Vettaiyan Trailer: ಪಾಪಿಗಳ ಎನ್ಕೌಂಟರ್ ಮಾಡಲು ಖಾಕಿ ತೊಟ್ಟು ಬಂದ ʼತಲೈವಾʼ
Team Udayavani, Oct 2, 2024, 6:56 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅಭಿನಯದ ʼವೆಟ್ಟೈಯನ್ʼ (Vettaiyan) ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ʼಜೈಲರ್ʼ ಬಳಿಕ ರಜಿನಿಕಾಂತ್ ಖಾಕಿ ತೊಟ್ಟಿರುವ ಅವತಾದಲ್ಲಿ ಕಾಣಿಸಿಕೊಳ್ಳುತ್ತಿರುವ ʼವೆಟ್ಟೈಯನ್ʼ ನಿರೀಕ್ಷೆ ಹೆಚ್ಚಿಸಿದೆ. ಪಾತ್ರವರ್ಗದ ಮೂಲಕ ಸದ್ದು ಮಾಡಿದ್ದ ಸಿನಿಮಾ ಇದೀಗ ಟ್ರೇಲರ್ ಮೂಲಕ ಕುತೂಹಲ ಹೆಚ್ಚಾಗಿಸಿದೆ.
ಟ್ರೇಲರ್ನಲ್ಲಿ ಏನಿದೆ?:
ಒಂದು ಊರಿನಲ್ಲಿ ಅನ್ಯಾಯ ನಡೆಯುತ್ತಿರುತ್ತದೆ. ಹೆಣ್ಣು ಮಕ್ಕಳು ನಮಗೆ ಇಲ್ಲಿ ಸುರಕ್ಷತೆ ಇಲ್ಲವೆಂದು ಬೀದಿ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಟ್ಟ ವ್ಯಕ್ತಿಗಳನ್ನು ಎನ್ ಕೌಂಟರ್ ಮಾಡಬೇಕೆಂದು ಹೆಣ್ಣ ಮಗಳು ಧ್ವನಿಗೂಡಿಸಿದ್ದಾಳೆ. ಇದೇ ಸಮಯದಲ್ಲಿ ಅಲ್ಲೊಂದು ಹೆಣ್ಣನ್ನು ಭೀಕರವಾಗಿ ಅತ್ಯಾಚಾರವೆಸಗಿ ಹ*ತ್ಯೆ ಮಾಡಿರುತ್ತಾರೆ.
ಪೊಲೀಸ್ ಇಲಾಖೆ ಮೇಲೆ ಆರೋಪಿಗಳನ್ನು ಎನ್ ಕೌಂಟರ್ ಮಾಡಬೇಕೆನ್ನುವ ಒತ್ತಡ ಕೇಳಿ ಬರುತ್ತದೆ. ಎನ್ ಕೌಂಟರ್ ಮಾಡಲು ಬರುವ ಸ್ಪೆಷೆಲ್ ಅಧಿಕಾರಿಯಾಗಿ ಇಲ್ಲಿ ರಜಿನಿ ಎಂಟ್ರಿ ಆಗುತ್ತಾರೆ. ಎನ್ ಕೌಂಟರ್ ಮಾಡಲು ಹೋಗುವ ರಜಿನಿಗೆ ಕೃತ್ಯದ ಹಿಂದೆ ಕಾಣದ ಕೈಗಳು ಇರುವುದು ಗೊತ್ತಾಗುತ್ತದೆ. ಇದೇ ಅಂಶವನ್ನು ಇಟ್ಟುಕೊಂಡು ಟ್ರೇಲರ್ ನ್ನು ಕುತೂಹಲ ಹುಟ್ಟುವಂತೆ ತೋರಿಸಲಾಗಿದೆ.
ಸರ್ಕಾರಿ ಅಧಿಕಾರಿಯಾಗಿ ಅಮಿತಾಭ್ ಬಚ್ಚನ್ (Amitabh Bachchan) ಅವರು ಇಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ನ್ಯಾಯಾಧೀಶರಂತೆ ಕಾಣುತ್ತದೆ.ಇನ್ನು ರಾಣಾ ದಗ್ಗುಬಾಟಿ (Rana Daggubati) ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಫಾಹದ್ ಫಾಸಿಲ್ (Fahadh Faasil) ಅವರ ಪಾತ್ರ ಗಮನ ಸೆಳೆದಿದ್ದು, ಕುತೂಹಲಕಾರಿ ಆಗಿ ಮೂಡಿಬಂದಿದೆ.
ರಜಿನಿ ಇಲ್ಲಿ ಪೊಲೀಸ್ ಅಧಿಕಾರಿಯಾಗಿ, ಮಾಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ಮಾಫಿಯಾ ಸುತ್ತ ಸಾಗುವ ಕಥೆ ಎನ್ನುವುದು ಟ್ರೇಲರ್ ನೋಡಿದಾಗ ಮೇಲ್ನೊಟಕ್ಕೆ ಗೊತ್ತಾಗುತ್ತದೆ.
ಟಿ.ಜೆ. ಜ್ಞಾನವೇಲ್ (T.J. Gnanavel) ನಿರ್ದೇಶನದ ʼವೆಟ್ಟೈಯನ್ʼ ಇದೇ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ. ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್ನಿಂದ ʼಯುಎʼ ಸರ್ಟಿಫಿಕೇಟ್ ಸಿಕ್ಕಿದೆ.
ರಜಿನಿಕಾಂತ್, ಅಮಿತಾಬ್ ಬಚ್ಚನ್, ಫಾಹದ್ ಫಾಸಿಲ್, ರಾಣಾ ದಗ್ಗುಬಾಟಿ ಜತೆ ಸಿನಿಮಾದಲ್ಲಿ ಮಂಜು ವಾರಿಯರ್, ಕಿಶೋರ್, ರಿತಿಕಾ ಸಿಂಗ್, ದುಷಾರ ವಿಜಯನ್, ಜಿಎಂ ಸುಂದರ್, ಅಭಿರಾಮಿ, ರೋಹಿಣಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ
Thalapathy 69: ದಳಪತಿ ವಿಜಯ್ 69ನೇ ಸಿನಿಮಾಕ್ಕೆ ನಾಯಕಿಯಾದ ಕರಾವಳಿ ಬೆಡಗಿ
Kollywood: ಮೂವರು ಗಂಡಂದಿರಿಗೆ ವಿಚ್ಚೇದನ ಕೊಟ್ಟು 4ನೇ ಮದುವೆಗೆ ಸಜ್ಜಾದ ಖ್ಯಾತ ನಟಿ
Me Too: ಕೇರಳದಲ್ಲಿ ಮತ್ತೊಬ್ಬ ನಟನ ವಿರುದ್ಧ ಮೀ ಟೂ ಪ್ರಕರಣ!
Kantara: Chapter 1: ʼಕಾಂತಾರ-1ʼನಲ್ಲಿ ರಿಷಬ್ ತಂದೆ ಪಾತ್ರದಲ್ಲಿ ಮೋಹನ್ ಲಾಲ್?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Gangavathi: ಭಾರೀ ಗಾಳಿ, ಮಳೆಗೆ ಧರೆಗುರುಳಿದ ಮರಗಳು; ಭತ್ತ, ಇತರ ಬೆಳೆಗಳಿಗೆ ಹಾನಿ
Holehonnuru: ನದಿಯಲ್ಲಿ ಮುಳುಗಿ ಯುವಕ ನೀರುಪಾಲು
ಹೊಳೆಹೊನ್ನೂರು: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು
MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ
ಸಮಂತಾ – ನಾಗ ಚೈತನ್ಯ ವಿಚ್ಛೇದನಕ್ಕೆ ಅವರೇ ಕಾರಣವಂತೆ… ಶಾಕಿಂಗ್ ಹೇಳಿಕೆ ನೀಡಿದ ಸಚಿವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.