Mudhol: ನದಿಯಲ್ಲಿದ್ದ ಮೋಟಾರ್ ತೆಗೆಯುವಾಗ ವಿದ್ಯುತ್ ತಗುಲಿ ರೈತ ಮೃತ್ಯು
Team Udayavani, Oct 20, 2024, 6:24 PM IST
ಮುಧೋಳ: ಘಟಪ್ರಭಾ ನದಿ ನೀರು ಹೆಚ್ಚಳಗೊಂಡ ಪರಿಣಾಮ ನದಿಯಲ್ಲಿದ್ದ ಮೋಟಾರ್ ತೆಗೆಯಲು ತೆರಳಿದ್ದ ರೈತರೊಬ್ಬರು ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಜುಂಝುರಕೊಪ್ಪ ಗಲ್ಲಿಯಲ್ಲಿ ಶನಿವಾರ ಸಂಭವಿಸಿದೆ.
ಮೃತನನ್ನು ರೂಗಿ ಗ್ರಾಮದ ನಿವಾಸಿ ವೆಂಕಟೇಶ ತಿಪ್ಪಣ್ಣ ಬೆಳಗಲಿ(36) ಎಂದು ಗುರುತಿಸಲಾಗಿದೆ.
ಮೋಟಾರ್ ವೈರ್ ಸುತ್ತುವ ವೇಳೆ ಈ ಘಟನೆ ಸಂಭವಿಸಿದೆ. ಬೆಳಿಗ್ಗೆ ಮನೆಯಿಂದ ಹೋಗಿದ್ದ ರೈತ ಮರಳದ ಕಾರಣ ಜಮೀನಿಗೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.