ಸಿಎಂ-ಬಿಎಸ್ವೈ ಬಸವಣ್ಣನವರ ಅನುಯಾಯಿಗಳಲ್ವಾ?
Team Udayavani, Jun 7, 2022, 11:46 PM IST
ಬಾಗಲಕೋಟೆ: ಶಾಲಾ ಮಕ್ಕಳ ಪಠ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರ ಕೃತಿ ಚೌರ್ಯ ಮಾಡಲಾಗಿದೆ. ಇದು ಅವರಿಗೆ ಮಾಡಿದ ಅವಮಾನ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈ ಅವರು ಬಸವಣ್ಣ ನವರ ಅನುಯಾಯಿಗಳು ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಸವಣ್ಣನವರ ಬಗ್ಗೆ ಯಾಕೆ ತಿರುಚಿದ್ದಾರೆ. ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರ ಕೃತಿ ತಿರುಚಿದ್ದಾರೆ. ನಾರಾಯಣಗುರು, ಭಗತಸಿಂಗ್, ಸುರಪುರದ ನಾಯಕರ ಇತಿಹಾಸ ತೆಗೆದು ಹಾಕಿರುವುದು ಯಾಕೆ. ಇತಿಹಾಸ ಹೇಗಿದೆಯೋ ಹಾಗೆಯೇ ಮಕ್ಕಳಿಗೆ ಹೇಳಬೇಕು ಎಂದರು.
ಬಿಎಸ್ವೈ ಭೇಟಿ ಆಕಸ್ಮಿಕ
ವಿಮಾನ ನಿಲ್ದಾಣದಲ್ಲಿ ನಾನು-ಯಡಿಯೂರಪ್ಪ ಅವರು ಭೇಟಿಯಾಗಿ ರುವುದು ಆಕಸ್ಮಿಕ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸಬೇಕಿಲ್ಲ. ವೈಯಕ್ತಿಕ ಸಂಬಂಧಗಳೇ ಬೇರೆ, ರಾಜಕೀಯ ಸಂಬಂಧಗಳೇ ಬೇರೆ. ನಾವು ಸಿದ್ಧಾಂತದ ಮೇಲೆ ರಾಜಕೀಯ ಮಾಡುತ್ತೇವೆ.
ಈ ದೇಶಕ್ಕೆ ಏನು ಸಿದ್ಧಾಂತ ಬೇಕೋ, ಆ ರಾಜಕೀಯ ಮಾಡುತ್ತೇವೆ. ನಾವು ಬಹು ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟುಕೊಂಡವರು. ಬಹು ಜನರ ಕಲ್ಯಾಣವೇ ನಮ್ಮ ಧ್ಯೇಯ ಎಂದು ಸಿದ್ದರಾಮಯ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.