Kollywood: ʼಕಾಂಚನಾ-4ʼ ಗೆ ʼಸೀತಾ ರಾಮಂʼ ಮೃಣಾಲ್?: ವದಂತಿಗೆ ಸ್ಪಷ್ಟನೆ ನೀಡಿದ ಲಾರೆನ್ಸ್
Team Udayavani, Jun 9, 2024, 3:40 PM IST
ಚೆನ್ನೈ: ರಾಘವ ಲಾರೆನ್ಸ್ ಕಾಲಿವುಡ್ನ ಬೇಡಿಕೆಯ ನಟರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಅವರ ʼ ಕಾಂಚನಾ 4ʼ ಸಿನಿಮಾ ಅನೌನ್ಸ್ ಆಗಿದೆ. ಕಾಲಿವುಡ್ ನಲ್ಲಿ ಇದುವರೆಗೆ ಬಂದ ʼಕಾಂಚನಾʼ ಸರಣಿಗಳು ಹಿಟ್ ಆಗಿವೆ.
‘ಮುನ್ನಿʼ ಸಿರೀಸ್ ನಲ್ಲಿ ಬಂದ ʼಕಾಂಚನಾʼ ಇದುವರೆಗೆ ಮೂರು ಭಾಗಗಳಾಗಿ ತೆರೆಕಂಡಿದೆ. ಹಾರಾರ್ ಕಾಮಿಡಿ ಕಥಾಹಂದರದ ʼಕಾಂಚನಾʼ ಕ್ಕೆ ಪ್ರತ್ಯೇಕ ನೋಡುಗರ ವರ್ಗವೇ ಇದೆ. ರಾಘವ ಲಾರೆನ್ಸ್ ʼಕಾಂಚನಾʼದಲ್ಲಿ ಪ್ರಧಾನ ಪಾತ್ರದ ಜೊತೆ ನಿರ್ದೇಶಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಇದೀಗ ಲಾರೆನ್ಸ್ ʼಕಾಂಚನಾ-4ʼ ಅನೌನ್ಸ್ ಮಾಡಿದ್ದಾರೆ. ಅನೌನ್ಸ್ ಬಳಿಕ ಸಿನಿಮಾದಲ್ಲಿ ಯಾರು ನಾಯಕಿಯಾಗಿ ಆಗಲಿದ್ದಾರೆ ಎನ್ನುವ ಬಗ್ಗೆ ಕಾಲಿವುಡ್ ರೀತಿ ನಾನಾ ರೀತಿಯ ಗಾಸಿಪ್ ಹರಿದಾಡಿದೆ.
ಈಗಾಗಲೇ ತನ್ನ ನಟನೆಯಿಂದ ಸೌತ್ ಚಿತ್ರರಂಗದಲ್ಲಿ ಗಮನ ಸೆಳೆದಿರುವ ಮೃಣಾಲ್ ಠಾಕೂರ್ ಅವರ ಹೆಸರು ʼಕಾಂಚನಾ-4ʼ ಗಾಗಿ ಕೇಳಿ ಬರುತ್ತಿದೆ. ಮೃಣಾಲ್ ತೆಲುಗಿನ ʼಸೀತಾ ರಾಮಂʼ ಮತ್ತು ‘ಹಾಯ್ ನಾನ್ನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ʼಕಾಂಚನಾ-4ʼ ಮೂಲಕ ಕಾಲಿವುಡ್ ಗೆ ಕಾಲಿಡಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಇದುವರೆಗೆ ಮಾಹಿತಿ ನೀಡಿಲ್ಲ.
ನಿರ್ದೇಶಕ, ನಟ ರಾಘವ ಲಾರೆನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಗಾಸಿಪ್ ಗೆ ಸ್ಪಷ್ಟನೆ ನೀಡಿದ್ದಾರೆ.
ʼʼಕಾಂಚನಾ 4 ಕಾಸ್ಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಲ್ಲಾ ಮಾಹಿತಿಗಳು ಕೇವಲ ವದಂತಿಗಳಷ್ಟೇ. ಏನೇಯಿದ್ದರೂ ಶೀಘ್ರದಲ್ಲಿ ರಾಘವೇಂದ್ರ ಪ್ರೊಡಕ್ಷನ್ ಮೂಲಕ ಅಧಿಕೃತ ಘೋಷಣೆಯಾಗಲಿದೆ” ಎಂದು ಲಾರೆನ್ಸ್ ಬರೆದುಕೊಂಡಿದ್ದಾರೆ.
Hi friends and fans,
All the information regarding Kanchana 4 and casting that are circulating around social media are just rumors. Official announcement will be made through Ragavendra Production. Coming soon! pic.twitter.com/T46gcYyjAN— Raghava Lawrence (@offl_Lawrence) June 9, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ
Devara: ಹೇಗಿದೆ ಜೂ.ಎನ್ಟಿಆರ್ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ
ಶಂಕರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ
Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!
BBK11: ಬಿಗ್ ಬಾಸ್ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..
Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ
Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.