![Karachi: ಪಾಕಿಸ್ತಾನ್ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ](https://www.udayavani.com/wp-content/uploads/2024/07/Exchange-415x219.jpg)
Bagalkot Ticket ಬದಲಿಸಲು 2 ದಿನ ಗಡುವು ನೀಡಿದ ಕಾಶಪ್ಪನವರ್
Team Udayavani, Mar 22, 2024, 11:36 PM IST
![Bagalkot Ticket ಬದಲಿಸಲು 2 ದಿನ ಗಡುವು ನೀಡಿದ ಕಾಶಪ್ಪನವರ್](https://www.udayavani.com/wp-content/uploads/2024/03/Bagalkote-ticket-620x349.jpg)
ಬಾಗಲಕೋಟೆ: ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷದೊಳಗಿನ ಶಿಸ್ತಿನ ಬಗ್ಗೆ ನಾನು ಯಾರಿಂದಲೂ ಕಲಿಯಬೇಕಿಲ್ಲ. ನಮ್ಮ ಪಕ್ಷದ ಹಿರಿಯರ ಮೇಲೆ ನನಗೆ ನಂಬಿಕೆ ಇದೆ. ಐದು ವರ್ಷ ಪಕ್ಷಕ್ಕಾಗಿ ದುಡಿದವರ ಹೆಸರನ್ನೇ ಎಐಸಿಸಿಗೆ ಕಳುಹಿಸಿಲ್ಲ. ಇದು ಕೇವಲ ಬಾಗಲಕೋಟೆ ಕ್ಷೇತ್ರದ ಸ್ವಾಭಿಮಾನಕ್ಕೆ ಧಕ್ಕೆಯಾಗಿಲ್ಲ. 50 ವರ್ಷಗಳಿಂದ ಕಾಂಗ್ರೆಸ್ನಲ್ಲಿರುವ ಕಾಶಪ್ಪನವರ್ ಕುಟುಂಬದ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಹೈಕಮಾಂಡ್ ಎರಡು ದಿನಗಳಲ್ಲಿ ಟಿಕೆಟ್ ಬದಲಿಸಬೇಕು. ಇಲ್ಲದಿದ್ದರೆ ನಾನು ನನ್ನ ನಿರ್ಧಾರವನ್ನು ಪ್ರಕಟಿಸಬೇಕಾಗುತ್ತದೆ ಎಂದು ಹುನಗುಂದ ಶಾಸಕ, ಕರ್ನಾಟಕ ವೀರಶೈವ ಲಿಂಗಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾಭಿಮಾನಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇತರ ಶಾಸಕರೇ ಬೆಂಬಲ ಕೊಡುತ್ತಿಲ್ಲ. ಅಂತಹ ವಿರೋಧದ ಮಧ್ಯೆ ಗೆದ್ದು ಬರುವ ತಾಕತ್ತು ಇದೆಯಾ ಎಂದು ವಿಜಯಪುರದವರೊಬ್ಬರು ಪ್ರಶ್ನೆ ಮಾಡಿದ್ದಾರೆ.
ನಮ್ಮ ತಾಕತ್ತು ಏನೆಂಬುದು ನನಗೆ ಗೊತ್ತಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲಲು ನನ್ನ ಪಾತ್ರವೂ ಇದೆ. 50 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಯಾರು ಬಂದರು, ಯಾರು ಹೋದರು ಎಲ್ಲವನ್ನೂ ನೋಡಿದ್ದೇನೆ. ನನಗೂ ಇಡೀ ರಾಜ್ಯವನ್ನೇ ಒಂದು ಕೈ ನೋಡೋಣ (ಸಿಎಂ ಆಗುವ ಕನಸು) ಎಂಬ ಆಲೋಚನೆ ಇದೆ ಎಂದರು.
ಪಕ್ಷನಿಷ್ಠೆ ಬಗ್ಗೆ ಮಾತನಾಡುವ ಸಚಿವ ಶಿವಾನಂದ ಪಾಟೀಲ್ ಕುಟುಂಬದವರು ಯಾವ ಯಾವ ಪಕ್ಷದಲ್ಲಿದ್ದಾರೆ. ನೀವು ಯಾವಾಗ ಕಾಂಗ್ರೆಸ್ಗೆ ಬಂದಿದ್ದೀರಿ. ನೀವು ಪಕ್ಷಕ್ಕೆ ಬರುವ ಮೊದಲೇ ನಮ್ಮ ತಂದೆ ಶಾಸಕರು, ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ನಿಮ್ಮಿಂದ ಪಕ್ಷದ ಬಗ್ಗೆ ತಿಳಿದುಕೊಳ್ಳಬೇಕಿಲ್ಲ ಎಂದರು.
ನಮ್ಮ ಪಕ್ಷದ ಹಿರಿಯರ ಮೇಲೆ ನನಗೆ ವಿಶ್ವಾಸವಿದೆ. ಯಾರದೋ ಬೆದರಿಕೆ ಅಥವಾ ಆಮಿಷಕ್ಕೆ ಬಗ್ಗದೆ ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇಲ್ಲದಿದ್ದರೆ ಎರಡು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ.
– ವಿಜಯಾನಂದ ಕಾಶಪ್ಪನವರ್, ಕಾಂಗ್ರೆಸ್ ಶಾಸಕ
ಟಾಪ್ ನ್ಯೂಸ್
![Karachi: ಪಾಕಿಸ್ತಾನ್ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ](https://www.udayavani.com/wp-content/uploads/2024/07/Exchange-415x219.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Kharajola](https://www.udayavani.com/wp-content/uploads/2024/07/Kharajola-150x90.jpg)
MUDA Scam; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಕಾರಜೋಳ
![ರಾಜ್ಯದ ಏಕೈಕ ಜಗನ್ನಾಥ ದೇಗುಲದ ರಥೋತ್ಸವ ಸಂಭ್ರಮ](https://www.udayavani.com/wp-content/uploads/2024/07/Jagannath-temple-150x78.jpg)
Guledgudda ರಾಜ್ಯದ ಏಕೈಕ ಜಗನ್ನಾಥ ದೇಗುಲದ ರಥೋತ್ಸವ ಸಂಭ್ರಮ
![Rain ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ](https://www.udayavani.com/wp-content/uploads/2024/07/aa-150x84.jpg)
Rain ವಿಪತ್ತು ನಿರ್ವಹಣೆಗೆ ಸೂಕ್ತ ಮುಂಜಾಗ್ರತಾ ಕ್ರಮ ಅಗತ್ಯ: ಈರಣ್ಣ
![Plastic ತ್ಯಾಜ್ಯ ಮನುಕುಲಕ್ಕೆ ಮಾರಕ: ಫ್ರಾನ್ಸ್ ದೇಶದ ವಿದ್ಯಾರ್ಥಿ ಸೋರೇನ್](https://www.udayavani.com/wp-content/uploads/2024/07/pl-150x82.jpg)
Plastic ತ್ಯಾಜ್ಯ ಮನುಕುಲಕ್ಕೆ ಮಾರಕ: ಫ್ರಾನ್ಸ್ ದೇಶದ ವಿದ್ಯಾರ್ಥಿ ಸೋರೇನ್
![Rabakavi](https://www.udayavani.com/wp-content/uploads/2024/07/Rabakavi-150x90.jpg)
Irrigation: ರೈತರ ವಿಚಾರದಲ್ಲಿ ರಾಜಕಾರಣ ಮಾಡದಿರಿ: ಸಚಿವ ತಿಮ್ಮಾಪುರ
MUST WATCH
ಹೊಸ ಸೇರ್ಪಡೆ
![Ronny](https://www.udayavani.com/wp-content/uploads/2024/07/Ronny-150x83.jpg)
Ronny; ಕಿರಣ್ ರಾಜ್ ನಟನೆಯ ಸಿನಿಮಾದ ಹಾಡು ಬಂತು
![Karachi: ಪಾಕಿಸ್ತಾನ್ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ](https://www.udayavani.com/wp-content/uploads/2024/07/Exchange-150x79.jpg)
Karachi: ಪಾಕಿಸ್ತಾನ್ ಷೇರುಪೇಟೆ ಕಟ್ಟಡದಲ್ಲಿ ಭಾರೀ ಅಗ್ನಿ ಅನಾಹುತ; ವಹಿವಾಟು ಸ್ಥಗಿತ
![Why did he ignore the BCCI instruction to play Ranji? Ishaan replied](https://www.udayavani.com/wp-content/uploads/2024/07/ishan-150x83.jpg)
IshanKishan; ರಣಜಿ ಆಡಬೇಕೆಂಬ ಬಿಸಿಸಿಐ ಸೂಚನೆ ನಿರ್ಲಕ್ಷ್ಯ ಮಾಡಿದ್ದೇಕೆ? ಉತ್ತರಿಸಿದ ಇಶಾನ್
![Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು](https://www.udayavani.com/wp-content/uploads/2024/07/haryana-150x84.jpg)
Bus Overturns: ಹರಿಯಾಣದಲ್ಲಿ ಬಸ್ ಪಲ್ಟಿಯಾಗಿ 40 ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು
![Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ](https://www.udayavani.com/wp-content/uploads/2024/07/11-5-150x90.jpg)
Ullal: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ವಿಧಿವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.