಯಲ್ಲಿ ಕಮಲ್ ಹಾಸನ್ ಅವರ ಡಬಲ್ ರೋಲ್ ಪಾತ್ರದ ಅಭಿನಯ ಪ್ರತಿ ಸಿನಿ ಪ್ರೇಮಿಯ ಮನ ಗೆದ್ದಿತ್ತು.
ʼಇಂಡಿಯನ್ -2ʼ ರಿಲೀಸ್ ಗೂ ಮುನ್ನ ಚಿತ್ರತಂಡ ಮೊದಲ ಭಾಗವನ್ನು ರಿಲೀಸ್ ಮಾಡಿದೆ. ಥಿಯೇಟರ್ ನಲ್ಲಿ ʼಇಂಡಿಯನ್ʼ ರೀ ರಿಲೀಸ್ ಆಗಿದ್ದು, ಮೊದಲ ದಿನವೇ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.
ರೀ ರಿಲೀಸ್ ಅಗಿರುವ ʼಇಂಡಿಯನ್ʼ ಮೊದಲ ದಿನ 1 ಕೋಟಿ ರೂಪಾಯಿ ಗಳಿಕೆಯನ್ನು ಕಂಡಿದೆ. ಆ ಮೂಲಕ ಕಮಲ್ ಹಾಸನ್ ಫ್ಯಾನ್ಸ್ ಗಳು ʼಇಂಡಿಯನ್ʼ ರೀ- ರಿಲೀಸ್ ನ್ನು ಹಬ್ಬವನ್ನಾಗಿ ಆಚರಿಸಿದ್ದಾರೆ.
1 ಕೋಟಿ ರೂ.ಗಳಿಕೆ ಕಂಡಿದ್ದರೂ, ಇತ್ತೀಚೆಗೆ ರೀ ರಿಲೀಸ್ ಆದ ʼಗಿಲ್ಲಿʼ ದಾಖಲೆಯನ್ನು ʼಇಂಡಿಯನ್ʼಗೆ ಮುರಿಯಲು ಸಾಧ್ಯವಾಗಿಲ್ಲ. ದಳಪತಿ ವಿಜಯ್ ಅವರ ʼಗಿಲ್ಲಿʼ ರೀ- ರಿಲೀಸ್ ಆದ ಮೊದಲ ದಿನವೇ 10 ಕೋಟಿ ಗಳಿಕೆ ಕಂಡು ದಾಖಲೆ ಬರೆದಿತ್ತು.
ʼಇಂಡಿಯನ್ʼ ನಲ್ಲಿ ಕಮಲ್ ಹಾಸನ್ ಜೊತೆಗೆ ಮನೀಶಾ ಕೊಯಿರಾಲ, ಊರ್ಮಿಳಾ ಮಾತೋಂಡ್ಕರ್, ಸುಕನ್ಯಾ, ಮನೋರಮಾ ಗೌಂಡಮಣಿ ಮುಂತಾದವರು ನಟಿಸಿದ್ದರು.
‘ಇಂಡಿಯನ್ -2ʼ ಜುಲೈ 12 ರಂದು ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Devara: ಹೇಗಿದೆ ಜೂ.ಎನ್ಟಿಆರ್ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ
ಶಂಕರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್
Pushpa 2: ಅಲ್ಲು ಅರ್ಜುನ್ ʼಪುಷ್ಪ-2ʼನಿಂದ ಖ್ಯಾತ ನಟಿ ಔಟ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು
SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ
ಭಾರತದಲ್ಲಿ ಪಾಕ್ ಸಿನಿಮಾ ದ ಲೆಜೆಂಡ್ ಆಫ್ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ
Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ
Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.