ಶಂಕರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ; 2 ದಶಕದ ಬಳಿಕ ಜತೆಯಾಗಲಿದ್ದಾರೆ ಸೂರ್ಯ- ವಿಕ್ರಮ್
Team Udayavani, Sep 26, 2024, 2:48 PM IST
ಚೆನ್ನೈ: ಕಾಲಿವುಡ್ (Kollywood) ಸಿನಿರಂಗದ ಇಬ್ಬರು ಸೂಪರ್ ಸ್ಟಾರ್ಗಳನ್ನು ಇಟ್ಟುಕೊಂಡು ಖ್ಯಾತ ನಿರ್ದೇಶಕ ಶಂಕರ್ (Shankar) ಅವರು ಐತಿಹಾಸಿಕ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ.
ಕಾಲಿವುಡ್ನಲ್ಲಿʼಇಂಡಿಯನ್ʼ, ʼಅಣ್ಣಿಯನ್ʼ, ʼಎಂದಿರನ್ʼ, ʼಐʼ, ʼ2.0ʼ ನಂತಹ ಬಿಗ್ ಬಜೆಟ್ ಹಾಗೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ದಿಗ್ಗಜ ನಿರ್ದೇಶಕ ಶಂಕರ್ ಇಬ್ಬರು ಸೌತ್ ಸೂಪರ್ ಸ್ಟಾರ್ ಗಳೊಂದಿಗೆ ದೊಡ್ಡ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ‘Stree 2’ OTT release: ಓಟಿಟಿಗೆ ಬಂತು ಸೂಪರ್ ಹಿಟ್ ʼಸ್ತ್ರೀ-2ʼ; ಎಲ್ಲಿ ನೋಡಬಹುದು?
ಶಂಕರ್ ತನ್ನ ಕಥೆಯನ್ನು ಹೇಳುವ ರೀತಿಯೇ ಭಿನ್ನವಾಗಿರುತ್ತದೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲೂ ಕಮಾಲ್ ಮಾಡುತ್ತವೆ. ಕಾಲಿವುಡ್ ದಿಗ್ಗಜ ನಟರೊಂದಿಗೆ ಸಿನಿಮಾ ಮಾಡಿರುವ ಶಂಕರ್ ನಟ ಸೂರ್ಯ(Suriya)- ವಿಕ್ರಮ್(Vikram) ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ ಎಂದು ಕಾಲಿವುಡ್ ವಲಯದಲ್ಲಿ ಸುದ್ದಿ ಹರಿದಾಡಿದೆ.
ಇದೊಂದು ಐತಿಹಾಸಿಕ ಸಿನಿಮಾವಾಗಲಿದ್ದು, ʼವೇಲ್ಪಾರಿʼ (Velpari novel) ಎನ್ನುವ ಕಾದಂಬರಿಯ ಕಥೆಯನ್ನು ಒಳಗೊಳ್ಳಲಿದೆ ಎಂದು ವರದಿಯಾಗಿದೆ. ಇಬ್ಬರು ಸೂಪರ್ ಸ್ಟಾರ್ ಗಳನ್ನು ಜತೆಯಾಗಿಸಿಕೊಂಡು ಐತಿಹಾಸಿಕ ಕಥೆಯನ್ನು ದೃಶ್ಯಗಳ ಮೂಲಕ ಶಂಕರ್ ಕಟ್ಟಿಕೊಡಲಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಾಜೆಕ್ಟ್ ಸೆಟ್ಟೇರಿದರೆ , ʼಅಣ್ಣಿಯನ್ʼ, ʼಐʼ ಬಳಿಕ ವಿಕ್ರಮ್ ಜತೆಗಿನ ಶಂಕರ್ ಅವರ ಮೂರನೇ ಪ್ರಾಜೆಕ್ಟ್ ಇದಾಗಿರಲಿದೆ. ಇನ್ನು ಶಂಕರ್ ಸೂರ್ಯ ಅವರ ಜತೆ ಮಾಡುವ ಮೊದಲ ಪ್ರಾಜೆಕ್ಟ್ ಇದಾಗಿರಲಿದೆ.
ಸೂರ್ಯ ಹಾಗೂ ವಿಕ್ರಮ್ ಈ ಹಿಂದೆ 2003ರಲ್ಲಿ ಬಂದ ಬಾಲ (Director Bala) ನಿರ್ದೇಶನದ ʼಪಿತಾಮಗನ್ʼ (Pithamagan) ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು. ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಸದ್ಯ ಶಂಕರ್ ʼಇಂಡಿಯನ್ -2ʼ ಬಳಿಕ ರಾಮ್ ಚರಣ್ ಅವರ ʼಗೇಮ್ ಚೇಂಜರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಸೂರ್ಯ ಅವರ ʼಕಂಗುವʼ ರಿಲೀಸ್ಗೆ ರೆಡಿಯಾಗಿದೆ. ವಿಕ್ರಮ್ ʼತಂಗಲಾನ್ʼ ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದಾರೆ.
ಇತ್ತೀಚೆಗೆ ನಿರ್ದೇಶಕ ಶಂಕರ್ ʼವೇಲ್ಪಾರಿʼ ಕಾದಂಬರಿಯ ಕಥೆಯ ಹಕ್ಕು ನನ್ನ ಬಳಿಯಿದೆ ಎಂದು ಬೇರೆ ಸಿನಿಮಾ ಅದೇ ರೀತಿಯ ಕಥೆಯನ್ನು ಆಳವಡಿಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ಪರೋಕ್ಷವಾಗಿ ʼದೇವರʼ ಸಿನಿಮಾಕ್ಕೆ ಅವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spirit Movie: ಪ್ರಭಾಸ್ ʼಸ್ಪಿರಿಟ್ʼನಲ್ಲಿ ಖಡಕ್ ವಿಲನ್ ಆಗಲಿದ್ದಾರೆ ಈ ಬಿಟೌನ್ ದಂಪತಿ
Actor Siddique: ಬಂಧನದ ಭೀತಿಯಿಂದ ತಲೆಮರೆಸಿಕೊಂಡ ನಟ ಸಿದ್ದೀಕ್: ಲುಕೌಟ್ ನೋಟಿಸ್ ಜಾರಿ
Pushpa 2: ಅಲ್ಲು ಅರ್ಜುನ್ ʼಪುಷ್ಪ-2ʼನಿಂದ ಖ್ಯಾತ ನಟಿ ಔಟ್
Harsha Sai: ಅತ್ಯಾಚಾರ, ವಂಚನೆ ಆರೋಪ; ಖ್ಯಾತ ಯೂಟ್ಯೂಬರ್ ಹರ್ಷ ಸಾಯಿ ವಿರುದ್ಧ ದೂರು ದಾಖಲು
Jayam Ravi: ಜಯಂ ರವಿಯನ್ನು ಮನೆಯಿಂದ ಹೊರಹಾಕಿದ ಮಾಜಿ ಪತ್ನಿ; ಪೊಲೀಸರ ಮೊರೆ ಹೋದ ನಟ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.