Desi Swara: ಸಾಗರದಾಚೆಯ ಕನ್ನಡತನದ ವೈಭವದ ಸುವರ್ಣ ಮಹೋತ್ಸವ


Team Udayavani, Oct 7, 2023, 9:55 AM IST

Desi Swara: ಸಾಗರದಾಚೆಯ ಕನ್ನಡತನದ ವೈಭವದ ಸುವರ್ಣ ಮಹೋತ್ಸವ

ಸಾಗರದಾಚೆ ಕನ್ನಡತನದ ಈ ಗೂಡಿಗೆ 50ರ ವಸಂತ! ಕೆಕೆಎನ್‌ಸಿ ಹಲವಾರು ಅನಿವಾಸಿ ಕನ್ನಡಿಗರಿಗೆ ತವರು ಮನೆ. ಈ ಸಾರ್ಥಕತೆಯನ್ನು ಸಂಭ್ರಮಿಸೋದಕ್ಕೆ ಸುವರ್ಣ ಮಹೋತ್ಸವವನ್ನು ಸೆ. 23 ಹಾಗೂ 24 ರಂದು ಕ್ಯಾಲಿಫೋರ್ನಿಯಾದ ಹೇವಡ್‌ನ‌ ಶಬೊ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಅನೇಕ ವರ್ಷಗಳಿಂದ ನಿರಂತರವಾಗಿ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಚಟುವಟಿಕೆಗಳನ್ನು ಮಾಡುತ್ತಾ ಬಂದಿರುವ ಕನ್ನಡ ಕೂಟದಲ್ಲಿ ಅನೇಕ ತಿಂಗಳುಗಳಿಂದ ಸಂಘಟಕರೆಲ್ಲ ಸೇರಿ ಬೃಹತ್‌ ಕಾರ್ಯಕ್ರಮವೊಂದರ ತಯಾರಿ ನಡೆಸಿದ್ದರು.

ಸುಮಾರು ಮೂರು ವಾರಗಳ ಮೊದಲೇ ಎಲ್ಲ ಟಿಕೆಟ್‌ಗಳು ಮಾರಾಟವಾಗಿದ್ದು ಎಲ್ಲ ಸದಸ್ಯರ ಕನ್ನಡ ಪ್ರೇಮವನ್ನು, ಕನ್ನಡ ಕೂಟದ ಶಕ್ತಿಯನ್ನು ಎತ್ತಿ ತೋರಿತ್ತು. ಕಾರ್ಯಕ್ರಮದ ಹಿಂದಿನ ದಿನವೇ ಎಲ್ಲ ಸ್ವಯಂ ಸೇವಕರ ಪರಿಶ್ರಮದಿಂದ ಕಾಲೇಜಿನ ಆವರಣವೆಲ್ಲ ಸಂಭ್ರಮಕ್ಕೆ ಅಣಿಯಾಗಿತ್ತು. ಗಂಡಭೇರುಂಡ, ಗರುಡರಾದಿಯಾಗಿ ವಿಶೇಷ ಕರಕುಶಲ ಕೆತ್ತನೆಯಿಂದ ಪರಿಶೋಭಿಸುತ್ತಿದ್ದ ಬೃಹತ್‌ ಹೆಬ್ಟಾಗಿಲು ಎಲ್ಲರನ್ನು ಸ್ವಾಗತಿಸಲು ಎತ್ತರದಲ್ಲಿ ನಿಂತಿತು. ಆ ದ್ವಾರದಿಂದ ಒಳಗೆ ಬರಲು, ಹೊರಾಂಗಣ ವೇದಿಕೆಯಲ್ಲಿ ಹಂಪಿಯ ಆನೆ ಲಾಯ ಹಿನ್ನೆಲೆಯಾಗಿ ವಿಜೃಂಭಿಸುತ್ತಿತ್ತು. ಅÇÉೇ ಪಕ್ಕದÇÉೇ ಚಕ್ಕಡಿಯೊಂದು ಕರ್ನಾಟಕದ ಗ್ರಾಮೀಣ ಸೌಂದರ್ಯವನ್ನು ನೆನಪಿಸುತ್ತಿತ್ತು. ಇನ್ನು ಮುಂದೆ ಬಂದರೆ, ಮೈಸೂರಿನ ಅರಮನೆಯ ಭಿತ್ತಿ ಚಿತ್ರ ನಾವು ಮೈಸೂರಿನಲ್ಲೇ ಇದ್ದೇವೆ ಎನ್ನುವಷ್ಟು ನೈಜವಾಗಿತ್ತು. ಇನ್ನು ಸಭಾಂಗಣದ ದ್ವಾರದ ಪಕ್ಕದಲ್ಲೇ ಹಂಪಿಯ ರಥದ ಪ್ರತಿಕೃತಿಯೊಂದು ನಿಜವಾದ ಹಂಪಿಯ ರಥಕ್ಕೆ ಸರಿಸಮವೆನ್ನುವಷ್ಟು ಜೀವಂತವಾಗಿತ್ತು. ಜತೆಯಲ್ಲೇ ಹೊಯ್ಸಳರ ಲಾಂಛನ ನಮ್ಮ ಕರುನಾಡ ಶಿಲ್ಪಕಲಾ ವೈಭವದ ಪ್ರತೀಕವಾಗಿ ನಿಂತಿತ್ತು. ಇಷ್ಟೆಲ್ಲ ವೈಭವಕ್ಕೆ ಕಾರಣರಾದ ಎಲ್ಲ ಕನ್ನಡಕೂಟದ ಕಲಾವಿದರಿಗೆ ಸಲಾಂ!

ಸುವರ್ಣ ಸಂಭ್ರಮದ ಮೊದಲ ದಿನವಾದ ಸೆ.23ರಂದು ಪೂರ್ವದಲ್ಲಿ ಹುಟ್ಟಿದ ಸೂರ್ಯ, ಪಶ್ಚಿಮ ತೀರದಲ್ಲಿ ರಥವೊಂದರಲ್ಲಿ ವಿರಾಜಮಾನಳಾಗಿದ್ದ ಕನ್ನಡ ಭುವನೇಶ್ವರಿಗೆ ಆರತಿಯನ್ನು ಬೆಳಗಲು ಸಿದ್ಧನಿದ! ಸಂಘದ ಸದಸ್ಯರೆಲ್ಲ ಸೇರಿ ಮೆರವಣಿಗೆ ಹೊರಡಲು ಸಿದ್ಧವಾಗುತ್ತಿದ್ದರು. ಹೊರಗಿನ ವೇದಿಕೆಯಲ್ಲಿ ಮುಖ್ಯ ಅತಿಥಿಗಳು ಆಸೀನರಾಗಿದ್ದರು.

ಕರ್ನಾಟಕದ ಹಿರಿಮೆ, ಕನ್ನಡಿಗರ ವೈಭವದ ಇತಿಹಾಸದ ಮುಕುಟ ಪ್ರಾಯವೆನ್ನಬಹುದಾದ ರಾಜಮನೆತನದ ಕುಲದೀಪಕರು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು ಕನ್ನಡ ಕೂಟದ ಇತಿಹಾಸದಲ್ಲಿ ಸುವರ್ಣಾಕ್ಷರಗಲ್ಲಿ ಬರೆದಿಡಬೇಕಾದ ಕ್ಷಣವಾಗಿತ್ತು. ಜತೆಯಲ್ಲಿ ಜ್ಞಾನ ಭಂಡಾರ ಎನ್ನಬಹುದಾದ ಡಾ| ಗುರುರಾಜ ಕರ್ಜಗಿಯವರು, ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಡಾಲಿ ಧನಂಜಯ, ಅಮೆರಿಕದಲ್ಲಿ ಬಹು ಯಶಸ್ವಿ ಉದ್ಯಮಿಗಳಾದ ಬಿ.ವಿ.ಜಗದೀಶ್‌ ದಂಪತಿಗಳು ವೇದಿಕೆಯನ್ನು ಅಲಂಕರಿಸಿದ್ದರು.

ಕನ್ನಡ ಕೂಟ ತಾಯಿ ಮರವಾಗಿ ಅನೇಕ ಉಪಸಂಸ್ಥೆಗಳನ್ನು ತನ್ನ ನೆರಳಲ್ಲಿ ಪೋಷಿಸಿದೆ. ಎಲ್ಲ ಉಪಸಂಸ್ಥೆಗಳ ಸದಸ್ಯರು, ಪ್ರತಿನಿಧಿಗಳು ತಂಡೋಪತಂಡವಾಗಿ ಬಂದು, ದೇವರಕುಣಿತ, ಪಟ ಕುಣಿತ, ಕಂಸಾಳೆ, ಹೀಗೆ ಒಂದೊಂದು ಜಾನಪದ ನೃತ್ಯ ಪ್ರಕಾರದ ಪ್ರದರ್ಶನದೊಂದಿಗೆ ಮೆರವಣಿಗೆಯನ್ನು ನಡೆಸಿಕೊಟ್ಟರು. ಮಹಾರಾಜರ ಉಪಸ್ಥಿತಿ, ಈ ಕಲಾಪ್ರಕಾರಗಳ ಪ್ರಸ್ತುತಿ, ಮೈಸೂರಿನ ದಸರಾವನ್ನೇ ನೆನಪಿಸುತ್ತಿತ್ತು! ಕಡೆಯಲ್ಲಿ ಕನ್ನಡ ಕೂಟದ ಈ ಸಾಲಿನ ಕಾರ್ಯಕಾರಿ ಸಮಿತಿಯವರು, ಕನ್ನಡ ಭುವನೇಶ್ವರಿ ಕುಳಿತಿದ್ದ ತೇರನ್ನು ಎಳೆಯುತ್ತಾ ಬಂದು, ಮಹಾರಾಜರ ಅಪ್ಪಣೆಯನ್ನು ಪಡೆದು, ಅವರನ್ನು ಸಹ ಪೂರ್ಣಕುಂಭದೊಂದಿಗೆ ಸಭಾಂಗಣದತ್ತ ನಡೆಸಿಕೊಂಡು ಬಂದರು. ವೇದ ಘೋಷದ ಹಿನ್ನಲೆ, ಅತಿಥಿಗಳ ಸಮ್ಮುಖದಲ್ಲಿ ಕನ್ನಡದ ತೇರು ಸಭಾಂಗಣದ ದ್ವಾರವನ್ನು ಸೇರಿತು. ಅನಂತರ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರುವಂತೆ ಕೋರುತ್ತಾ ಮಹಾಗಣಪತಿಯ ಪೂಜೆಯನ್ನು ಪುರೋಹಿತರ ಸಾರಥ್ಯದಲ್ಲಿ ನೆರವೇರಿಸಲಾಯಿತು.

ಕರ್ನಾಟಕದ ವೈವಿಧ್ಯತೆಯನ್ನು ಸಂಭ್ರಮಿಸಲು “ಕರುನಾಡ ಕಾಮನಬಿಲ್ಲು ‘ಎನ್ನುವ ಶೀರ್ಷಿಕೆಯಡಿ ಕರ್ನಾಟಕದ ನಾಡಗೀತೆಗೆ ಕೂಟದ ಸದಸ್ಯರು ವರ್ಣರಂಜಿತವಾಗಿ ನೃತ್ಯಪ್ರದರ್ಶನವನ್ನು ನೀಡಿದರು. ಅನಂತರ ಮಹಾರಾಜರು ಹಾಗೂ ಎಲ್ಲ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿದರು. ತಮ್ಮ ತಾತನವರು ಕೂಡ ಸ್ಯಾನ್‌ಫ್ರಾನ್ಸಿಸ್ಕೋಗೆ ಬಂದಾಗ ಆಗಿನ ಮೇಯರ್‌ ಅವರಿಗೆ ನೀಡಿದ್ದ ಉಡುಗೊರೆಯನ್ನು ನೆನೆಯುತ್ತಾ, ಕರ್ನಾಟಕದ ವೈಭವವನ್ನು ಸ್ಮರಿಸಿ, ಕನ್ನಡ ಕೂಟದ ಸುವರ್ಣ ಮಹೋತ್ಸವಕ್ಕೆ ಮಹಾರಾಜರಾದ ಯದುವೀರ ಒಡೆಯರ್‌ ಅವರು ಶುಭಾಶಯವನ್ನು ಕೋರಿದರು. ಕೂಟದ ಈ ಸಾಲಿನ ಅಧ್ಯಕ್ಷೆಯಾದ ಶರ್ಮಿಳಾ ವಿದ್ಯಾಧರ ಅವರು ತಮ್ಮ ತವರಿನಷ್ಟೇ ಆಪ್ಯಾಯಮಾನವಾದ ಕನ್ನಡ ಕೂಟದ ಈ ಸುವರ್ಣ ಸಂಭ್ರಮದಲ್ಲಿ ಎಲ್ಲರೂ ಸಂತೋಷವಾಗಿ ಕಾಲ ಕಳೆಯಬೇಕೆಂದು ಕೇಳಿಕೊಂಡರು. ಉದ್ಘಾಟನ ಕಾರ್ಯಕ್ರಮದ ಅನಂತರ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯಲ್ಲಿ ಮುಕುಟಪ್ರಾಯವೆನ್ನಬಹುದಾದ ದಾಸ ಸಾಹಿತ್ಯದ ಹಿರಿಮೆಯನ್ನು ಸಾರುವಂಥ “ಸುವರ್ಣ ಭಕ್ತಿ ಸಮ್ಮಿಲನ’ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.

ಯಕ್ಷಗಾನ ಪ್ರದರ್ಶನ
ಉಡುಪಿಯಿಂದ ಬಂದಿದ್ದ ಭಾಗವತರಾದ ಕೆ. ಜೆ. ಗಣೇಶ್‌ ಅವರ ನಿರ್ದೇಶನದಲ್ಲಿ, ಅವರ ಭಾಗವತಿಕೆಯಲ್ಲಿ “ಚಕ್ರವ್ಯೂಹ’ ಯಕ್ಷಗಾನ ಪ್ರಸಂಗವನ್ನು ಕನ್ನಡ ಕೂಟದ ಸದಸ್ಯರೇ ಯಕ್ಷಗಾನದ ವೇಷ ಕಟ್ಟಿ ಪ್ರದರ್ಶಿಸಿದರು. ದಶಕಗಳಿಂದ ಅಮೆರಿಕದಲ್ಲಿ ಹುಟ್ಟಿ ಬೆಳೆಯುವ ಕನ್ನಡ ಮಕ್ಕಳಿಗೆ ಕನ್ನಡ ಕಲಿಸುವ ಸಲುವಾಗಿ ಕಟ್ಟಿರುವ ಕನ್ನಡ ಕಲಿ ಶಾಲೆಯ ಶಿಕ್ಷಕರೆಲ್ಲ ಸೇರಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ನಾಟಕ, ಕಾವ್ಯ ರೂಪಕ
ಅಮೆರಿಕದ ಪೂರ್ವ ತೀರದಿಂದ ಬಂದಿದ್ದ ಕಲಾವಿದರಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರರ ಕಾದಂಬರಿ ಆಧಾರಿತ, ಪದ್ಮಶ್ರೀ ಬಿ. ಜಯಶ್ರೀ ಅವರು ರಚಿಸಿರುವ “ಕರಿಮಾಯಿ’ ನಾಟಕವನ್ನು ಪ್ರದರ್ಶಿಸಲಾಯಿತು. ಮರಳಿನಿಂದ ಪ್ರೇಕ್ಷಕರನ್ನು ಕಲಾತ್ಮಕವಾಗಿ ಮರಳು ಮಾಡಬಲ್ಲ ಕನ್ನಡದ ಉದಯೋನ್ಮುಖ ಕಲಾವಿದರಾದ ರಾಘವೇಂದ್ರ ಹೆಗ್ಡೆಯವರು ವೈವಿಧ್ಯಮಯವಾದ ಕನ್ನಡ ಹಾಡುಗಳಿಗೆ ಸೂಕ್ತವಾಗಿ ಮರಳಿನಿಂದ ಕಲಾಕೃತಿಗಳನ್ನು ರಚಿಸಿ ನೆರೆದ ಪ್ರೇಕ್ಷಕರನ್ನು ವಿಸ್ಮಿತಗೊಳಿಸಿದರು. ಕನ್ನಡ ಸಾಹಿತ್ಯಲೋಕದ ನಕ್ಷತ್ರವಾದ ಪು.ತಿ.ನರಸಿಂಹಾಚಾರ್ಯ ಅವರು ರಚಿಸಿದ “ದೀಪಲಕ್ಷ್ಮೀ’ ಕಾವ್ಯ ರೂಪಕವನ್ನು ಅವರ ಮಗಳೇ ಆದ ಅಲಮೇಲು ಅಯ್ಯಂಗಾರ್‌ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.

ಸಂವಾದ, ಸಂಗೀತ ರಸಮಂಜರಿ
ಕನ್ನಡ ಕೂಟದ ವೇದಿಕೆಯ ಮೇಲೆ ಪ್ರಪ್ರಥಮ ಬಾರಿಗೆ, ಚಂದನವನದ ಚಂದದ ನಟ ಧನಂಜಯ ಅವರೊಡನೆ ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು. ಆ ದಿನದ ಮುಖ್ಯ ಆಕರ್ಷಣೆ, ಕರ್ನಾಟಕದ ಹೆಮ್ಮೆಯ ಗಾಯಕ ರಘು ದೀಕ್ಷಿತ್‌ ಹಾಗೂ ಅವರ ತಂಡ ಸಂಗೀತ ಸಂಜೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು. ಅವರ ಅಮೋಘ ಸಂಗೀತಕ್ಕೆ ನೆರೆದ ಎಲ್ಲ ಪ್ರೇಕ್ಷಕರು ಕಿಕ್ಕಿರಿದು ಕುಣಿದು ನಲಿದರು!

ನೃತ್ಯ ರೂಪಕ, ವಿಚಾರ ಗೋಷ್ಠಿ
ಸಂಭ್ರಮದ ಎರಡನೇ ದಿನ ಕೂಟದ ಸದಸ್ಯರೆಲ್ಲ ಸೇರಿ ಭಗವದ್ಗೀತೆಯ ಪಠಣದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರ ಅಕ್ಕಮಹಾದೇವಿ ಹಾಗೂ ಅಲ್ಲಮ ಪ್ರಭುಗಳ ಸಂವಾದವನ್ನೊಳಗೊಂಡ “ಶೂನ್ಯ ಸಂಪಾದನೆ’ ಶೀರ್ಷಿಕೆಯ ಪ್ರಸಂಗವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡದ ವಿವಿಧ ಕಾವ್ಯ ಪ್ರಕಾರದ, ವಿವಿಧ ಶೈಲಿಯ ಪ್ರಖ್ಯಾತ ಗೀತೆಗಳ “ಸುವರ್ಣ ರಾಗ ಧಾರೆ’ಯನ್ನು ಸ್ಥಳೀಯ ಕಲಾವಿದರ ತಂಡ ಪ್ರದರ್ಶಿಸಿತು. “ಕ್ಷೀರಾಮೃತ’ ಎನ್ನುವ ನೃತ್ಯರೂಪಕವಂತೂ ತಾಂತ್ರಿಕವಾಗಿ, ಕಲಾತ್ಮಕವಾಗಿ ಪ್ರೇಕ್ಷಕರನ್ನು ನಿಬ್ಬೆರಗಾಗಿಸಿತ್ತು.

ಜ್ಞಾನ ನಿಧಿ ಎನ್ನಬಹುದಾದ ಡಾ| ಗುರುರಾಜ ಕರ್ಜಗಿ ಅವರು ಸುಮಾರು ಒಂದು ಘಂಟೆಯ ಕಾಲ “ಸಕಾರಾತ್ಮಕ ಚಿಂತನೆಯನ್ನು ಹೊಂದುವ ಪರಿ’ ಎನ್ನುವ ವಿಷಯದ ಬಗ್ಗೆ ನೀಡಿದ ಉಪನ್ಯಾಸವು ಪ್ರೇಕ್ಷಕರಲ್ಲಿ ಅಪೂರ್ವ ಪರಿಣಾಮವನ್ನುಂಟು ಮಾಡಿತ್ತು. ಈ ನಡುವೆ ಕರ್ನಾಟಕದಿಂದ ಆಗಮಿಸಿದ್ದ ಉದಯೋನ್ಮುಖ ಹಾಸ್ಯ ಕಲಾವಿದರಾದ ರಾಘವೇಂದ್ರ ಆಚಾರ್ಯ, ನಿರೂಪ್‌ ಮೋಹನ್‌, ಕಾರ್ತಿಕ್‌ ಪತ್ತಾರ್‌ ಅವರುಗಳ ಹಾಸ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತ್ತು. ಕಾರ್ಯಕ್ರಮ ನಡೆಸಿಕೊಟ್ಟ ವಿನಾಯಕ್‌ ಜೋಶಿ, ನೆರೆದವರಿಗೆ ಮಾತಿನಲ್ಲೇ ಇನ್ನಷ್ಟು ಖುಷಿ ಹಂಚಿದ್ದರು. ಮೂರು ವೇದಿಕೆ, ವಿವಿಧ ಕಾರ್ಯಕ್ರಮ ಎರಡೂ ದಿನಗಳ ಕಾಲ ಮೂರು ವೇದಿಕೆಗಳ ಮೇಲೆ ವಿಭಿನ್ನ ರೀತಿಯ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.

ಪ್ರತಿಯೊಂದು ವೇದಿಕೆಗೂ, ಪ್ರತಿಯೊಂದು ಸ್ಥಳಕ್ಕೂ ಒಂದೊಂದು ಹೆಸರನ್ನು ನಾಮಕರಣ ಮಾಡಲಾಗಿತ್ತು. ವಾಹನ ನಿಲುಗಡೆಯ ಸ್ಥಳಕ್ಕೆ ಮೆಜೆಸ್ಟಿಕ್‌ ಎಂದೂ, ವ್ಯಾಪಾರ ಮಳಿಗೆಗಳನ್ನು ಹೊಂದಿದ್ದ ಸ್ಥಳಕ್ಕೆ “ಚೆನ್ನಮ್ಮ ವೃತ್ತ’ ಎಂದೂ, ಮುಖ್ಯ ವೇದಿಕೆಗೆ “ಗಂಧದ ಗುಡಿ’ ಎಂದು ಹೆಸರಿಡಲಾಗಿತ್ತು. ಪ್ರಾಂಗಣದಲ್ಲಿ ಕರ್ನಾಟಕದ ಮೂವತ್ತು ಜಿಲ್ಲೆಗಳಿಂದ ಪ್ರಮುಖ ಆಕರ್ಷಣೆಯ ಸ್ಥಳಗಳ ಭಿತ್ತಿ ಚಿತ್ರಗಳನ್ನು, ಚಂದನವನದ ಎಲ್ಲ ನಾಯಕ ನಾಯಕಿಯರ ಚಿತ್ರಗಳನ್ನು, ಕವಿವರೇಣ್ಯರ ಹಾಗೂ ಸಾಧು ಸಂತರ ಚಿತ್ರಗಳನ್ನು ಬಳಸಿ ಅಲಂಕರಿಸಲಾಗಿತ್ತು. ಆ ಪ್ರಾಂಗಣದ ಪಥಕ್ಕೆ “ಕವಿರಾಜ ಮಾರ್ಗ’ವೆಂದು ಊಟದ ಮನೆಗೆ “ಉಪಹಾರ ದರ್ಶಿನಿ’ ಎಂದು ನಾಮಕರಣ ಮಾಡಲಾಗಿತ್ತು. ಎರಡನೇ ವೇದಿಕೆಯಾಗಿದ್ದ “ಗುಬ್ಬಿ ಗೂಡಿ’ನಲ್ಲಿ ಎರಡೂ ದಿನವೂ ಬಗೆ ಬಗೆಯ ಕಾರ್ಯಾಗಾರಗಳು, ಚಿಂತನ-ಮಂಥನಗಳು ನಡೆದವು. ಉದ್ಯಮಿಗಳ ಸಮಾಲೋಚನ ಸಭೆ, ಮಹಿಳಾ ಸಾಧಕಿಯರ ಸಭೆ, ಮಕ್ಕಳಿಗಾಗಿ ವಿಶೇಷ ಶಾರ್ಕ್‌ ಟ್ಯಾಂಕ್‌ ಕಾರ್ಯಕ್ರಮ, ಅವಿವಾಹಿತರಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಅವಕಾಶ, “ಮಾ ನಿಷಾದ’ ಎನ್ನುವ ಕಾರ್ನಾಡರ ನಾಟಕ ಪ್ರಸ್ತುತಿ, ಹೀಗೆ ಹತ್ತು ಹಲವು ಕಾರ್ಯಕ್ರಮಗಳು ವಿವಿಧ ವೇದಿಕೆಯಲ್ಲಿ ನಡೆದವು.

ಎರಡೂ ದಿನಗಳು ನೆರೆದ ಸದಸ್ಯರಿಗೆ ಭೂರಿ ಭೋಜನವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ವಿವಿಧ ಭಾಗಗಳ ಆಹಾರ ಪದಾರ್ಥಗಳನ್ನೊಳಗೊಂಡಂತೆ ಫೇಣಿ, ಮಸಾಲ ಪುರಿ, ಬಿಸಿಬೇಳೆಬಾತ್‌, ಪಾಯಸ, ಕೋಸುಂಬರಿ, ಕೋಡುಬಳೆ, ಕರ್ಜಿಕಾಯಿ, ಜೋಳದ ರೊಟ್ಟಿ, ಎಣ್ಣೆಗಾಯಿ, ಮದ್ದೂರ್‌ ವಡೆ, ಒಬ್ಬಟ್ಟು, ಆಹಾ! ಒಂದೇ ಎರಡೇ! ಹೀಗೆ ವಿವಿಧ ವೈವಿಧ್ಯಮಯ ಭೋಜನ ಎಲ್ಲರಿಗೂ ಲಭ್ಯವಾಗುವಂತೆ ಭೋಜನ ಸಮಿತಿಯ ಸದಸ್ಯರು ಏರ್ಪಡಿಸಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ, ಚಂದನವನದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಅನೂಪ್‌ ಸೀಳಿನ್‌ ಹಾಗೂ ಅವರ ತಂಡ ಸಂಗೀತ ಸಂಜೆಯನ್ನು ನಡೆಸಿಕೊಟ್ಟರು. ಮಧುರ ಕಂಠದ ಗಾಯಕರಾದ ಅನುರಾಧಾ ಭಟ್‌, ಅಂಕಿತಾ ಕುಂಡು ಹಾಗೂ ವ್ಯಾಸರಾಜ್‌ ಸೋಸಲೆ ಅವರು ನೆರೆದ ಪ್ರೇಕ್ಷಕರ ಮನಗಳಿಗೆ ರಾಗಮಾಲಿಕೆಯನ್ನು ಅರ್ಪಿಸಿದ್ದರು. ಕನ್ನಡ ಸಿನೆ ಲೋಕದ ಪ್ರಖ್ಯಾತ ಗೀತೆಗಳನ್ನು ಕೇಳಿ ನೆರೆದವರೆಲ್ಲ ಆನಂದ ಕಡಲಿನಲ್ಲಿ ತೇಲಾಡಿದ್ದರು.

ಸುವರ್ಣ ಕಲಾಶ್ರೀ ಬಿರುದು
ಅನಂತರ ಕಾರ್ಯಕ್ರಮದ ಮುಖ್ಯ ಅತಿಥಿ, ಚಂದನವನದ ಅನನ್ಯ ನಿರ್ದೇಶಕ, ಕನಸುಗಾರ, ಕ್ರೇಜಿಸ್ಟಾರ್‌ ರವಿಚಂದ್ರನ್‌ ವೇದಿಕೆಗೆ ಆಗಮಿಸಿದಾಗ ಎಲ್ಲರೂ ಅಭಿಮಾನದ ಹರ್ಷೋದ್ಗಾರದಿಂದ ಅವರನ್ನು ಸ್ವಾಗತಿಸಿದರು. ರವಿಚಂದ್ರನ್‌ ಹಾಗೂ ಹಂಸಲೇಖ ಜೋಡಿಯ ಯಶಸ್ವಿ ಹಾಡುಗಳನ್ನು ಗಾಯಕರು ಹಾಡಿ ಮನರಂಜಿಸಿದರು. ಕಾರ್ಯಕ್ರಮದ ಕಡೆಯಲ್ಲಿ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯವರು ರವಿಚಂದ್ರನ್‌ ಅವರಿಗೆ “ಸುವರ್ಣ ಕಲಾಶ್ರೀ ಬಿರುದಿ’ನಿಂದ ಗೌರವಿಸಿದರು.

ಎರಡು ದಿನಗಳ ಕಾಲ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಹಬ್ಬವನ್ನು ಮನೋಹರವಾಗಿ ಆಚರಿಸಲಾಯಿತು. ಕರ್ನಾಟಕದಿಂದ ಸಾವಿರಾರು ಮೈಲಿ ದೂರದಲ್ಲಿ ಪುಟ್ಟ ಕರ್ನಾಟಕವನ್ನೇ ಸೃಷ್ಟಿಸಿ, ಕನ್ನಡತನವನ್ನು ಸಂಭ್ರಮಿಸಿದ ಈ ಕನ್ನಡಿಗರ ಹೆಮ್ಮೆ, ಕನ್ನಡದ ಅಭಿಮಾನ ಹೇಳತೀರದು! “ಎÇÉಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎನ್ನುವ ಸಾಲುಗಳು ಜೀವಂತವಾಗಿ ಮೂರ್ತರೂಪವನ್ನು ಪಡೆದಿತ್ತೆನೋ ಎನ್ನುವಷ್ಟರ ಮಟ್ಟಿಗೆ ಕನ್ನಡ ವಾತಾವರಣವನ್ನು ಸೃಷ್ಟಿಸಿದ್ದ ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಎಲ್ಲ ಪದಾಧಿಕಾರಿಗಳಿಗೆ, ಎಲ್ಲ ಸ್ವಯಂ ಸೇವಕರಿಗೆ ದೊಡ್ಡ ಸಲಾಂ! ಕನ್ನಡ ಸಂಸ್ಕೃತಿ ಇನ್ನಷ್ಟು ತಲೆಮಾರುಗಳಲ್ಲಿ ಜೀವಂತವಾಗಿರಲಿ! ಇನ್ನಷ್ಟು ತೊರೆಗಳನ್ನು ಸೃಷ್ಟಿ ಮಾಡುವ ಜೀವನದಿಯಾಗಿರಲಿ!

ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!

*ವರದಿ: ಸಮರ್ಥ ಭೂಷಣ್‌

 

 

ಟಾಪ್ ನ್ಯೂಸ್

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

Navaratri 2024: ನವ ರೂಪದಲ್ಲಿ ದೇವಿಯ ದೈವಿಕ ನವರಾತ್ರಿಗಳು-ಶಕ್ತಿಯ ಸಂಕೇತ ಶೈಲಪುತ್ರಿ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

ಯಕ್ಷಧ್ರುವ ಪಟ್ಲ ಫೌಂಡೇಶನ್‌: 75 ದಿನಗಳ ಯಕ್ಷಯಾನ ಸಮಾರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

rahul gandhi

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

Supreme Court

Migrants ಪಡಿತರ ಚೀಟಿ: ನಮ್ಮ ತಾಳ್ಮೆ ಕಟ್ಟೆ ಒಡೆದಿದೆ ಎಂದ ಸುಪ್ರೀಂ

Mang2

Mangaluru: ರಾಷ್ಟ್ರೀಯ ಸ್ಟಾಂಡಪ್‌ ಪ್ಯಾಡ್ಲಿಂಗ್‌: ರಾಜ್ಯಕ್ಕೆ 7 ಪದಕ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.