ವಿಮಾನದಲ್ಲಿ ವೈರಸ್‌ ಸುಲಭವಾಗಿ ಹರಡದು

ಕೆಮ್ಮುವಾಗ, ಸೀನುವಾಗ ಟಿಶ್ಯೂ ಪೇಪರ್‌ ಬಳಸಿ

Team Udayavani, May 29, 2020, 2:37 PM IST

ವಿಮಾನದಲ್ಲಿ ವೈರಸ್‌ ಸುಲಭವಾಗಿ ಹರಡದು

ವಾಷಿಂಗ್ಟನ್‌: ಹೆಚ್ಚಿನ ವೈರಸ್‌ಗಳು ಹಾಗೂ ಇತರ ರೋಗಾಣುಗಳು ವಿಮಾನಗಳಲ್ಲಿ ಸುಲಭವಾಗಿ ಹರಡುವುದಿಲ್ಲವೆಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿ.ಡಿ.ಸಿ.) ಕೋವಿಡ್‌-19ಕ್ಕಾಗಿರುವ ತನ್ನ ಮಾರ್ಗಸೂಚಿಯಲ್ಲಿ ಹೇಳಿದೆ. ವಿಮಾನಗಳ ಒಳಗೆ ಇಬ್ಬರು ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಅಥವಾ ನಡುವಿನ ಸೀಟನ್ನು ಖಾಲಿ ಬಿಡುವುದಕ್ಕೆ ಕೂಡ ಅದು ಶಿಫಾರಸು ಮಾಡುವುದಿಲ್ಲ. ಕೋವಿಡ್‌ನಿಂದಾಗಿ ಅಮೆರಿಕದಲ್ಲಿ ವಿಮಾನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ವಿಮಾನಯಾನ ಶೇ. 90 ಸ್ಥಗಿತಗೊಂಡಿರುವುದಾಗಿ ಹೇಳಲಾಗಿದೆ. ಹೊರದೇಶಗಳಿಂದ ಬರುವ ಎಲ್ಲರಿಗೆ 14 ದಿನಗಳ ಕ್ವಾರಂಟೈನ್‌ ಅನ್ನು ಸಿ.ಡಿ.ಸಿ. ಶಿಫಾರಸು ಮಾಡಿದೆ.

ಏನು ಕಾರಣ?
“ವಿಮಾನದೊಳಗೆ ಗಾಳಿಯಾಡುವ ಮತ್ತು ಸೋಸಲ್ಪಡುವ ವಿಧಾನದಿಂದಾಗಿ ಹೆಚ್ಚಿನ ವೈರಸ್‌ಗಳು ಹಾಗೂ ಇತರ ರೋಗಾಣುಗಳು ಹರಡುವುದಿಲ್ಲ. ಆದರೆ ವಿಶೇಷವಾಗಿ ಕೋವಿಡ್‌ ಹಬ್ಬುತ್ತಿರುವ ಈ ಕಾಲಘಟ್ಟದಲ್ಲಿ ವಿಮಾನ ಪ್ರಯಾಣಿಕರು ಅಪಾಯರಹಿತರೆಂದು ಹೇಳುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದ್ದು ಸಾಧ್ಯವಾದಷ್ಟು ವಿಮಾನಪ್ರಯಾಣವನ್ನು ತಪ್ಪಿಸಿಕೊಳ್ಳುವಂತೆ ಅಮೆರಿಕನರಿಗೆ ಶಿಫಾರಸು ಮಾಡಿದೆ. “ವಿಮಾನ ಪ್ರಯಾಣಕ್ಕಾಗಿ ಸೆಕ್ಯುರಿಟಿ ಸಾಲುಗಳಲ್ಲಿ ಮತ್ತು ವಿಮಾನನಿಲ್ದಾಣ ಟರ್ಮಿನಲ್‌ಗ‌ಳಲ್ಲಿ ಕಾಲ ಕಳೆಯಬೇಕಾಗುತ್ತದೆ. ಇದು ನಿಮಗೆ ಇತರ ಜನರೊಂದಿಗೆ ಮತ್ತು ಎಲ್ಲರೂ ಸ್ಪರ್ಶಿಸುವ ಮೇಲ್ಮೆ„ಯೊಂದಿಗೆ ನಿಕಟ ಸಂಪರ್ಕಕ್ಕೆ ಕಾರಣವಾಗಬಹುದು’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. “ಪ್ರಯಾಣಿಕರಿಂದ ತುಂಬಿರುವ ವಿಮಾನಗಳಲ್ಲಿ ಸಾಮಾಜಿಕ ಅಂತರ ನಿಯಮವನ್ನು ಪಾಲಿಸಲು ಕಷ್ಟ ಮತ್ತು ನೀವು ಬೇರೆಯವರ ಹತ್ತಿರ(ಆರು ಅಡಿಯೊಳಗೆ) ಕುಳಿತುಕೊಳ್ಳಬೇಕಾಗಬಹುದು. ಇದು ಕೋವಿಡ್‌ಗೆ ಕಾರಣವಾಗುವ ವೈರಸ್‌ಗೆ ಒಡ್ಡಿಕೊಳ್ಳುವ ನಿಮ್ಮ ಅಪಾಯ ಹೆಚ್ಚಿಸಬಲ್ಲುದು’ ಎಂದು ಸಿ.ಡಿ.ಸಿ. ಹೇಳಿದೆ.

ಮುನ್ನೆಚ್ಚರಿಕೆ ಕ್ರಮ
ಆದರೆ ವಾಣಿಜ್ಯ ವಿಮಾನಗಳಲ್ಲಿ ಶಿಫಾರಸು ಮಾಡಲಾಗಿರುವ ಸಾಮಾಜಿಕ ಅಂತರದ ಬದಲು ವಿಮಾನಗಳ ಪೈಲಟ್‌ಗಳು ಹಾಗೂ ಸಿಬಂದಿ ಕೋವಿಡ್‌ ಹರಡುವಿಕೆಯನ್ನು ತಡೆಯಲು ಕೈಗೊಳ್ಳಬೇಕಾದ ಹಲವು ಮುನ್ನೆಚ್ಚರಿಕೆ ಮತ್ತು ನೈರ್ಮಲ್ಯದ ಕ್ರಮಗಳನ್ನು ಸಲಹೆ ಮಾಡಿದೆ. ಪ್ರಯಾಣಿಕನೊಬ್ಬನಲ್ಲಿ ಜ್ವರ, ನಿರಂತರ ಕೆಮ್ಮು, ಉಸಿರಾಟ‌ ತೊಂದರೆ, ಅಸ್ವಸ್ಥತೆಯ ಮುಖಭಾವ ಕಂಡುಬಂದಲ್ಲಿ ಸಿ.ಡಿ.ಸಿ.ಗೆ ಮಾಹಿತಿ ನೀಡುವಂತೆ ವಿಮಾನ ಸಿಬಂದಿಗೆ ಸೂಚಿಸಲಾಗಿದೆ.

ಕೈಗಳನ್ನು ತೊಳೆಯಿರಿ
ಕನಿಷ್ಠ 20 ಸೆಕೆಂಡ್‌ಗಳ ಕಾಲ ಸಾಬೂನು ಮತ್ತು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು, ಅದರಲ್ಲೂ ಮುಖ್ಯವಾಗಿ ಅಸ್ವಸ್ಥ ಪ್ರಯಾಣಿಕನಿಗೆ ನೆರವಾದ ಆಥವಾ ಕಲುಷಿತಗೊಂಡಿರಬಹುದಾದ ದೇಹದ ದ್ರವಗಳು ಅಥವಾ ಮೇಲ್ಮೆ„ಗಳನ್ನು ಸ್ಪರ್ಶಿಸಿದ ಬಳಿಕ ಕೈಗಳನ್ನು ತೊಳೆದುಕೊಳ್ಳಬೇಕು. ಸಾಬೂನು ಮತ್ತು ನೀರು ಸಿಗದಿದ್ದರೆ ಕನಿಷ್ಠ ಶೇ. 60 ಮದ್ಯಸಾರ ಹೊಂದಿರುವ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಬೇಕೆಂದು ಮಾರ್ಗಸೂಚಿ ತಿಳಿಸಿದೆ.

ಅಸ್ವಸ್ಥ ಪ್ರಯಾಣಿಕನನ್ನು ಇತರರಿಂದ 2 ಮೀ. ದೂರದಲ್ಲಿ ಕುಳಿತುಕೊಳ್ಳಿಸಬೇಕು ಮತ್ತು ಆತನನ್ನು ಉಪಚರಿಸಲು ಸಿಬಂದಿಯನ್ನು ನಿಯೋಜಿಸಬೇಕು. ಅಸ್ವಸ್ಥ  ವ್ಯಕ್ತಿಗೆ ಮಾಸ್ಕ್ ಧರಿಸಲು ಸಾಧ್ಯವಾಗದಿದ್ದರೆ ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗು ಮುಚ್ಚುವಂತೆ ಟಿಶ್ಯೂ ಪೇಪರ್‌ ಬಳಸುವಂತೆ ಸೂಚಿಸಬೇಕು. ಹಾರಾಟ ವೇಳೆ ಅಥವಾ ಅನಂತರ ಸೋಂಕು ಲಕ್ಷಣಗಳಿದ್ದ ಪ್ರಯಾಣಿಕ ಪತ್ತೆಯಾದಲ್ಲಿ ಮಾಮೂಲಿ ಸ್ವಚ್ಛತಾ ಕ್ರಮಗಳೊಂದಿಗೆ ಹೆಚ್ಚುವರಿ ಸ್ವಚ್ಛತಾ ಕ್ರಮಗಳನ್ನು ಅನುಸರಿಸಬೇಕೆಂದು ಸೂಚಿಸಲಾಗಿದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.