ರಜಿನಿ ಬಗ್ಗೆ 50 ಗಂಟೆ ಕಾಲ ನಾನ್‌ ಸ್ಟಾಪ್‌ ಲೈವ್‌ ಪಾಡ್‌ ಕಾಸ್ಟ್ ಮಾಡಿ ಗಿನ್ನಿಸ್ ದಾಖಲೆ


Team Udayavani, Sep 9, 2024, 11:11 AM IST

ರಜಿನಿ ಬಗ್ಗೆ 50 ಗಂಟೆ ಕಾಲ ನಾನ್‌ ಸ್ಟಾಪ್‌ ಲೈವ್‌ ಪಾಡ್‌ ಕಾಸ್ಟ್ ಮಾಡಿ ಗಿನ್ನಿಸ್ ದಾಖಲೆ

ಚೆನ್ನೈ: ಭಾರತೀಯ ಸಿನಿಮಾರಂಗದ ದಿಗ್ಗಜ, ಕಾಲಿವುಡ್‌ ಸೂಪರ್‌ ಸ್ಟಾರ್‌ ರಜಿನಿಕಾಂತ್‌ (Superstar Rajinikanth) ಚಿತ್ರರಂಗದಲ್ಲಿ 50 ವರ್ಷಗಳನ್ನು ಪೊರೈಸಿದ್ದಾರೆ.

ಇಂದು ಸ್ಟಾರ್‌ ನಟನಾಗಿರುವ ಹಾಗೂ ನಟರಾಗುವತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಿರುವ ಎಷ್ಟೋ ಕಲಾವಿದರು ರಜಿನಿಕಾಂತ್‌ ಅವರನ್ನು ಗುರುವಿನ ಸ್ಥಾನದಲ್ಲಿ ನೋಡುತ್ತಾರೆ. ರಜಿನಿಕಾಂತ್‌ ಅವರಿಗೆ ಅಭಿಮಾನಿಗಳ ದೊಡ್ಡ ವರ್ಗವೇ ಇದೆ. ಅವರ ಪ್ರೀತಿಗಾಗಿ ಇಲ್ಲೊಂದು ಯೂಟ್ಯೂಬ್‌ ಚಾನೆಲ್‌ 50 ಗಂಟೆಗಳ ಕಾಲ ನಾನ್‌ ಸ್ಟಾಪ್‌ ಲೈವ್‌ ಪಾಡ್‌ ಕಾಸ್ಟ್‌ ಮಾಡಿ ಗಿನ್ನಿಸ್ ದಾಖಲೆ ಬರೆದಿದೆ.

ಆರ್‌ಜೆ ವಿಘ್ನೇಶ್‌ ಕಾಂತ್ (RJ Vigneshkanth) ಮತ್ತು ಅರವಿಂದ್ ನಿರ್ವಹಿಸುವ ಬ್ಲ್ಯಾಕ್‌ಶೀಪ್ (Blacksheep YouTube channel)  ಎನ್ನುವ ತಮಿಳು ಯೂಟ್ಯೂಬ್‌ ಚಾನೆಲ್‌ ಇಂಥದ್ದೊಂದು ಪ್ರಯೋಗವನ್ನು ಮಾಡಿ ಸೈ ಎನ್ನಿಸಿಕೊಂಡಿದೆ.

ಈ ಪಾಡ್‌ ಕಾಸ್ಟ್ ಸೆಪ್ಟೆಂಬರ್ 6 ರಂದು ಚೆನ್ನೈನ ಅಂಪಾ ಸ್ಕೈಯೋನ್, ಅಮ್ಜಿಕ್ಕರೈನಲ್ಲಿ ಪ್ರಾರಂಭವಾಗಿ ಸೆಪ್ಟೆಂಬರ್ 8 ರಂದು ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಇದರಲ್ಲಿ ಚಿತ್ರರಂಗದ ಕೆಲ ನಿರ್ದೇಶಕರು, ನಟರು ಮತ್ತು ಅವರ ರಜಿನಿಕಾಂತ್‌ ಅವರ ಅಭಿಮಾನಿಗಳು ಸೇರಿ ತನ್ನ ನೆಚ್ಚಿನ ಸೂಪರ್‌ ಸ್ಟಾರ್‌ ಬಗ್ಗೆ 50 ಗಂಟೆಗಳ ಮಾತನಾಡಿದ್ದಾರೆ.

50-ಗಂಟೆಗಳ ತಡೆರಹಿತ ಲೈವ್ ಪಾಡ್‌ಕಾಸ್ಟ್ ಮಾಡಿರುವುದಕ್ಕಾಗಿ ವಿಘ್ನೇಶ್‌ ಕಾಂತ್‌ ಮತ್ತು ಅವರ ತಂಡ  ಗಿನ್ನಿಸ್ ದಾಖಲೆಯನ್ನು ಬರೆದಿದೆ.

ನಟ-ನಿರ್ದೇಶಕ ಶಶಿಕುಮಾರ್ ವಿಘ್ನೇಶ್ ಕಾಂತ್ ಅವರಿಗೆ ಗಿನ್ನಿಸ್ ದಾಖಲೆ ಪತ್ರವನ್ನು ಹಸ್ತಾಂತರಿಸಿದ್ದಾರೆ.

ʼಸೂಪರ್‌ ಸ್ಟಾರ್‌ ಗೆ ಸೆಲ್ಯೂಟ್‌ʼ ಎನ್ನುವ ಟೈಟಲ್‌ ನಲ್ಲಿ ಪಾಡ್‌ ಕಾಸ್ಟ್ ನಡೆಸಲಾಗಿದೆ. ಈ ಪಾಡ್‌ ಕಾಸ್ಟ್‌ ಶೀಘ್ರದಲ್ಲಿ ಬ್ಲ್ಯಾಕ್‌ ಶೀಪ್‌ ಯೂಟ್ಯೂಬ್‌ ಹಾಗೂ ಓಟಿಟಿಯಲ್ಲಿ ಪ್ರಸಾರವಾಗಲಿದೆ.

ರಜಿನಿಕಾಂತ್‌ ಕುರಿತು 50 ಗಂಟೆಗಳ ಕಾಲ ಪಾಡ್‌ ಕಾಸ್ಟ್‌ ಮಾಡಿ ಗಿನ್ನಿಸ್ ದಾಖಲೆ ಪತ್ರವನ್ನು ಪಡೆದ ವಿಘ್ನೇಶ್‌ ಕಾಂತ್‌ ಅವರಿಗೆ ರಜಿನಿಕಾಂತ್‌ ಅವರು ಸ್ವತಃ ವಾಯ್ಸ್‌ ನೋಟ್‌ ಕಳುಹಿಸಿ ಅಭಿನಂದನೆ ಸಲ್ಲಿಸಿದ್ದಾರೆ.

“ಹಲೋ ವಿಘ್ನೇಶ್, ನೀವು 50 ಗಂಟೆಗಳ ಕಾಲ ಜನರನ್ನು ಸಂದರ್ಶಿಸಿದ್ದೀರಿ, ನಿಮ್ಮನ್ನು ಹೇಗೆ ಪ್ರಶಂಸಿಸಬೇಕೆಂದು ನನಗೆ ತಿಳಿದಿಲ್ಲ. ಹ್ಯಾಟ್ಸ್ ಆಫ್, ಹ್ಯಾಟ್ಸ್ ಆಫ್. ನೀನು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಏನು ಕೊಡಬೇಕೆಂದು ತಿಳಿಯುತ್ತಿಲ್ಲ. ನಾನು ನಿಮಗೆ ಬಹಳಷ್ಟು ಪ್ರೀತಿಯಿಂದ ನಮಸ್ಕರಿಸುತ್ತೇನೆ. ನಿಮ್ಮ Blacksheep ಚಾನಲ್‌ಗೆ ಅಭಿನಂದನೆಗಳು. ನಿಮಗೂ ನನ್ನ ಶುಭಾಶಯಗಳು. ದಯವಿಟ್ಟು ನಿಮ್ಮನ್ನು ಹೆಚ್ಚು ಆಯಾಸಗೊಳಿಸಬೇಡಿ. ಕಾಳಜಿ ವಹಿಸಿ. ದೇವರ ಆಶೀರ್ವಾದ ಇರಲಿ. ಲವ್‌ ಯೂ” ಎಂದು ರಜಿನಿ ವಾಯ್ಸ್‌ ನೋಟ್‌ ಕಳುಹಿಸಿದ್ದಾರೆ.

ಸದ್ಯ ರಜಿನಿಕಾಂತ್‌ ಅವರ ʼವೆಟ್ಟೈಯಾನ್ʼ ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಅಕ್ಟೋಬರ್ 10 ರಂದು ರಿಲೀಸ್‌ ಆಗಲಿದೆ. ಇದಾದ ಬಳಿಕ ಅವರು, ಲೋಕೇಶ್‌ ಕನಕರಾಜ್‌ ಅವರ ʼಕೂಲಿʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

Bengaluru: ಪೊಲೀಸ್‌ ಬಾತ್ಮೀದಾರನ ಬೆತ್ತಲೆಗೊಳಿಸಿ ಹಲ್ಲೆ; ಆರೋಪಿ ಕಾಲಿಗೆ ಗುಂಡೇಟು

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುವ ರೈತರಿಗೆ ಪೊಲೀಸ್ ಬ್ರೆಕ್

ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಲು ಸಿಎಂ ಬಳಿ ಬರುತ್ತಿದ್ದ ರೈತರಿಗೆ ಪೊಲೀಸ್ ಬ್ರೇಕ್

ಕಲ್ಯಾಣ ಕರ್ನಾಟಕ ಉತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ತಳಿಗೆ ಸಿಎಂ ಮಾಲಾರ್ಪಣೆ

Kalaburagi: ಕಲ್ಯಾಣ ಕರ್ನಾಟಕ ಉತ್ಸವ… ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

3

Bantwal: ಬಿ.ಸಿ.ರೋಡು ಪ್ರಕರಣ; ಎರಡು ಪ್ರತ್ಯೇಕ ಪ್ರಕರಣ ದಾಖಲು

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ

Heart Attack: ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ತಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

Dhoom 4: ಬಾಲಿವುಡ್ ʼಧೂಮ್-4‌ʼ‌ ನಲ್ಲಿ ಸೌತ್‌ ಸ್ಟಾರ್‌ ಸೂರ್ಯ ವಿಲನ್?‌

‌Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್

‌Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

OTT Release: ಚಿಯಾನ್‌ ವಿಕ್ರಮ್ ʼತಂಗಲಾನ್ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release: ಚಿಯಾನ್‌ ವಿಕ್ರಮ್ ʼತಂಗಲಾನ್ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

D.K.Shivakumar: ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ… ಖಾಸಗಿ ಪ್ರವಾಸ ಅಷ್ಟೇ: ಡಿಕೆಶಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

Chithrakoota Ayurveda: ಚಿತ್ರಕೂಟ ಚಿಕಿತ್ಸಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ

8

Bhairadevi Movie: ಭೈರಾದೇವಿಯಾಗಿ ರಾಧಿಕಾ ಎಂಟ್ರಿ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

Crime: ನಡುರಸ್ತೆಯಲ್ಲೇ ಪೇಂಟರ್‌ ಕೊಲೆ

6

Crime: ಏಕಮುಖ ರಸ್ತೆಯಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಕಾರು ಚಾಲಕನಿಗೆ ಧಮ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.