ಬೆದರಿಕೆಗೆ ಹೆದರುವುದಿಲ್ಲ,ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ನಿಶ್ಚಿತ: ಮುತಾಲಿಕ್
ಹಿಂದುತ್ವದ ವೃತ ನಿರಂತರ...ಬಿಜೆಪಿಯಿಂದ ಭಿಕ್ಷೆ ಬೇಡುವ ಪ್ರಮೇಯವಿಲ್ಲ.
Team Udayavani, Nov 4, 2022, 7:41 PM IST
ರಬಕವಿ-ಬನಹಟ್ಟಿ: ಯಾವ ಜೀವ ಬೆದರಿಕೆ ಕರೆಗಳಿಗೂ ಹೆದರೋ ಜಾಯಮಾನ ನನ್ನದಲ್ಲ. ಇದೇನು ಹೊಸದಲ್ಲ. ಹಿಂದುತ್ವದ ವೃತ ನಿರಂತರವಾಗಿ ನಡೆಯುತ್ತಿರುತ್ತದೆ. ಶ್ರೀರಾಮಸೇನೆಯ ಸಂಘಟನೆಯ ಕಾರ್ಯಗಳು ನಿಲ್ಲಿಸುವ ಹುನ್ನಾರ ಯಾರಿಂದಲೂ ಸಾಧ್ಯವಿಲ್ಲವೆಂದು ಸಂಘಟನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಬನಹಟ್ಟಿಯಲ್ಲಿ ಮಾತನಾಡಿದ ಅವರು, ಇಸ್ಲಾಂನಲ್ಲಿ ಮಾಂಸದ ಪ್ರಾಣಿಗಳನ್ನು ಕೊಯ್ಯುವ ವಿಧಾನವನ್ನ ಹಲಾಲ್ ಕಟ್ ಎಂಬ ಪದಬಳಕೆಯಿಂದ ಮುಸ್ಲಿಮರು ಪ್ರೇರೇಪಿಸುತ್ತಿದ್ದಾರೆ. ಚೀನ ಹಲಾಲ್ ಮಾಂಸವನ್ನು ನಿಷೇಧಿಸಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿಯೂ ಸಂಪೂರ್ಣ ನಿಷೇಧಿಸಬೇಕು. ಇದೇ ಹಲಾಲ್ ಸರ್ಟಿಫಿಕೆಟ್ ಬಳಕೆಯಿಂದ ಹಲವಾರು ಕಂಪನಿಗಳು ಪ್ರಯೋಜನ ಪಡೆದು ಆರ್ಥಿಕವಾಗಿ ಬೆಳೆದು ಭಯೋತ್ಪಾದನೆಗೆ ಉಪಯೋಗಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ದೇಶಾದ್ಯಂತ ಚಿಗುರುವ ಮುನ್ನವೇ ಚಿವುಟಿ ಹಾಕಬೇಕೆಂದು ಎಚ್ಚರಿಸಿದರು.
ಹಿಂದೂ ಶಾಸಕರಿಗೆ ಧಮ್ಕಿ, ಜೀವ ತೆಗೆಯುವ ಕೃತ್ಯ ಸರಿಯಲ್ಲ
ಶಾಸಕ ರೇಣುಕಾಚಾರ್ಯ ಕುಟುಂಬದಲ್ಲೊಂದು ಕರಾಳ ಘಟನೆ ನಡೆದು ತಮ್ಮನ ಮಗ ಚಂದ್ರುರನ್ನು ಕೊಲೆ ಮಾಡಿದ ಆರೋಪಿಗಳನ್ನು ತೀವ್ರ ಶೋಧ ನಡೆಸಬೇಕು. ಹಿಂದು ಶಾಸಕರ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿರುವ ಗೂಂಡಾಗಳನ್ನು ಬಂಧಿಸಬೇಕೆಂದರು.
ಸ್ಪರ್ಧೆ ನಿಶ್ಚಿತ
ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯದಲ್ಲಿ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧೆ ನಿಶ್ಚಿತವೆಂದು ಸ್ಪಷ್ಟಪಡಿಸಿದರು. ರಾಜ್ಯದ ತೇರದಾಳ, ಪುತ್ತೂರು, ಕಾರ್ಕಳ, ಧಾರವಾಡ, ಹಳಿಯಾಳ, ಜಮಖಂಡಿ ಸೇರಿದಂತೆ 8-10 ಕಡೆಗಳಿಂದ ಕಾರ್ಯಕರ್ತರ ಹಾಗೂ ಮತದಾರರ ಒತ್ತಾಯವಾಗಿದ್ದು, ಬಿಜೆಪಿಯಿಂದ ಭಿಕ್ಷೆ ಬೇಡುವ ಪ್ರಮೇಯವಿಲ್ಲ. ಮುತಾಲಿಕ್ ಏಕಾಂಗಿಯಾಗಿ ಕಾರ್ಯಕರ್ತರ ವಿಶ್ವಾಸದೊಂದಿಗೆ ಚುನಾವಣೆ ನಿಂತು ಬಿಜೆಪಿಗೇ ಬೆಂಬಲಿಸಿ, ಬಿಜೆಪಿಯಲ್ಲಿ ದಾರಿ ತಪ್ಪಿದವರನ್ನು ತಿದ್ದು ಕಾರ್ಯ ನಡೆಸಿ, ವಿಮುಖವಾಗಿರುವ ಬಿಜೆಪಿಯನ್ನು ಒಗ್ಗೂಡಿಸುವ ಕಾರ್ಯ ನಡೆಸಲಾಗುವುದು. ಅಲ್ಲದೆ ರಾಜ್ಯದ 25 ಕಡೆಗಳಲ್ಲಿ ಸಂಘಟನೆಯ ಮುಖಂಡರು ಸ್ಪರ್ಧೆಗೆ ತಯಾರಿ ನಡೆಸಿದ್ದು, ಇವರ್ಯಾರೂ ಬಿಜೆಪಿಯಿಂದ ಸ್ಪರ್ಧೆ ನಡೆಸುವುದಿಲ್ಲ ಬದಲಾಗಿ ಪಕ್ಷೇತರರಾಗಿಯೇ ಕಣಕ್ಕಿಳಿಯುವದು ನಿಶ್ಚಿತವೆಂದರು.
ಬ್ರಿಜ್ಮೋಹನ ಡಾಗಾ, ರವಿ ಕಾಮಗೊಂಡ, ಬಸಯ್ಯ ಹಿರೇಮಠ, ಬಸವರಾಜ ಗಾಯಕವಾಡ ಸೇರಿದಂತೆ ಅನೇಕರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸುವರ್ಣ ವಿಧಾನಸೌಧಕ್ಕೆ ಯು.ಟಿ.ಖಾದರ್, ಬಸವರಾಜ ಹೊರಟ್ಟಿ ಭೇಟಿ
Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ
Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ
Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್ ಅಳಲು
BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್
MUST WATCH
ಹೊಸ ಸೇರ್ಪಡೆ
INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್
Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ
UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು
Manipal ಪರಿಸರದ 15-20 ಪಕ್ಷಿ ಪ್ರಭೇದ ಕಣ್ಮರೆ; ಇ ಬರ್ಡ್ ಪೋರ್ಟಲ್ನಲ್ಲಿ ದಾಖಲಾತಿ
Shirva: ಹುಲಿ ವೇಷ ಹಾಕಿ ಅನಾರೋಗ್ಯಪೀಡಿತ ಬಾಲಕನಿಗೆ ನೆರವು ನೀಡಿದ ಪೋರರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.