Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ
Team Udayavani, Oct 10, 2024, 9:01 AM IST
ಬಾಗಲಕೋಟೆ : ದೇಶ ಹಾಗೂ ಜಗತ್ತು ಕಂಡ ವಿಶೇಷ ಹಾಗೂ ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದೊಡ್ಡಿದೆ ಎಂದು ಮಾಜಿ ಸಚಿವ, ಉದ್ಯಮಿಯೂ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಮುರುಗೇಶ್ ನಿರಾಣಿ ಸಂತಾಪ ವ್ಯಕ್ತಪಡಿಸಿದ್ದಾರೆ.
ದೇಶದ ದೊಡ್ಡ ಉದ್ಯಮಿಗಳಲ್ಲಿ ಅತಿ ವಿಶೇಷವಾದ ಉದ್ಯಮಿ ರತನ್ ಟಾಟಾ, ಪದ್ಮವಿಭೂಷಣ ಪುರಸ್ಕೃತರು, ಭಾರತವನ್ನು ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದ ಮಹಾನ್ ಉದ್ಯಮಿ. ಅವರ ಅಗಲಿಕೆ ಉದ್ಯಮ ರಂಗದ ಕೊಂಡಿ ಕಳಚಿದಂತೆ ಆಗಿದೆ. ರತನ್ ಟಾಟಾ ಅವರ ನಿಧನ ದೇಶಕ್ಕೆ ಬಾರಿ ನಷ್ಟವಾಗಿದೆ. ಬಹಳಷ್ಟು ದೂರದೃಷ್ಟಿ ಉದ್ಯಮಿ,ಕೇವಲ ಒಂದು ಲಕ್ಷದಲ್ಲಿ ನ್ಯಾನೊ ಕಾರು ಲೋಕಾರ್ಪಣೆ ಮಾಡಿ ದಾಖಲೆ ಮಾಡಿದವರು ಎಂದು ತಿಳಿಸಿದ್ದಾರೆ.
ಜಾಗತಿಕ ಉದ್ಯಮದ ಬಾರಿ ಸವಾಲುಗಳ ಮಧ್ಯೆ ಟಾಟಾ ಸಮೂಹ ಸಂಸ್ಥೆಯನ್ನು ಎತ್ತರೆತ್ತರಕ್ಕೆ ಬೆಳೆಸಿ ಟಾಟಾ ಕಂಪನಿಯಿಂದಲೇ ದೇಶವನ್ನು ಇತರೆ ರಾಷ್ಟ್ರದವರು ಗುರುತಿಸುವಂತೆ ಮಾಡಿದವರು. ಸರಳತೆ ಬಹುಪಾಲು ಲಾಭವನ್ನು ದಾನ ಮಾಡಿ ಆಸರೆ ಹಸ್ತ ಚಾಚಿದವರು ಶ್ರೀಮಾನ್ ರತನ್ ಟಾಟಾ ಅವರು, ನಾನು ಒಬ್ಬ ಉದ್ಯಮಿಯಾಗಲು ಅವರ ಜೀವನ ಪ್ರೇರಣೆಯಾಗಿತ್ತು ಎಂದು ಹೇಳಿದ್ದಾರೆ.
ಅವರ ನಿಧನ ಬಹಳ ದುಃಖ ತಂದೊಡ್ಡಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಅವರ ಜೀವನ ಸದಾ ಎಲ್ಲರಿಗೂ ಸ್ಪೂರ್ತಿದಾಯಕವಾಗಿರಲಿದೆ ಎಂದಿದ್ದಾರೆ.
ಇದನ್ನೂ ಓದಿ: Haryana Election: ಹರಿಯಾಣ ಬಿಜೆಪಿ ಗೆಲುವಿಗೆ ಶ್ರಮಿಸಿದ ವಾರ್ರೂಂನ “ತ್ರಿಶಕ್ತಿ’ ನಾಯಕರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Munirathna Case: ಭದ್ರತೆ ಕೊಟ್ಟರೆ ಮಾಜಿ ಸಿಎಂಗಳ ಹನಿಟ್ರ್ಯಾಪ್ ಬಹಿರಂಗ: ಸಂತ್ರಸ್ತೆ
Exam: ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಇಲ್ಲ: ಶಿಕ್ಷಣ ಸಚಿವ ಮಧು ಬಂಗಾರಪ್ಪ
Find On Investigation: ವಾಲ್ಮೀಕಿ ಹಗರಣ ಸೂತ್ರಧಾರ ಮಾಜಿ ಸಚಿವ ಬಿ.ನಾಗೇಂದ್ರ: ಇ.ಡಿ.
Congress Politics: ಡಿನ್ನರ್ ಮೀಟಿಂಗ್ಗೆ ಮಹತ್ವ ಬೇಡ: ಸಚಿವ ಡಾ.ಎಚ್.ಸಿ.ಮಹದೇವಪ್ಪ
Selection of Awardees: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ 2,800 ಅರ್ಜಿ!
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.