![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 8, 2020, 12:01 PM IST
ಮಹಾಲಿಂಗಪುರ: ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳು ಇಲಾಖೆ ಋಣ ತೀರಿಸಲು ಸಾಧ್ಯವಿಲ್ಲ. ನಿಷ್ಠೆ- ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳ ಕರ್ತವ್ಯ ಎಂದು ಎಸೈ ಜಿ.ಎಸ್. ಉಪ್ಪಾರ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಎನ್.ಎ. ನಾಯ್ಕೋಡಿ ಅವರ ಬೀಳ್ಕೊಡುಗೆ ಮತ್ತು ಪದೋನ್ನತಿ ಪಡೆದ ರೂಪಾ ರಾಚನ್ನವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಇಲಾಖೆಯಲ್ಲಿ ಎಎಸೈ ನಾಯ್ಕೋಡಿ ಯಶಸ್ವಿಯಾಗಿ ಸೇವೆ ಪೂರೈಸಿದ್ದಾರೆ. ಇದು ಅವರ ಕರ್ತವ್ಯ ನಿಷ್ಠೆಗೆ ಸಾಕ್ಷಿ. ಮುಖ್ಯಪೇದೆ ಹುದ್ದೆಗೆ ಪದೋನ್ನತಿ ಪಡೆದ ರೂಪಾ ರಾಚನ್ನವರ ಅವರಿಗೂ ಶುಭವಾಗಲಿ ಎಂದು ಹಾರೈಸಿದರು.
ಎಎಸೈ ಎಸ್.ಬಿ. ಹಿರೇಕುರುಬರ, ಮುಖ್ಯಪೇದೆ ಐ.ಬಿ. ಅಡಿಹುಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಎಸೈ ಎನ್.ಎ. ನಾಯ್ಕೋಡಿ ದಂಪತಿ ಮತ್ತು ಮುಂಬಡ್ತಿ ಪಡೆದ ರೂಪಾ ರಾಚನ್ನವರ ಅವರನ್ನು ಸನ್ಮಾನಿಸಲಾಯಿತು. ಅಪರಾಧ ವಿಭಾಗದ ಪಿಎಸೈ ಎಸ್.ಎಸ್. ಘಾಟಗೆ, ಸಿಬ್ಬಂದಿ ಎ.ಎಸ್. ಮದರಖಂಡಿ, ಎಂ.ಎಚ್. ರಾಥೋಡ, ಎಸ್. ಎನ್. ದಂಡಿನ, ಎಂ.ಎಂ. ಬೆಳಕೋಡ, ಅಶೋಕ ಬಿ. ಸವದಿ, ಶ್ರೀಶೈಲ ಔರಸಂಗ, ಎಂ.ಎನ್. ಕಣಶೆಟ್ಟಿ, ಬಿ.ಸಿ. ಮುದಿಬಸವನಗೌಡರ, ಬಿ.ಎಸ್. ನಾಯಕ, ಎಸ್.ಎಸ್. ಬಂಗಾರಿ ಇತರರು ಇದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.