Desi Swara: ಮಲೇಶಿಯಾ ಕನ್ನಡ ಸಂಘ-ಮಲೇಷ್ಯಾದಲ್ಲಿ ಕರ್ನಾಟಕ ಸಂಭ್ರಮ: ಕನ್ನಡ ಡಿಂಡಿಮ

ಸೇವೆಯ ಪ್ರತಿಫಲವಾಗಿ ಇಂದು ಕರ್ನಾಟಕ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ

Team Udayavani, Dec 2, 2023, 5:12 PM IST

Desi Swara: ಮಲೇಶಿಯಾ ಕನ್ನಡ ಸಂಘ-ಮಲೇಷ್ಯಾದಲ್ಲಿ ಕರ್ನಾಟಕ ಸಂಭ್ರಮ: ಕನ್ನಡ ಡಿಂಡಿಮ

ಮಲೇಷ್ಯಾ:ಕೊಲಾಲಂಪುರ್‌ ನಗರದ ರಾಬ್ಸನ್‌ ಕಾಂಡಿಮಿನಿಯಂ ಸಭಾಂಗಣದಲ್ಲಿ ಮಲೇಷ್ಯಾ ಕನ್ನಡ ಸಂಘದ ವತಿಯಿಂದ ಕರ್ನಾಟಕ ಸಂಭ್ರಮ – 50 ಅನ್ನು ಆಚರಿಸಲಾಯಿತು.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ಪ್ರಯುಕ್ತ ಮಲೇಷ್ಯಾ ಕನ್ನಡ ಸಂಘ ಆಯೋಜಿಸಲಾಗಿದ್ದ ಕರ್ನಾಟಕ ಸಂಭ್ರಮ 50ರ ಸಂಭ್ರಮಾಚರಣೆ ಮತ್ತು ಸಂವಾದ ಕಾರ್ಯಕ್ರಮವನ್ನು ಗದಗಿನ ಹುಲಕೋಟಿಯ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನಮ್‌ ಇದರ ಅಧ್ಯಕ್ಷರಾದ ಬ್ರಹ್ಮಚಾರಿ ಅ ದ್ವೈತ ಚೈತನ್ಯ (ಪುನೀತ್‌ ಮಹಾರಾಜ್‌) ಇವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕಳೆದ ಎರಡು ದಶಕಗಳಿಂದ ಮಲೇಷ್ಯಾ ಕನ್ನಡ ಸಂಘ ತನ್ನದೇ ಆದಂತಹ ರೀತಿಯಲ್ಲಿ ಕನ್ನಡದ ಅಸ್ಮಿತೆಯನ್ನು ಹೊರದೇಶದಲ್ಲಿ ಉಳಿಸುವ, ಬೆಳೆಸುವ ಕೈಂಕರ್ಯ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ. ಕುಮಾರವ್ಯಾಸನಿಂದ ಕುವೆಂಪುವರೆಗೂ ಹಲವಾರು ಕವಿಗಳು ನಿರಂತರವಾಗಿ ಕನ್ನಡಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದ ಅವರು ಆಧುನಿಕ ದಿನಮಾನಗಳಲ್ಲಿ ವಿಶೇಷವಾಗಿ ಅನಿವಾಸಿ ಭಾರತೀಯರು ಮಾತೃ ಭಾಷೆಯ ಮೂಲಕ ಭಾವವನ್ನು ಉನ್ನತ ಮಟ್ಟಕ್ಕೆ ಏರಿಸಿಕೊಳ್ಳುವ ಆವಶ್ಯಕತೆ ಇದೆ.

ಇದಕ್ಕೆ ಕನ್ನಡದ ಕವಿಗಳ ವಿಶೇಷವಾಗಿ ಡಿ.ವಿ.ಗುಂಡಪ್ಪನವರ ಕಗ್ಗಗಳು ಹೇಗೆ ನಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ತರಬಲ್ಲದು ಎಂದು ವಿವರಿಸಿ ಪ್ರಶ್ನೋತ್ತರವನ್ನು ಪ್ರಾರಂಭ ಮಾಡಿದರು. ಪ್ರತಿಯೊಂದು ಪ್ರಶ್ನೆಗಳಿಗೂ ಡಿ.ವಿ.ಜಿ ಯವರ ಕಗ್ಗ ಹಾಗೂ ರಾಮಕೃಷ್ಣ ವಿವೇಕಾನಂದರ ವೇದಾಂತ ಸಾಹಿತ್ಯದೊಂದಿಗೆ ಉತ್ತರವನ್ನು ನೀಡುತ್ತಾ ನೆರೆದಿದ್ದವರ ಮನಸೂರೆಗೊಂಡರು.

ಪ್ರಸ್ತುತ ದಿನಮಾನಗಳಲ್ಲಿ ವಿದೇಶಗಳಲ್ಲಿ ನಮ್ಮ ಮಕ್ಕಳು ನಮ್ಮ ಸಂಸ್ಕೃಯನ್ನು ಮರೆತಿರುವಂತೆ ಕಂಡರೂ ಈ ರೀತಿಯ ಚಟುವಟಿಕೆಗಳಿಂದ ಅವರಲ್ಲಿ ಮತ್ತೂಮ್ಮೆ ಸಂಸ್ಕೃತಿ, ಸಾಹಿತ್ಯ ಅಭಿರುಚಿ ಹಾಗೂ ಭಾರತೀಯ ಮೌಲ್ಯಗಳನ್ನು ಬೆಳೆಸಿದಂತೆ ಆಗುತ್ತದೆ ಎಂದು ಕಿವಿಮಾತು ಹೇಳಿದರು.

ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಏಳಿಗೆಗಾಗಿ ಶ್ರಮಿಸಿರುವ ಎಲ್ಲ ಸಾಹಿತಿಗಳ, ಹೋರಾಟಗಾರರ, ಜನನಾಯಕರ, ಕವಿ ಶ್ರೇಷ್ಠರ ಮತ್ತು ಕರ್ನಾಟಕ ರಾಜ್ಯದ ಎಲ್ಲ ಕನ್ನಡ ಶಿಕ್ಷಕರ ತ್ಯಾಗ ಮತ್ತು ಸೇವೆಯ ಪ್ರತಿಫಲವಾಗಿ ಇಂದು ಕರ್ನಾಟಕ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ ಎಂದರು.

“ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು’
ಎಂಬ ರಾಷ್ಟ್ರಕವಿ ಕುವೆಂಪು ಅವರ ಹೃದಯ ದನಿಯಂತೆ ದೂರದ ಮಲೇಷ್ಯಾದಲ್ಲಿ ತಮ್ಮ ತನವನ್ನು ಮರೆಯದೆ, ತಮ್ಮ ಮಾತೃಭಾಷೆಯನ್ನು ಮರೆಯದೆ, ಕನ್ನಡದ ಹಿರಿಮೆ ಗರಿಮೆಗಳನ್ನು ಮಲೇಷ್ಯಾ ಪ್ರಜೆಗಳು ಕೂಡ ಮೆಚ್ಚುವ ರೀತಿಯಲ್ಲಿ ತಮ್ಮ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿರುವ ಸಂಘದ ಎಲ್ಲ ಪದಾಧಿಕಾರಿಗಳಿಗೆ, ಸದಸ್ಯರುಗಳಿಗೆ ಕಾರ್ಯಕ್ರಮದ ಆಯೋಜಕರಿಗೆ ಅಭಿನಂದಿಸಿದರು.

ಮಲೇಷ್ಯಾ ಕನ್ನಡ ಸಂಘದಿಂದ ಸಮಸ್ತ ಕನ್ನಡಿಗರಿಗೆ ಕರ್ನಾಟಕ ರಾಜ್ಯ ನಾಮಕರಣದ ಸುವರ್ಣ ಸಂಭ್ರಮದ ಶುಭಾಶಯಗಳನ್ನು ತಿಳಿಸಲಾಯಿತು. ಅನಂತರದಲ್ಲಿ ಪೂಜ್ಯ ಮಹಾರಾಜರಿಗೆ ಕನ್ನಡ ಸಂಘದ ವತಿಯಿಂದ ಸದಸ್ಯರಾದ ಪ್ರಶಾಂತ್‌ ನಾಯಕ್‌ ಅವರು ಸಮ್ಮಾನಿಸಿದರು.

ಇದೇ ಸಂದರ್ಭದಲ್ಲಿ ಮಲೇಷ್ಯಾ ಕನ್ನಡ ಸಂಘದ ಸದಸ್ಯರಾದ ವಿನಯ್‌ ನಾಗರಾಜ್‌ ಇವರು ಪೂಜ್ಯರನ್ನು ಹಾಗೂ ಎಲ್ಲ ಆಹ್ವಾನಿತರನ್ನು ಸ್ವಾಗತಿಸಿದರು. ಮಲೇಷ್ಯಾ ವಿಶ್ವವಿದ್ಯಾನಿಲಯದಲ್ಲಿ ಪಿ.ಎಚ್‌ಡಿ ವ್ಯಾಸಂಗ ಮಾಡುತ್ತಿರುವ ಯುವ ಸಾಧಕರಾದ ಕಿರಣ್‌ ಕುಮಾರ್‌ ರೋಣದ್‌ ಇವರು ಪೂಜ್ಯರ ಪರಿಚಯವನ್ನು ಮಾಡಿದರು.

ವಿನಯ್‌ ವಂದಿಸಿದರು. ವಿವೇಕ್‌ ಸತೀಶ್‌, ಆನಂದ್‌ ಹೊಮ್ಮರಡಿ, ಕಿರಣ್‌ ನೀಲುಗಲ್ಲ, ಸಂತೋಷ್‌ ಕುಮಾರ್‌, ವಿನಯ್‌ ಕಶ್ಯಪ್‌, ಪ್ರಶಾಂತ್‌ ರಾವ್‌, ದೇಶ, ವಿರಾಜ, ಬದ್ರೆಗೌಡ, ಮಂಜುಳಾ, ಚೈತ್ರ, ದಿವ್ಯ, ಮೀತಾ, ಸುಪ್ರಭ, ಪುಷ್ಕರಣಿ, ವಿದ್ಯಾ ಹಲವು ಪ್ರಮುಖ ಸದಸ್ಯರು ಮತ್ತು ಗದಗ ನವರಾದ ಶಿವಕುಮಾರ ಶಿವನಗುತ್ತಿ ಇವರುಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.