![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Apr 10, 2020, 7:35 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ ಕಾಟದಿಂದ ತತ್ತರಿಸಿರುವ ಫ್ರಾನ್ಸ್ನಲ್ಲಿ ಕೆಲ ದಿನಗಳ ಹಿಂದೆ 51 ಸಂಗೀತ ಕಲಾವಿದರು ಬೊಲೆರೊ ನುಡಿಸಿದ್ದರು. ಅದಕ್ಕೂ ಮುನ್ನ ನೆದರ್ಲೆಂಡ್ನಲ್ಲಿ 18 ಗಾಯಕರು, ತಾವಿದ್ದ ಸ್ಥಳದಲ್ಲಿ ಒಂದೇ ಹಾಡನ್ನು ಹಾಡಿದ್ದ ವಿಡಿಯೊ ವೈರಲ್ ಆಗಿತ್ತು.
ಈಗ ಅಂಥದ್ದೇ ಪ್ರಯತ್ನವನ್ನು ದಕ್ಷಿಣ ಭಾರತದ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಮಾಡಿದ್ದಾರೆ. ‘ಲೋಕಮ್ ಮುಳುವನ್ ಸುಖಮ್…’ ಎನ್ನುವ ಈ ಹಾಡಿಗೆ, 22 ಗಾಯಕರು ಧ್ವನಿ ಗೂಡಿಸಿದ್ದಾರೆ. ‘ಜಗತ್ತಿಗೆ ಸಾಂತ್ವನ ಹೇಳಲು ಪ್ರೀತಿಯ ಬೆಳಕು ಬಂದಿದೆ, ನಿಮ್ಮ ಕಣ್ತೆರೆಯಿರಿ’ ಎನ್ನುವ ಅರ್ಥದ ಈ ಹಾಡು, ಚಿತ್ರ ಅವರೊಂದಿಗೆ, ಸುಜಾತಾ, ಶ್ವೇತಾ, ದೇವಾನಂದ್, ವಿಧು ಪ್ರತಾಪ್, ಜ್ಯೋತ್ಸ್ನ್ಯಾ, ರಿಮಿ ಟಾಮಿ, ರಂಜಿನಿ ಜೋಸ್, ಕವಲಂ ಶ್ರೀಕುಮಾರ್, ಅಫ್ಜಲ್ ಮತ್ತು ಶರತ್ ಸೇರಿದಂತೆ 22 ಗಾಯಕರು ಹಾಡಿದ್ದಾರೆ.
ಇದು 1972ರಲ್ಲಿ ಬಿಡುಗಡೆಯಾಗಿರುವ ಮಲಯಾಳಂ ಚಿತ್ರ ‘ಸ್ನೇಹದೀಪಮೆ ಮಿಝಿ ಥುರಕ್ಕು’ ಎಂಬ ಚಿತ್ರದ ಗೀತೆಯಾಗಿದೆ. ಮೂಲ ಹಾಡನ್ನು ಎಸ್. ಜಾನಕಿ ಅವರು ಹಾಡಿದ್ದು ಪಿ. ಭಾಸ್ಕರನ್ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಗಾಯಕಿ ಚಿತ್ರಾ ಅವರ ಫೇಸ್ ಬುಕ್ ಪೇಜ್ ನಲ್ಲಿ ಅಪ್ಲೋಡ್ ಆಗಿರುವ ಈ ಹಾಡು ಈಗಾಗಲೇ 4.27 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದ್ದು 10 ಸಾವಿರಕ್ಕೂ ಅಧಿಕ ಶೇರ್ ಗೆ ಒಳಗಾಗಿದೆ.
ಇಂದಿನಿಂದ 3 ದಿನ ‘ಸಂಗೀತ ಸೇತು’
ಲಾಕ್ಡೌನ್ ಬಂಧನದಲ್ಲಿರುವ ಜನರಿಗೆ ಮನರಂಜನೆ ನೀಡಲು ಹಾಗೂ ಪಿಎಂ ಕೇರ್ಸ್ ಫಂಡ್ಗೆ ನೆರವಾಗುವ ಸಲುವಾಗಿ ಪ್ರಸಿದ್ಧ ಗಾಯಕರಿಂದ 3 ದಿನಗಳ ಕಾಲ ನಿರಂತರವಾಗಿ ‘ಸಂಗೀತ ಸೇತು’ ಕಾರ್ಯಕ್ರಮ ನಡೆಯಲಿದೆ. ಏ.10ರಿಂದ 3 ದಿನಗಳ ಕಾಲ ರಾತ್ರಿ 8ರಿಂದ 9 ಗಂಟೆಯವರೆಗೆ ಸಂಗೀತ ಸೇತು ಗಾಯನ ನಡೆಯಲಿದೆ.
ಒಟಿಟಿ ಪ್ಲಾಟ್ಫಾರಂ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ನೋಡಲು ಸಾಧ್ಯವಿದೆ. ಖ್ಯಾತ ಗಾಯಕರಾದ ಎಸ್ಪಿ ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಆಶಾ ಬೋಸ್ಲೆ, ಸೋನು ನಿಗಮ್, ಉದಿತ್ ನಾರಾಯಣ್, ಹರಿಹರನ್, ಶಂಕರ್ ಮಹದೇವನ್ ಮತ್ತಿತರ ಗಾಯಕರು ಹಾಡಲಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.