Kulgeri Cross; ಮಲಪ್ರಭಾ ನೀರಿನ ಮಟ್ಟ ಏರಿಕೆ; ಪ್ರವಾಹದ ಭೀತಿ
ರೆೈತರ ಜಮಿನಿನಲ್ಲಿ ನೀರು ನುಗ್ಗಿದ್ದು,ಬೆಳೆಗಳು ನೀರು ಪಾಲಾಗಿವೆ
Team Udayavani, Aug 1, 2024, 9:37 PM IST
ಕುಳಗೇರಿ ಕ್ರಾಸ್: ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚುತ್ತಿದ್ದು, ನೀರಿನ ಒಳ ಹರಿವು ಸಹ ಅಧಿಕವಾಗುತ್ತಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ ಜಲಾಶಯಕ್ಕೆ ಬಂದು ಸಂಗ್ರಹವಾಗುವ ಸಂಪೂರ್ಣ ನೀರು ಹೊರಬಿಡಲಾಗುತ್ತಿದ್ದು, ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ಭೀತಿ ಮತ್ತಷ್ಟು ಹೆಚ್ಚುತ್ತಿದೆ.
ಮಲಪ್ರಭಾ ನದಿ ಪಾತ್ರ ಸೇರಿದಂತೆ ಕುಳಗೇರಿ ಹೋಬಳಿ ಸುತ್ತ ಗ್ರಾಮಗಳಲ್ಲಿ ಮಳೆ ಇಲ್ಲ. ಆದರೆ, ಪ್ರವಾಹದ ಆತಂಕ ಹೆಚ್ಚಾಗುತ್ತಿದೆ. 12 ಸಾವಿರ ಕ್ಯೂಸೆಕ್ ನೀರು ಬಂದು ಆತಂಕ ಹೆಚ್ಚಿಸಿದ್ದು ಸದ್ಯ ಗುರುವಾರ ಮಧ್ಯಾಹ್ನ ಹರಿಬಿಡಲಾದ 15 ಸಾವಿರ ಕ್ಯೂಸೆಕ್ನಿಂದ ರೆೈತರ ಜಮಿನಿನಲ್ಲಿ ನೀರು ನುಗ್ಗಿದ್ದು ಬೆಳೆಗಳು ನೀರು ಪಾಲಾಗಿವೆ.
ಅಲ್ಲದೇ ಸುಮಾರು ಗ್ರಾಮಗಳಿಗೆ ಬಂದು ತಲುಪಿದೆ. ಸದ್ಯ ಕೆಲವು ಗ್ರಾಮಗಳಲ್ಲಿ ನೀರು ಸುತ್ತುವರೆಯುತ್ತಿದ್ದು, ಪ್ರವಾಹ ಪರಿಸ್ಥಿತಿ ಇನ್ನೂ ಹೆಚ್ಚಾಗಲಿದೆ.
ಎಚ್ಚರಿಕೆ ನೀಡಿದರೂ ಅರಿಯದ ಜನ: ಪ್ರವಾಹ ಹೆಚ್ಚುತ್ತಿದ್ದಂತೆ ಪೊಲೀಸರು ಜಲಾವೃತಗೊಂಡ ರಸ್ತೆಗಳನ್ನ ಸೇತುವೆಗಳನ್ನ ಮುಳ್ಳು-ಕಂಠಿ ಬಡಿದು ತಡೆದಿದ್ದಾರೆ ಆದರೂ ಪ್ರವಾಹದ ನೀರು ನೋಡಲು ಮಕ್ಕಳು ಮಹಿಳೆಯರು ನದಿ ತೀರದಲ್ಲಿ ಹೆಚ್ಚಿತ್ತಿದ್ದಾರೆ. ಜಿಲ್ಲಾಧಿಕಾರಿ ಜಾನಕಿ ಕೆಎಂ ಸಾಕಷ್ಟು ಎಚ್ಚರಿಕೆ ನೀಡಿದರೂ ಜನ ಮಾತ್ರ ಕ್ಯಾರೆ ಎನ್ನುತ್ತಿಲ್ಲ.
ಮಲಪ್ರಭಾ ಪ್ರವಾಹದ ನೀರು ಹೆಚ್ಚಿತ್ತಿದ್ದು ನದಿ ಪಾತ್ರದಲ್ಲಿ ಯಾರೂ ಹೋಗದಂತೆ ಬಾದಾಮಿ ತಹಶೀಲ್ದಾರ್ ಜೆ ಬಿ ಮಜ್ಜಗಿ ನದಿ ಪಾತ್ರದ ಜನರಲ್ಲಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ… ರಾತ್ರಿಯಿಡಿ ಸಾಗುವ ರಥೋತ್ಸವ
Pak flag ಹಾರಾಡುವ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ
Mudhol: ಆರ್ಎಸ್ಎಸ್ನಿಂದ ದೇಶಕ್ಕೆ ಕಂಟಕ: ಆರ್.ಬಿ.ತಿಮ್ಮಾಪುರ
Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.