ಬಕ್ರೀದ್‌ ಹಬ್ಬ ಶಾಂತಿಯುತವಾಗಿ ಆಚರಿಸಿ: ಎಸ್‌ಪಿ

ಸರ್ಕಾರದ ನಿಯಮ ಕಡ್ಡಾಯವಾಗಿ ಪಾಲಿಸಲು ಸೂಚನೆ ; ಶಾಂತಿ-ಸೌಹಾರ್ದತೆ ಕಾಪಾಡಿ: ಜಯಪ್ರಕಾಶ ಅಕ್ಕರಕಿ

Team Udayavani, Jul 8, 2022, 3:22 PM IST

5

ಲೋಕಾಪುರ: ಎಲ್ಲ ಸಮಾಜ ಬಾಂಧವರು ಶಾಂತಿ ಸೌಹಾರ್ದತೆಯ ಬದುಕು ನಡೆಸಬೇಕು. ಜನಜೀವನ ನೆಮ್ಮದಿಯನ್ನು ಕಾನೂನು ರೀತಿಯಲ್ಲಿ ಕಾಪಾಡುವುದು ಪೊಲೀಸ್‌ ಇಲಾಖೆ ಕರ್ತವ್ಯ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಬಾಗಲಕೋಟೆ ನೂತನ ಎಸ್‌ಪಿ ಜಯಪ್ರಕಾಶ ಅಕ್ಕರಕಿ ಹೇಳಿದರು.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಬಕ್ರೀದ್‌ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ನಾನು ಬಾಗಲಕೋಟೆ ನೂತನ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಭೇಟಿ ನೀಡುತ್ತಿರುವ ಮೊದಲ ಪೊಲೀಸ್‌ ಠಾಣೆ ಇದಾಗಿದೆ. ಬಕ್ರೀದ್‌ ಹಬ್ಬವನ್ನು ಶಾಂತಿಯುತವಾಗಿ ಅಚರಿಸಲು ಎಲ್ಲ ಸಮುದಾಯದವರು ಕೈ ಜೋಡಿಸಬೇಕು. ಜು. 10ರಂದು ನಡೆಯುವ ಬಕ್ರೀದ್‌ ಆಚರಣೆಯ ವೇಳೆಯಲ್ಲಿ ಪ್ರತಿಯೊಬ್ಬರು ಶಾಂತಿ, ಸೌಹಾ ರ್ದತೆ ಕಾಪಾಡಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ನಿಯಮ ಕಡ್ಡಾಯ ಪಾಲಿಸಬೇಕಾಗಿದೆ ಎಂದರು.

ಅಂಜುಮನ್‌ -ಎ-ಇಸ್ಲಾಂ ಕಮೀಟಿ ಅಧ್ಯಕ್ಷ ಅಲ್ಲಾಸಾಬ ಯಾದವಾಡ ಮಾತನಾಡಿ, ಸರ್ಕಾರದ ನಿಯಮ ಪಾಲಿಸುವ ಮೂಲಕ ಬಕ್ರೀದ್‌ ಆಚರಿಸಲು ಎಲ್ಲರ ಸಹಕಾರವಿದೆ. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ ಕಾನೂನಿನ ನಿಯಮಾವಳಿಗಳಿಗೆ ಧಕ್ಕೆಯಾಗದಂತೆ ಬಕ್ರೀದ್‌ ಆಚರಿಸಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯ ಮುಖಂಡ ವಸಂತಗೌಡ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಪೂರ್ವಜ ರಿಂದಲೂ ಎಲ್ಲ ಜಾತ್ರೆ ಹಾಗೂ ರಮಜಾನ, ಬಕ್ರೀದ್‌ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಒಗ್ಗೂಡಿ ಆಚರಣೆ ಮಾಡಲಾಗುತ್ತಿದೆ. ಸಭೆ ಸಮಾರಂಭಗಳಲ್ಲಿಯೂ ಕೂಡ ಒಗ್ಗಟ್ಟಾಗಿ ಭಾಗ ವಹಿಸುವ ಮೂಲಕ ಲೋಕಾಪುರ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಸನ್ಮಾನ: ನೂತನ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಪ್ರಥಮ ಬಾರಿಗೆ ಲೋಕಾಪುರ ಪೊಲೀಸ್‌ ಠಾಣೆಗೆ ಆಗಮಿಸಿದ ಜಯಪ್ರಕಾಶ ಅಕ್ಕರಕಿ ಮತ್ತು ಡಿವೈಎಸ್‌ಪಿ ಪಾಂಡುರಂಗಯ್ಯ, ಮುಧೋಳ ನೂತನ ಸಿಪಿಐ ಅಯ್ಯನಗೌಡ ಪಾಟೀಲ ಅವರನ್ನು ಪಟ್ಟಣದ ಮುಖಂಡರು ಸನ್ಮಾನಿಸಿದರು.

ಟ್ರಾಫಿಕ್‌ ನಿವಾರಣೆಗೆ ಎಸ್ಪಿ ಸೂಚನೆ: ಪಟ್ಟಣದಲ್ಲಿ ಶಿಸ್ತು ಬದ್ಧವಾಗಿ ಟ್ರಾಫಿಕ್‌ ನಿವಾರಣೆ ಮಾಡಲಾಗುತ್ತಿದೆ. ಪ್ರತಿದಿನ ರಸ್ತೆಬದಿ ವ್ಯಾಪಾರಿಗಳಿಗೂ ಮತ್ತು ಸಾರ್ವಜನಿಕರಿಗೂ ತೊಂದರೆಯಾಗದಂತೆ ಟ್ರಾಫಿಕ್‌ ನಿವಾರಣೆ ಮಾಡಬೇಕು. ಪ್ರತಿದಿನ ಸಂಜೆ ಜನದಟ್ಟಣೆ ನಿವಾರಣೆ ಇರುವ ಸಿಸಿಟಿವಿ ವಿಡಿಯೋ ದೃಶ್ಯವನ್ನು ನನಗೆ ಕಳುಹಿಸಬೇಕು ಎಂದು ಪಿಎಸ್‌ಐ ಶಿವಶಂಕರ ಮುಕರಿ ಅವರಿಗೆ ಸೂಚಿಸಿದರು.

ಡಿವೈಎಸ್‌ಪಿ ಪಾಂಡುರಂಗಯ್ಯ, ಸಿಪಿಐ ಅಯ್ಯನಗೌಡ ಪಾಟೀಲ, ಪಿಎಸ್‌ಐ ಶಿವಶಂಕರ ಮುಕರಿ, ತಾಪಂ ಮಾಜಿ ಸದಸ್ಯ ರಫೀಕ ಬೈರಕದಾರ, ಯಮನಪ್ಪ ಹೊರಟ್ಟಿ, ವಸಂತಗೌಡ ಪಾಟೀಲ, ಬಿ.ಎಲ್‌. ಬಬಲಾದಿ, ಮಹೇಶ ಹುಗ್ಗಿ, ಆನಂದ ಹವಳಖೋಡ, ಜಾಕೀರ ಅತ್ತಾರ, ಹನಮಂತ ಕುಡಚಿ, ವಿನೋದ ಘೋರ್ಪಡೆ, ಸೈಯದ್‌ ನದಾಫ, ಗುಲಾಬಸಾಬ ಅತ್ತಾರ, ರಮಜಾನ ನದಾಫ, ಸಂತೋಷ ದೇಶಪಾಂಡೆ ಇದ್ದರು.

ಟಾಪ್ ನ್ಯೂಸ್

New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ

New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

Chikkamagaluru: ಮಲೆನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

Chikkamagaluru: ಕಾಫಿನಾಡಿನಲ್ಲಿ ಮಳೆಯ ಅಬ್ಬರ… ಸಾವಿರಾರು ಎಕರೆ ಬೆಳೆ ಜಲಾವೃತ

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

BBK11: ಮನೆಮಂದಿಯ ಜಗಳ ನೋಡಿ ತಲೆ ಮೇಲೆ ಕೈಯಿಟ್ಟು ಕೂತ ಕ್ಯಾಪ್ಟನ್ ಹನುಮಂತು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

Kottigehara: ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ನಷ್ಟ, ಕಂಗಾಲಾದ ರೈತರು

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

K. S. Eshwarappa: ಸಂಕ್ರಾಂತಿಗೆ ಸಂತರಿಂದಲೇ ಹೊಸ ಸಂಘಟನೆ

K. S. Eshwarappa: ಸಂಕ್ರಾಂತಿಗೆ ಸಂತರಿಂದಲೇ ಹೊಸ ಸಂಘಟನೆ

Mudhol: ನದಿಯಲ್ಲಿದ್ದ ಮೋಟಾರ್‌ ತೆಗೆಯುವಾಗ ವಿದ್ಯುತ್‌ ತಗುಲಿ ರೈತ ಮೃತ್ಯು

Mudhol: ನದಿಯಲ್ಲಿದ್ದ ಮೋಟಾರ್‌ ತೆಗೆಯುವಾಗ ವಿದ್ಯುತ್‌ ತಗುಲಿ ರೈತ ಮೃತ್ಯು

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

Mudhol: ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು… ಮುಳುಗಿದ ಬ್ಯಾರೇಜ್

K. S. Eshwarappa: ಪಕ್ಷದ ಶುದ್ಧೀಕರಣ ಆಗದೆ ಬಿಜೆಪಿಗೆ ಹೋಗಲಾರೆ

K. S. Eshwarappa: ಪಕ್ಷದ ಶುದ್ಧೀಕರಣ ಆಗದೆ ಬಿಜೆಪಿಗೆ ಹೋಗಲಾರೆ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

K. S. Eshwarappa: ಬ್ರಿಗೇಡ್ ನಿಂದ ಸರ್ಕಾರಗಳನ್ನು ಜಾಗೃತಗೊಳಿಸೋಣ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ

New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ

Shimoga; ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ; ಮಾಜಿ ಉದ್ಯೋಗಿಯ ಮೇಲೆ ಆರೋಪ

Shimoga; ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ; ಮಾಜಿ ಉದ್ಯೋಗಿಯ ಮೇಲೆ ಆರೋಪ

By Election; ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಒಲವು ಬಿಜೆಪಿ ಕಡೆಗೆ: ಶಾಸಕ ಭರತ್‌ ಶೆಟ್ಟಿ

By Election; ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಒಲವು ಬಿಜೆಪಿ ಕಡೆಗೆ: ಶಾಸಕ ಭರತ್‌ ಶೆಟ್ಟಿ

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

Bagheera Trailer:‌ ʼರಕ್ತ ಕುಡಿಯುವ ರಾಕ್ಷಸʼ, ಜನರ ರಕ್ಷಕ.. ʼಬಘೀರʼ ಟ್ರೇಲರ್‌ ಔಟ್

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

INDvsNZ 2ನೇ ಪಂದ್ಯಕ್ಕೆ ಪಂತ್‌ ಅನುಮಾನ;ಕೋಚ್-ಕ್ಯಾಪ್ಟನ್‌ ಮೇಲೆ ಜವಾಬ್ದಾರಿ ಹಾಕಿದ ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.