ಕೋವಿಡ್ 19 ಸೋಂಕಿತರ ಸಂಪರ್ಕ ಪತ್ತೆ ಆ್ಯಪ್ ಗಳು ಎಷ್ಟು ಸುರಕ್ಷಿತ?


Team Udayavani, Aug 18, 2020, 6:44 PM IST

ಕೋವಿಡ್ 19 ಸೋಂಕಿತರ ಸಂಪರ್ಕ ಪತ್ತೆ ಆ್ಯಪ್ ಗಳು ಎಷ್ಟು ಸುರಕ್ಷಿತ?

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕೋವಿಡ್ 19 ಸೊಂಕಿನ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಒಂದೇ ಭಯ ಏನೆಂದರೆ ನಾವೆಲ್ಲಾದರೂ ಈ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆಯೇ ಎಂಬುದು.

ಒಂದುವೇಳೆ ಈ ರೀತಿಯಾಗಿ ವ್ಯಕ್ತಿಯೊಬ್ಬ ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾನೆಂದು ಆತನಿಗೆ ತಿಳಿದುಬಿಟ್ಟರೆ ಆ ವ್ಯಕ್ತಿಯು ತನ್ನನ್ನು ತಾನು ಇತರರ ಸಂಪರ್ಕದಿಂದ ದೂರವಿರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಆದರೆ ಈ ರೀತಿಯಾಗಿ ಕೋವಿಡ್ 19 ಸೋಂಕಿಗೆ ಒಳಗಾದ ವ್ಯಕ್ತಿಗಳು ತಮ್ಮ ಮನೆಯಲ್ಲೇ ಕ್ವಾರೆಂಟೈನ್ ನಲ್ಲಿರದೆ ಹೊರಗೆಲ್ಲಾ ತಿರುಗಾಡುತ್ತಿದ್ದರೆ, ತಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಈ ಸೊಂಕನ್ನು ಪುಕ್ಕಟೆಯಾಗಿ ಹರಡುವ ಅಪಾಯ ಇದ್ದೇ ಇರುತ್ತದೆ.

ಹೀಗಾಗಿ ನಾವು ಕೋವಿಡ್ 19 ಸೋಂಕಿನ ಅಪಾಯದಲ್ಲಿದ್ದೇವೆ ಎಂಬುದನ್ನು ನಮಗೇ ಸ್ವತಃ ತಿಳಿದುಕೊಳ್ಳಲು ಸಾಧ್ಯವಾಗುವಂತೆ ಟೆಕ್ ಕಂಪೆನಿಗಳು ಕೋವಿಡ್ 19 ಸೋಂಕಿನ ಅಪಾಯವನ್ನು ಪತ್ತೆ ಹಚ್ಚುವ ಮೊಬೈಲ್ ಅಪ್ಲಿಕೇಷನ್ ಗಳನ್ನು ತಯಾರಿಸಿ ಮೊಬೈಲ್ ಬಳಕೆದಾರರ ಉಪಯೋಗಕ್ಕೆ ಬಿಟ್ಟಿವೆ. ಇವುಗಳ ಮೂಲಕ ನಮ್ಮ ಸುತ್ತಮುತ್ತ ಕೋವಿಡ್ 19 ಸೋಂಕಿತರು ಇರುವ ಮಾಹಿತಿ ನಮಗೆ ಬೆರಳ ತುದಿಯಲ್ಲಿ ಲಭಿಸುತ್ತದೆ.

ತಂತ್ರಜ್ಞಾನ ಬಹಳವಾಗಿ ಮುಂದುವರೆದಿರುವ ಈ ಕಾಲದಲ್ಲಿ ಇದೊಂದು ಅತ್ಯಂತ ಉಪಯುಕ್ತವಾದ ವ್ಯವಸ್ಥೆಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಇವುಗಳ ವಿಶ್ವಾಸಾರ್ಹತೆಯ ಕುರಿತಾಗಿಯೂ ಕೆಲವೊಂದು ಪ್ರಶ್ನೆಗಳು ಏಳುತ್ತಿವೆ ಮತ್ತು ಇದು ನಮ್ಮ ಮಾಹಿತಿ ಮತ್ತು ಗೌಪ್ಯತೆಗೆ ಸಂಬಂಧಿಸಿದ ವಿಷಯಗಳದ್ದಾಗಿದೆ.

ಇಂತಹ ಸಾಫ್ಟ್ ವೇರ್ ಗಳು ಅವುಗಳ ರಚನಾ ಸ್ವರೂಪಕ್ಕೆ ಅನುಗುಣವಾಗಿ ಕೆಲವೊಂದು ಮಾಹಿತಿಗಳನ್ನು ಹೊರಗೆಡಹುದು ಅನಿವಾರ್ಯವಾಗಿರುತ್ತದೆ. ಮತ್ತು ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನು ರಕ್ಷಿಸುವಲ್ಲಿ ಕೆಲವು ಸಾಫ್ಟ್ ವೇರ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ಕೋವಿಡ್ 19 ವಿಚಾರದಲ್ಲಿ ಹೆಚ್ಚಿನವರ ಕಾಳಜಿ ತಮ್ಮ ಮತ್ತು ತಮ್ಮವರ ಆರೋಗ್ಯ ರಕ್ಷಣೆಯ ವಿಚಾರ ಆಗಿರುವುದರಿಂದ ಅವರು ತಮ್ಮ ಮಾಹಿತಿ ಸುರಕ್ಷತೆಯ ಕುರಿತಾಗಿ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇನ್ನು ಕೆಲವರು ಈ ವಿಚಾರದಲ್ಲಿ ಬಹಳ ಪರ್ಫೆಕ್ಟಾಗಿ ಇರುತ್ತಾರೆ ಮತ್ತು ತಮ್ಮ ಮಾಹಿತಿ ಗೌಪ್ಯತೆಗೆ ಅವರು ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.

ಅಪಾಯಕಾರಿ ಪತ್ರಿಕೋದ್ಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರು ಅಥವಾ ರಾಜಕೀಯವಾಗಿ ಪ್ರಕ್ಷುಬ್ಧ ಪ್ರದೇಶಗಳಿಗೆ ತೆರಳುವ ವ್ಯಕ್ತಿಗಳಲ್ಲಿ ಯಾರಾದರೂ https://surfshark.com/servers/india ನಂತಹ ವಿಪಿಎನ್ ಗಳನ್ನು ಬಳಸುತ್ತಿದ್ದಲ್ಲಿ ಈ ಮಾಹಿತಿ ಸುರಕ್ಷತೆಯ ವಿಚಾರದ ಕುರಿತಾಗಿ ಅವರಿಗೆ ಅರಿವದ್ದೇ ಇರುತ್ತದೆ.

ಮೊಬೈಲ್ ಬಳಕೆದಾರರು ತಮಗೆ ಅಗತ್ಯವಿಲ್ಲದಿರುವ ಅಪ್ಲಿಕೇಷನ್ ಗಳನ್ನು ತಮ್ಮ ಮೊಬೈಲ್ ಗಳಿಗೆ ಹಾಕಿಕೊಂಡಲ್ಲಿ ಅದು ಅಪಾಯಕಾರಿ ನಡೆಯೇ ಸರಿ. ಇನ್ನು ಕೆಲವರು ಯಾವುದೇ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ಮೊದಲು ಅವುಗಳ ಸಾಚಾತನವನ್ನು ಖಚಿತಪಡಿಸಿಕೊಳ್ಳುತ್ತಾರೆ.

ಕೆಲವು ಅಪ್ಲಿಕೇಷನ್ ಗಳು ಬ್ಲೂಟೂತ್ ಮೂಲಕ ಸಂಭಾವ್ಯತೆಯ ತಪಾಸಣೆಯನ್ನು ಮಾತ್ರವೇ ನಡೆಸುತ್ತವೆ. ಇನ್ನು ಕೆಲವು ಆ್ಯಪ್ ಗಳು ಜಿಪಿಎಸ್ ಹಾಗೂ ಸೆಲ್ ಟವರ್ ಗಳ ಮೂಲಕ ಜಿಯೋ ಲೊಕೇಷನ್ ಗಳನ್ನು ಬಳಸಿಕೊಳ್ಳುತ್ತವೆ. ಇವುಗಳಲ್ಲಿ ಕೆಲವು ಆ್ಯಪ್ ಗಳು ಮಾಹಿತಿಗಳನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಶೇಖರಿಸಿಟ್ಟುಕೊಂಡರೆ ಇನ್ನು ಕೆಲವು ತಮ್ಮ ಆ್ಯಪ್ ಬಳಕೆದಾರರಿಗೆ ಸೆಂಟ್ರಲ್ ಡಾಟಾಬೇಸ್ ವ್ಯವಸ್ಥೆಯನ್ನು ರಚಿಸಿಕೊಟ್ಟಿರುತ್ತವೆ.

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.