ಬಿಎಸ್ಸೆನ್ನೆಲ್‌ ಕೇಬಲ್‌ ಕಟ್‌-ಗ್ರಾಹಕರ ಪರದಾಟ

ಎರಡು ದಿನದಿಂದ ಎಸ್‌ಬಿಐ ಬ್ಯಾಂಕ್‌ ಸೇವೆ ಸ್ಥಗಿತರಬಕವಿ-ಬನಹಟ್ಟಿ, ರಾಂಪುರ ವ್ಯಾಪಾರಸ್ಥರ ಗೋಳಾಟ

Team Udayavani, Mar 1, 2020, 1:24 PM IST

1-March-14

ಬನಹಟ್ಟಿ: ಕಳೆದ ಎರಡು ದಿನದಿಂದ ಬನಹಟ್ಟಿಯ ಪೊಲೀಸ್‌ ಠಾಣೆ ಎದುರು ರಸ್ತೆ ಅಗಲೀಕರಣ ನಿಮಿತ್ತ ನಡೆಯುತ್ತಿರುವ ಕಾಮಗಾರಿಯಿಂದ ಸಾಕಷ್ಟು ತೊಂದರೆ ಉಂಟಾಗಿದೆ.

ನೆಲ ಅಗೆಯುವ ಸಂದರ್ಭದಲ್ಲಿ ಜೆಸಿಬಿ ನಾಲಿಗೆಗೆ ಬಿಎಸ್‌ಎನ್‌ಎಲ್‌ ಕೇಬಲ್‌ ಸಿಲುಕಿ ಕಟ್‌ ಆಗಿರುವುದರಿಂದ ಬನಹಟ್ಟಿಯ ಎಸ್‌ಬಿಐ ಬ್ಯಾಂಕ್‌ ಗೆ ಸರ್ವರ್‌ ಇಲ್ಲದೇ ಸೇವೆ ಸ್ಥಗಿತಗೊಳಿಸಿದೆ. ಇದರಿಂದ ರಬಕವಿ ಬನಹಟ್ಟಿ ರಾಂಪುರ ನಗರಗಳ ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆಯಾಗಿದೆ.

ಲೋಕೋಪಯೋಗಿ ಇಲಾಖೆಯಡಿ ಜಮಖಂಡಿ ಕುಡಚಿ ರಾಜ್ಯ ಹೆದ್ದಾರಿ ಅಗಲೀಕರಣ ಹಾಗೂ ಡಾಂಬರೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ರಸ್ತೆ ಬದಿ ಇರುವ ಅನೇಕ ವಿದ್ಯುತ್‌ ತಂತಿಗಳು ಹಾಗೂ ನೆಲದಲ್ಲಿ ಹುಗಿದ ಟೆಲಿಪೋನ್‌ ಕೇಬಲ್‌ಗ‌ಳು ಜೆಸಿಬಿ ಬಾಯಿಗೆ ಸಿಲುಕಿ ಹರಿಯತ್ತಿವೆ. ಇದನ್ನೇ ನಂಬಿದ ಅನೇಕ ಬ್ಯಾಂಕ್‌ ಗಳು ಕಳೆದ ಎರಡು ದಿನಗಳಿಂದ ಅಂತರ್ಜಾಲ ಸಂಪರ್ಕ ಕಡಿತವಾದ ಕಾರಣ ಬ್ಯಾಂಕ್‌ ವ್ಯವಹಾರ ಸ್ಥಗಿತವಾಗಿದೆ. ಬನಹಟ್ಟಿ ಬ್ಯಾಂಕ್‌ ಎದುರು ಶನಿವಾರ ಬ್ಯಾಂಕ್‌ ಸೇವೆಗೆ ಲಭ್ಯವಿಲ್ಲ ಎಂದು ನಾಮಫಲಕ ಹಾಕಿದ್ದರು.

ಬಿಎಸ್‌ಎನ್‌ಎಲ್‌ ಕೇಬಲ್‌ ಕಟ್‌ ಆದ ಕಾರಣ ಬ್ಯಾಂಕ್‌ನ ಎಲ್ಲಾ ಕೆಲಸಗಳು ಸ್ಥಗಿತಗೊಂಡಿವೆ. ಪರ್ಯಾಯ ವ್ಯವಸ್ಥೆಗಾಗಿ ಬೇರೆ ಕಂಪನಿಯ ಟವರ್‌ ಹೊಂದಾಣಿಕೆ ಮಾಡಿಕೊಂಡಿದ್ದು, ಸೋಮವಾರವರೆಗೆ ಖಂಡಿತ ಪ್ರಾರಂಭವಾಗುತ್ತದೆ. ಈಗ ತಾತ್ಕಾಲಿಕವಾಗಿ ರಬಕವಿಯ ಎಸ್‌ಬಿಐ ಶಾಖೆಯಲ್ಲಿ ಗ್ರಾಹರಿಗೆ ಸೇವೆ ಒದಗಿಸುವ ವ್ಯವಸ್ಥೆ ಮಾಡಿದ್ದೇವೆ. ಗ್ರಾಹಕರು ಸಹರಿಸಬೇಕು.
ಧೀರಜಕುಮಾರ
ಎಸ್‌ಬಿಐ ಮ್ಯಾನೇಜರ್‌ ಬನಹಟ್ಟಿ

ರಾಂಪುರ ಬಿಎಸ್‌ಎನ್‌ಎಲ್‌ ಪ್ರಮುಖ ಕಚೇರಿಯಿಂದ ಬನಹಟ್ಟಿ ಕಡೆಗೆ ಹೊಗುವ ಬನಹಟ್ಟಿ ಪೊಲೀಸ್‌ ಠಾಣೆ ಎದುರಿಗೆ ಒಟ್ಟು ಎಂಟು ನೂರು ಸಂಪರ್ಕಗೊಳಿಸುವ ತಂತಿಗಳ ಕೇಬಲ್‌ ಕಡಿತಗೊಂಡಿದೆ. ಅವೆಲ್ಲವನ್ನು ಜೋಡಿಸಲು ಅಂದಾಜು ಎರಡು ದಿನಗಳು ಬೇಕಾಗುತ್ತದೆ. ಈಗ ನಿತ್ಯ ಹನ್ನೆರಡು ಗಂಟೆ ಸೇವೆ ಮಾಡುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಈ ಕಾರ್ಯ ಮುಗಿಯುತ್ತದೆ.
ಬಿ.ಎನ್‌. ದಶಗೀರ,
ಬಿಎಸ್‌ಎನ್‌ಎಲ್‌ ದಿನಗೂಲಿ ನೌಕರ

ಅವಳಿ ನಗರದಲ್ಲಿ ಸೀರೆ ವ್ಯಾಪಾರ ಕುಸಿತ ಕಂಡಿರುವ ಸಂದರ್ಭದಲ್ಲಿ ಬ್ಯಾಂಕ್‌ ವ್ಯವಹಾರ ಸ್ಥಗಿತಗೊಂಡಿರುವುದು ತೊಂದರೆ ಉಂಟಾಗಿದೆ. ಬ್ಯಾಂಕ್‌ನವರು ಇಂತಹ ತುರ್ತುಸಂದರ್ಭದಲ್ಲಿ ತಕ್ಷಣ ಪರ್ಯಾಯ ಅಂತರ್ಜಾಲಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಬ್ಯಾಂಕ್‌ ಗ್ರಾಹಕರಿಗೆ ಅನುಕೂಲವಾಗುತ್ತದೆ.
ನಟವರ್‌ ಕಾಬರಾ,
 ಜವಳಿ ವ್ಯಾಪಾರಿ

ಟಾಪ್ ನ್ಯೂಸ್

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.