Pushpa 2: ಅಲ್ಲು ಅರ್ಜುನ್ ʼಪುಷ್ಪ-2ʼನಿಂದ ಖ್ಯಾತ ನಟಿ ಔಟ್
Team Udayavani, Sep 25, 2024, 4:45 PM IST
ಹೈದರಾಬಾದ್: ಈ ವರ್ಷದ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿರುವ ʼಪುಷ್ಪ-2ʼ(Pushpa 2) ಬಗ್ಗೆ ದಿನ ಕಳೆದಂತೆ ಒಂದೊಂದೇ ಸುದ್ದಿ ಹರಿದಾಡುತ್ತಿದೆ.
ಆಡಿಯೋ ರೈಟ್ಸ್, ಓಟಿಟಿ ರೈಟ್ಸ್ ಹೀಗೆ ರಿಲೀಸ್ ಮುನ್ನವೇ ಸಿನಿಮಾ ಭರ್ಜರಿ ಗಳಿಕೆಯತ್ತ ಸಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಎರಡು ಹಾಡುಗಳನ್ನು ರಿಲೀಸ್ ಮಾಡಿ ಈಗಾಗಲೇ ಸಖತ್ ಕ್ರೇಜ್ ಹುಟ್ಟಿಸಿರುವ ʼಪುಷ್ಪ-2ʼ ಬಿಡುಗಡೆಗೆ ಮುಂದೆ ನೋಡುತ್ತಿದೆ. ರಿಲೀಸ್ ಡೇಟ್ ಪೋಸ್ಟರ್ ಗಳನ್ನು ಒಂದೊಂದೇ ಆಗಿ ಚಿತ್ರತಂಡ ರಿವೀಲ್ ಮಾಡುತ್ತಿದೆ.
ಇತ್ತೀಚೆಗೆ ʼಪುಷ್ಪ-2ʼ ಓಟಿಟಿ ರೈಟ್ಸ್ (OTT Rights) 270 ಕೋಟಿ ರೂಪಾಯಿಗಳಿಗೆ ನೆಟ್ ಫ್ಲಿಕ್ಸ್ ಖರೀದಿಸಿದೆ ಎಂದು ವರದಿ ಆಗಿತ್ತು.
ʼಪುಷ್ಪ-1ʼನಲ್ಲಿ ಸೌತ್ ಬೆಡಗಿ ಸಮಂತಾ ʼಊ ಅಂಟವಾʼ ಎನ್ನುವ ಹಾಡಿಗೆ ಹಾಟ್ ಆಗಿ ಹೆಜ್ಜೆ ಹಾಕಿದ್ದರು. ಈ ಹಾಡು ಸಿನಿಮಾದಷ್ಟೇ ದೊಡ್ಡ ಹಿಟ್ ಆಗಿತ್ತು. ʼಪುಷ್ಪ-2ʼ ಸಿನಿಮಾದಲ್ಲೂ ಇಂಥದ್ದೇ ಒಂದು ಐಟಂ ಸಾಂಗ್ ಇರಲಿದೆ ಎನ್ನಲಾಗಿದೆ. ಇದಕ್ಕಾಗಿ ʼಅನಿಮಲ್ʼ ಬೆಡಗಿ ತೃಪ್ತಿ ದಿಮ್ರಿ (Triptii Dimri) ಅವರು ಹೆಜ್ಜೆ ಹಾಕಲಿದ್ದಾರೆ ಎಂದು ವರದಿಯಾಗಿತ್ತು.
ʼಪುಷ್ಪ-2ʼ ನಲ್ಲಿ ತೃಪ್ತಿ ಇರುವುದು ಬಹುತೇಕ ಖಚಿತವಾಗಿತ್ತು. ಐಟಂ ಹಾಡಿಗಾಗಿ ಅಡಿಷನ್ ಕೂಡ ನೀಡಿದ್ದರು. ಆದರೆ ಇದೀಗ ತೃಪ್ತಿ ಅವರನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ. ಆದರೆ ಯಾವ ಕಾರಣಕ್ಕಾಗಿ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ ಎನ್ನುವುದರ ಬಗ್ಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ʼಅನಿಮಲ್ʼ ನಿಂದ ಸುದ್ದಿಯಾದ ತೃಪ್ತಿ ʼವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಟೋಬರ್ 11 ರಂದು ಈ ಸಿನಿಮಾ ರಿಲೀಸ್ ಆಗಲಿದೆ. ವಿಕ್ಕಿ ಕೌಶಲ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ʼಪುಷ್ಪ-2ʼ ಸಿನಿಮಾದಲ್ಲಿ ಅಲ್ಲು ಅರ್ಜುನ್ (Allu Arjun) ಮುಂದೆ ಫಾಹದ್ ಫಾಸಿಲ್ (Fahadh Faasil) ಅಬ್ಬರಿಸಲಿದ್ದಾರೆ. ಇನ್ನುಳಿದಂತೆ ರಶ್ಮಿಕಾ ಮಂದಣ್ಣ, ಧನಂಜಯ, ಜಗದೀಶ್ ಪ್ರತಾಪ್ ಬಂಡಾರಿ, ರಾವ್ ರಮೇಶ್, ಅಜಯ್, ಸುನಿಲ್, ಅನಸೂಯಾ ಭಾರದ್ವಾಜ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.
ʼಪುಷ್ಪ-2ʼ ಈ ಆಗಸ್ಟ್ 15ರಂದು ರಿಲೀಸ್ ಆಗಬೇಕಿತ್ತು. ಆದರೆ ರಿಲೀಸ್ ಡೇಟ್ ಮುಂದೂಡಿಕೆ ಆಗಿ ಈಗ ಡಿಸೆಂಬರ್ 6 ರಂದು ಸಿನಿಮಾ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ದೂರು ದಾಖಲು
Jayam Ravi: ಜಯಂ ರವಿಯನ್ನು ಮನೆಯಿಂದ ಹೊರಹಾಕಿದ ಮಾಜಿ ಪತ್ನಿ; ಪೊಲೀಸರ ಮೊರೆ ಹೋದ ನಟ
Sanatana Dharma; ಮುಂದುವರೆದ ಪವನ್ ಕಲ್ಯಾಣ್ vs ಪ್ರಕಾಶ್ ರಾಜ್ ಸಮರ
MeToo Case: ಅತ್ಯಾಚಾರ ಆರೋಪದಲ್ಲಿ ನಟ, ಶಾಸಕ ಮುಕೇಶ್ ಬಂಧಿಸಿದ ಪೊಲೀಸರು
Devara: ಅಡ್ವಾನ್ಸ್ ಬುಕಿಂಗ್ನಲ್ಲೇ ಕೋಟಿ- ಕೋಟಿ ಗಳಿಸಿದ ʼದೇವರʼ; ಎಲ್ಲಿ ಎಷ್ಟು ಗಳಿಕೆ?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.