ದೇಶಪ್ರೇಮ ಸಾರುವ ಸರ್ಕಾರಿ ನಗರ ಸಾರಿಗೆ ಬಸ್

ಸ್ವಂತ ಹಣ ವೆಚ್ಚ ಮಾಡಿ ದೇಶಪ್ರೇಮ ಸಾರುವ ಮ್ಯೂಸಿಯಂ ರೀತಿ ಸಿಂಗರಿಸಿದ ಚಾಲಕ- ನಿರ್ವಾಹಕ

Team Udayavani, Apr 5, 2019, 11:43 AM IST

5-April-6

ಭದ್ರಾವತಿ: ನಗರ ಸಾರಿಗೆ ಬಸ್ಸಿನ ಒಳಗಡೆ ಹಾಕಲಾಗಿರುವ ಯೋಧರ, ರೈತರ, ದೇಶಪ್ರೇಮಿ ನಾಯಕರ ಚಿತ್ರಗಳು

ಭದ್ರಾವತಿ: ನಿಶ್ಯಸ್ತ್ರರಾಗಿದ್ದ ಭಾರತೀಯ ಯೋಧರ ಬಸ್‌ ಮೇಲೆ ಪಾಪಿ ಪಾಕಿಸ್ಥಾನದ ಕುಮ್ಮಕ್ಕಿನಿಂದ ದಾಳಿ ನಡೆಸಿದ ಉಗ್ರರ ದಾಳಿ ಹಾಗೂ ಅದಕ್ಕೆ ಭಾರತದ ವೀರಯೋಧರು ಉಗ್ರರ ನೆಲೆ ಮೇಲೆ ನಡೆಸಿದ ವಾಯುದಾಳಿ ನಂತರ ದೇಶದ ಎಲ್ಲರ ಬಾಯಲ್ಲಿ ಭಾರತೀಯ ಯೋಧರ ಸಾಧನೆ ಗುಣಗಾನ ದೇಶದ ಜನರ ಒಗ್ಗಟ್ಟಿನ ಸಂಕೇತ ಮತ್ತು ಸಂದೇಶವಾಗಿ ವಿಶ್ವದೆಲ್ಲೆಡೆ ಮೆಚ್ಚುಗೆ ಗಳಿಸಿದೆ. ಆದರೆ ಇದಕ್ಕೂ ಮುನ್ನ 2ವರ್ಷಗಳ ಹಿಂದೆಯೇ ಭಾರತೀಯ ಯೋಧರ ಸೇವಾಕಾರ್ಯ ನಮ್ಮ ವಿದ್ಯಾರ್ಥಿಗಳ ಮೇಲೆ ಪರಿಣಾಮಕಾರಿಯಾಗಿ ಪ್ರೇರಣೆ ನೀಡಲಿ ಎನ್ನುವ ಸದುದ್ದೇಶದಿಂದ ಭದ್ರಾವತಿಯ ಸರ್ಕಾರಿ ನಗರ ಸಾರಿಗೆ ಬಸ್‌ ಕಾರ್ಯ ನಿರ್ವಾಹಕ ಮತ್ತು ವಾಹನ ಚಾಲಕರಿಬ್ಬರು ತಮ್ಮ ಸ್ವಂತ ಗಳಿಕೆ ಹಣವನ್ನು ಖರ್ಚು ಮಾಡಿ ಅವರು ಕಾರ್ಯ ನಿರ್ವಹಿಸುವ ಬಸ್ಸನ್ನು ದೇಶಪ್ರೇಮ ಸಾರುವ ಮ್ಯೂಸಿಯಂ ರೀತಿ ಸಿಂಗರಿಸಿದ್ದಾರೆ.

ಆದರ್ಶ ಸರ್ಕಾರಿ ನಗರ ಸಾರಿಗೆ ವಾಹನ: ಸಾರಿಗೆ ಬಸ್‌ ಎಂದಾಕ್ಷಣ ಸಾಮಾನ್ಯವಾಗಿ ಜನರಿಗೆ ನೆನಪಾಗುವುದು ಆ ಬಸ್‌ನಲ್ಲಿ ಹಾಕುವ ಅಬ್ಬರದ ಚಲನಚಿತ್ರಗೀತೆಗಳು, ಅಕ್ಕಪಕ್ಕದಲ್ಲಿ ಬೀಡಿ ಸಿಗರೇಟು ಸೇದುವ ಮಂದಿ ಬಿಡುವ ಹೊಗೆ ಇತ್ಯಾದಿ. ಆದರೆ ಭದ್ರಾವತಿ ಹೊಸಮನೆಯಿಂದ ಕಾಗದನಗರ, ಉಜ್ಜನಿಪುರಕ್ಕೆ ಪ್ರತಿನಿತ್ಯ ಬೆಳಗ್ಗೆಯಿಂದ ರಾತ್ರಿವರೆಗೆ ಸಂಚರಿಸುವ ಕೆ.ಎ.-17ಎಫ್‌-1836 ಹಸಿರು ಬಣ್ಣದ ಸರ್ಕಾರಿ ನಗರ ಸಾರಿಗೆ ಬಸ್‌ ಈ ರೀತಿಯ ವಾತಾವರಣಕ್ಕೆ ಅಪವಾದವೆನ್ನುವಂತಿದೆ. ಈ ಬಸ್‌ ಒಳಗೆ ಪ್ರವೇಶಿಸುತ್ತಿಂದಂತೆ ದೇಶಪ್ರೇಮ ತನ್ನಿಂದ ತಾನೆ ಮನಸ್ಸಿನಂಗಳದಲ್ಲಿ ಅರಳುತ್ತದೆ. ಅದಕ್ಕೆ ಕಾರಣ
ಆ ಬಸ್‌ನ ಒಳಗಡೆ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಪಕ್ಕದ ಕಿಟಕಿಯ ಮೇಲ್ಭಾಗದಲ್ಲಿ ಸಾಲಾಗಿ ಹಾಕಲಾಗಿರುವ ಆಕರ್ಷಕ ಚಿತ್ರಗಳು ಹಾಗೂ ಆ ಚಿತ್ರಗಳ ಕೆಳಗೆ ಸೈನಿಕರ ಕುರಿತು ಅಭಿಮಾನ ಸಾರುವ ಮತ್ತು ಅವರ ತ್ಯಾಗಮಯ ಕಾರ್ಯಕ್ಕೆ ಒಂದು ಸಲಾಂ ಎನ್ನುವ ಬರಹ ಮನಸ್ಸನ್ನು ಸ್ಪರ್ಶಿಸುತ್ತದೆ. ಈ ಬಸ್‌ನಲ್ಲಿ ಪ್ರತಿನಿತ್ಯ ನಾರಾರು ವಿದ್ಯಾರ್ಥಿಗಳು, ನಾಗರಿಕರು ಸಂಚರಿಸುತ್ತಾರೆ. ಅವರೆಲ್ಲರೂ ಆ ಸರ್ಕಾರಿ ಬಸ್‌ ಚಾಲಕ ಪ್ರಕಾಶ್‌ ಮತ್ತು ಕಾರ್ಯ ನಿರ್ವಾಹಕ ರಮೇಶ್‌ ಅವರ ಕಾರ್ಯವನ್ನು ಮುಕ್ತಕಂಠದಿಂದ ಹೊಗಳುತ್ತಾರೆ.

ರಾಷ್ಟ್ರ ಪ್ರೇಮ ಸಾರುವ ವೈವಿಧ್ಯಮಯ ಚಿತ್ರಗಳು: ಭಾರತೀಯ ಭೂಸೇನೆ, ವಾಯುಸೇನೆ, ಜಲಸೇನೆಯ ಯೋಧರ ಪಥಸಂಚಲನದ ಚಿತ್ರ, ವೈರಿಯೋಧರ ಮೇಲೆ ಭಾರತೀಯ ಯೋಧರು ಹೋರಾಡುತ್ತಿರುವ ದೃಶ್ಯ. ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ವೀರಯೋಧರ ಚಿತ್ರ, ದೇಶದ ಬೆನ್ನೆಲುಬಾಗಿ ಅನ್ನ ನೀಡುವ ನೇಗಿಲ ಯೋಗಿ ರೈತನ ಚಿತ್ರ, ಆಂಗ್ಲರ ವಿರುದ್ಧ ಹೋರಾಡಿದ ಝಾನ್ಸಿರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಮಹಾತ್ಮ ಗಾಂಧಿ , ಸುಭಾಷ್‌ ಚಂದ್ರಬೋಸ್‌, ಭಗತ್‌ ಸಿಂಗ್‌, ಮೊಗಲರ ವಿರುದ್ಧ ಹೋರಾಡಿದ ಮಹಾರಾಣಾ ಪ್ರತಾಪ ಸಿಂಹ, ಛತ್ರಪತಿ ಶಿವಾಜಿ, ಕನ್ನಡದ ಕಂಪನ್ನು ವಿಶ್ವಕ್ಕೆ ಸಾರಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೃ.ಗೋಕಾಕ್‌, ಕುವೆಂಪು, ದ.ರಾ. ಬೇಂದ್ರೆ, ಡಾ| ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ್‌ ಐಯ್ಯಂಗಾರ್‌, ಗಿರೀಶ್‌ ಕಾರ್ನಾಡ್‌, ಯು.ಆರ್‌. ಅನಂತಮೂರ್ತಿ, ಚಂದ್ರಶೇಖರ ಕಂಬಾರ, ವೀರಸನ್ಯಾಸಿ ವಿವೇಕಾನಂದ, ಭಾರತ ರತ್ನ ಸರ್‌
ಎಂ. ವಿಶ್ವೇಶ್ವರಯ್ಯ, ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್‌ ಕಲಾಂ ಸೇರಿದಂತೆ ಅಸಂಖ್ಯಾತ ಭಾರತೀಯ ಪ್ರಾತಃ ಸ್ಮರಣೀಯರ ವರ್ಣಮಯ ಚಿತ್ರಗಳು ಈ ವಾಹನದೊಳಗೆ ರಾರಾಜಿಸುತ್ತಿವೆ. ಆ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಮತ್ತು ಪ್ರಯಾಣಿಕರಿಗೆ ಈ ದೇಶ, ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗೆ ಕೊಡುಗೆ ನೀಡಿದ ಮಹನೀಯರಂತೆ‌ ಜೀವನದಲ್ಲಿ ನಾವೂ ಅಥವಾ ನಮ್ಮ ಮಕ್ಕಳೂ ಸಹ ಈ ದೇಶಕ್ಕಾಗಿ ಏನನ್ನಾದರೂ ಸಾಧಿ ಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂಬ ಪ್ರೇರಣೆ ನೀಡುವಂತಿದೆ.

ಈ ರೀತಿ ಸರ್ಕಾರಿ ಬಸ್ಸಿನಲ್ಲಿ ತಮ್ಮ ಸ್ವಂತ ಗಳಿಕೆ ಹಣವನ್ನು ಖರ್ಚು ಮಾಡಿ ದೇಶಪ್ರೇಮ ಸಾರುವ ವಾತಾವರಣ ಸೃಷ್ಟಿಸಿರುವ
ಬಸ್‌ ಚಾಲಕ ಪ್ರಕಾಶ್‌ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ ಮಾತನಾಡಿದ ಅವರು, ದೇಶಕ್ಕೆ ಅನ್ನ ನೀಡುವ ರೈತ, ದೇಶ ಕಾಯುವ ಸೈನಿಕ ಇವರ ನೆನಪಿನಿಂದ ವಿದ್ಯಾರ್ಥಿಗಳು ಸ್ಫೂರ್ತಿ ಗೊಂಡು ದೇಶಕ್ಕಾಗಿ ಅವರೂ ಸಹ ಏನಾದರೂ ಒಳ್ಳೆಯ ಕೊಡುಗೆ ನೀಡುವಂತೆ ಬೆಳೆಯಲಿ ಎಂಬ ಸದುದ್ದೇಶದಿಂದ ಈ ರೀತಿ ಚಿತ್ರಗಳನ್ನು ನಾನು ಹಾಗೂ ನನ್ನ ಸ್ನೇಹಿತ ಬಸ್‌ ನ ಕಾರ್ಯ ನಿರ್ವಾಹಕ ರಮೇಶ್‌ ಅವರು ಇದರಲ್ಲಿ ಅಳವಡಿಸಿದ್ದೇವೆ. ಈ ಬಸ್ಸಿನಲ್ಲಿ ಪ್ರತಿ ನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ನಮ್ಮ ಈ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದು ನಮ್ಮ ಕೆಲಸಕ್ಕೆ ಮತ್ತಷ್ಟು ಪ್ರೋತ್ಸಾಹದಾಯಕ ವಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿ ದೇಶಪ್ರೇಮ ಸಾರುವ ಕಾರ್ಯಗಳನ್ನು ಹಮ್ಮಿಕೊಳ್ಳುವ ಯೋಚನೆಯಿದೆ ಎಂದರು.

ಒಟ್ಟಿನಲ್ಲಿ ಭಾರತೀಯ ಯೋಧರ ಭಾರತೀಯ ಸಂಸ್ಕೃತಿ , ದೇಶಪ್ರೇಮಿ ನಾಯಕರ, ಸಾಹಿತಿಗಳ ನೆನಪನ್ನು ಸದಾ ಹಸಿರಾಗಿಡುವ ಈ ವಾಹನ ಚಾಲಕ ಮತ್ತು ಕಾರ್ಯ ನಿರ್ವಾಹಕರ ಕಾರ್ಯ ಶ್ಲಾಘನೀಯ.

ತುಕ್ಕು ಹಿಡಿದು ಬದುಕುವುದಕ್ಕಿಂತ ದುಡಿದು ಸವೆಯುವುದು ಮೇಲು. ದೇಶಕ್ಕಾಗಿ ಹೋರಾಡುತ್ತಿರುವ ಭಾರತೀಯ ಸೇನೆಗೊಂದು ಸಲಾಂ. ನಾವಿಲ್ಲಿ ಆರಾಮವಾಗಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ಭಾರತೀಯ ಯೋದರ ಸೇವೆ. ಈ ರೀತಿ ಅಲ್ಲಲ್ಲಿ ಬದುಕಿನ ಸಾರ್ಥಕತೆಯನ್ನು ಸಾರುವ ಘೋಷಣಾ ವಾಕ್ಯದ ಬರಹಗಳೂ ಸಹ ಪ್ರಯಾಣಿಕರನ್ನು ಚಿಂತನೆಗೊಳಪಡಿಸುವಷ್ಟರ ಮಟ್ಟಿಗೆ ಪ್ರಖರ ಸಂದೇಶವನ್ನು ಸಾರುವಂತಿವೆ.

„ಕೆ.ಎಸ್‌. ಸುಧೀಂದ್ರ ಭದ್ರಾವತಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.