Desi Swara: ಪಂಪ ಕನ್ನಡ ಕೂಟ: ಅದ್ದೂರಿ ಗಣೇಶೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ

ಗಣೇಶನ ವಿಗ್ರಹವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದರು

Team Udayavani, Oct 19, 2024, 10:09 AM IST

Desi Swara: ಪಂಪ ಕನ್ನಡ ಕೂಟ: ಅದ್ದೂರಿ ಗಣೇಶೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ

ಮಿಚಿಗನ್‌: ಪಂಪ ಕನ್ನಡ ಕೂಟ, ಮಿಚಿಗನ್‌ನ ಹೊಸ ಕಾರ್ಯಕಾರಿ ಸಮಿತಿಯ ಮೊದಲ ಸಾಂಸ್ಕೃತಿಕ ಕಾರ್ಯಕ್ರಮವು ಸೆ.21ರ ಗೌರಿ ಗಣೇಶೋತ್ಸವದ ಕಾರ್ಯಕ್ರಮದಿಂದ ಪ್ರಾರಂಭವಾಯಿತು. ಮಿಚಿಗನ್‌ನ ಕನ್ನಡಿಗರಿಗೆ ಕಳೆದ 53 ವರ್ಷಗಳಿಂದ ಈ ತರಹದ ಸಂಭ್ರಮದ ಅವಕಾಶಗಳನ್ನು ಪಂಪ ಕನ್ನಡ ಕೂಟವು ಸದಾ ಒದಗಿಸುತ್ತಾ ಬಂದಿದೆ.

ನೂತನ ಸಮಿತಿಯು ಜುಲೈ ತಿಂಗಳಿನಲ್ಲಿ ಯಶಸ್ವಿಯಾಗಿ ವಾಲಿಬಾಲ್‌ ಮತ್ತು ಥ್ರೋ ಬಾಲ್‌ ಪಂದ್ಯಾವಳಿಯನ್ನು ನಡೆಸಿಕೊಟ್ಟು, ಆಗಸ್ಟ್‌ ಕೊನೆಯಲ್ಲಿ ಗಮ್ಮತ್ತಿನ ಪಂಪವನ ಮಹೋತ್ಸವವನ್ನು (ಪಿಕ್‌ನಿಕ್‌) ಆಚರಿಸಿದ ಅನಂತರ ಗೌರಿ ಗಣೇಶೋತ್ಸವದ ತಯಾರಿಯಲ್ಲಿ ತೊಡಗಿಸಿಕೊಂಡರು.

ಸಂಘದ ಅಧ್ಯಕ್ಷರಾದ ಪ್ರಮೋದ್‌ ಗೋಪಾಲ್‌ ಅವರು ಮತ್ತು ಸಮಿತಿಯವರು ಶಾಂತಲಾ ಮೂರ್ತಿಯವರು ಮಾಡಿದಂತಹ ಸುಂದರವಾದ ಗಣೇಶನ ವಿಗ್ರಹವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿದರು. ಅಲಂಕಾರ ಸಮಿತಿಯ ಸ್ನೇಹ ಸುರೇಶ್‌, ಪೂರ್ಣಿಮಾ ಶಬದಿ ಅವರು ರಚಿಸಿದ ವೈಭವವಾದ ಗಣೇಶನ ಮಂಟಪದಲ್ಲಿ ವಿಗ್ರಹ ಸ್ಥಾಪನೆಯ ಅನಂತರ ಪೂಜೆ ನೆರವೇರಿಸಲಾಯಿತು.

ಅನಂತರ ಸಾಂಸ್ಕೃತಿಕ ಸಮಿತಿಯ ನೇತೃತ್ವ ವಹಿಸಿದ್ದ ಕಿಶೋರ್‌ ಎನ್‌. ಸಿ., ಅವರೊಂದಿಗೆ ಶಿಲ್ಪಾ ವಾರಿ, ನೇತ್ರ ಶ್ರೀಧರ್‌, ಚೈತ್ರಾ ಚಿರಂಜೀವಿ ಮತ್ತು ಅಶ್ವಿ‌ನಿ ಶೇಕಣ್ಣವರ್‌ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಇದರಲ್ಲಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ವಿವಿಧ ಮನೋರಂಜನ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಬಹಳ ಜನಪ್ರಿಯವಾದ ಆದರ್ಶ ದಂಪತಿಗಳು ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಲಾಯಿತು.

ಆಹಾರ ಸಮಿತಿಯ ನೇತೃತ್ವದಲ್ಲಿ ಪುಷ್ಕಳವಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭೋಜನದ ವ್ಯವಸ್ಥೆ ಮತ್ತು ಉಸ್ತುವಾರಿಯನ್ನು ವಾಣಿ ಮಂಜುನಾಥ್‌, ಚಲಪತಿ, ಸತೀಶ್‌ ವೇಮಲಿ, ಶ್ರೀದೇವಿ ದೇವರಾಜ್‌ ಮತ್ತು ಪ್ರಕಾಶ್‌ ರೆಡ್ಡಿಯವರು ವಹಿಸಿದ್ದರು.

ಕೋಶಾಧಿಕಾರಿಯಾದ ಅಶುತೋಷ್‌ ಹಾರಪ್ಪನಹಳ್ಳಿ ಅವರು ಆಗಮಿಸಿದ ಸುಮಾರು 400ಕ್ಕೂ ಅಧಿಕ ಅತಿಥಿಗಳ ನೋಂದಣಿ ಮತ್ತು ಪ್ರವೇಶ ಚೀಟಿಯನ್ನು ತ್ವರಿತವಾಗಿ ವಿತರಣೆ ಮಾಡುತ್ತಿದ್ದರೆ, ಉಪಾಧ್ಯಕ್ಷರಾದ ನವೀನ್‌ ಹತಪಕ್ಕೀಯವರು ಎಲ್ಲ ವ್ಯವಸ್ಥೆಗಳ ಮೇಲ್ವಿಚಾರಣೆಯಲ್ಲಿ ತೊಡಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಶಿವಶಾರ್ದುಲ್‌ ಪರ್ಕಶನ್ಸ್‌ ಅವರ ತಂಡದಿಂದ ಧೋಲ್‌ ತಾಷೆ ಜರಗಿತು.

ಧೋಲ್‌ ತಾಷೆ ಮೊಳಗಲು ಪ್ರಾರಂಭವಾದಂತೆ ಗಣೇಶನ ವಿಗ್ರಹವನ್ನು ಒಬ್ಬರಾದಂತೆ ಒಬ್ಬರು ಜೋಪಾನವಾಗಿ ಹಿಡಿದುಕೊಂಡು ಅದ್ದೂರಿಯಾದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಭಕ್ತರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತ ಧೋಲ್‌ ತಾಷೆಯ ಬಗೆಬಗೆಯ ಗೀತೆಗಳ ನಾದದೊಂದಿಗೆ ಭಕ್ತಿ ಭಾವದಲ್ಲಿ ಮೈಮರೆತರು. ಸಂಜೆ ಗಣೇಶನ ಮೂರ್ತಿಯ ವಿಸರ್ಜನೆಯ ಕಾರ್ಯಕ್ರಮದೊಂದಿಗೆ ಪಂಪ ಕನ್ನಡ ಕೂಟದವರು ನೆರೆವೇರಿಸಿದ ಅದ್ದೂರಿಯಾದ ಗಣೇಶೋತ್ಸವದ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

ಛಾಯಾಗ್ರಹಣದ ಜವಾಬ್ದಾರಿಯನ್ನು ರಾಜೇಶ್‌ ಎಂ. ಬಿ. ಅವರು ವಹಿಸಿ ಸುಂದರವಾದ ನೆನಪುಗಳನ್ನು ಸೆರೆಹಿಡಿದರೆ, ಎಎಂ ಮೀಡಿಯಾದ ದೀಪಕ್‌ ಮತ್ತು ಮಿಲನ್‌ ಅವರು ಕಾರ್ಯಕ್ರಮದ ವೀಡಿಯೋ ಉಸ್ತುವಾರಿಯನ್ನು ವಹಿಸಿದ್ದರು.

ಈ ಕಾರ್ಯಕ್ರಮದ ಪ್ರಾಯೋಜಕರಾದ ಅಭಿನಯ ಸ್ಕೂಲ್‌ ಒಫ್‌ ಡಾನ್ಸ್‌, ಆrಜಿಜಜಠಿಛಿr ಮೈಂಡ್ಸ್‌, ಫುಡ್‌ ಪಾರ್ಟ್‌ನರ್‌ ಖುರಿಸ್‌ ಟ್ರಾಯ್‌ ಮತ್ತು ದಿನಸಿ ಪಾರ್ಟ್‌ನರ್‌ ಪಂಜಾಬ್‌ ಗ್ರೋಸರ್ಸ್‌ ರೋಚೆಸ್ಟರ್‌ ಹಿಲ್ಸ್‌ ಅವರಿಗೆ ಹೃತೂ³ರ್ವಕ ಕೃತಜ್ಞತೆಗಳು. ವಿಶೇಷವಾಗಿ ನಮ್ಮವರೇ ಆದ ಅಮರನಾಥ್‌ ಗೌಡ ಅವರಿಗೆ ಮತ್ತು ಪಂಪ ನಿರ್ದೇಶಕರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಆದರ್ಶ ದಂಪತಿಗಳ ವಿಜೇತರಿಗೆ ಬಹುಮಾನ ಪ್ರಾಯೋಜಿಸಿದ ಶರಣಮ್ಮ ಬನ್ನೂರ್‌, ಮಹೇಶ್‌ ಪಾಟೀಲ್‌ ಮತ್ತು ನಾಗಮಣಿ ವಿಶ್ವನಾಥ್‌ ಅವರಿಗೂ ಹೃತೂ³ರ್ವಕ ಧನ್ಯವಾದಗಳು. ಪಂಪ ಕನ್ನಡ ಕೂಟದ ಎಲ್ಲ ಸದಸ್ಯರ ಪಾಲ್ಗೊಳ್ಳುವಿಕೆ ಮತ್ತು ಪ್ರೋತ್ಸಾಹಕ್ಕಾಗಿ ಕೂಟದ ಕಾರ್ಯಕಾರಿ ಸಮಿತಿಯವತಿಯಿಂದ ಹೃತೂ³ರ್ವಕವಾದ ಧನ್ಯವಾದಗಳು.

ವರದಿ: ವೆಂಕಟೇಶ್‌ ಪೊಳಲಿ, ಕಾರ್ಯದರ್ಶಿ ಪಂಪ ಕನ್ನಡ ಕೂಟ, ಮಿಚಿಗನ್‌

 

ಟಾಪ್ ನ್ಯೂಸ್

1-a-japan

Japan: ಪ್ರಧಾನಿ ಕಚೇರಿಗೆ ವ್ಯಾನ್ ನುಗ್ಗಿಸಲು ಯತ್ನಿಸಿದ ದುಷ್ಕರ್ಮಿ!

chattsghar

Chhattisgarh: ನಕ್ಸಲರಿಂದ ಬಾಂಬ್ ಸ್ಫೋಟ… ಇಬ್ಬರು ಅರೆಸೇನಾ ಪಡೆ ಯೋಧರಿಗೆ ಗಾಯ

Channapatna ByPoll: NDA ticket to Yogeshwar: Aswath Narayan Gowda confident

Channapatna ByPoll: ಎನ್ ಡಿಎ ಟಿಕೆಟ್ ಯೋಗೇಶ್ವರ್ ಗೆ: ಅಶ್ವಥ್ ನಾರಾಯಣ ಗೌಡ ವಿಶ್ವಾಸ

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

ನಾಡಿಗೆ ಬಂದ ಕಾಡಾನೆ… ಸಿಡಿಮದ್ದಿಗೂ ಜಗ್ಗದೆ ಅರಣ್ಯ ಸಿಬ್ಬಂದಿಗಳನ್ನು ಕಾಡಿದ ಆನೆ ಹಿಂಡು

13-

Gudibanda: ದೇವಸ್ಥಾನದಲ್ಲಿ ಕಳವು; ಆರೋಪಿಗಳು ಪೊಲೀಸ್ ವಶಕ್ಕೆ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

ByPoll ticket: ಬಿಜೆಪಿ ನಾಯಕರ ವಿರುದ್ದವೇ ಕಿಡಿಕಾರಿದ ಎಚ್‌ ಡಿ ಕುಮಾರಸ್ವಾಮಿ

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ

Jersey Unveiled: ಉಡುಪಿ ಪತ್ರಕರ್ತರ ‘ರಜತ ಕ್ರೀಡಾ ಸಂಭ್ರಮ’ದ ಜೆರ್ಸಿ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸವಣ್ಣರ ಬೋಧನೆಗಳು ಜೀವನಕ್ಕೆ ಪ್ರೇರಣೆ: ಪೂಜಾ ಗಾಂಧಿ

ಬಸವಣ್ಣರ ಬೋಧನೆಗಳು ಜೀವನಕ್ಕೆ ಪ್ರೇರಣೆ: ಪೂಜಾ ಗಾಂಧಿ

Success: ಯಶಸ್ಸಿನ ಮೆಟ್ಟಿಲೇರಲು ಮಾರ್ಗದರ್ಶಕರು ಬೇಕು!

Success: ಯಶಸ್ಸಿನ ಮೆಟ್ಟಿಲೇರಲು ಮಾರ್ಗದರ್ಶಕರು ಬೇಕು!

ಮಸ್ಕತ್‌: ಒಮನ್‌ ಬಿಲ್ಲವಾಸ್‌ ಸಾಮರಸ್ಯ ಸಭೆ

ಮಸ್ಕತ್‌: ಒಮನ್‌ ಬಿಲ್ಲವಾಸ್‌ ಸಾಮರಸ್ಯ ಸಭೆ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

Navaratri 2024: ನವರಾತ್ರಿ “ನವ ಚೈತನ್ಯದ ನವರಾತ್ರಿಗಳು”

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-a-japan

Japan: ಪ್ರಧಾನಿ ಕಚೇರಿಗೆ ವ್ಯಾನ್ ನುಗ್ಗಿಸಲು ಯತ್ನಿಸಿದ ದುಷ್ಕರ್ಮಿ!

18-bng

Patna Biological Park: ಬನ್ನೇರುಘಟ್ಟಕ್ಕೆ ಬಿಹಾರದಿಂದ ಅತಿಥಿಗಳು!

chattsghar

Chhattisgarh: ನಕ್ಸಲರಿಂದ ಬಾಂಬ್ ಸ್ಫೋಟ… ಇಬ್ಬರು ಅರೆಸೇನಾ ಪಡೆ ಯೋಧರಿಗೆ ಗಾಯ

17-bng

Bengaluru: ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಬಂಧನ

16-bng

Bengaluru: ಹೂಡಿಕೆಯಲ್ಲಿ ಹಣ ದ್ವಿಗುಣ ಆಮಿಷ ತೋರಿಸಿ 35.35 ಲಕ್ಷ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.