Salaar vs Dunki:‌ ದಕ್ಷಿಣದ ಪ್ರಮುಖ ಮಲ್ಟಿಪ್ಲೆಕ್ಸ್‌ನಲ್ಲಿ ʼಸಲಾರ್‌ʼ ರಿಲೀಸ್‌ ಇಲ್ಲ?ಕಾರಣ

Salaar - Dunki ಸ್ಕ್ರೀನಿಂಗ್‌ ವಾರ್ ಗೆ ಕಾರಣವೇನು?

Team Udayavani, Dec 20, 2023, 6:09 PM IST

Salaar vs Dunki:‌ ದಕ್ಷಿಣದ ಪ್ರಮುಖ ಮಲ್ಟಿಪ್ಲೆಕ್ಸ್‌ನಲ್ಲಿ ʼಸಲಾರ್‌ʼ ರಿಲೀಸ್‌ ಇಲ್ಲ?ಕಾರಣ

ಹೈದರಾಬಾದ್/ಮುಂಬಯಿ: ಭಾರತದ ಸಿನಿರಂಗದಲ್ಲಿ ವರ್ಷಾಂತ್ಯಕ್ಕೆ ದೊಡ್ಡ ಸಿನಿಮಾಗಳು ರಿಲೀಸ್‌ ಆಗಲಿವೆ. ʼಡಂಕಿʼ, ಸಲಾರ್‌ʼ ರಿಲೀಸ್‌ ನಿಂದಾಗಿ ನಾರ್ತ್‌ – ಸೌತ್‌ ಬಾಕ್ಸ್‌ ಆಫೀಸ್‌ ದಂಗಲ್‌ ಗೆ ಕ್ಷಣಗಣನೆ ಆರಂಭವಾಗಿದೆ.

ಈಗಾಗಲೇ ಎರಡೂ ಸಿನಿಮಾಗಳ ಅಡ್ವಾನ್ಸ್‌ ಬುಕಿಂಗ್‌ ಆರಂಭಗೊಂಡಿದೆ. ಇದರಲ್ಲೂ ತೀವ್ರ ಪೈಪೋಟಿ ಉಂಟಾಗಿದೆ. ದಕ್ಷಿಣ ಭಾರತ ಮಾತ್ರವಲ್ಲದೆ ಪ್ರಭಾಸ್‌ ಅವರ ʼಸಲಾರ್‌ʼ ಉತ್ತರ ಭಾರತದಲ್ಲೂ ಭಾರೀ ಬೇಡಿಕೆ ಎದುರಾಗಿದೆ. ಮುಂಗಡವಾಗಿ  6 ಲಕ್ಷ ಟಿಕೆಟ್‌ ಮಾರಾಟವಾಗುವ ಮೂಲಕ 13.70 ಕೋಟಿಯ ಗಳಿಕೆಯನ್ನು ʼಸಲಾರ್‌ʼ ಗಳಿಸಿದೆ.

ಇನ್ನೊಂದೆಡೆ ಶಾರುಖ್‌ ಖಾನ್‌ ಅವರ ʼಡಂಕಿʼ ಸಿನಿಮಾದ ಟಿಕೆಟ್‌ ಗೂ ಭಾರೀ ಬೇಡಿಕೆಯಿದೆ. ಪ್ಯಾನ್‌ ಇಂಡಿಯಾ ರಿಲೀಸ್‌ ಅಲ್ಲದಿದ್ರು, ದಕ್ಷಿಣದ ಕೆಲವೆಡೆ ʼಡಂಕಿʼಯ ಟಿಕೆಟ್‌ ಗೆ ಬೇಡಿಕೆಯಿದೆ. ಆದರೆ ಇದೀಗ ʼಸಲಾರ್‌ʼ , ʼಡಂಕಿʼ ನಡುವೆ ಸ್ಕ್ರೀನಿಂಗ್‌ ವಿಚಾರದಲ್ಲಿ ಜಟಾಪಟಿ ಉಂಟಾಗಿದೆ ಎನ್ನಲಾಗಿದೆ.

ಉತ್ತರ ಭಾರತದಲ್ಲಿ ʼಸಲಾರ್‌ʼ ಸಿನಿಮಾಕ್ಕೆ ಬೇಡಿಕೆ ಹೆಚ್ಚಾಗಿದೆ. ಆದರೆ ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಚೈನ್ಸ್‌ (ಪಿವಿಆರ್‌, ಐನಾಕ್ಸ್)‌ ಗಳಲ್ಲಿ ʼಸಲಾರ್‌ʼ ಸಿನಿಮಾಕ್ಕೆ ಹೆಚ್ಚಿನ ಸ್ಕ್ರೀನ್‌ ಗಳನ್ನು ನೀಡದೆ ಬಹುತೇಕ ಸ್ಕ್ರೀನ್ಸ್‌ ಗಳನ್ನು ʼಡಂಕಿʼ ಸಿನಿಮಾಕ್ಕೆ ಮೀಸಲಿಟ್ಟಿದೆ. ಇದರಿಂದ ಹೊಂಬಾಳೆ ಫಿಲ್ಮ್ಸ್‌ ʼಸಲಾರ್‌ʼ ಸಿನಿಮಾವನ್ನು ದಕ್ಷಿಣದ ರಾಜ್ಯದಲ್ಲಿರುವ ಪಿವಿಆರ್‌, ಐನಾಕ್ಸ್ ಮತ್ತು ಮೀರಜ್ ಮಲ್ಟಿಪ್ಲೆಕ್ಸ್‌ ಗಳಲ್ಲಿ ರಿಲೀಸ್‌ ಮಾಡದಿರಲು ನಿರ್ಧರಿಸಿದೆ. ಈಗಾಗಲೇ ನಿಗದಿಗೊಳಿಸಿದ ಸ್ಕ್ರೀನ್ಸ್‌ ಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಮುಂಬಯಿ ಪಿವಿಆರ್‌, ಐನಾಕ್ಸ್ ನಲ್ಲಿ ʼಡಂಕಿʼ ಗೆ ಸಿನಿಮಾಕ್ಕೆ ಎಲ್ಲ ಶೋ ಟೈಮ್‌ ಗಳನ್ನು ನೀಡಲಾಗಿದೆ. ಆದರೆ ʼಸಲಾರ್‌ʼ ಗೆ ಯಾವುದೇ ಸ್ಲಾಟ್‌ ನ್ನು ನೀಡಿಲ್ಲ ಎನ್ನಲಾಗಿದೆ. ಈ ಕಾರಣದಿಂದ ʼಸಲಾರ್‌ʼ ಸಿನಿಮಾವನ್ನು ದಕ್ಷಿಣದ ಪ್ರಮುಖ ಮಲ್ಟಿಪ್ಲೆಕ್ಸ್‌ ಗಳಲ್ಲಿ ರಿಲೀಸ್‌ ಮಾಡದಿರಲು ನಿರ್ಧರಿಸಿದೆ ಎನ್ನಲಾಗಿದೆ. ಇದರ ಬಗ್ಗೆ ಚರ್ಚಿಸಿ‌ ಸಮಸ್ಯೆ ಬಗೆಹರಿದರೆ ಮಾತ್ರ ʼಸಲಾರ್‌ʼ ದಕ್ಷಿಣದ ಪ್ರಮುಖ ಮಲ್ಟಿಪ್ಲೆಕ್ಸ್‌ ನಲ್ಲಿ ರಿಲೀಸ್‌ ಆಗಬಹುದೆಂದು ವರದಿ ತಿಳಿಸಿದೆ.

ಹೊಂಬಾಳೆ ಪ್ರೊಡಕ್ಷನ್ಸ್, ಶಾರುಖ್‌ ಅವರ ರೆಡ್ ಚಿಲ್ಲಿಸ್ ಮತ್ತು ಮಲ್ಟಿಪ್ಲೆಕ್ಸ್‌ಗಳು ಮತ್ತು ಸಿಂಗಲ್ ಸ್ಕ್ರೀನ್‌ಗಳು ಕಳೆದ ವಾರದಲ್ಲಿ ಪರಸ್ಪರ ಮಾತುಕತೆ ನಡೆಸಿದ್ದರು. ʼಸಲಾರ್‌ʼ ನಿರ್ಮಾಪಕರು ಶಾರುಖ್‌ ಅವರನ್ನು ಭೇಟಿಯಾಗಿ, ಎರಡೂ ಸಿನಿಮಾಗಳು 50-50 ಸ್ಕ್ರೀನಿಂಗ್ ಹಕ್ಕುಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಒಮ್ಮತದ ಒಪ್ಪಂದವನ್ನು ಮಾಡಿಕೊಂಡಿದ್ದರು. ಆದರೆ ಆ ಒಪ್ಪಂದ ಪಾಲನೆಯಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

ಶಿವ ಶಿವ ಎಂದ ʼಕಣ್ಣಪ್ಪʼ

Kannappa Movie: ಶಿವ ಶಿವ ಎಂದ ʼಕಣ್ಣಪ್ಪʼ

2-maharaja

Maharaja: 2 ಭಾಗಗಳಲ್ಲಿ ರಾಜಮೌಳಿಯ ಮಹಾರಾಜ ಸಿನಿಮಾ?

Chiranjeevi: ಸಕ್ರಿಯ ರಾಜಕಾರಣಕ್ಕೆ ಮರಳಲ್ಲ, ಸಿನಿಮಾಗಷ್ಟೇ ಸೀಮಿತ: ನಟ ಚಿರಂಜೀವಿ

Chiranjeevi: ಸಕ್ರಿಯ ರಾಜಕಾರಣಕ್ಕೆ ಮರಳಲ್ಲ, ಸಿನಿಮಾಗಷ್ಟೇ ಸೀಮಿತ: ನಟ ಚಿರಂಜೀವಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.