Kollywood: ರಜಿನಿ ʼವೆಟ್ಟೈಯನ್ʼಗೆ ದಾರಿ ಬಿಟ್ಟ ಸೂರ್ಯ; ʼಕಂಗುವʼ ರಿಲೀಸ್ ಮುಂದೂಡಿಕೆ?
Team Udayavani, Aug 26, 2024, 3:53 PM IST
ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರ ಮುಂದಿನ ಸಿನಿಮಾ ʼವೆಟ್ಟೈಯನ್ʼ (Vettaiyan) ರಿಲೀಸ್ಗೆ ಡೇಟ್ ಫಿಕ್ಸ್ ಆಗಿದೆ. ಇದೇ ದಿನ ಸೂರ್ಯ ಅವರ ಬಹುನಿರೀಕ್ಷಿತ ʼಕಂಗುವʼ(Kanguva) ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿತ್ತು.
ʼವೆಟ್ಟೈಯನ್ʼ ರಿಲೀಸ್ ದಿನವೇ ಕಾಲಿವುಡ್ನಲ್ಲಿ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾ ʼಕಂಗುವʼ ರಿಲೀಸ್ ಆಗುವುದರಿಂದ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಪೈಪೋಟಿ ಆಗುವ ಸಾಧ್ಯತೆಯಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.
ಆದರೆ ಇದೀಗ ʼಕಂಗುವʼ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್ಡೇಟ್ ವೊಂದು ಹೊರಬಿದ್ದಿದೆ. ಅಕ್ಟೋಬರ್ 10 ರಂದು ರಿಲೀಸ್ ಆಗುವ ಯೋಜನೆಯಿಂದ ಚಿತ್ರತಂಡ ಹಿಂದೇಟು ಹಾಕಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಶಿವ (Director Shiva) ನಿರ್ದೇಶನದ, ಸೂರ್ಯ(Suriya) ಅಭಿನಯದ ʼಕಂಗುವʼ(Kanguva) ದೀಪಾವಳಿ ಹಬ್ಬಕ್ಕೆ ಅಂದರೆ ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.
ಚಿತ್ರತಂಡ ಇದುವರೆಗೆ ರಿಲೀಸ್ ಡೇಟ್ ಮುಂದೂಡಿಕೆ ಹಾಗೂ ಹೊಸ ರಿಲೀಸ್ ಡೇಟ್ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಇದನ್ನೂ ಓದಿ: Actor Darshan: ಜೈಲಿನಲ್ಲಿ ರಾಜಾರೋಷ; ದರ್ಶನ್ ಸೇರಿ ಹಲವರ ವಿರುದ್ಧ 3 ಪ್ರತ್ಯೇಕ FIR
ಒಂದು ವೇಳೆ ʼಕಂಗುವʼ ಮುಂದೂಡಿಕೆ ಆದರೆ ರಜಿನಿಕಾಂತ್ ʼವೆಟ್ಟೈಯನ್ʼ ಕಾಲಿವುಡ್ನಲ್ಲಿ ದೊಡ್ಡ ರಿಲೀಸ್ ಆಗಿ ಮೂಡಿಬರಲಿದೆ.
ರಜಿನಿಕಾಂತ್ ʼಜೈಲರ್ʼ ಬಳಿಕ ಮತ್ತೆ ಖಾಕಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಟಿ.ಜೆ. ಜ್ಞಾನವೇಲ್ ನಿರ್ದೇಶನದ ʼವೆಟ್ಟೈಯನ್ʼ ಈಗಾಗಲೇ ಟೀಸರ್ನಿಂದ ಗಮನ ಸೆಳೆದಿದ್ದು ನಿರೀಕ್ಷೆ ಹೆಚ್ಚಾಗಿಸಿದೆ.
ಬುಡಕಟ್ಟು ಸಮುದಾಯದ ನಡುವಿನ ಅಳಿವು – ಉಳಿವಿನ ಹೋರಾಟದ ಕಥೆಯನ್ನು ʼಕಂಗುವʼ ಒಳಗೊಂಡಿದೆ. ಸೂರ್ಯ, ಬಾಬಿ ಡಿಯೋಲ್ ಪ್ರಧಾನ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತ ಕನ್ನಡದಲ್ಲಿ ಧ್ರುವ ಸರ್ಜಾ ಅವರ ಪ್ಯಾನ್ ಇಂಡಿಯಾ ʼಮಾರ್ಟಿನ್ʼ ಕೂಡ ಅಕ್ಟೋಬರ್ 10ರಂದೇ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollywood: ಹಿಟ್ ಲವ್ ಸ್ಟೋರಿ ʼ96ʼ ಸೀಕ್ವೆಲ್ ಕನ್ಫರ್ಮ್; ನಿರ್ದೇಶಕರು ಹೇಳಿದ್ದೇನು?
Dosa King: ಜೊತೆಯಾಗಲಿದ್ದಾರೆ ಹೇಮಂತ್ – ಜ್ಞಾನವೇಲ್; ತೆರೆಗೆ ಬರಲಿದೆ ʼಸರವಣ ಭವನ್ ಕೇಸ್ʼ
Salaar 2: ಪ್ರಭಾಸ್ – ಪ್ರಶಾಂತ್ ʼಸಲಾರ್-2ʼನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್?
OTT release: ಕೀರ್ತಿ ಸುರೇಶ್ ʼರಘು ತಾತʼ ಓಟಿಟಿ ರಿಲೀಸ್ಗೆ ಡೇಟ್ ಲಾಕ್
Actresses: ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್: ರಾಗಿಣಿ, ಶುಭಾ ಕೊಟ್ಟ ಸ್ಪಷ್ಟನೆ ಏನು?
MUST WATCH
ಹೊಸ ಸೇರ್ಪಡೆ
Nagamangala Case: “ಟಾರ್ಗೆಟ್ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ
Nagamangala Case ದುಷ್ಕರ್ಮಿಗಳ ರಕ್ಷಣೆ: ತೇಜಸ್ವಿ ಸೂರ್ಯ
Ramanagara: ಎಚ್ಡಿಕೆಯನ್ನೇ ತನಿಖಾಧಿಕಾರಿ ಮಾಡಿ: ಶಾಸಕ ಬಾಲಕೃಷ್ಣ ಲೇವಡಿ
Nagamangala ಅಳಿಯನ ಬಂಧನದ ನೋವಿನಲ್ಲಿ ಸೋದರ ಮಾವ ಸಾವು
BJP ಕಾಲದ ಹಗರಣ: ಪರಂ ಸಮಿತಿ ಮೊದಲ ಸಭೆ: 21 ಹಗರಣಗಳ ಜತೆ ಮತ್ತೆ ಏಳೆಂಟು ಸೇರ್ಪಡೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.