

Team Udayavani, Jun 30, 2024, 4:00 PM IST
ಹೈದರಾಬಾದ್: ʼಕಲ್ಕಿ 2898 ಎಡಿʼ (Kalki 2898 AD) ವಿಶ್ವದಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಮಹಾಭಾರತದಿಂದ ಸ್ಪೂರ್ತಿ ಪಡೆದು ಸೈನ್ಸ್ ಫಿಕ್ಷನ್ ನಲ್ಲಿ ಬಂದಿರುವ ಈ ಸಿನಿಮಾದ ಅದ್ಧೂರಿ ವಿಶ್ಯುವಲ್ಸ್ ಗಳನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.
ದಿನಕಳೆದಂತೆ ʼಕಲ್ಕಿ 2898 ಎಡಿʼ ಸಿನಿಮಾ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಭಾಸ್ (Prabhas), ಅಮಿತಾಭ್ ಹಾಗೂ ಕಮಲ್ ಹಾಸನ್ ಅವರ ಹೊಸ ಅವತಾರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇತ್ತ ಅಲ್ಲು ಅರ್ಜುನ್, ಯಶ್ ಸೇರಿದಂತೆ ಇತರೆ ಖ್ಯಾತ ಸೆಲೆಬ್ರಿಟಿಗಳು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಚಿತ್ರ ರಿಲೀಸ್ ಆಗಿ ಮೂರು ದಿನ ಕಳೆದಿದ್ದು, ಭಾರತದಲ್ಲಿ 200 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ವರ್ಲ್ಡ್ ವೈಡ್ ಗಳಿಕೆಯಲ್ಲಿ 300 ಕೋಟಿ ರೂ ದಾಟಿದೆ. ಈಗಾಗಲೇ ಗಳಿಕೆಯಲ್ಲಿ ದಾಖಲೆ ಬರೆದಿರುವ ಸಿನಿಮಾ ಮತ್ತೊಂದು ವಿಚಾರದಲ್ಲೂ ದಾಖಲೆ ಬರೆದಿದೆ.
ಭಾನುವಾರ(ಜು.30ರಂದು) ಮಧ್ಯಾಹ್ನ 1 ಗಂಟೆಯ ವೇಳೆ ಬುಕ್ ಮೈ ಶೋನಲ್ಲಿ ʼಕಲ್ಕಿʼ ಸಿನಿಮಾದ ಟಿಕೆಟ್ ಕಳೆದ 1 ಗಂಟೆಯಲ್ಲಿ ಹೆಚ್ಚು ಮಾರಾಟವಾಗಿದೆ ಎಂದು ತೋರಿಸಿದೆ. ಕಳೆದ 1 ಗಂಟೆಯಲ್ಲಿ ಸಿನಿಮಾದ 93.77 ಸಾವಿರ ಟಿಕೆಟ್ ಗಳು ಮಾರಾಟವಾಗಿದೆ ಎಂದು ಬಹಿರಂಗಪಡಿಸಿದೆ.
ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಶಾರುಖ್ ಖಾನ್ ಅವರ ʼಜವಾನ್ʼ ಸಿನಿಮಾದ 86 ಸಾವಿರ ಟಿಕೆಟ್ ಗಳು ಒಂದು ಗಂಟೆಯೊಳಗಡೆ ಮಾರಾಟವಾಗಿದ್ದು ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ʼಕಲ್ಕಿ 2898 ಎಡಿʼ ಬ್ರೇಕ್ ಮಾಡಿದೆ.
ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಮತ್ತು ಮೃಣಾಲ್ ಠಾಕೂರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗು ಗೊತ್ತಿಲ್ಲದ ನಾಯಕಿಯರನ್ನು ಬೆಂಬಲಿಸುತ್ತೇವೆ – ವಿವಾದ ಎಬ್ಬಿಸಿದ ನಿರ್ಮಾಪಕನ ಹೇಳಿಕೆ
Tollywood: ಅಲ್ಲು ಅರ್ಜುನ್ಗೆ ಅಟ್ಲಿ ಆ್ಯಕ್ಷನ್ ಕಟ್: ಶ್ರೀದೇವಿ ಪುತ್ರಿ ನಾಯಕಿ?
Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್ ನಟ ಪೊಲೀಸ್ ವಶಕ್ಕೆ
Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್ ಹಿಟ್ ಕಂಡ ಶ್ರೀವಲ್ಲಿ
Kollywood: ಬರ್ತ್ ಡೇಗೆ ʼಮದರಾಸಿʼಯಾಗಿ ಮಾಸ್ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್
Udupi: ಗೀತಾರ್ಥ ಚಿಂತನೆ-191: “ಡಿಸಿಶನ್ ಮೇಕರ್ ನೀನಲ್ಲ’ ಎಂಬ ಶ್ರೀಕೃಷ್ಣ
Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್.ಎಂ. ರೇವಣ್ಣ
Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್ ಜಾರಕಿಹೊಳಿ
Mangaluru: ವಿದ್ಯುತ್ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ
Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.