Video: ರಾಮ್‌ಚರಣ್‌ಗೆ ʼಇಡ್ಲಿ ವಡಾʼ ಎಂದಿದ್ದಕ್ಕೆ ಶಾರುಖ್‌ ಮೇಲೆ ಗರಂ ಆದ ಫ್ಯಾನ್ಸ್


Team Udayavani, Mar 5, 2024, 12:22 PM IST

Video: ರಾಮ್‌ಚರಣ್‌ಗೆ ʼಇಡ್ಲಿ ವಡಾʼ ಎಂದಿದ್ದಕ್ಕೆ ಶಾರುಖ್‌ ಮೇಲೆ ಗರಂ ಆದ ಫ್ಯಾನ್ಸ್

ಹೈದರಾಬಾದ್: ಜಾಮ್‌ ನಗರದಲ್ಲಿ ಅಂಬಾನಿ ಪುತ್ರ ಅನಂತ್‌ ಅವರ ಪ್ರೀ ವೆಡ್ಡಿಂಗ್‌ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಈ ಸಮಾರಂಭದಲ್ಲಿ ದೇಶ – ವಿದೇಶದ ಖ್ಯಾತ ಸೆಲೆಬ್ರಿಟಿಗಳು ಭಾಗಿಯಾಗಿ ಸಾಂಸ್ಕೃತಿಕ ಸಂಜೆಗೆ ಮೆರುಗು ನೀಡಿದ್ದಾರೆ.

ಇಡೀ ಸಮಾರಂಭದಲ್ಲಿ ಸದ್ದು ಮಾಡಿದ್ದು ಪಾಪ್‌ ಗಾಯಕಿ ರಿಹಾನಾ ಅವರ ಕಾರ್ಯಕ್ರಮ ಹಾಗೂ ಬಿಟೌನ್‌ ಖಾನ್‌ ಗಳ ʼನಾಟು ನಾಟುʼ ನೃತ್ಯ. ʼನಾಟು ನಾಟುʼ ಹಾಡಿಗೆ ಶಾರುಖ್‌ ಖಾನ್‌, ಸಲ್ಮಾನ್‌ ಹಾಗೂ ಆಮಿರ್‌ ಖಾನ್‌ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಶಾರುಖ್‌ ಖಾನ್‌ ರಾಮ್‌ ಚರಣ್‌ ಅವರನ್ನು ವೇದಿಕೆಗೆ ಕರೆದಿದ್ದಾರೆ.

ಆದರೆ ರಾಮ್‌ ಚರಣ್‌ ಅವರನ್ನು ಶಾರುಖ್‌ ಖಾನ್‌ ವೇದಿಕೆಗೆ ಕರೆಯುವಾಗ ʼಇಡ್ಲಿ ವಡಾ ಎಲ್ಲಿದ್ದೀಯಾ ನೀನುʼ ಎಂದು ಕರೆದು ವೇದಿಕೆಗೆ ಆಹ್ವಾನಿಸಿದ್ದಾರೆ. ಇದು ಖ್ಯಾತ ನಟನಿಗೆ ಶಾರುಖ್‌ ಅವರು ತೋರಿಸಿದ ಅಗೌರವ ಎಂದು ರಾಮ್‌ ಚರಣ್‌ ಪತ್ನಿ ಉಪಸನಾ ಅವರು ಹೇಳಿದ್ದಾರೆ.

ರಾಮ್‌ ಚರಣ್‌ ಪತ್ನಿ ಉಪಾಸನಾಗೆ ಮೇಕಪ್ ಆರ್ಟಿಸ್ಟ್ ಆಗಿರುವ ಜೆಬಾ ಹಾಸನ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಮ್ ಚರಣ್ ಅವರನ್ನು ಶಾರುಖ್ ಖಾನ್ ಇಡ್ಲಿ ಸಾಂಬಾರ್ ಎಂದು ಕರೆದ ಬಳಿಕ ನಾನು ಹೊರ ನಡೆದೆ. ಇದು ರಾಮ್‌ ಚರಣ್‌ ಅವರಿಗೆ ತೋರಿಸಿದ ಅಗೌರವ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.  “ಶಾರುಖ್‌ ತಮಾಷೆಗಾಗಿ ಹೀಗೆ ಕರೆದರೂ, ಈ ರೀತಿ ಕರೆದಿರುವುದು ತಪ್ಪೆಂದು” ಒಬ್ಬರು ಬರೆದುಕೊಂಡಿದ್ದಾರೆ. ದಕ್ಷಿಣ ಭಾರತದ ಬಗ್ಗೆ ಶಾರುಖ್‌ ಅವರಿಗೆ ಎಂತಹ ಮನಸ್ಥಿತಿ ಇದೆ ಎಂದು ಇದರಲ್ಲೇ ಗೊತ್ತಾಗುತ್ತದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಆದರೆ ಶಾರುಖ್‌ ಖಾನ್‌ ಯಾರಿಗೂ ಅವಮಾನ ಮಾಡಿಲ್ಲ. ಅವರು ತನ್ನ ʼಒನ್‌ ಟು ಕಾ 4ʼ  ಸಿನಿಮಾದ ಡೈಲಾಗ್‌ ನ್ನು ಬದಲಾಯಿಸಿ ರಾಮ್‌ ಚರಣ್‌ ಅವರನ್ನು ಹಾಗೆಯೇ ಕರೆದಿದ್ದಾರೆ ಎಂದು ಕೆಲವರು ಶಾರುಖ್‌ ಪರ ಕಮೆಂಟ್‌ ಮಾಡಿದ್ದಾರೆ.

ʼಒನ್‌ ಟು ಕಾ 4ʼ  ಸಿನಿಮಾದ ಸೀನ್‌ ವೊಂದರಲ್ಲಿ ದಕ್ಷಿಣದಲ್ಲಿ ಫೇಮಸ್ ಆಗಿರುವ ವಿಷಯಗಳ ಬಗ್ಗೆ ಮಾತನಾಡುತ್ತಾ. ಇಡ್ಲಿ, ವಡೆ, ರಜನಿಕಾಂತ್, ವೆಂಕಟೇಶ್, ನಾಗಾರ್ಜುನ ಎಂದು ಶಾರುಖ್‌ ಹೇಳುತ್ತಾರೆ.

ಇದೇ ಡೈಲಾಗ್ ನ್ನು ಅಂಬಾನಿ ಪ್ರೀ ವೆಡ್ಡಿಂಗ್ ವೇದಿಕೆಯಲ್ಲಿ ರಾಮ್‌ಚರಣ್‌ ಅವರನ್ನು ಕರೆಯುವಾಗ ಬಳಸಿದ್ದಾರೆ. ಸಿನಿಮಾ ಡೈಲಾಗ್‌ನಲ್ಲಿ ಇದ್ದ ರಜನಿಕಾಂತ್ ಹೆಸರು ತೆಗೆದು ರಾಮ್ ಚರಣ್ ಹೆಸರು ಸೇರಿಸಿ ಶಾರುಖ್ ಹೇಳಿದ್ದರು ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ.

ರಾಮ್‌ ಚರಣ್‌  ಬಿಟೌನ್‌ ಸ್ಟಾರ್‌ ಗಳಾದ ಶಾರುಖ್‌ ಹಾಗೂ ಸಲ್ಮಾನ್‌ ಇಬ್ಬರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಟಾಪ್ ನ್ಯೂಸ್

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್‌ ಜಾರಕಿಹೊಳಿ

Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್‌ ಜಾರಕಿಹೊಳಿ

Mangaluru: ವಿದ್ಯುತ್‌ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ

Mangaluru: ವಿದ್ಯುತ್‌ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ

Bhubaneswar college sparks big protest

Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

Mulki ರೈಲು ನಿಲ್ದಾಣ ಕಾಮಗಾರಿ: ಫೆ.21 ರಂದು ರೈಲು ವಿಳಂಬ

Ranji Trophy: ಸೆಮಿಫೈನಲ್‌ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ

Ranji Trophy: ಸೆಮಿಫೈನಲ್‌ನಲ್ಲಿ ಪಾರ್ಥ್ ದಾಳಿಗೆ ಕುಸಿದ ಮುಂಬಯಿ

WPL 2025: Mumbai register 5th consecutive win against Gujarat

WPL 2025: ಗುಜರಾತ್‌ ವಿರುದ್ಧ ಮುಂಬೈಗೆ ಸತತ 5ನೇ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೆಲುಗು ಗೊತ್ತಿಲ್ಲದ ನಾಯಕಿಯರನ್ನು ಬೆಂಬಲಿಸುತ್ತೇವೆ – ವಿವಾದ ಎಬ್ಬಿಸಿದ ನಿರ್ಮಾಪಕನ ಹೇಳಿಕೆ

ತೆಲುಗು ಗೊತ್ತಿಲ್ಲದ ನಾಯಕಿಯರನ್ನು ಬೆಂಬಲಿಸುತ್ತೇವೆ – ವಿವಾದ ಎಬ್ಬಿಸಿದ ನಿರ್ಮಾಪಕನ ಹೇಳಿಕೆ

Tollywood: ಅಲ್ಲು ಅರ್ಜುನ್​ಗೆ ಅಟ್ಲಿ ಆ್ಯಕ್ಷನ್ ಕಟ್:‌ ಶ್ರೀದೇವಿ ಪುತ್ರಿ ನಾಯಕಿ?

Tollywood: ಅಲ್ಲು ಅರ್ಜುನ್​ಗೆ ಅಟ್ಲಿ ಆ್ಯಕ್ಷನ್ ಕಟ್:‌ ಶ್ರೀದೇವಿ ಪುತ್ರಿ ನಾಯಕಿ?

Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್‌ ನಟ ಪೊಲೀಸ್‌ ವಶಕ್ಕೆ

Tollywood: ರಾತ್ರೋರಾತ್ರಿ ಖ್ಯಾತ ಟಾಲಿವುಡ್‌ ನಟ ಪೊಲೀಸ್‌ ವಶಕ್ಕೆ

Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್‌ ಹಿಟ್‌ ಕಂಡ ಶ್ರೀವಲ್ಲಿ

Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್‌ ಹಿಟ್‌ ಕಂಡ ಶ್ರೀವಲ್ಲಿ

Kollywood: ಬರ್ತ್‌ ಡೇಗೆ ʼಮದರಾಸಿʼಯಾಗಿ ಮಾಸ್‌ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್

Kollywood: ಬರ್ತ್‌ ಡೇಗೆ ʼಮದರಾಸಿʼಯಾಗಿ ಮಾಸ್‌ ಅವತಾರದಲ್ಲಿ ಮಿಂಚಿದ ಶಿವಕಾರ್ತಿಕೇಯನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗೀತಾರ್ಥ ಚಿಂತನೆ-191: “ಡಿಸಿಶನ್‌ ಮೇಕರ್‌ ನೀನಲ್ಲ’ ಎಂಬ ಶ್ರೀಕೃಷ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣUdupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Udupi: ಗ್ಯಾರಂಟಿಯಿಂದ ಜನರ ಆರ್ಥಿಕ ಸ್ಥಿತಿ ವೃದ್ಧಿ: ಎಚ್‌.ಎಂ. ರೇವಣ್ಣ

Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್‌ ಜಾರಕಿಹೊಳಿ

Mangaluru: ಪಿಡಬ್ಲ್ಯುಡಿ ಆಸ್ತಿ ಮೂಲಕ ಆದಾಯ ಗಳಿಕೆ: ಸಚಿವ ಸತೀಶ್‌ ಜಾರಕಿಹೊಳಿ

Mangaluru: ವಿದ್ಯುತ್‌ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ

Mangaluru: ವಿದ್ಯುತ್‌ ದರ ಏರಿಕೆಗೆ ಪ್ರಸ್ತಾವ; ಗ್ರಾಹಕರಿಂದ ಆಕ್ಷೇಪ

Bhubaneswar college sparks big protest

Bhubaneswar: ನೇಪಾಲಿ ವಿದ್ಯಾರ್ಥಿನಿ ಆತ್ಮಹ*ತ್ಯೆ, ಭಾರೀ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.