Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್
Team Udayavani, Oct 16, 2024, 4:54 PM IST
ಚೆನ್ನೈ: ʼಗೋಟ್ʼ ಸಿನಿಮಾ ಯಶಸ್ಸಿನ ಬಳಿಕ ದಳಪತಿ ವಿಜಯ್ (Thalapathy Vijay) ಅವರ ಮುಂದಿನ ಸಿನಿಮಾದ ಬಗ್ಗೆ ಕಾಲಿವುಡ್ (Kollywood) ನಲ್ಲಿ ಚರ್ಚೆ ಶುರುವಾಗಿದೆ.
ದಳಪತಿ ವಿಜಯ್ ಅವರ ಕೊನೆಯ ಸಿನಿಮಾವೆಂದೇ ಹೇಳಲಾಗುತ್ತಿರುವ ‘Thalapathy 69’ ಸಿನಿಮಾದ ಬಗ್ಗೆಈಗಾಗಲೇ ಟ್ರೆಂಡ್ ಶುರುವಾಗಿದೆ.
ಇತ್ತೀಚೆಗೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು, ಸಿನಿಮಾದ ಮುಹೂರ್ತ ಕೂಡ ನೆರವೇರಿದೆ.
ಇದನ್ನೂ ಓದಿ: ಹುಚ್ಚ ವೆಂಕಟ್ To ಸಂಯುಕ್ತಾ.. ಬಿಗ್ಬಾಸ್ನಲ್ಲಿ ಕಿರಿಕ್ ಮಾಡಿ ಹೊರಬಂದ ಸ್ಪರ್ಧಿಗಳಿವರು
ʼThalapathy 69’ ಸಿನಿಮಾವನ್ನು ಹೆಚ್. ವಿನೋದ್ (H. Vinoth) ಅವರು ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಕಥೆ ಏನಾಗಿರಲಿದೆ ಎನ್ನುವುದರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಇದೀಗ ಸಿನಿಮಾದಲ್ಲಿ ವಿಜಯ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದರ ಕುರಿತ ವರದಿಯೊಂದು ಹೊರಬಿದ್ದಿದೆ.
ವಿಜಯ್ ಸಿನಿಮಾದಲ್ಲಿ ಮಾಜಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೀಕ್ರೆಟ್ ಮಿಷನ್ ವೊಂದಕ್ಕೆ ಅವರನ್ನು ಕರೆಯಲಾಗುತ್ತದೆ. ಇದೊಂದು ಪಕ್ಕಾ ಆ್ಯಕ್ಷನ್ ಪ್ಯಾಕೇಜ್ ಸಿನಿಮಾವಾಗಿರಲಿದೆ ಎಂದು ವರದಿಯಾಗಿದೆ.
ʼತೀರನ್ ಅಧಿಗಾರಮ್ ಒಂದ್ರುʼ, ʼವಲಿಮೈʼ ಸಿನಿಮಾದ ಬಳಿಕ ನಿರ್ದೇಶಕ ವಿನೋದ್ ಮತ್ತೊಂದು ಪೊಲೀಸ್ ಕಥೆಯನ್ನು ಬರೆದಿದ್ದಾರೆ.
ʼThalapathy 69’ ಸಿನಿಮಾದ ಕಥೆಯನ್ನು ಮೊದಲು ಕಮಲ್ ಹಾಸನ್ ಅವರಿಗೆ ಮಾಡಲಾಗಿತ್ತು. ಆದರೆ ಕಮಲ್ ಹಾಸನ್ ಅದನ್ನು ಒಪ್ಪದ ಕಾರಣಕ್ಕೆ ವಿಜಯ್ ಅವರೊಂದಿಗೆ ವಿನೋದ್ ಕೈಜೋಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಹಿಂದೆ 2016ರಲ್ಲಿ ಅಟ್ಲಿ ಅವರ ʼತೇರಿʼ ಸಿನಿಮಾದಲ್ಲಿ ವಿಜಯ್ ಖಾಕಿ ತೊಟ್ಟಿದ್ದರು. ಇದೀಗ 8 ವರ್ಷದ ಬಳಿಕ ಮತ್ತೆ ಪೊಲೀಸ್ ಲುಕ್ ನಲ್ಲಿ ದಳಪತಿ ಅಬ್ಬರಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಚಿತ್ರತಂಡ ಒಂದೊಂದೇ ಪಾತ್ರವರ್ಗವನ್ನು ರಿವೀಲ್ ಮಾಡುತ್ತಿದೆ. ಬಾಲಿವುಡ್ ನಟ ಬಾಬಿ ಡಿಯೋಲ್ (Bobby Deol), ಪೂಜಾ ಹೆಗ್ಡೆ(Pooja Hegde), ಮಮಿತಾ ಬೈಜು (Mamitha Baiju), ಪ್ರಕಾಶ್ ರಾಜ್ (Prakash Raj) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ (Kvn Productions) ಸಿನಿಮಾಕ್ಕೆ ಬಂಡವಾಳ ಹಾಕಲಿದ್ದು, ಅನಿರುದ್ಧ್ ರವಿಚಂದರ್ ಸಿನಿಮಾಕ್ಕೆ ಮ್ಯೂಸಿಕ್ ನೀಡಲಿದ್ದಾರೆ. ದಳಪತಿ ವಿಜಯ್ ಅವರ ರಾಜಕೀಯ ಜೀವನಕ್ಕೆ ಹತ್ತಿರವಾಗುವ ಸಿನಿಮಾವಿದು ಎನ್ನಲಾಗಿದ್ದು, 2025ರ ಅಕ್ಟೋಬರ್ ನಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?
Actress Oviya: ಬಿಗ್ಬಾಸ್ ಮಾಜಿ ಸ್ಪರ್ಧಿಯ ಖಾಸಗಿ ವಿಡಿಯೋ ವೈರಲ್; ದೂರು ದಾಖಲಿಸಿದ ನಟಿ
Kamal Haasan: ನಿರೂಪಣೆ ಬಿಟ್ಟ ಬಳಿಕ ಮತ್ತೆ ಬಿಗ್ಬಾಸ್ ವೇದಿಕೆಗೆ ಬರಲಿದ್ದಾರೆ ಕಮಲ್
Prasanth Varma: ಮಹಾಕಾಳಿಯಲ್ಲಿ ದೈವಾರಾಧನೆ
Actor Bala: ಮಾಜಿ ಪತ್ನಿ ಜತೆ ಅನುಚಿತ ವರ್ತನೆ ಆರೋಪ; ಖ್ಯಾತ ನಟ ಬಂಧನ
MUST WATCH
ಹೊಸ ಸೇರ್ಪಡೆ
BBK11: ಗಲಾಟೆ ಭರದಲ್ಲಿ ಮಂಜುಗೆ ಕಿಸ್ ಮಾಡಿದ್ರಾ ಜಗದೀಶ್? ಏನಿದು ವೈರಲ್ ವಿಡಿಯೋ?
Drinking Water: ಕಾವೇರಿ 6ನೇ ಹಂತದ ಯೋಜನೆಗೆ ಡಿಪಿಆರ್ ಸಿದ್ಧ: ಡಿಸಿಎಂ ಶಿವಕುಮಾರ್
Kollywood: 33 ವರ್ಷದ ಬಳಿಕ ರಜಿನಿ ಜತೆ ಮಣಿರತ್ನಂ ಸಿನಿಮಾ? ನಿರ್ದೇಶಕರ ಪತ್ನಿ ಹೇಳಿದ್ದೇನು?
Extortion Case: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್ ಶರ್ಮಾ ಬಂಧನ
ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.