ತೋಟಗಾರಿಕೆ ವಿವಿ; ಅನುಷಾಗೆ ಎಂಎಸ್ಸಿಯಲ್ಲಿ ಆರು ಚಿನ್ನದ ಪದಕ

ದೊಡ್ಡಪ್ಪಂದಿರ ಲಿಂಬೆ ಕೃಷಿಗೆ ಮನಸೋತು ಹಣ್ಣು ವಿಜ್ಞಾನದಲ್ಲಿ ಪದವಿ

Team Udayavani, Jul 1, 2023, 10:48 PM IST

1-asdsa-d

ಬಾಗಲಕೋಟೆ : ಆಕೆ ಪ್ರತಿಭಾವಂತೆ. ವ್ಯಾಸಂಗಕ್ಕೆ ತಂದೆ-ತಾಯಿಯ ಪೂರ್ಣ ಸಹಕಾರ. ಆದರೆ, ಕೃಷಿ ಬಗ್ಗೆ ಹೆಚ್ಚಿನ ಒಲವು. ಹೊಲದಲ್ಲಿ ದೊಡ್ಡಪ್ಪಂದಿರು ಬೆವರು ಸುರಿಸಿ ದುಡಿಯುತ್ತಿದ್ದ ತೋಟಗಾರಿಕೆ ಕೃಷಿಗೆ ಮನಸೋತವಳು. ರೈತರಿಗೆ ಕಡಿಮೆ ದುಡಿಮೆಯಲ್ಲಿ ಹೆಚ್ಚು ಆದಾಯ ಬರಬೇಕೆಂಬ ಕನಸು ಕಂಡವಳು. ದೊಡ್ಡಪ್ಪಂದಿರ ಪ್ರೇರಣೆಯಿಂದ ಆ ಜಾಣ್ಮೆ ಹುಡುಗಿ ತೋಟಗಾರಿಕೆ ಕೃಷಿಗೆ ಹೆಚ್ಚು ಒತ್ತು ಕೊಟ್ಟಳು. ಅದರಲ್ಲೇ ಪದವಿಯನ್ನೂ ಪಡೆದಳು. ಅವಳ ತೋಟಗಾರಿಕೆ ಕೃಷಿ ವ್ಯಾಸಂಗದ ಶ್ರಮಕ್ಕೆ ಈಗ ಬರೋಬ್ಬರಿ ಆರು ಚಿನ್ನದ ಪದಕಗಳ ಗರಿ.

ಹೌದು, ಇದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಅನುಷಾ ಅಮಯೋಗಿ ಕುರುಬರ ಎಂಬ ವಿದ್ಯಾರ್ಥಿನಿಯ ಸಾಧನೆಯ ಝಲಕ. ತಂದೆ ಡಾ|ಅಮಯೋಗಿ ಕುರುಬರ, ರಾಯಚೂರು ಕೃಷಿ ವಿವಿಯ ತೋಟಗಾರಿಕೆ ವಿಭಾಗದಲ್ಲಿ ಪ್ರಾಧ್ಯಾಪಕ. ತಾಯಿ ಸುರೇಖಾ (ಕುರುಬರ) ದೇವರಗುಡ್ಡ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹಿರಿಯ ಮೇಲ್ವಿಚಾರಕಿ.

ದೊಡ್ಡಪ್ಪಂದಿರ ಪ್ರೇರಣೆ
ಡಾ|ಕುರುಬರ ಅವರು, ಮಕ್ಕಳ ಕಲಿಕೆಗೆ ಎಲ್ಲ ರೀತಿಯ ಸ್ವತಂತ್ರ ನೀಡಿದವರು. ತಂದೆ, ವಿವಿಯೊಂದರ ಪ್ರಾಧ್ಯಾಪಕ, ತಾಯಿ ಸರ್ಕಾರಿ ನೌಕರಳು. ಹೀಗಾಗಿ ಎಂಜಿನಿಯರಿಂಗ್ , ವೈದ್ಯಕೀಯ ಪದವಿಗೆ ಹೆಚ್ಚಿನ ಆಸೆ ಪಡುವವರೇ ಹೆಚ್ಚು. ಆದರೆ, ಅನುಷಾ, ತೋಟಗಾರಿಕೆ ಕೃಷಿ ಪದವಿ ಮಾಡಲು, ಅವರ ದೊಡ್ಡಪ್ಪಂದಿರಾದ ಬುದ್ದಪ್ಪ ಮತ್ತು ಚಂದ್ರಾಮ ಕುರುಬರ ಅವರೇ ಪ್ರೇರಣೆಯಂತೆ. ಅಥರ್ಗಾದಲ್ಲಿ ಇವರಿಗೆ 12 ಎಕರೆ ಹೊಲವಿದ್ದು, ಅಲ್ಲಿ ಲಿಂಬೆ ಕೃಷಿ ಮಾಡಿಕೊಂಡಿದ್ದಾರೆ. ಲಿಂಬೆ ಕೃಷಿಯಲ್ಲಿ ಹೊಸತನ ತರುವ ಹಾಗೂ ದೊಡ್ಡಪ್ಪಂದಿರರಿಗೆ ನೆರವಾಗಲು ತನುಷಾ, ಎಂಎಸ್ಸಿ ತೋಟಗಾರಿಕೆ ಹಣ್ಣು ವಿಜ್ಞಾನ ಆಯ್ಕೆ ಮಾಡಿಕೊಂಡಿದ್ದರು.

ಹಣ್ಣು ವಿಜ್ಞಾನದಲ್ಲಿ ಸಂಶೋಧನೆ
ವಿಜಯಪುರ ಜಿಲ್ಲೆಯಲ್ಲಿ ಲಿಂಬೆ ಹಣ್ಣಿನ ಕೃಷಿ ಹೆಚ್ಚು. ಚಿಕ್ಕವಳಿದ್ದಾಗಿನಿಂದಲೂ ಲಿಂಬೆ ಕೃಷಿ ನೋಡುತ್ತ ಬಂದಿರುವ ಅನುಷಾ, ಬೆಂಗಳೂರಿನ ತೋಟಗಾರಿಕೆ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದು, ಜೆಆರ್ಎಫ್ ಪ್ರವೇಶ ಪರೀಕ್ಷೆಯಲ್ಲಿ 76ನೇ ರ್ಯಾಂಕ್ ನೊಂದಿಗೆ, ಎಂಎಸ್ಸಿ ಹಣ್ಣು ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ. ಎಂಎಸ್ಸಿ ಪ್ರವೇಶ ಪರೀಕ್ಷೆಯಲ್ಲೂ ರಾಜ್ಯಕ್ಕೆ 11ನೇ ರ್ಯಾಂಕ್, ರಾಷ್ಟ್ರೀಯ ಎಸ್ಆರ್ಎಫ್ ಪ್ರವೇಶ ಪರೀಕ್ಷೆಯಲ್ಲಿ 10ನೇ ರ್ಯಾಂಕ್, ಪಿಎಚ್ಡಿ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದಿದ್ದು, ಎಂಎಸ್ಸಿ ಹಣ್ಣು ವಿಜ್ಞಾನದಲ್ಲಿ ಇಡೀ ತೋಟಗಾರಿಕೆ ವಿವಿಗೆ ಮೊದಲ ಸ್ಥಾನ ಪಡೆದು, 6 ಚಿನ್ನದ ಪಡೆದ ಮುಡಿಗೇರಿಸಿಕೊಂಡಿದ್ದಾರೆ.

ಸಧ್ಯ ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಹಣ್ಣು ವಿಜ್ಞಾನ ವಿಭಾಗದಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿರುವ ಅನುಷಾ, ಹಣ್ಣು ಬೆಳೆಗಾರರ ಬೆನ್ನೆಲುಬಾಗಿ ನಿಲ್ಲುವ ಗುರಿ ಹೊಂದಿದ್ದಾರೆ.

ನಮ್ಮದು ವಿಜಯಪುರ ಜಿಲ್ಲೆಯ ಅಥರ್ಗಾ. ತಂದೆ-ತಾಯಿ ರಾಯಚೂರಿನಲ್ಲಿದ್ದಾರೆ. ನಾನೂ ಪ್ರಾಥಮಿಕ, ಪ್ರೌಢ, ಪಿಯುಸಿ ವ್ಯಾಸಂಗ ಅಲ್ಲಿಯೇ ಮಾಡಿದ್ದೇನೆ. ರಜೆಗೆ ಊರಿಗೆ ಬಂದಾಗ ದೊಡ್ಡಪ್ಪಂದಿರು ಲಿಂಬೆ ಕೃಷಿ ಮಾಡುವುದನ್ನು ನೋಡಿ, ನಾನೂ ಭಾಗಿಯಾಗುತ್ತಿದ್ದೆ. ಹಣ್ಣು ಬೆಳೆಗಾರ ರೈತರಿಗೆ ನಾನು ನೆರವಾಗಬೇಕು, ಅದರಲ್ಲೂ ಲಿಂಬೆ ಕೃಷಿಗೆ ಹೆಚ್ಚು ಉತ್ತೇಜನ ಸಿಗುವಂತಾಗಬೇಕು ಎಂಬ ಕನಸಿದೆ. ಅದಕ್ಕಾಗಿ ಹಣ್ಣು ವಿಜ್ಞಾನದಲ್ಲಿ ಪಿಎಚ್ಡಿ ಮಾಡುತ್ತಿದ್ದೇನೆ. ಸಧ್ಯ ಎಂಎಸ್ಸಿಯಲ್ಲಿ ಆರು ಚಿನ್ನದ ಪದಕ ಬಂದಿದ್ದು, ಇದಕ್ಕೆ ನನ್ನ ತಂದೆ-ತಾಯಿ ಸಹಕಾರ ಹಾಗೂ ನನ್ನ ಇಬ್ಬರು ದೊಡ್ಡಪ್ಪಂದಿರು ಪ್ರೇರಣೆ.
-ಅನುಷಾ ಎ. ಕುರುಬರ,

ಟಾಪ್ ನ್ಯೂಸ್

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

BELLARE-MALE

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

DANDIA-DANCE

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ

AANE 2

Tiger ದಾಳಿ: 3 ತಿಂಗಳ ಮರಿಯಾನೆ ಸಾ*ವು

police

Hubli; ದತ್ತಮೂರ್ತಿ 4 ಕೈ ಭಗ್ನ ಮಾಡಿದ ದುಷ್ಕರ್ಮಿಗಳು

1-pap

ಪತ್ರಿಕಾ ವಿತರಕರಿಗೆ ಅಂಬೇಡ್ಕರ್‌ ಕಾರ್ಮಿಕರ ಸಹಾಯ ಯೋಜನೆ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.