ಬಡವರ ಹಸಿವು ನೀಗಿಸಿದ ಅಭಿಮಾನಿ ಬಳಗ


Team Udayavani, Apr 6, 2020, 1:40 PM IST

ಬಡವರ ಹಸಿವು ನೀಗಿಸಿದ ಅಭಿಮಾನಿ ಬಳಗ

ಬಾಗಲಕೋಟೆ: ಚುನಾವಣೆ ವೇಳೆ ರಾಜಕಾರಣಿಗಳು ಮದ್ಯ, ಹಣ ಎಲ್ಲವೂ ಹಂಚುತ್ತಾರೆ. ಆದರೆ,  ಕೋವಿಡ್ 19 ಭೀತಿಯಿಂದ ಎಲ್ಲೆಡೆ ಲಾಕ್‌ಡೌನ್‌ ಘೋಷಣೆ ಮುಂದುವರೆದಿದ್ದು, ಈ ಸಂದರ್ಭದಲ್ಲಿ ಬಡವರ ನೆರವಿಗೆ ಎಲ್ಲ ರಾಜಕಾರಣಿಗಳು ಬರಲಿ ಎಂಬ ಒತ್ತಾಯ ಎಲ್ಲೆಡೆ ಕೇಳಿ ಬರುತ್ತಿತ್ತು. ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಅಭಿಮಾನಿ ಬಳಗ, ಇಡೀ ಕ್ಷೇತ್ರದ ಬಡ ಜನರ ಹಸಿವು ಹಿಂಗಿಸಲು ಲಕ್ಷಾಂತರ ಮೊತ್ತದ ಆಹಾರಧಾನ್ಯ, ದಿನಸಿ ಸಾಮಗ್ರಿ ವಿತರಿಸಿ, ಜಿಲ್ಲೆಯ ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದೆ.

ಮಾಜಿ ಸಿಎಂ, ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಬಾದಾಮಿಯ ಶಾಸಕ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗದಿಂದ ಕ್ಷೇತ್ರದ 114 ಗ್ರಾಮಗಳ ಬಡವರ ಮನೆ ಮನೆಗೂ ಆಹಾರಧಾನ್ಯ ತಲುಪಿಸುವ ಕಾರ್ಯ ಮಾಡುತ್ತಿದೆ. ಜತೆಗೆ 1.50 ಲಕ್ಷ ಮಾಸ್ಕ್ ಗಳನ್ನು ಕ್ಷೇತ್ರದ ಜನರಿಗೆ ವಿತರಿಸುತ್ತಿದ್ದು, ಲಾಕ್‌ಡೌನ್‌ದಿಂದ ದಿನಸಿ ಸಾಮಗ್ರಿ, ಆಹಾರ ಸಿಗದೇ ಪರದಾಡುತ್ತಿದ್ದ ಬಡವರ ಹಸಿವು ನೀಗಿಸುವ ಕೆಲಸ ಮಾಡಿದ್ದು, ಕ್ಷೇತ್ರದ ಜನರಿಂದ ಶ್ಲಾಘನೆಗೆ ವ್ಯಕ್ತವಾಗಿದೆ.

25 ಸಾವಿರ ಕೆ.ಜಿ. ಅಕ್ಕಿ: ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಅವರ ಆಪ್ತರೂ ಆಗಿರುವ ಗುಳೇದಗುಡ್ಡದ ಹೊಳೆ ಬಸುಷ. ಶೆಟ್ಟರ, ಸಂಜೀವ ಬರಗುಂಡಿ, ನಂದಿಕೇಶ್ವರದ ಎಂ.ಬಿ. ಹಂಗರಗಿ ಹೀಗೆ ಹಲವು ಪ್ರಮುಖರು ಕೂಡಿಕೊಂಡು ಇಡೀ ಕ್ಷೇತ್ರದ ಜನರು ನಿತ್ಯ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಬರೋಬ್ಬರಿ 25 ಸಾವಿರ ಕೆ.ಜಿ ಅಕ್ಕಿ, ಒಂದು ನೂರು ಕೆ.ಜಿ.ಗೆ ತಲಾ 3 ಸಾವಿರ ಮೊತ್ತದ ಅಡುಗೆ ಎಣ್ಣೆ, ವಿವಿಧ ದಿನಸಿ ಪದಾರ್ಥಗಳನ್ನೂ ನೀಡಲಾಗಿದೆ. ಅಭಿಮಾನಿ ಬಳಗದಿಂದ ಪ್ರತಿ ಗ್ರಾಮದಲ್ಲಿ ಒಂದೊಂದು ತಂಡ ರೂಪಿಸಿ, ಅವರ ಮೂಲಕ ಆಯಾ ಗ್ರಾಮಗಳಲ್ಲಿ ಅತ್ಯಂತ ಬಡವರು ವಾಸಿಸುವ ಏರಿಯಾಗಳಿಗೆ ತಲುಪಿಸಲಾಗಿದೆ.

ಇದರಿಂದ ಜನರಿಗೆ ಆಹಾರ ಧಾನ್ಯಕ್ಕಾಗಿ ಪರದಾಡುವ ಪರಿಸ್ಥಿತಿ ತಲುಪಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 114 ಗ್ರಾಮಗಳು ಬರುತ್ತಿದ್ದು, ಪ್ರತಿ ಗ್ರಾಮಕ್ಕೂ ಅಕ್ಕಿ, ದಿನಸಿ ಪದಾರ್ಥ ತಪಿಸಲಾಗಿದೆ. ಇನ್ನು ಹಂಸನೂರ ಜಿ.ಪಂ. ವ್ಯಾಪ್ತಿಯ ಸುಮಾರು 26 ಹಳ್ಳಿಗಳಿಗೆ (ತಾಂಡಾ, ತೋಟದ ವಸ್ತಿಗಳೂ ಸೇರಿ) 3600 ಕೆ.ಜಿ ಅಕ್ಕಿಯ ಮಸಾಲಾ ರೈಸ್‌ (ಪಲಾವ್‌) ಸಿದ್ಧಪಡಿಸಿ, ಬಡವರ ಮನೆ ಮನೆಗೆ ನೀಡಲಾಗಿದೆ.

1.50 ಲಕ್ಷ ಮಾಸ್ಕ್ : ಕ್ಷೇತ್ರದ 114 ಹಳ್ಳಿಗಳ ಬಡವರ ಮನೆಗೆ ಆಹಾರ ಧಾನ್ಯ, ದಿನಸಿ ಪದಾರ್ಥ, ಪಲಾವ್‌ ವಿತರಿಸಿದರೆ, ಮನೆ ಮನೆಗೂ ಮಾಸ್ಕ್ ವಿತರಣೆಗೆ ಸಿದ್ದರಾಮಯ್ಯ ಅಭಿಮಾನಿಗಳ ಬಳಗ ನಿರ್ಧರಿಸಿದೆ. ಈಗಾಗಲೇ ಸುಮಾರು 75 ಸಾವಿರದಷ್ಟು ಮಾಸ್ಕ್ಗಳನ್ನು ಹೊರಗಿನಿಂದ ತರಿಸಿದ್ದು, ಇನ್ನೂ 75 ಸಾವಿರದಷ್ಟು ಮಾಸ್ಕ್ಗಳನ್ನು ಗುಳೇದಗುಡ್ಡ, ಬಾದಾಮಿ ಸೇರಿದಂತೆ ವಿವಿಧೆಡೆ ಸಿದ್ಧಪಡಿಸಲಾಗುತ್ತಿದೆ. ಸಿದ್ದರಾಮಯ್ಯ ಅವರ ಆಪ್ತ ಹೊಳೆಬಸು, ಸಂಜೀವ ಬರಗುಂಡಿ ಸೇರಿದಂತೆ ಹಲವು ಯುವಕರು, ಗುಳೇದಗುಡ್ಡದ ತಮ್ಮ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಹಾರ ತಯಾರಿಸುವ ಜತೆಗೆ ಮಾಸ್ಕ್ಗಳನ್ನು ಗ್ರಾಮವಾರು ಬಂಡಲ್‌ ಮಾಡುವುದರಲ್ಲಿ ತೊಡಗಿದ್ದಾರೆ. ಒಟ್ಟಾರೆ, ಲಾಕ್‌ಡೌನ್‌ ದಿಂದ ಆಹಾರಧಾನ್ಯ, ದಿನಸಿ ಸಿಗದೇ ಪರದಾಡುತ್ತಿದ್ದ ಬಡ ಸಿದ್ದರಾಮಯ್ಯ ಅವರ ಅಭಿಮಾನಿ ಬಳಗದಿಂದ ಮಾನವೀಯ ಕಾರ್ಯ ನಡೆದಿದೆ.  ಇದು ಜಿಲ್ಲೆಯ ಇತರೆ ರಾಜಕಾರಣಿಗಳಿಗೂ ಮಾದರಿಯಾಗಿದೆ ಎಂಬ ಅಭಿಪ್ರಾಯ ಕ್ಷೇತ್ರದ ಪ್ರಜ್ಞಾವಂತ ಜನರಿಂದ ಕೇಳಿ ಬರುತ್ತಿದೆ.

 

ಕೋವಿಡ್ 19 ಭೀತಿಯಿಂದ ಇಡೀ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಿದ್ದು, ಕ್ಷೇತ್ರದ ಜನರಿಗೆ ನಿತ್ಯ ಊಟಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ ಸಾಹೇಬರು ಸೂಚಿಸಿದ್ದರು. ಅವರ ನಿರ್ದೇಶನದಂತೆ 25 ಸಾವಿರ ಕೆ.ಜಿ. ಅಕ್ಕಿ, ಸುಮಾರು 5.50 ಲಕ್ಷ ಮೊತ್ತದ ದಿನಸಿ ಸಾಮಗ್ರಿ, 3600 ಕೆ.ಜಿ.ಯ ಪಲಾವ್‌ ವಿತರಣೆ ಮಾಡಿದ್ದೇವೆ. ಕ್ಷೇತ್ರದ ಮನೆ ಮನೆಗೂ 1.50 ಲಕ್ಷ ಮಾಸ್ಕ್ ವಿತರಣೆಗೆ ಸಿದ್ಧತೆ ನಡೆದಿದ್ದು, ಇನ್ನೆರಡು ದಿನಗಳಲ್ಲಿ ವಿತರಣೆ ಮಾಡುತ್ತೇವೆ.  ಹೊಳೆಬಸುಷ. ಶೆಟ್ಟರ, ಸಿದ್ದರಾಮಯ್ಯ ಅಭಿಮಾನಿ ಬಳಗದ ಪ್ರಮುಖ

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.