Mahalingapur: ಸತ್ತ ನಂತರವೂ ಸ್ಮರಿಸುವಂತೆ ಧರ್ಮ ಕಾರ್ಯ ಮಾಡಿ


Team Udayavani, Nov 3, 2023, 1:21 PM IST

Mahalingapur: ಸತ್ತ ನಂತರವೂ ಸ್ಮರಿಸುವಂತೆ ಧರ್ಮ ಕಾರ್ಯ ಮಾಡಿ

ಮಹಾಲಿಂಗಪುರ: 2024 ಜನವರಿ 27ರಿಂದ 31ರವರೆಗೆ ನಡೆಯಲಿರುವ ಪ್ರಕರಣ ಪ್ರವೀಣ ಬಸವಾನಂದ ಮಹಾಸ್ವಾಮಿಗಳ 50ನೇ ಪುಣ್ಯಾರಾಧನೆಯ ವೇದಾಂತ ಸುವರ್ಣ ಮಹೋತ್ಸವ ಹಾಗೂ ಸಹಜಾನಂದ ಸ್ವಾಮೀಜಿಯವರ 80ನೇ ವರ್ಧಂತಿ ಮಹೋತ್ಸವಕ್ಕೆ ಮಹಾಲಿಂಗಪುರದ ಜನತೆ ತನು, ಮನ, ಧನ ಸೇರಿದಂತೆ ತ್ರಿವಿಧ ಸೇವೆಯ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಬೀದರ ಚಿದಂಬರಾಶ್ರಮದ ಡಾ|ಶಿವಕುಮಾರ ಮಹಾಸ್ವಾಮೀಜಿ ಹೇಳಿದರು.

ಬಸವಾನಂದ ಶಾಲೆಯ ಆವರಣದಲ್ಲಿ ಕಟ್ಟಿಸಿದ ಸದ್ಗುರು ಸದನ ಗುರುವಾರ ಉದ್ಘಾಟಿಸಿ ನಂತರ ಜರುಗಿದ ಬಸವಾನಂದರ 50ನೇ ವೇದಾಂತ ಮಹೋತ್ಸವದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಸತ್ತ ನಂತರವೂ ಸ್ಮರಿಸುವಂತೆ ಧರ್ಮ ಕಾರ್ಯಗಳನ್ನು ಮಾಡಿ ಪುಣ್ಯ ಸಂಪಾದಿಸಬೇಕು. ಸಿದ್ಧಾರೂಢ ಸತ್ಸಂಗದಲ್ಲಿರುವವರು ಎಂದಿಗೂ ಜಾತಿಭೇದ ಮಾಡಬಾರದು. ನಾವೆಲ್ಲರೂ ಮಾನವ ಜಾತಿಯವರು, ಗುರುಪುತ್ರರು ಎಂಬ ಭಾವನೆಯಿಂದ ಸದಾ ಸತ್ಸಂಗ ಮತ್ತು ಧರ್ಮ ಕಾರ್ಯಗಳ ಮೂಲಕ ಮಾನವ ಜನ್ಮದ ಸಾರ್ಥಕತೆ ಪಡೆಯಬೇಕು ಎಂದರು.

ಹುಬ್ಬಳ್ಳಿ ಸಿದ್ಧಾರೂಢ ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಮಾತನಾಡಿ, ಪ್ರಕರಣ ಪ್ರವೀಣ ಬಸವಾನಂದ ಮಹಾಸ್ವಾಮಿಗಳ 50ನೇ ಪುಣ್ಯಾರಾಧನೆಯ ವೇದಾಂತ ಸುವರ್ಣ ಮಹೋತ್ಸವ ಹಾಗೂ ಸಹಜಾನಂದ ಸ್ವಾಮೀಜಿಯವರ 80ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮವನ್ನು ಅದ್ಧೂರಿ ಸಮಾರಂಭವನ್ನಾಗಿಸಲು ಎಲ್ಲರೂ ಸಹಕರಿಸಬೇಕೆಂದರಲ್ಲದೇ, ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ 51ಸಾವಿರ ರೂ. ದೇಣಿಗೆ ನೀಡುವುದಾಗಿ ಘೋಷಿಸಿದರು.

ಬಸವಾನಂದ ಟ್ರಸ್ಟ್‌ ಕಾರ್ಯದರ್ಶಿ ಎಂ.ಎಂ. ಕಟಗಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮದ ವಿವರಗಳನ್ನು ಸಭೆಗೆ ತಿಳಿಸಿ, ತಾವು ಕಾರ್ಯಕ್ರಮಕ್ಕೆ 51 ಸಾವಿರ ದೇಣಿಗೆ ನೀಡುವುದಾಗಿ ತಿಳಿಸಿದರು. ಸಾನಿಧ್ಯ ವಹಿಸಿದ್ದ ಸಹಜಾನಂದ ಸ್ವಾಮೀಜಿ
ಮಾತನಾಡಿದರು. ಚಳಕಾಪೂರದ ಶಂಕರಾರೂಢ ಸ್ವಾಮೀಜಿ, ಹೊಸೂರ ಪರಮಾನಂದ ಸ್ವಾಮೀಜಿ, ರನ್ನಬೆಳಗಲಿ ಸದಾಶಿವ ಗುರೂಜಿ, ಕಂಕನವಾಡಿ ಮಾರುತಿ ಶರಣರು ಭಾಗವಹಿಸಿದ್ದರು.

ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಪಟ್ಟಣದ ವಿವಿಧ ಸಮಾಜಗಳ ಹಿರಿಯರು, ಶಾಲೆಯ ಹಳೆಯ ವಿದ್ಯಾರ್ಥಿಗಳು, ಬಸವಾನಂದ ಟ್ರಸ್ಟ್‌ ಕಮೀಟಿ ಸದಸ್ಯರು, ಬೀದರ ಶಿವಕುಮಾರ ಸ್ವಾಮೀಜಿ, ಸಹಜಾನಂದ ಸ್ವಾಮೀಜಿ ಅವರನ್ನು
ಸನ್ಮಾನಿಸಿ ಗೌರವಿಸಿದರು. ಎಸ್‌.ಕೆ.ಗಿಂಡೆ ಸ್ವಾಗತಿಸಿದರು. ಎಚ್‌.ಆಯ್‌. ಸುತಾರ ನಿರೂಪಿಸಿದರು. ಸಿದ್ಧಾರೂಢ ಮುಗಳಖೋಡ ವಂದಿಸಿದರು.

ಟಾಪ್ ನ್ಯೂಸ್

meta-insti

Termination of Employees: ಅಮೆರಿಕದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ, ಇಂಟೆಲ್‌!

Flight

Mumbai: ಮತ್ತೆ 9 ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ!

CM Siddu

Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ

Result: ಇಂದು ಯುಜಿನೀಟ್‌ ಪರಿಷ್ಕೃತ ತಾತ್ಕಾಲಿಕ ಫ‌ಲಿತಾಂಶ ಪ್ರಕಟ

BUS driver

Bus ticket; ದೀಪಾವಳಿ ಸಂಭ್ರಮಕ್ಕೆ ಬಸ್‌ ಟಿಕೆಟ್‌ ದರ ತಣ್ಣೀರು

1-ani

Channapatna;ಯೋಗೇಶ್ವರ್‌,ನಿಖಿಲ್‌ ಪೈಪೋಟಿ ಮಧ್ಯೆ ದೋಸ್ತಿ ಅಭ್ಯರ್ಥಿಯಾಗಿ ಅನಿತಾ ಹೆಸರು

BY Election: ಚನ್ನಪಟ್ಟಣ ಜೆಡಿಎಸ್‌ಗೇ ಉಳಿಸಿಕೊಳ್ಳಲು ತೀರ್ಮಾನ? ಮೈತ್ರಿ ಅಭ್ಯರ್ಥಿ ಜಿಜ್ಞಾಸೆ

Channapatna: ಜೆಡಿಎಸ್‌ಗೇ ಉಳಿಸಿಕೊಳ್ಳಲು ತೀರ್ಮಾನ? ಮೈತ್ರಿ ಅಭ್ಯರ್ಥಿ ಜಿಜ್ಞಾಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ:ಕೋಟೆಕಲ್ಲದಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ

ಬಾಗಲಕೋಟೆ:ಕೋಟೆಕಲ್ಲಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ

2-mudhol

Mudhola: ಮೆಕ್ಕೆಜೋಳಕ್ಕೂ ಕುತ್ತು; ರೈತರ ಆರ್ಥಿಕತೆಗೆ ಮಾರಕ ಹೊಡೆತ

ದೇಗುಲ ಕಟ್ಟಡಕ್ಕೆ ಭಕ್ತರ ದೇಣಿಗೆ ಮಾತ್ರ ಬಳಕೆ: ಗುಡಗುಂಟಿಮಠ

ದೇಗುಲ ಕಟ್ಟಡಕ್ಕೆ ಭಕ್ತರ ದೇಣಿಗೆ ಮಾತ್ರ ಬಳಕೆ: ಗುಡಗುಂಟಿಮಠ

11-mudhol

ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ‌‌ ಪ್ರಯತ್ನಿಸುವೆ: ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ

ಭೈರನಹಟ್ಟಿ: ಕಾರ್ಗಿಲ್‌ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

ಭೈರನಹಟ್ಟಿ: ಕಾರ್ಗಿಲ್‌ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

meta-insti

Termination of Employees: ಅಮೆರಿಕದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾದ ಮೆಟಾ, ಇಂಟೆಲ್‌!

Flight

Mumbai: ಮತ್ತೆ 9 ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ!

CM Siddu

Caste census: ನಾಡಿದ್ದು ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ

Result: ಇಂದು ಯುಜಿನೀಟ್‌ ಪರಿಷ್ಕೃತ ತಾತ್ಕಾಲಿಕ ಫ‌ಲಿತಾಂಶ ಪ್ರಕಟ

BUS driver

Bus ticket; ದೀಪಾವಳಿ ಸಂಭ್ರಮಕ್ಕೆ ಬಸ್‌ ಟಿಕೆಟ್‌ ದರ ತಣ್ಣೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.