![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Apr 12, 2020, 6:01 PM IST
Representative Image
ಭೋಪಾಲ್: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜನರು ಲಾಕ್ ಡೌನ್ ಎದುರಿಸುವಂತಾಗಿದೆ. ಆದರೆ ಈಗಲೂ ಸೈನಿಕರು, ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್ ಡೌನ್ ನಡುವೆಯೂ ಕಾನ್ಸ್ ಟೇಬಲ್ ವೊಬ್ಬರು ಸುಮಾರು 450 ಕಿಲೋ ಮೀಟರ್ ನಡೆದುಕೊಂಡೇ ಬಂದು ಕರ್ತವ್ಯಕ್ಕೆ ಹಾಜರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕಾನ್ಪುರದ ಭೌತಿ ನಿವಾಸಿ ಆನಂದ್ ಪಾಂಟೆ ಅವರು ಜಬಲ್ ಪುರದಲ್ಲಿ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಏತನ್ಮಧ್ಯೆ ಪತ್ನಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಫೆ.20ರಂದು ರಜೆ ಮೇಲೆ ಊರಿಗೆ ಬಂದಿದ್ದರು. ಈ ವೇಳೆ ಲಾಕ್ ಡೌನ್ ನಿಂದಾಗಿ ಕಾನ್ಪುರದಲ್ಲಿಯೇ ಕಾನ್ಸ್ ಟೇಬಲ್ ಸಿಕ್ಕಿಹಾಕಿಕೊಳ್ಳುವಂತಾಗಿತ್ತು. ಆದರೆ ಕರ್ತವ್ಯಕ್ಕೆ ಹಾಜರಾಗುವುದನ್ನು ಅವರು ತಪ್ಪಿಸಿಕೊಳ್ಳಲಿಲ್ಲ!
ಆನಂದ್ ಪಾಂಡೆ ಕಾನ್ಪುರದಿಂದ ಕಾಲ್ನಡಿಗೆಯಲ್ಲಿಯೇ ಸುಮಾರು 450 ಕಿಲೋ ಮೀಟರ್ ಕ್ರಮಿಸಿ ಮಾರ್ಚ್ 30ರಂದು ಜಬಲ್ ಪುರ್ ತಲುಪಿದ್ದರು. ಮಧ್ಯೆ ಕೆಲವರಿಂದ ಲಿಫ್ಟ್ ತೆಗೆದುಕೊಂಡಿದ್ದರು. ಅಂತೂ ಮೂರು ದಿನಗಳ ನಡಿಗೆ ಮೂಲಕ ಪಾಂಡೆ ಜಬಲ್ ಪುರ್ ತಲುಪಿರುವುದು ಹಿರಿಯ ಅಧಿಕಾರಿಗಳ ಶ್ಲಾಘನೆಗೆ ಪಾತ್ರರಾಗುವಂತೆ ಮಾಡಿದೆ.
ಲಾಕ್ ಡೌನ್ ಮಧ್ಯೆಯೇ ನಡೆದುಕೊಂಡು ಬಂದು ಕರ್ತವ್ಯಕ್ಕೆ ಹಾಜರಾದ ಪಾಂಡೆ ಬಗ್ಗೆ ಓಮತಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಎಸ್ ಪಿಎಸ್ ಬಾಘೇಲಾ ಹಾಗೂ ಠಾಣೆಯ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದೆ ಎಂದು ವರದಿ ತಿಳಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.