Jr NTR: 2031ರವರೆಗೆ ಯಂಗ್ ಟೈಗರ್ ಫುಲ್ ಬ್ಯುಸಿ..2 ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್
Team Udayavani, Jul 31, 2024, 6:28 PM IST
ಹೈದರಾಬಾದ್: ʼಆರ್ ಆರ್ ಆರ್ʼ (RRR) ಬಳಿಕ ಜೂ.ಎನ್ ಟಿಆರ್ (Jr NTR) ಅವರಿಗೆ ಬೇಡಿಕೆ ಹೆಚ್ಚಾಗಿದೆ. ಟಾಲಿವುಡ್ ಮಾತ್ರವಲ್ಲದೆ, ಬಾಲಿವುಡ್ನ ಬಿಗ್ ಬಜೆಟ್ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.
ಜೂ.ಎನ್ಟಿಆರ್ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ʼದೇವರʼ (Devara: Part One) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ. ಇದರೊಂದಿಗೆ ಹೃತಿಕ್ ರೋಷನ್ ಅವರ ʼವಾರ್-2ʼ(War -2) ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ.
ಈ ಎರಡು ಸಿನಿಮಾದ ಬಳಿಕ ಜೂ.ಎನ್ ಟಿಆರ್ ಪ್ರಶಾಂತ್ ನೀಲ್(Prashanth Neel) ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾಕ್ಕೆ ಸದ್ಯಕ್ಕೆ ʼಡ್ರ್ಯಾಗನ್ʼ ಎಂದು ಟೈಟಲ್ ಇಡಲಾಗಿದೆ.
ಇದೀಗ ಜೂ.ಎನ್ ಟಿಆರ್ ʼಹಾಯ್ ನನ್ನಾʼ ಖ್ಯಾತಿಯ ಶೌರ್ಯುವ್ (Shouryuv) ಅವರೊಂದಿಗೆ ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
“ಶೌರ್ಯುವ್ ಅವರು ಹೇಳಿದ ಸಬ್ಜೆಕ್ಟ್ ಜೂ.ಎನ್ ಟಿಆರ್ ಅವರಿಗೆ ಇಷ್ಟವಾಗಿದೆ. ಅವರು ಚಿತ್ರದ ಸ್ಕ್ರೀನ್ ಪ್ಲೇ ಸ್ವಲ್ಪ ಸುಧಾರಣೆ ಆಗಬೇಕೆಂದು” ಹೇಳಿರುವುದಾಗಿ ವರದಿ ತಿಳಿಸಿದೆ.
“ಜೂ.ಎನ್ ಟಿಆರ್ ʼವಾರ್ -2ʼ, ʼದೇವರ-2ʼ ಹಾಗೂ ಡ್ರ್ಯಾಗನ್ ಶೂಟ್ ಮುಗಿಸಿದ ಬಳಿಕ, 2026ರ ಆರಂಭದಲ್ಲಿ ಶೌರ್ಯುವ್ ಅವರ ಸಿನಿಮಾಕ್ಕೆ ಕೈಹಾಕಲಿದ್ದಾರೆ. ಇದೊಂದು ಹೈ ಆಕ್ಟೇನ್ ಆ್ಯಕ್ಷನ್ ಸಿನಿಮಾವಾಗಲಿದೆ. ಎರಡು ಪಾರ್ಟ್ಗಳಲ್ಲಿ ತೆರೆಗೆ ತರುವ ಪ್ಲ್ಯಾನ್ ಇದೆ” ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ.
“ಸಿನಿಮಾದ ಮೊದಲ ಭಾಗ 2028 ರಲ್ಲಿ ಹಾಗೂ ಸೀಕ್ವೆಲ್ 2031ರಲ್ಲಿ ಬರುವ ಸಾಧ್ಯತೆಯಿದೆ” ಎಂದು ವರದಿ ತಿಳಿಸಿದೆ.
ಇದು ಮಾತ್ರವಲ್ಲದೆ ಯಂಗ್ ಟೈಗರ್ ತಮಿಳು, ತೆಲುಗು, ಕನ್ನಡ ಅಥವಾ ಹಿಂದಿ ಭಾಷೆಯ ಕೆಲ ಸ್ಕ್ರಿಪ್ಟ್ ಗಳನ್ನು ಓದುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhoom 4: ಬಾಲಿವುಡ್ ʼಧೂಮ್-4ʼ ನಲ್ಲಿ ಸೌತ್ ಸ್ಟಾರ್ ಸೂರ್ಯ ವಿಲನ್?
Tollywood: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್- ಅದಿತಿ ರಾವ್; ಇಲ್ಲಿದೆ ಫೋಟೋಸ್
Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ವಿರುದ್ಧ FIR
Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು
OTT Release: ಚಿಯಾನ್ ವಿಕ್ರಮ್ ʼತಂಗಲಾನ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.