Mollywood: ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಸಂಗೀತ ನಿರ್ದೇಶಕ; ನೆಟ್ಟಿಗರು ಗರಂ


Team Udayavani, Jul 17, 2024, 5:55 PM IST

Mollywood: ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಸಂಗೀತ ನಿರ್ದೇಶಕ; ನೆಟ್ಟಿಗರು ಗರಂ

ಕೊಚ್ಚಿ: ಮಾಲಿವುಡ್‌ (Mollywood) ಚಿತ್ರರಂಗದ ಮ್ಯೂಸಿಕ್‌ ಡೈರೆಕ್ಟರ್‌ ಒಬ್ಬರು ಖ್ಯಾತ ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಲಿವುಡ್‌ ನಲ್ಲಿ 8 ಜನ ನಿರ್ದೇಶಕರ, 9 ಕಥೆಗಳುಳ್ಳ ‘ಮನೋರಥಂಗಳ್ʼ(Manorathangal) ಎನ್ನುವ ಆಂಥಾಲಜಿ ವೆಬ್ ಸಿರೀಸ್‌ ಬರುತ್ತಿದೆ. ಈ ವೆಬ್‌ ಸಿರೀಸ್‌ ನ ಟ್ರೇಲರ್‌ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ.

ಈ ಕಾರ್ಯಕ್ರಮದಲ್ಲಿ ‘ಮನೋರಥಂಗಳ್ʼನಲ್ಲಿ ನಟಿಸಿರುವ ಹಾಗೂ ಅದರಲ್ಲಿ ಕೆಲಸ ಮಾಡಿರುವ ಹಲವರು ಭಾಗಿಯಾಗಿದ್ದರು. ಮಲಯಾಳಂ ಸಂಗೀತ ನಿರ್ದೇಶಕ ರಮೇಶ್ ನಾರಾಯಣ್ ನಟ ಆಸಿಫ್ ಅಲಿ ಅವರಿಗೆ ಸ್ಮರಣಿಕೆಯೊಂದನ್ನು ನೀಡಬೇಕಿತ್ತು. ಹೀಗಾಗಿ ಆಸಿಫ್‌ ಅಲಿ ಅವರು ನಾರಾಯಣ್‌ ಅವರಿಗೆ ಸ್ಮರಣಿಕೆ ನೀಡಲು ಹೋಗಿದ್ದಾರೆ. ಆದರೆ ರಮೇಶ್‌ ನಾರಾಯಾಣ್‌ ಆಸಿಫ್‌ ಅವರಿಂದ ಪ್ರಶಸ್ತಿ ಸ್ವೀಕರಿಸದೆ ಹಾಗೆಯೇ ನಿಂತಿದ್ದರು. ಇದರಿಂದ ಆಸಿಫ್‌ ಅವರಿಗೆ ಇರಿಸುಮುರಿಸು ಉಂಟಾಗಿದೆ. ಗೊಂದಲದಿಂದಲೇ ಆಸಿಫ್‌ ರಮೇಶ್‌ ನಾರಾಯಣ್‌ ಅವರ ಕೈಗೆ ಪ್ರಶಸ್ತಿ ಇಟ್ಟಿದ್ದಾರೆ.

ರಮೇಶ್‌ ನಾರಾಯಣ್ ನಿರ್ದೇಶಕ ಜಯರಾಜ್‌ ಅವರನ್ನು ಕರೆದು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಮೇಶ್‌ ನಾರಾಯಣ್‌ ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಮೇಶ್ ನಾರಾಯಣ್ ಅವರು ತಮ್ಮ ನಿರ್ದೇಶಕ ಜಯರಾಜ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ಬಯಸಿದ್ದರು. ಈ ಬಗ್ಗೆ ಆಯೋಜಕರಿಗೆ ವಿನಂತಿಸಬೇಕಿತ್ತು. ಆದರೆ ಈ ರೀತಿ ಮಾಡಿದ್ದು ಸರಿಯಲ್ಲ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

“ಹಿರಿಯ ವ್ಯಕ್ತಿಗೆ ತೋರಿದ ಅಗೌರವ ಇದು. ಜನರಿಗೆ ಗೌರವ ಕೊಡಬೇಕೆಂಬ ಸಾಮಾನ್ಯ ಜ್ಞಾನವೊಂದಿರುತ್ತದೆ. ಆದರೆ ಉನ್ನತ ಮಟ್ಟಕ್ಕೇರಿದಾಗ ಅದನ್ನು ಜನ ಮರೆತು ಬಿಡುತ್ತಾರೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

“ಕಾರ್ಯಕ್ರಮದ ನಿರೂಪಕಿ ರಮೇಶ್‌ ನಾರಾಯಣ್‌ ಅವರನ್ನು ಸಂತೋಷ್‌ ನಾರಾಯಣ್‌ (ಖ್ಯಾತ ಸಂಗೀತ ಸಂಯೋಜಕ) ಎಂದು ಅವಸರದಿಂದ ಕರೆದಿದ್ದರು. ಇದರಿಂದ ಅವರಿಗೆ ಸಿಟ್ಟು ಬಂತು” ಎಂದು ಒಬ್ಬರು ಬರೆದುಕೊಂಡಿದ್ದಾರೆ.

“ನನಗೆ ಆಸಿಫ್‌ ಅವರು ಪ್ರಶಸ್ತಿ ನೀಡುತ್ತಾರೆ ಅಂಥ ಗೊತ್ತಿರಲಿಲ್ಲ. ಅವರು ಅನೇಕ ಕಲಾವಿದರ ನಡುವಿನಿಂದ ಬಂದು ಪ್ರಶಸ್ತಿ ಕೊಟ್ಟರು. ನನಗೆ ಜಯರಾಜ್‌ ಅಲ್ಲಿರಬೇಕಿತ್ತು ಅಂಥ ಅನ್ನಿಸಿತು. ಅದಕ್ಕಾಗಿ ಅವರನ್ನು ನಾನು ಕರೆದೆ. ಅಷ್ಟರಲ್ಲೇ ಆಸಿಫ್‌ ಎಲ್ಲೂ ಹೋಗಿ ಕೂತರು” ಎಂದು ವಿವಾದದ ಬೆನ್ನಲ್ಲೇ ರಮೇಶ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಮತ್ತು ಚಿತ್ರಕಥೆಗಾರ-ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರು ಬರೆದ ಕಥೆಗಳನ್ನು ಆಧರಿಸಿ ‘ಮನೋರಥಂಗಳ್ʼ ಸಿರೀಸ್‌ ಬರುತ್ತಿದೆ.

ದಕ್ಷಿಣ ಭಾರತದ ದಿಗ್ಗಜರು ಈ ಸಿರೀಸ್‌ ಬೇರೆ ಬೇರೆ ಕಥೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್, ಮೋಹನ್ ಲಾಲ್,(Mohanlal), ಮಮ್ಮುಟಿ (Mammootty), ಫಾಹದ್ ಫಾಸಿಲ್(Fahadh Faasil) ಮುಂತಾದ ಮಾಲಿವುಡ್‌ ಸೂಪರ್‌ ಸ್ಟಾರ್‌ ಗಳು ನಟಿಸಿದ್ದಾರೆ.

ಇವರಷ್ಟೇ ಅಲ್ಲದೆ ಪಾರ್ವತಿ ತಿರುವೋತು, ಮತ್ತು ಮಧು, ಬಿಜು ಮೆನನ್, ಇಶಿತ್ ಯಾಮಿಮಿ, ಅಪರ್ಣಾ ಬಾಲಮುರಳಿ, ನದಿಯಾ ಮೊಯ್ದು, ಆನ್ ಆಗಸ್ಟಿನ್, ದುರ್ಗಾ ಕೃಷ್ಣ, ಆಸಿಫ್ ಅಲಿ, ಇಂದ್ರಜಿತ್ ಸುಕುಮಾರನ್, ಇಂದ್ರನ್ಸ್ ಮತ್ತು ಸಿದ್ದಿಕ್ ಮೊದಲಾದವರೂ ನಟಿಸಿದ್ದಾರೆ.

ಆಗಸ್ಟ್‌ 15ರಿಂದ ಜೀ5 ನಲ್ಲಿ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಈ ಸಿರೀಸ್‌ ಸ್ಟ್ರೀಮ್‌ ಆಗಲಿದೆ.

ಟಾಪ್ ನ್ಯೂಸ್

HK Patil ಅವರನ್ನು ಭೇಟಿಯಾದ ನಟ ಅನಿರುದ್ಧ; ಐಹೊಳೆಯ ವಾಸ್ತುಶಿಲ್ಪದ ಬಿರುಕು ಸರಿಪಡಿಸಲು ಮನವಿ

HK Patil ಅವರನ್ನು ಭೇಟಿಯಾದ ನಟ ಅನಿರುದ್ಧ; ಐಹೊಳೆಯ ವಾಸ್ತುಶಿಲ್ಪದ ಬಿರುಕು ಸರಿಪಡಿಸಲು ಮನವಿ

Kadaba ಸ್ಕೂಟರ್‌ ಸ್ಕಿಡ್‌: ವ್ಯಾಪಾರಿ ಸಾವು

Kadaba ಸ್ಕೂಟರ್‌ ಸ್ಕಿಡ್‌: ವ್ಯಾಪಾರಿ ಸಾವು

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Kunigal: ಮದುವೆಗೆ ನಿರಾಕರಣೆ… ಭಗ್ನ ಪ್ರೇಮಿಯಿಂದ ಮಂಗಳಮುಖಿಗೆ ಚಾಕು ಇರಿತ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Mahalingapura: ಶಾಸಕರ ವಿರುದ್ದ ಮುಂದುವರೆದ ಪುರಸಭೆ ಸದಸ್ಯರ ಹೋರಾಟ…

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ

Reliance-Disney Merger: ರಿಲಯನ್ಸ್‌ – ಡಿಸ್ನಿ ಒಪ್ಪಂದಕ್ಕೆ ಸಿಸಿಐ ಹಸಿರು ನಿಶಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Scandal: ಮಲಯಾಳಂ ನಟ ಸಿದ್ದಿಖಿ ವಿರುದ್ಧ ಅತ್ಯಾ*ಚಾರ ಆರೋಪದಡಿ ಎಫ್‌ ಐಆರ್‌ ದಾಖಲು

Scandal: ಮಲಯಾಳಂ ನಟ ಸಿದ್ದಿಖಿ ವಿರುದ್ಧ ಅತ್ಯಾ*ಚಾರ ಆರೋಪದಡಿ ಎಫ್‌ ಐಆರ್‌ ದಾಖಲು

Malayalam Film Industry: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೋಹನ್‌ ಲಾಲ್

Malayalam Film Industry: ʼಅಮ್ಮʼ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೋಹನ್‌ ಲಾಲ್

Bijili Ramesh: ಕುಡಿತದ ಚಟದಿಂದ ಅನಾರೋಗ್ಯ; ಖ್ಯಾತ ಕಾಲಿವುಡ್‌ ನಟ ನಿಧನ

Bijili Ramesh: ಕುಡಿತದ ಚಟದಿಂದ ಅನಾರೋಗ್ಯ; ಖ್ಯಾತ ಕಾಲಿವುಡ್‌ ನಟ ನಿಧನ

1-wqeqwewq

Malayalam; ಕಿರುಕುಳ ಆರೋಪ ಮಾಡಿದ ನಟಿ ವಿರುದ್ಧ ನಟ ಸಿದ್ದಿಕ್‌ ದೂರು

09

Kollywood: ರಜಿನಿ ʼವೆಟ್ಟೈಯನ್‌ʼಗೆ ದಾರಿ ಬಿಟ್ಟ ಸೂರ್ಯ; ʼಕಂಗುವʼ ರಿಲೀಸ್‌ ಮುಂದೂಡಿಕೆ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

HK Patil ಅವರನ್ನು ಭೇಟಿಯಾದ ನಟ ಅನಿರುದ್ಧ; ಐಹೊಳೆಯ ವಾಸ್ತುಶಿಲ್ಪದ ಬಿರುಕು ಸರಿಪಡಿಸಲು ಮನವಿ

HK Patil ಅವರನ್ನು ಭೇಟಿಯಾದ ನಟ ಅನಿರುದ್ಧ; ಐಹೊಳೆಯ ವಾಸ್ತುಶಿಲ್ಪದ ಬಿರುಕು ಸರಿಪಡಿಸಲು ಮನವಿ

Kadaba ಸ್ಕೂಟರ್‌ ಸ್ಕಿಡ್‌: ವ್ಯಾಪಾರಿ ಸಾವು

Kadaba ಸ್ಕೂಟರ್‌ ಸ್ಕಿಡ್‌: ವ್ಯಾಪಾರಿ ಸಾವು

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Udupi ಅನಾಮಧೇಯ ಲಿಂಕ್‌ ಕ್ಲಿಕ್‌: ಲಕ್ಷಾಂತರ ರೂ.ವಂಚನೆ

Perdoor: ಅಕ್ರಮ ಗಣಿಗಾರಿಕೆ ಹಿಟಾಚಿ ವಶಕ್ಕೆ; ಪ್ರಕರಣ ದಾಖಲು

Perdoor: ಅಕ್ರಮ ಗಣಿಗಾರಿಕೆ ಹಿಟಾಚಿ ವಶಕ್ಕೆ; ಪ್ರಕರಣ ದಾಖಲು

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

UP Government: ದೇಶದ್ರೋಹಿ ಪೋಸ್ಟ್‌ ಮಾಡಿದರೆ ಉತ್ತರಪ್ರದೇಶದಲ್ಲಿನ್ನು ಜೀವಾವಧಿ ಶಿಕ್ಷೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.