ದಸರಾ ಹಬ್ಬಕ್ಕೆ ಪ್ಯಾನ್ ಇಂಡಿಯಾ ಫೈಟ್: ʼಮಾರ್ಟಿನ್ʼಗೆ ರಜಿನಿ, ಜೂ.NTR ಸಿನಿಮಾ ಟಕ್ಕರ್
Team Udayavani, Jun 3, 2024, 2:29 PM IST
ಚೆನ್ನೈ/ ಬೆಂಗಳೂರು: ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಗೆ ವರ್ಷದ ದ್ವಿತೀರಯಾರ್ಧ ಕಾಯುತ್ತಿದೆ. ಒಂದೊಂದೆ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದೆ.
ಐಪಿಎಲ್, ಎಲೆಕ್ಷನ್ ನಲ್ಲಿ ಶಾಂತವಾಗಿದ್ದ ಚಿತ್ರರಂಗ ಎಲ್ಲ ಮುಗಿಯುತ್ತಿದ್ದಂತೆ ಒಂದರ ಮೇಲೊಂದು ಸಿನಿಮಾಗಳ ರಿಲೀಸ್ ಗೆ ಸಿದ್ದವಾಗುತ್ತಿದೆ. ಹಬ್ಬಗಳ ಸೀಸನ್ ಬಹುತೇಕ ಸಿನಿಮಾಗಳ ರಿಲೀಸ್ ಗೆ ಆಯಾ ಚಿತ್ರತಂಡ ಪ್ಲ್ಯಾನ್ ಹಾಕಿಕೊಳ್ಳುತ್ತಿದೆ.
ಟಾಲಿವುಡ್ ನತ್ತ ಗಮನ ಹರಿಸಿದರೆ ಜೂ.ಎನ್ ಟಿಆರ್ ಅವರ ಪ್ಯಾನ್ ಇಂಡಿಯಾ ʼದೇವರ -1ʼ ರಿಲೀಸ್ ಈಗಾಗಲೇ ರಿಲೀಸ್ ಡೇಟ್ ಲಾಕ್ ಆಗಿದೆ. ಅಕ್ಟೋಬರ್ 10 ರಂದು ಬಹು ನಿರೀಕ್ಷಿತ ʼದೇವರ-1ʼ ಆಗಲಿದೆ.
ಇನ್ನು ಕನ್ನಡದಲ್ಲಿ ಧ್ರುವ ಸರ್ಜಾ ಅವರ ದುಬಾರಿ ಪ್ಯಾನ್ ಇಂಡಿಯಾ ʼಮಾರ್ಟಿನ್ʼ ಅಕ್ಟೋಬರ್ 10 ರಂದೇ ಅಂದರೆ ದಸರಾ ಹಬ್ಬದ ಸಂದರ್ಭದಲ್ಲಿ ರಿಲೀಸ್ ಮಾಡುವುದಾಗಿ ಈಗಾಗಲೇ ಅನೌನ್ಸ್ ಮಾಡಲಾಗಿದೆ.
ʼಅದ್ಧೂರಿʼ ಬಳಿಕ ಎಪಿ ಅರ್ಜುನ್ ಬಳಿಕ ಧ್ರುವ ಸರ್ಜಾ ಮತ್ತೆ ಕೈಜೋಡಿಸಿದ್ದು, ಈ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಆದರೆ ಈ ನಡುವೆ ಸೂಪರ್ ಸ್ಟಾರ್ ರಜಿನಿಕಾಂತ್ ಕೂಡ ತಮ್ಮʼವಟ್ಟೆಯಾನ್ʼ ಸಿನಿಮಾ ಅಕ್ಟೋಬರ್ 10 ರ ವೇಳೆ ರಿಲೀಸ್ ಆಗುವುದಾಗಿ ಅನೌನ್ಸ್ ಮಾಡಿದ್ದು, ಆ ಮೂಲಕ ಪ್ಯಾನ್ ಇಂಡಿಯಾದಲ್ಲಿ ಬಾಕ್ಸ್ ಆಫೀಸ್ ದಂಗಾಲ್ ಸಾಧ್ಯತೆಯಿದೆ.
ಸದ್ಯ ರಜಿನಿಕಾಂತ್ ಹಿಮಾಯಲಯಕ್ಕೆ ಆಧ್ಯಾತ್ಮಿಕ ಪ್ರವಾಸದಲ್ಲಿದ್ದು, ಅಲ್ಲಿ ತಮ್ಮ ಸಿನಿಮಾಗಳ ಬಗ್ಗೆ ಅವರು ಮಾತನಾಡಿದ್ದಾರೆ.
“ವಟ್ಟೆಯಾನ್ ಸಿನಿಮಾದಲ್ಲಿ ನಟಿಸಿದ್ದೇನೆ, ಈ ಸಿನಿಮಾ ದಸರಾ ಹಬ್ಬದ ಸಂದರ್ಭದಲ್ಲಿ ರಿಲೀಸ್ ಆಗುತ್ತಿದೆ. ನನ್ನ ಪಾತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ. ಕೆಲ ಕಲಾವಿದರ ಪಾತ್ರದ ಶೂಟಿಂಗ್ ಬಾಕಿಯಿದೆʼ ಅಕ್ಟೋಬರ್ 10 ರಂದು ಸಿನಿಮಾ ರಿಲೀಸ್ ಆಗಲಿದೆ” ಎಂದು ರಜಿನಿ ಹೇಳಿದ್ದಾರೆ.
ʼವೆಟ್ಟೆಯಾನ್ʼ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಇತ್ತ ಜೂ.ಎನ್ ಟಿಆರ್ ಅವರ ʼದೇವರ-1ʼ ರಿಲೀಸ್ ಡೇಟ್ ಮುಂದೂಡಿಕೆ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಇನ್ನು ಅಧಿಕೃತವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼದೇವರʼ ಸಿನಿಮಾ ನೋಡುತ್ತಿರುವಾಗ ಥಿಯೇಟರ್ನಲ್ಲೇ ಕುಸಿದು ಬಿದ್ದು ಮೃತಪಟ್ಟ Jr NTR ಅಭಿಮಾನಿ
Devara: ಹೇಗಿದೆ ಜೂ.ಎನ್ಟಿಆರ್ ʼದೇವರʼ?: ನಿರೀಕ್ಷೆ-ನಿರಾಶೆ..ಪ್ರೇಕ್ಷಕರ ಅಭಿಪ್ರಾಯವೇನು?
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ
ಶಂಕರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
MUDA; ಅವರು-ಇವರು ಕಳ್ಳರು ಎನ್ನೋದು ಬೇಡ, ರಾಜೀನಾಮೆ ಕೊಟ್ಟು ನೀವು ಸ್ವಚ್ಛವಾಗಿರಿ: ಯತ್ನಾಳ್
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ
Haryana: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 3 ಮೃತ್ಯು, 7 ಮಂದಿಗೆ ಗಾಯ
World Rabies Day 2024: ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ತಿಳಿವಳಿಕೆ ಕೊರತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.