ʼAadujeevithamʼ: ಮರುಭೂಮಿ ಎಂಬ ಸುಡುಗಾಡಿನಲ್ಲಿ ಬದುಕು ಬಿರುಗಾಳಿ.. ಟ್ರೇಲರ್ ಔಟ್
Team Udayavani, Mar 9, 2024, 3:36 PM IST
ಕೊಚ್ಚಿ: ಮಾಲಿವುಡ್ ಸೂಪರ್ ಪೃಥ್ವಿರಾಜ್ ಸುಕುಮಾರನ್ ʼ ಆಡು ಜೀವಿತಂ ದಿ ಗೋಟ್ ಲೈಫ್ʼ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ಸಟ್ಟೇರಿದ ದಿನದಂದ ಈ ಸಿನಿಮಾ ನಾನಾ ಕಾರಣಗಳಿಂದ ಸದ್ದು ಮಾಡಿದೆ. ಸಿನಿಮಾದ ಸ್ಕ್ರಿಪ್ಟ್ ಶುರುವಾಗಿ ಕೆಲ ವರ್ಷಗಳೇ ಕಳೆದಿದೆ. ಶೂಟಿಂಗ್ ಸಮಯಕ್ಕೂ ಕೆಲ ತಿಂಗಳುಗಳೇ ಕಳೆದಿದೆ. ಅಂತೂ ಸಿನಿಮಾ ಸವಾಲುಗಳನ್ನು ದಾಟಿ ರಿಲೀಸ್ ಹಂತಕ್ಕೆ ಬಂದು ನಿಂತಿದೆ.
ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾದಲ್ಲಿ ಸಂಪೂರ್ಣ ಭಿನ್ನವಾದ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾಕ್ಕಾಗಿ ಅವರು ಸಾಕಷ್ಟು ಪರಿಶ್ರಮವನ್ನು ಹಾಕಿದ್ದಾರೆ ಎನ್ನುವುದು ಟ್ರೇಲರ್ ನಲ್ಲಿ ಕಾಣುವ ಅವರ ಅಭಿನಯವನ್ನು ನೋಡಿಯೇ ಗೊತ್ತಾಗುತ್ತದೆ.
ಮರುಭೂಮಿಯಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯೊಬ್ಬನನ್ನು ತೋರಿಸಿ, ಆತನ ಬದುಕಿನ ಯೌವನದ ಹಂತದ ಝಲಕ್ ನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. “ಒಳಗೆ ಬಂದವರು ಯಾರೂ ಹೊರಗೆ ಹೋಗಲು ಆಗುವುದಿಲ್ಲ” ಎನ್ನುವ ಹಿನ್ನೆಲೆ ಧ್ವನಿಯಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಯನ್ನು ತೋರಿಸಲಾಗಿದೆ. ಜೊತೆಗೆ ಆಡುಗಳ ಹಿಂಡು, ಮರುಭೂಮಿಯಲ್ಲಿನ ತಾಪ, ಸವಾಲನ್ನು ತೋರಿಸಲಾಗಿದೆ. ಈ ಪಾತ್ರದಲ್ಲಿ ಪೃಥ್ವಿರಾಜ್ ಎಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ಕಥೆಯೇನು?: ʼಆಡುಜೀವಿತಂʼ ಸಿನಿಮಾ ರಿಲೀಸ್ ಗೂ ಮುನ್ನ ದೊಡ್ಡಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವುದಕ್ಕೆ ಕೆಲ ಕಾರಣಗಳಿವೆ. ಈ ಸಿನಿಮಾ ಸತ್ಯ ಘಟನೆಯನ್ನು ಆಧಾರಿಸಿದೆ. ಮಲಯಾಳಂನ ಜನಪ್ರಿಯ ‘ಆಡುಜೀವಿತಂʼಕಾದಂಬರಿ ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿದೆ. ಈ ಕಾದಂಬರಿ ವಿದೇಶಿ ಭಾಷೆ ಸೇರಿದಂತೆ 12 ಭಾಷೆಗಳಿಗೆ ಅನುವಾದಗೊಂಡಿದೆ. ಇದನ್ನು ಹೆಸರಾಂತ ಬರಹಗಾರ ಬೆನ್ಯಾಮಿನ್ ಅವರು ಬರೆದಿದ್ದಾರೆ.
ʼಆಡು ಜೀವಿತಂʼ ನಜೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿಯ ಕಥೆಯಾಗಿದೆ. ಈ ಪಾತ್ರವನ್ನು ಪೃಥ್ವಿರಾಜ್ ಮಾಡಿದ್ದಾರೆ. 90ರ ದಶಕದಲ್ಲಿ ಭವಿಷ್ಯ ಹುಡುಕಿಕೊಂಡು ಸೌದಿ ಅರೇಬಿಯಾಗೆ ಹೋಗುವ ನಜೀಬ್ ಪಾಸ್ಪೋರ್ಟ್ ಇಲ್ಲದೆ ಎದುರಿಸಿದ ಹಿಂಸೆ, ಮರುಭೂಮಿ ಬಿಸಿಲಿನಲ್ಲಿ ಅನುಭವಿಸಿದ ಕಷ್ಟಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ.
ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬ್ಲೆಸ್ಸಿ ಥಾಮಸ್ ನಿರ್ದೇಶನ ಮಾಡಿದ್ದಾರೆ. ‘ವಿಷ್ಯುವಲ್ ರೊಮ್ಯಾನ್ಸ್ʼ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಎ.ಆರ್. ರೆಹಮಾನ್ ಮ್ಯೂಸಿಕ್ ನೀಡಿದ್ದಾರೆ.
ಪೃಥಿರಾಜ್ ಜೊತೆ ಅಮಲಾ ಪೌಲ್ , ಅರಬ್ ನಟರಾದ ತಲಿಬ್ ಅಲ್ ಬಲುಶಿ, ರಿಕ್ ಅಬಿ ನಟಿಸಿದ್ದು, ಹಾಲಿವುಡ್ ನಟ ಜಿಮ್ಮಿ ಜೀನ್ ಲೂಯಿಸ್ ಕೂಡ ನಟಿಸಿದ್ದಾರೆ.
ಇದೇ ಮಾರ್ಚ್ 28 ರಂದು ವರ್ಲ್ಡ್ ವೈಡ್ ಸಿನಿಮಾ ತೆರೆಕಾಣಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bigg Boss: ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
Varun Tej; ನ.14ಕ್ಕೆ ‘ಮಟ್ಕಾ’ ತೆರೆಗೆ
Gayathri: ಟಾಲಿವುಡ್ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪುತ್ರಿ ಹೃದಯಾಘಾತದಿಂದ ನಿಧನ
Kerala: ಮಲಯಾಳಂ ಚಿತ್ರರಂಗದ ಜನಪ್ರಿಯ ವಿಲನ್ ನಟ “ಕೀರಿಕ್ಕಡನ್ ಜೋಸ್” ವಿಧಿವಶ
Jani Master: ಅತ್ಯಾಚಾರ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್ಗೆ ಷರತ್ತುಬದ್ಧ ಜಾಮೀನು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.