Kaladgi:ಜೆಸಿಬಿಚಾಲಕನ ನಿರ್ಲಕ್ಷ್ಯ ಕಾಮಗಾರಿ;ಪೈಪ್ ಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರುಪೋಲು
ರಸ್ತೆ ನಿರ್ವಹಣೆ ಕಾಮಗಾರಿಯ ಗುತ್ತಿಗೆದಾರನ ವಿರುದ್ದ ಆಕ್ರೋಶ
Team Udayavani, Oct 8, 2024, 3:43 PM IST
ಕಲಾದಗಿ: ವಾರ್ಷಿಕ ರಸ್ತೆ ನಿರ್ವಹಣೆ ದುರಸ್ತಿ ಕಾಮಗಾರಿ ಮಾಡುವ ವೇಳೆ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ನೀರು ಪೋಲಾಗುವಂತೆ ಮಾಡಿದ್ದಲ್ಲದೆ ಸಮ್ಮಂದಿಸಿದವರಿಗೆ ವಿಷಯ ತಿಳಿಸದೆ ನಿರ್ಲಕ್ಷ್ಯ ವಹಿಸಿದ ಕಾಮಗಾರಿ ಗುತ್ತಿಗೆದಾರ ಹಾಗೂ ರಸ್ತೆ ಬದಿ ಮುಳ್ಳು ಕಂಟಿ ತೆರವು ಮಾಡುತ್ತಿದ್ದ ಜೆಸಿಬಿ ಚಾಲಕನ ವಿರುದ್ದ ಶರದಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಸ್ತೆ ದುರಸ್ತಿ ನಿರ್ವಹಣೆ ಕಾಮಗಾರಿಯಲ್ಲಿ ರಸ್ತೆ ಬದಿಯ ಮುಳ್ಳು ಕಂಟಿ ಕಿತ್ತು ವಾಹನ ಸಂಚಾರ ಸವಾರರಿಗೆ ಅನುಕೂಲ ಮಾಡಲು ಲೋಕೋಪಯೋಗಿ ಇಲಾಖೆಯಿಂದ ಪ್ರತೀ ವರ್ಷವೂ ಜಿಲ್ಲಾ ವ್ಯಾಪ್ತಿಯ ಒಳ ರಸ್ತೆಗಳ ನಿರ್ವಹಣೆ ದುರಸ್ತಿ ಕಾರ್ಯ ನಡೆಯುತ್ತದೆ, ಈ ವರ್ಷವೂ ಕಲಾದಗಿ ಉದಗಟ್ಟಿ ರಸ್ತೆ ನಿರ್ವಹಣೆ ಕಾಮಗಾರಿ ಮಾಡುವ ವೇಳೆ ಜೆಸಿಬಿ ಚಾಲಕ ಮಿಡ್ಚಿ ಹಳ್ಳ ಬಳಿ ಬಹುಗ್ರಾಮ ಕುಡಿಯುವ ನೀರಿನ ಪೈಪಲೈನ್ ಒಡೆದು ಸಾಕಷ್ಟು ಪ್ರಮಾಣದ ನೀರು ಪೋಲಾಗುವಂತೆ ಮಾಡಿದ್ದಲ್ಲದೆ, ಸಂಬಂಧಿಸಿದ ಇಲಾಖೆಗೆ, ಸ್ಥಳೀಯ ಗ್ರಾಮಸ್ಥರಿಗೂ ತಿಳಸದೆ ಹಾಗೇ ತೆರಳಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದು, ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಶಾರದಾಳ ಗ್ರಾಮಸ್ಥರು ವೀಕ್ಷಣೆ ಮಾಡಿ ನೀರು ಸರಬರಾಜು ವಾಲ್ ತಿರುವಿ ನೀರು ಹರಿಯದಂತೆ ನಿಲ್ಲಿಸಿದ್ದಾರೆ, ನಿರ್ಲಕ್ಷ ತೋರಿದ ಚಾಲಕ ವಿರುದ್ದ ಹಾಗೂ ರಸ್ತೆ ದುರಸ್ತಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ವಿರುದ್ದ ಸೂಕ್ತಕ್ರಮ ಕೈಗೊಳ್ಳಬೇಕು ಜೊತೆಗೆ ಒಡೆದು ಹೋದ ಪೈಪ್ ಲೈನ್ ಜೋಡಣೆ ಮಾಡಿಸಿಕೊಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾರದಾಳ ಗ್ರಾಮದ ಲಕ್ಷ್ಮಣ ಶಿರಬೂರ ಆಗ್ರಹಿಸಿದ್ದಾರೆ.
ಬಹುಗ್ರಾಮ ಕುಡಿಯುವ ನೀರಿನ ಪೈಪಲೈನ್ ಒಡೆದು ಹಾಗೆಯೇ ಹೋಗಿದ್ದು ಸಾಕಷ್ಟು ಪ್ರಮಾಣದ ನೀರು ಪೋಲಾಗಿದೆ, ವಾಲ್ ಬಂದ್ ಮಾಡಿ ನೀರು ಪೊಲಾಗದಂತೆ ಮಾಡಿದ್ದೇವೆ, ಕೂಡಲೇ ಪೈಪ್ ಲೈನ್ ರಿಪೇರಿ ಮಾಡಿಸಿ ಕೊಡಬೇಕು.
ಲಕ್ಷ್ಮಣ ಶಿರಬೂರ, ಶಾರದಾಳ ಗ್ರಾಮಸ್ಥ
ಪೈಪ್ ಲೈನ್ ಒಡೆದದ್ದು ನಮ್ಮ ಗಮನಕ್ಕೆ ಬಂದಿಲ್ಲ ಹಾಗೇನಾದರೂ ಒಡೆದಿದ್ದರೆ ಯಾರು ಒಡೆದಿದ್ದಾರೆ ಅವರಿಂದಲೇ ಅದನ್ನು ಸರಿಮಾಡಿಕೊಡಲು ಆದೇಶಿಸಲಾಗುವುದು ಒಂದು ವೇಳೆ ಮಾಡದೇ ನಿರ್ಲಕ್ಷ್ಯ ವಹಿಸಿದರೆ ಇಲಾಖೆಯಿಂದ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು.
ಆಕಾಶ್ ವಂದೆ, ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಾಗಲಕೋಟೆ
ಬೇಕಂತಲೇ ಪೈಪ್ ಲೈನ್ ಒಡೆದಿಲ್ಲ, ಸ್ಥಳಿಯ ವಾಟರ್ ಮ್ಯಾನಗೆ ತಿಳಿಸಲಾಗಿದೆ, ರಸ್ತೆ ಬದಿ ಮುಳ್ಳು ಕಂಟಿ ಕೀಳುವ ವೇಳೆ ಕಂಟಿಯ ಕೆಳ ಭಾಗದಲ್ಲಿದ್ದ ನೀರಿನ ಪೈಲ್ ಲೈನ್ ಒಡೆದಿದೆ, ಒಂದೆರಡು ದಿನದಲ್ಲಿ ಪೈಪಲೈನ್ ರಿಪೇರಿ ಮಾಡಿಸಿ ಕೊಡಲಾಗುವುದು.
ಅರ್ಜುನ್ ಹಿರೇಮಠ, ಗುತ್ತಿಗೆದಾರರ ಪರವಾಗಿ ಕೆಲಸಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಕಾರು ಅಪಘಾತ… ಜಾನಪದ ಕಲಾವಿದ ಗುರುರಾಜ ಹೊಸಕೋಟಿ ಅವರಿಗೆ ಗಾಯ
Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ
MUDA Case: ವಿಪಕ್ಷಗಳಿಂದ ಸಿಎಂ ಶಕ್ತಿ ಜನಪ್ರಿಯತೆ ಕುಗ್ಗಿಸುವ ಪ್ರಯತ್ನ: ಉಮಾಶ್ರೀ
Muda ಸೈಟ್ ಹಿಂತಿರುಗಿಸಿರುವ ಸಿದ್ದರಾಮಯ್ಯ ಪತ್ನಿಯ ಕ್ರಮಕ್ಕೆ ತಿಮ್ಮಾಪುರ ಪ್ರತಿಕ್ರಿಯೆ
Mudhol: ಪ್ರಕರಣ ಹಿಂಪಡೆಯದಿದ್ದರೆ ಹಿಂದೂ ಪರ ಸಂಘಟನೆಯಿಂದ ಜಿಲ್ಲಾದ್ಯಂತ ಹೋರಾಟದ ಎಚ್ಚರಿಕೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Maski; ಚಿರತೆಗೆ ಹೊಲುವ ಕಾಡು ಬೆಕ್ಕು ಪ್ರತ್ಯಕ್ಷ; ಗ್ರಾಮಸ್ಥರ ಆತಂಕ
Election Result: ಚುನಾವಣೋತ್ತರ ಸಮೀಕ್ಷೆ ಬಗ್ಗೆ ನಂಬಿಕೆಯಿಲ್ಲ…: ಡಿಕೆ ಶಿವಕುಮಾರ್
Dharwad: ಕಪ್ಪತ್ತಗುಡ್ಡದ ರಕ್ಷಣೆಗೆ ಹೋರಾಟ ನಿರಂತರ: ನಂದಿವೇರಿ ಸ್ವಾಮೀಜಿ
Jammu Kashmir Poll:ವಿಶೇಷ ಸ್ಥಾನಮಾನ ರದ್ದು ನಿರ್ಧಾರ ಜನರು ಒಪ್ಪಿಲ್ಲ: ಫಾರೂಖ್ ಅಬ್ದುಲ್ಲಾ
Koppa; ಸಾಲಬಾಧೆ, ಒತ್ತುವರಿ ತೆರವಿನ ಆತಂಕ; ಆತ್ಮಹತ್ಯೆಗೆ ಶರಣಾದ ರೈತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.