ಬಯಕೆ ದೀರ್ಘಕಾಲವಿದ್ದು ಈಡೇರುವವರೆಗೂ ಉತ್ಸಾಹವಿರಲಿ: ಸಿದ್ದೇಶ್ವರ ಶ್ರೀ


Team Udayavani, Aug 27, 2021, 6:54 PM IST

bagalakote news

ಬನಹಟ್ಟಿ : ಕನಸುಗಳನ್ನು ಸಾಕಾರವಾಗುವಂತೆ ಕಾಣಬೇಕು. ಅಧಿಕಾರ ಹಾಗೂ ಜನರ ಮಧ್ಯ ಪರಸ್ಪರ ಭಾವದಿಂದ ಇಚ್ಛೆ ಪೂರೈಕೆಯಾಗುವವರೆಗೂ ಪ್ರಯತ್ನವಿರಬೇಕು. ದೀರ್ಘಕಾಲದ ಬಯಕೆಯಿರಬೇಕಾದರೆ ಉತ್ಸಾಹ ಕೊನೆಯವರೆಗಿದ್ದರೆ ಮಾತ್ರ ಈಡೇರುವದೆಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ನುಡಿದರು.

ಅವರು ಶುಕ್ರವಾರ ರಬಕವಿಯ ದಲಾಲ ಫಾರ್ಮ್ ಹೌಸ್‌ನ `ಹಸಿರು ಸಿರಿ’ ತೋಟದಲ್ಲಿ ಜರುಗಿದ ಜಮಖಂಡಿ ಉಪವಿಭಾಗದ ಅಭಿವೃದ್ಧಿ ಕುರಿತು ಚಿಂತನ ಗೋಷ್ಠಿ-2 ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಆದರ್ಶ ತಾಲೂಕು ಸಮೂಹವಾಗುವಲ್ಲಿ ರಬಕವಿ-ಬನಹಟ್ಟಿ, ಬೀಳಗಿ, ಜಮಖಂಡಿ ಹಾಗೂ ಮುಧೋಳ ಮಹತ್ವ ಪಡೆದಿವೆ. ಆರ್ಥಿಕ, ಉದ್ಯಮ, ಶಿಕ್ಷಣವು ಪರಸ್ಪರ ಸದ್ಭಾವನೆಯಲ್ಲಿ ಕೊರತೆಯಾಗಬಾರದು. ನಿಸರ್ಗದ ಮೇಲೆ ಪೆಟ್ಟು ಬೀಳದಂತೆ ಕಾಪಾಡಿಕೊಂಡು ದುಡಿಮೆಯಿರಬೇಕೆಂದು ಹೇಳಿದರು.

ನಿರಾಣಿ ಸಮೂಹ ಸಂಸ್ಥೆಯ ಸಿಎಂಡಿ ಸಂಗಮೇಶ ನಿರಾಣಿ ಮಾತನಾಡಿ, ಜಮಖಂಡಿ ಜಿಲ್ಲಾ ಕೇಂದ್ರ ಸ್ಥಾನವಾಗಬೇಕು. ಸರ್ಕಾರಕ್ಕೆ ರಾಜ್ಯದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವುದು ಜಮಖಂಡಿ ಉಪವಿಭಾಗವಾಗಿದೆ. ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳಾಗುವಲ್ಲಿ ಹಿಂದುಳಿದಿರುವುದು ವಿಪರ್ಯಾಸವೆಂದರು. ಈ ಹಿಂದೆ ಜಮಖಂಡಿ ಆಡಳಿತದ ಪ್ರಧಾನ ಸ್ಥಳವಾಗಿ, ಹೈಕೊರ್ಟ್ ಕೂಡ ಇತ್ತು. ಕುಡಚಿ-ಬಾಗಲಕೋಟ ರೈಲು ಮಾರ್ಗವಾಗಬೇಕು. ನೇಕಾರರ ಜೀವನಾಡಿಯಾದ ರಬಕವಿ-ಬನಹಟ್ಟಿಗೆ ಪೂರಕ ಜವಳಿ ಆಧಾರಿತ ಯೋಜನೆ ಹಾಗು ಜವಳಿ ಪಾರ್ಕ್, ನೂಲಿನ ಗಿರಣಿ ಉನ್ನತೀಕರಣ ಅವಶ್ಯವಿದೆ. ಉನ್ನತ ವ್ಯಾಸಾಂಗದ ಶಿಕ್ಷಣ ಸಂಸ್ಥೆ ಹಾಗೂ ಹೈಟೆಕ್ ಸರ್ಕಾರಿ ಆಸ್ಪತ್ರೆಯ ಅವಶ್ಯವಿದೆ ಎಂದರು.

ಉಪವಿಭಾಗದ ಅಭಿವೃದ್ಧಿಗಾಗಿ ಈಗಾಗಲೇ ಮೊದಲನೇಯ ಚಿಂತನಗೋಷ್ಠಿಯನ್ನು ಮುಧೋಳದಲ್ಲಿ ನಡೆಸಿದ್ದು, ಇದೀಗ ರಬಕವಿ-ಬನಹಟ್ಟಿಯಲ್ಲಿ ಯಶಸ್ವಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಜಮಖಂಡಿ ಹಾಗೂ ಬೀಳಗಿಯಲ್ಲಿ ಕೊನೆಯದಾಗಿ ಅಧಿಕಾರಿ ವರ್ಗದ ಮಹತ್ವದ ಸಭೆ ನಡೆಸಿ ಸರ್ಕಾರಕ್ಕೆ ಮಾಹಿತಿ ತಲುಪಿಸುವ ವ್ಯವಸ್ಥೆಯಿದೆ ಎಂದು ಸಂಗಮೇಶ ನಿರಾಣಿ ತಿಳಿಸಿದರು.

ಇದನ್ನೂ ಓದಿ:ಚುನಾವಣೆ-ರಾಜಕೀಯ ಸಭೆಗಿಲ್ಲದ ನಿರ್ಬಂಧ ನಮಗ್ಯಾಕೆ?ವೀಕೆಂಡ್‌ ಕರ್ಫ್ಯೂ ಬೆಂಬಲಿಸಲ್ಲ

ಉಪವಿಭಾಗಾಧಿಕಾರಿ ಡಾ. ಸಿದ್ದು ಹುಲ್ಲೋಳ್ಳಿ ಮಾತನಾಡಿ, ಕುಡಚಿ-ಬಾಗಲಕೋಟೆ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಯು ಸದ್ಯ ಮುಧೋಳ ತಾಲೂಕಿನ ಶಿರೋಳ ಗ್ರಾಮದವರೆಗೆ ಮುಕ್ತಾಯಗೊಂಡಿದೆ. ಶೀಘ್ರವೇ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದವರೆಗೂ ಭೂಸ್ವಾಧೀನ ಕ್ರಿಯೆ ನಡೆಯಲಿದ್ದು, ಇದೀಗ ಖಜ್ಜಿಡೋಣಿಯಿಂದ ಲೋಕಾಪೂರದವರೆಗೆ ಸುಮಾರು 10 ಕಿ.ಮೀನಷ್ಟು ರೈಲು ಮಾರ್ಗವೂ ಮುಕ್ತಾಯಗೊಂಡಿದೆ ಎಂದು ತಿಳಿಸಿದರು. ರಬಕವಿ-ಬನಹಟ್ಟಿ ತಾಲೂಕಿಗೆ ಮಿನಿ ವಿಧಾನಸೌಧಕ್ಕೆ 4 ಎಕರೆಯಷ್ಟು ಪ್ರದೇಶವನ್ನು ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗದುಗಿನ ಶಿವಾನಂದ ಮಠದ ಕೈವಲ್ಯನಾಥ ಶ್ರೀಗಳು, ಐನಾಪುರದ ಗುರುದೇವ ಆಶ್ರಮದ ಬಸವೇಶ್ವರ ಶ್ರೀ, ಕರಿಕಟ್ಟಿಯ ಡಾ. ಬಸವರಾಜ ಶ್ರೀಗಳು ಹಾಗು ಹರ್ಷಾನಂದ ಸ್ವಾಮೀಜಿ ವೇದಿಕೆ ಮೇಲಿದ್ದರು.

ಜಮಖಂಡಿ ಉಪವಿಭಾಗಾದ ಸಮಗ್ರ ಅಭಿವೃದ್ಧಿ ಕುರಿತು ಭೀಮಶಿ ಮಗದುಮ್, ಪ್ರೊ. ಬಸವರಾಜ ಕೊಣ್ಣೂರ, ಬಸವರಾಜ ದಲಾಲ, ರಾಮಣ್ಣ ಹುಲಕುಂದ, ಡಾ. ರವಿ ಜಮಖಂಡಿ, ಪ್ರಭು ಉಮದಿ, ಮಹಾದೇವಿ ಪಾಟೀಲ, ಸಂಜಯ ಜವಳಗಿ, ಪಿ.ಎನ್. ಪಾಟೀಲ, ಎಂ.ಎಸ್. ಬದಾಮಿ, ಶಿವಾನಂದ ಬಾಗಲಕೋಟ, ಮಲ್ಲಿಕಾರ್ಜುನ ಹೆಗ್ಗಳಗಿ, ಅಶೋಕ ಕುಲಕರ್ಣಿ, ಜಯರಾಮಶೆಟ್ಟಿ ಸೇರಿದಂತೆ ಅನೇಕರು ಮಾತನಾಡಿದರು.

ಮಲ್ಲಿಕಾರ್ಜುನ ಹುಲಬಗಾಳಿ ಸ್ವಾಗತಿಸಿದರು. ಸಾಹಿತಿ ಸಿದ್ಧರಾಜ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿವಾನಂದ ದಾಶ್ಯಾಳ ನಿರೂಪಿಸಿದರು. ಶ್ರೀಶೈಲ ದಲಾಲ ವಂದಿಸಿದರು.

ಟಾಪ್ ನ್ಯೂಸ್

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

Mudhol: ಸಮಸ್ಯೆ ಆಲಿಸಲು ಬಂದ ಅಧಿಕಾರಿಗಳ ದರ್ಪದ ನಡೆಗೆ ಗ್ರಾಮಸ್ಥರ ಆಕ್ರೋಶ

ಗ್ರಾಹಕರ ಸಂತೃಪ್ತಿಯೇ ಸಹಕಾರಿ ಯಶಸ್ಸಿನ ಜೀವಾಳ: ಚಿದಾನಂದ ಗಾಳಿ

ಗ್ರಾಹಕರ ಸಂತೃಪ್ತಿಯೇ ಸಹಕಾರಿ ಯಶಸ್ಸಿನ ಜೀವಾಳ: ಚಿದಾನಂದ ಗಾಳಿ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

3-rabakavi

Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pushkar sing dhami

Uttarakhand: ಪ್ರತಿಭಟನಕಾರರಿಂದ ಹಾನಿ ನಷ್ಟ ಭರಿಸುವ ಕಾನೂನು ಜಾರಿ

ದಸರೆಗೆ ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ: ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

Dasara: ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ; ಹರಿದ್ವಾರಕ್ಕೆ ಚಲುವರಾಯಸ್ವಾಮಿ ನಿಯೋಗ ಭೇಟಿ

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

BJP ಶಾಸಕ ಮುನಿರತ್ನಗೆ ಎಸ್‌ಐಟಿ ಕುಣಿಕೆ? ರಾಜ್ಯಪಾಲರಿಗೂ ಶೀಘ್ರ ದೂರು

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.