Mahalingpur: ಧಾರಕಾರ ಮಳೆ; ಪ್ರಸಕ್ತ ವರ್ಷದ ಮಳೆಗಳಲ್ಲಿಯೇ ಅತ್ಯುತ್ತಮ ಮಳೆ
Team Udayavani, Sep 24, 2024, 4:58 PM IST
ಮಹಾಲಿಂಗಪುರ: ಪಟ್ಟಣದಲ್ಲಿ ಸೆ.23ರ ಸೋಮವಾರ ರಾತ್ರಿ 9 ರಿಂದ 12ವರೆಗೆ ಹಾಗೂ ಸೆ.24ರ ಮಂಗಳವಾರ ಮಧ್ಯಾಹ್ನ 12 ರಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದೆ. ಸೋಮವಾರ ರಾತ್ರಿ ಸುರಿದ ಮಳೆಯು ಪ್ರಸಕ್ತ ವರ್ಷದ ಮಳೆಗಳಲ್ಲಿಯೇ ಅತ್ಯುತ್ತಮ ಮಳೆಯಾಗಿದೆ.
ಸೆ.24ರ ಮಂಗಳವಾರ ಮಧ್ಯಾಹ್ನ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಪಟ್ಟಣದ ಎಲ್ಲಾ ಭಾಗದಲ್ಲಿನ ಚರಂಡಿಗಳು ತುಂಬಿ ಹರಿಯುತ್ತಿವೆ. ಪಟ್ಟಣದ ಹೊಲ-ಗದ್ದೆಗಳು ಮತ್ತು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಜನಜೀವನ ಅಸ್ತವ್ಯಸ್ತ: ನಿರಂತರ ಮಳೆಯಿಂದಾಗಿ ಎಲ್ಲಾ ರಸ್ತೆಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿವೆ. ಕೆಲವೆಡೆ ಚರಂಡಿ ತುಂಬಿ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ವ್ಯಾಪಾರಸ್ಥರ ಪರದಾಟ: ಕಳೆದ ಮಂಗಳವಾರ ಪ್ರಾರಂಭವಾದ ಮಹಾಲಿಂಗೇಶ್ವರ ಜಾತ್ರೆಯ ಅಂಗಡಿ ಮುಗ್ಗಟ್ಟುಗಳು, ಜೇಕ್, ಜೋಕಾಲಿ ಸೇರಿದಂತೆ ಮನರಂಜನೆಯ ಆಟಗಳಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮಂಗಳವಾರ ಸಂತೆ ಮಾಡುತ್ತಿರುವ ತರಕಾರಿ ಮತ್ತು ದಿನಸಿ ವ್ಯಾಪಾರಸ್ಥರು ಹಾಗೂ ಜಾತ್ರೆಯ ನಿಮಿತ್ತ ಆಗಮಿಸಿದ್ದ ವಿವಿಧ ಆಟಿಕೆ ಸಾಮಾನು, ಮನೆ ಬಳಕೆ ಸಾಮಗ್ರಿಗಳು, ಬಳೆ ಅಂಗಡಿ, ಸಿಹಿತಿಂಡಿಗಳ ಅಂಗಡಿಗಳು ಸೇರಿದಂತೆ ವಿವಿಧ ವ್ಯಾಪಾರಸ್ಥರಿಗೆ ಮಳೆಯಿಂದಾಗಿ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪ್ರತಿ ವರ್ಷವೂ ಮಹಾಲಿಂಗೇಶ್ವರ ಜಾತ್ರೆಗೆ ಮಳೆ ಬರುವುದು ಖಚಿತ. ಆದರೆ ಈ ವರ್ಷ ಜಾತ್ರೆ ಮುಗಿದ ನಂತರ ಭಾನುವಾರ ಪ್ರಾರಂಭವಾದ ಮಳೆ ಆ ನಂತರ ಪ್ರತಿನಿತ್ಯ ತಪ್ಪದೆ ಮಳೆಯಾಗುತ್ತಿದೆ. ಅದರಲ್ಲೂ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ 12 ರಿಂದ ಇಲ್ಲಿವರೆಗೂ ನಿರಂತರವಾಗಿ ಸುರಿಯುತ್ತಿರುವ ಧಾರಕಾರ ಮಳೆ, ಇಳೆಯನ್ನು ತಂಪಾಗಿಸಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಬೈಕ್ ಗಳು ಜಲಾವೃತ- ವಾಹನ ಸವಾರರ ಪರದಾಟ: ಪಟ್ಟಣದ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿಯ ಮಧ್ಯೆಯಿರುವ ಬಸವ ವೃತ್ತದಲ್ಲಿ ರಸ್ತೆಯ ಮೇಲೆ 2 ಅಡಿಯಷ್ಟು ನೀರು ನಿಂತು, ರಸ್ತೆ ಪಕ್ಕದಲ್ಲಿ ನಿಲ್ಲಿಸಿರುವ ಬೈಕ್ ಗಳು ಸಂಪೂರ್ಣ ಜಲಾವೃತವಾಗಿದೆ. ಬಸವ ವೃತ್ತದಿಂದ ಎಪಿಎಂಸಿ ವರೆಗೆ ಚರಂಡಿ ಕಾಮಗಾರಿ ನಿಮಿತ್ತ ಚರಂಡಿಯನ್ನು ಅಗೆದಿರುವ ಕಾರಣ ನೀರು ಮುಂದೆ ಸರಾಗವಾಗಿ ಹೋಗದಿರುವ ಕಾರಣ ಮೊದಲಿನಕ್ಕಿಂತ ಜಾಸ್ತಿ ನೀರು ಬಸವ ವೃತ್ತದಲ್ಲಿ ನಿಂತ ಕಾರಣ ರಸ್ತೆಯು ಮಿನಿ ಕಾಲುವೆಯಂತಾಗಿ ವಾಹನ ಸವಾರರು, ಪಾದಚಾರಿಗಳು ರಸ್ತೆ ದಾಟಲು ಪರದಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಲೈಂಗಿಕ ದೌರ್ಜನ್ಯ, ಯತ್ನಾಳ್ ವಿರುದ್ದ ಅವಹೇಳನಕ್ಕೆ ಖಂಡನೆ; ಮನವಿ ಸಲ್ಲಿಕೆ
Mudhol: ಅನೈತಿಕ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ
Rabkavi Banhatti: ಕಾಡಸಿದ್ಧೇಶ್ವರ ರಥಕ್ಕೆ 155 ವರ್ಷದ ಇತಿಹಾಸ …!
Rabkavi Banhatti: ಸೆ. 24 ರಿಂದ ಉತ್ತರ ಕರ್ನಾಟಕದ ಮದ್ದಿನ(ಪಟಾಕಿ) ಜಾತ್ರೆ
ಪ್ಯಾಸೆಂಜರ್ ರೈಲು ಓಡಾಟ ಎಂದು? ರೈಲ್ವೆ ಹೋರಾಟಗಾರರಿಗೆ ಬೇಸರ…
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hunsur: ಅಕ್ರಮವಾಗಿ ಕರುಗಳ ಸಾಗಾಟ; ಕಂಟೈನರ್ ವಶ, ಇಬ್ಬರ ಬಂಧನ
Mudbidri ಅರಮನೆ ಆನೆಬಾಗಿಲಿಗೆ ಟ್ರಕ್ ಡಿಕ್ಕಿ ಹೊಡೆದು ಹಾನಿ
Mudhol: ಲೈಂಗಿಕ ದೌರ್ಜನ್ಯ, ಯತ್ನಾಳ್ ವಿರುದ್ದ ಅವಹೇಳನಕ್ಕೆ ಖಂಡನೆ; ಮನವಿ ಸಲ್ಲಿಕೆ
High Court Order: ನಾವು ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಲ್ಲುತ್ತೇವೆ: ಸಚಿವ ಎಸ್ಸೆಸ್ಸೆಂ
Hunsur: ಮಾಜಿ ಶಾಸಕ ಮಂಜುನಾಥ್ಗೆ ಎಚ್1ಎನ್1 ದೃಢ; ಖಾಸಗಿ ಆಸ್ಪತ್ರೆಗೆ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.